ರಾಮನ್ ಮತ್ತು ನಾರಾಯಣ್ ಆಫೀಸಿನಲ್ಲಿ ಹರಟುತ್ತಿದ್ದರು.
ರಾಮನ್: ನಾರಾಯಣ, ನಾನು ಕಳೆದ ಐದು ತಿಂಗಳುಗಳಿಂದ ರಾತ್ರಿ ತರಗತಿಗಳಿಗೆ ಹೋಗುತ್ತಿದ್ದೇನೆ, ಮುಂದಿನ ವಾರ ನನ್ನ ಪರೀಕ್ಷೆ ಇದೆ.
ನಾರಯಣ್: ಓಹ್
ರಾಮನ್: ಉದಾಹರಣೆಗೆ ಗ್ರಹಾಮ್ ಬೆಲ್ ಯಾರೆಂದು ನಿನಗೆ ಗೊತ್ತಾ?
ನಾರಾಯಣ್: ಇಲ್ಲ.
ರಾಮನ್: ಗ್ರಹಾಮ ಬೆಲ್ ಅಲ್ಲವೇ ೧೮೭೬ ರಲ್ಲಿ ಟೆಲಿ ಫೋನ್ ಕಂಡುಹಿಡಿದವನು? ನೀನು ರಾತ್ರಿ ತರಗತಿಗೆ ಹೋದರೆ ಇವೆಲ್ಲಾ ತಿಳಿಯುತ್ತವೆ.
ಮಾರನೆ ದಿನ...
ರಾಮನ್: ಹೋಗಲಿ ನಿನಗೆ ಅಲೆಕ್ಸಾಂಡರ್ ಡೂಮ ಯಾರೂಂತ ಗೊತ್ತಾ?
ನಾರಾಯಣ್: ಇಲ್ಲ
ರಾಮನ್: ಅವನು ಸುಪ್ರಸಿದ್ಧ ಕಾದಂಬರಿಕಾರ. ಅವನೇ three musketeers ಪುಸ್ತಕ ಬರೆದದ್ದು.
ಹೀಗೆ ಪ್ರತೀ ದಿನ ರಾಮನ್ ತನ್ನ ಜ್ಞಾನದ ಬಗ್ಗೆ ನಾರಾಯಣನಲ್ಲಿ ಕೊಚ್ಚುತ್ತಿದ್ದ. ಬೇಸತ್ತಿದ ನಾರಾಯಣ್ ಕೇಳ್ದ, ರಾಮನ್, ನಿನಗೆ ಬಾಲಕೃಷ್ಣನ್ ಕುಪ್ಪುಸ್ವಾಮಿ ಯಾರೂಂತ ಗೊತ್ತಾ?
ರಾಮನ್: ಇಲ್ಲ, ಗೊತ್ತಿಲ್ಲ.
ನಾರಾಯಣ್: ಅಯ್ಯೋ, ಅವನೇ ಅಲ್ಲವೇ ನಿನ್ನ ಹೆಂಡತಿಯ ಜೊತೆ ರಾತ್ರಿಯಲ್ಲಿ ತಿರುಗುತ್ತಾ ಇರೋದು. ನೀನು ಈ ರಾತ್ರಿ ತರಗತಿಗಳನ್ನು ನಿಲ್ಲಿಸಿದರೆ ನಿನಗೆ ತಿಳಿಯಬಹುದು" ಎಂದು ಹೇಳಿದ.
moral of the story:
ಜೀವನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅರಿಯಬೇಕಾದ ಬೇರೆ ಸಂಗತಿಗಳೂ ಇವೆ.









ಪ್ರತಿಕ್ರಿಯೆಗಳು
ಉ: ಒಂದು ಪುಟ್ಟ ಹರಟೆ
:)... ಎಲ್ಲೋ ಕೇಳಿದ್ದ ನೆನಪು... :) :) ಹೆಸರುಗಳೂ ಕೂಡ ಅವೇ...
ಉ: ಒಂದು ಪುಟ್ಟ ಹರಟೆ
ಕೌಶಿಕ್, ನನ್ನ ಮೇಲ್ ಬಾಕ್ಸ್ ನಲ್ಲಿ ಇವತ್ತು ಕಂಡಿದ್ದು.
ಉ: ಒಂದು ಪುಟ್ಟ ಹರಟೆ
<< ಜೀವನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ಅರಿಯಬೇಕಾದ ಬೇರೆ ಸಂಗತಿಗಳೂ ಇವೆ. >>
ಇದಕ್ಕಾಗಿ ರಾತ್ರಿ ಹೊತ್ತು ತನ್ನ ಮನೆಯಲ್ಲೇ ಇರಬೇಕಾಗುತ್ತದೆ...!?
