KA-10 ಸಾ
ನಮಸ್ಕಾರ, ಎನ್ನಪ್ಪಾ ಇದು KA-10 ಸಾ ಎಂದು ತೆಲೆ ಕೆಡಿಸಿಕೊಳ್ಳಬೇಡಿ, ಇದು ನಮ್ಮ ಜಿಲ್ಲೆ ಚಾಮರಾಜನಗರ ಜಿಲ್ಲೆಯ R.T.O ವಿಭಾಗದ ಸಂಖ್ಯೆ, ರಾಜ್ಯದಲ್ಲಿ ಅತ್ಯಂತ ನಿರ್ಲಕ್ಷಿತ ಪ್ರದೇಶಗಳಲ್ಲಿ ಚಾಮರಾಜನಗರ ಜಿಲ್ಲೆ ಪ್ರಮುಖವಾದುದು, ಈ ಜಿಲ್ಲೆ ಎಲ್ಲಾ ಕೆಟ್ಟು ಕಾರಣಗಳಿಗೆ ಖ್ಯಾತಿಯನ್ನು ಪಡೆದಿದೆ, ಅವುಗಳಲ್ಲಿ ಪ್ರಮುಖವಾದುದು ವೀರಪ್ಪನ್, ನಮ್ಮ ಜಿಲ್ಲೆಗೆ ಮುಖ್ಯಮಂತ್ರಿಗಳು ಬರುವುದಿಲ್ಲ, ಮಂತ್ರಿಗಳು ತಿರುಗಿ ನೋಡುವುದಿಲ್ಲ, ಜಿಲ್ಲಾ ಉಸ್ಥುವಾರಿ ಮಂತ್ರಿ ಕೂಡ ಬೇರೆ ಜಿಲ್ಲೆಯರೆ, ರಸ್ತೆಗಳು, ಅನಿಷ್ಠಕೇಳ್ಳ ಶನೀಶ್ವರನೇ ಕಾರಣ ಎನ್ನುವ ಹಾಗೆ ಜಗತ್ತಿನ ಪ್ರತಿಯೊಂದು ಅವಘಡಕ್ಕೂ ಚಾ.ನಗರವನ್ನು ದೂರುತ್ತಾರೆ, ಆ ಜಿಲ್ಲೆಗೆ ಸೇರಿದವನಾಗಿರುವ ನನಗೆ ಇದು ಸೋಜಿಗ ಹಾಗು ಕೋಪ ಎರಡನ್ನು ತರುತ್ತದೆ, ಯಾರಿಗೂ ಪರಿಚಯವಿರದ ಚಾ.ನಗರ ವನ್ನು ಪರಿಚಯಿಸುವ ಪುಟ್ಟ ಪ್ರಯತ್ನ ನಾನು ಹಾಗು ನನ್ನ ಸ್ನೇಹಿತ ಮಾಡಬೇಕೇಂದಿದ್ದೇವೆ, ಇದು "ಬ್ಲಾಗ್"ಗಿಂಗ್ ನಲ್ಲಿ ನಮ್ಮ ಮೊದಲ ಪ್ರಯತ್ನ. ಸಹೃದಯರು ತಾಳ್ಮೆಯೆಯಿಂದ ನಮ್ಮ ಬ್ಲಾಗ್ ಅನ್ನು ಓದುವಿರಿ ಎನ್ನುವ ನಂಬಿಕೆಯೊಂದಿಗೆ,

- adarsh ರವರ ಬ್ಲಾಗ್
- Login or register to post comments
- 583 hits
- Email this blog




RSS:
ಪ್ರತಿಕ್ರಿಯೆಗಳು
KA-10 ಸಾ
ಸಾ! ಪರೀಕ್ಷೆ result ಬಂದಿದೆಯಂತೆ ಸಾ! ಎಂದು ಸ್ನೇಹಿತ ಹೇಳಿದಾಗಳೆ, ನನಗೆ ನಾವು ಪದವಿಯ ಅಂತಿಮ ವರ್ಷದಲ್ಲಿ ಇದ್ದೇವೆ, ಎಂದು ಒಂದು ಕ್ಷಣ ಮುಂದೆ ಹೇಗೋ ಏನೋ ಎಂದು ಸ್ವಲ್ಪ ದಿಗಿಲಾಯಿತು, ನಿಜ ವಿದ್ಯಾರ್ಥಿಯಾಗಿದ್ದಾಗ ಓದುವದಷ್ಠೆ ಜೀವನವಾಗಿರುತ್ತದೆ, ನಂತರ ಜೀವನವನ್ನೇ ಓದಬೇಕಾಗುತ್ತದೆ, ದಿಗಿಲಾಗುವುದು ಬೇಕಿಲ್ಲ Optimist ಎಂದರೆ ನಮ್ಮೂರಿನ ಪಕ್ಕದ ಪಾಳ್ಯದವರು, ಅವರ ಹಾಗೆ ಜೀವನವನ್ನು ಎದುರಿಸಬೇಕು ಸಾ ಎಂದು ಸ್ನೇಹಿತ ನನ್ನನು ಹುರಿದುಂಬಿಸಿದ, ಮಾಮೂಲಿ ಅರ್ಧ ತೊಂಬಿರುವ ಗ್ಲಾಸಿನ ಕಥೆ ಹೇಳುತ್ತಾನೆ ಎಂದುಕೊಂಡೆ, ಆತ ಮುಂದುವರೆಸಿ ಅವರು ಬಸ್ ಹತ್ತುವುದನ್ನು ನೋಡಿದ್ದಿರಾ ಸಾ,ಎಂದ ನಾನು ಹಾ ಅದರಲ್ಲಿ ಏನು ವಿಶೇಷ ಎಂದೆ, ಅವರ ಬಸ್ಸು ಪ್ರತಿ ದಿನವು ಗ್ಯಾರೇಜಿನಿಂದ ಹೋರಡುತ್ತದೆ, ಆದರೂ ಆ ಜನ ಬಿಲ್ಲಿನಿಂದ ಬಿಟ್ಟ ಬಾಣದ ಹಾಗೆ ಗ್ಯಾರೇಜಿಗೆ ಹುಡುಕಿಕೊಂಡು ಹೋಗಿ ಬಸ್ ಏರುತ್ತಾರೆ, ಬಸ್ ಸಿಕ್ಕರೆ ಸಾಕು ತಮ್ಮ ಊರು ತಲಪುವ ನಂಬಿಕೆಯೊಂದಿಗೆ, ಅದು Optimisim ಎಂದರೆ