:)
ಉ: ಒಂದು ಪುಟ್ಟ ಹರಟೆ
ಅಬ್ದುಲ್ ಚೆನ್ನಾಗಿದೆ. ನಾನು ನೋಡಿದ್ದು ಇದೇ ಮೊದಲು.
ಉ: ಒಂದು ಪುಟ್ಟ ಹರಟೆ
ಚೆನ್ನಾಗಿದೆ ಅಬ್ದುಲ್
ನನ್ನಿ
ಉ: ಒಂದು ಪುಟ್ಟ ಹರಟೆ
ಅಬ್ದುಲ್ ಭಾಯಿ, ಹರಟೆ ಚ೦ದ.
ಉ: ಒಂದು ಪುಟ್ಟ ಹರಟೆ
ಸೂಪರ್,,,,,,,
ಉ: ಒಂದು ಪುಟ್ಟ ಹರಟೆ
ಸಕತ್! ನಾನು ಮೊದಲೇ ಎಲ್ಲೋ ಓದಿದ್ದೆ. " ಗಂಭೀರ" ವಿಷಯಗಳ ಮಧ್ಯೆ ನಿಮ್ಮದೊಂದು " ಹರಟೆ" ಇಷ್ಟವಾಯಿತು.
ಉ: ಒಂದು ಪುಟ್ಟ ಹರಟೆ
ಇದೇ ತರಹ ಇನ್ನೊಂದು ಓದಿದ್ದೆ . ಅದು ಹೀಗಿದೆ .
ತಂದೆಯೊಬ್ಬ ಮಗನಿಗೆ ಕೇಳುತ್ತಿರುತ್ತಾನೆ.
ಅಪ್ಪ :- ತಾಜ ಮಹಲ್ ಯಾವಾಗ ಕಟ್ಟಿಸಿದ್ದು ?
ಮಗ - ...... (ಮೌನ)
ಅಪ್ಪ:- ಕುತುಬ್ ಮಿನಾರ್ ಯಾರು ಕಟ್ಟಿದ್ದು ?
ಮಗ - ...... (ಮೌನ)
ಅಪ್ಪ:- ಆಸ್ಟ್ರೇಲಿಯಾದ ರಾಜಧಾನಿ ಯಾವುದು?
ಮಗ - ...... (ಮೌನ)
ಇತ್ಯಾದಿ
ಕೊನೆಗೆ ಅಪ್ಪ ಬೈಯುತ್ತಾನೆ - ನಿನಗೆ ಜನರಲ್ ನಾಲೇಜೇ ಇಲ್ವಲ್ಲೋ ? ಜಗತ್ತಿನಲ್ಲಿ ಏನೇನಿದೆ ? ಏನೇನಾಗ್ತಿದೆ ಅಂತ ಎಲ್ಲ ತಿಳ್ಕೊಂಡಿರ್ಬೇಕು.
ಆಗ ಮಗ ಕೇಳುತ್ತಾನೆ - ಅಪ್ಪ , ನೀನು ಮನೇಲಿರದೇ ಇದ್ದಾಗ ಯಾರು ಬಂದಿರ್ತಾರೆ ಗೊತ್ತ ?
ಅಪ್ಪ :- ಆಂ ? .........
ಮಗ:- ಜಗತ್ತಿನಲ್ಲಿ ಏನೇನಾಗ್ತಿದೆ ಅನ್ನೋದು ಬಿಡು , ಮನೇಲಿ ಏನಾಗ್ತಿದೆ ಅಂತ ಸ್ವಲ್ಪ ತಿಳ್ಕೋ !!!
ಉ: ಒಂದು ಪುಟ್ಟ ಹರಟೆ
ಶ್ರೀಕಾಂತ್, ಈ ತೆರನಾದ ಕಥೆಗಳು ಹುಟ್ಟಬೇಕು ಅಂದ್ರೆ ನಮ್ ಸಮಾಜವೇ ಹೀಗೆ ಅಂತಾನ? ನನಗೆಕೋ ಭಯ ಆಗ್ತಿದೆ ಮಾರಾಯ್ರೇ.
ಉ: ಒಂದು ಪುಟ್ಟ ಹರಟೆ
ಇದರ ಒಟ್ಟು ಆಶಯ....
"ಸಾಮಾನ್ಯ ಜ್ಞಾನಕ್ಕಿಂತ ವ್ಯವಹಾರಿಕ ಜ್ಞಾನ ಪ್ರಾಮುಖ್ಯವಾದುದು"