ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ahoratra ರವರ ಬ್ಲಾಗ್

ಆರು ವೈರಿಗಳು

July 4, 2006 - 12:45pm — ahoratra

ಆರು ವೈರಿಗಳು.

ಕಾಮ ಕ್ರೋಧ ಲೋಭಗಳು
ಮೊದಲ ಮೂರು ವೈರಿಗಳು
ಇದನು ಗೆದ್ದ ನಂತರ
ಮೋಹ ಮದ ಮತ್ಸರ

ಆಶೆಯೆಂಬ ಬೀಜವು
ಕಾಮಗಿಡದ ಮೂಲವು
ಗಿಡದ ನಾಶಕಿಂತಲೂ
ಮೂಲನಾಶ ಶ್ರೇಷ್ಠವು

ಕಾಮ ಫಲಿಸದಾಗ ಬರುವ
ವೈರಿಯೇ ಕ್ರೋಧವು
ಕ್ರೋಧವೂ ನಡೆಯದಾಗ
ಲೋಭ ಪ್ರ-ವೇಶವು.

ಆಶೆ ಕೊಂದ ವ್ಯಕ್ತಿಗೇ
ಭಕ್ತಿ ಕೊಡುವ ಶಕ್ತಿಯಿಂದ
ಕಾಮ ಕ್ರೋಧ ಲೋಭವೆಂಬ
ಶತೃ ನಾಶ ಸುಲಭವು

ನಾಲ್ಕನೆಯ ಶತೃವು
ಮಾಯಾಮೋಹಪಾಶವು
ಮೋಹ ನಾಶ ಶಸ್ತ್ರಗಳು
ಸ್ನೇಹ ಪ್ರೇಮ ಕರುಣೆಗಳು

ಕಂಸ ಜರಾಸಂಧರು
ಮದಕೆ ದಾಸರಾದರು
ಮಾಧವನಾ ದೆಸೆಯಿಂದ
ಜೀವ ಕಳೆದುಕೊಂಡರು

ಕೊನೆಯ ವೈರಿ ಮತ್ಸರ
ಸಹನೆ ಇದಕೆ ಉತ್ತರ
ಬೆಳೆಯಬೇಕು ಎತ್ತರ
ಭಗವಂತನ ಹತ್ತಿರ.

ಅಹೋರಾತ್ರ.

~.~
  • ahoratra ರವರ ಬ್ಲಾಗ್
  • Login or register to post comments
  • 1418 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 5, 2006 - 10:45am — benaka

ಗಹನಾರ್ಥ

benaka's picture

ಅಹೋರಾತ್ರರೆ,

ಸರಳವಾಗಿದ್ದೂ ಗಹನಾರ್ಥ ಒಳಗೊಂಡಿದೆ!
ಸಣ್ಣ ತಿದ್ದುಪಡಿ:
ಶತೃ ಎಂಬುದು ತಪ್ಪು ಪದ! ಸರಿಯಾದದ್ದು - ಶತ್ರು
ಕೆಲವರು ಹೆಸರನ್ನು 'ಶೃತಿ' ಎಂದು ತಪ್ಪಾಗಿ ಬರೆಯುತ್ತಾರೆ; ಅದು ಶ್ರುತಿ!

ಮುಂದುವರೆಸಿ.

 

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2006 - 12:01pm — ahoratra

ಧನ್ಯವಾದಗಳು ಬೆನಕರೆ.

ahoratra's picture

ನಿಮ್ಮ ವಿಮರ್ಶಗಳಿಗಾಗಿ ನಾವು ಸದಾ ಕಾಯುತ್ತೆವೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2006 - 6:42pm — shivannakc

Re: ಆರು ವೈರಿಗಳು - ಸೊಗಸಾಗಿದೆ!!!

shivannakc's picture

ಪ್ರೀತಿಯ ಅಹೋರಾತ್ರ (ರವರೇ),

ನಿಮ್ಮ ಕವನ ಸುಂದರವೂ, ಸುಮಧುರವೂ ಮತ್ತು ಅರ್ಥಗರ್ಭಿತವೂ ಆಗಿದೆ!!! ಅಷ್ಟಲ್ಲದೇ ಜೀವನದ ಮಾರ್ಗದರ್ಶನಕ್ಕೂ ಸಹಕಾರಿಯಾಗುವಂತಿದೆ! ಭಲೇ! ದಯವಿಟ್ಟು ಮುಂದುವರೆಸಿ.

ಕನ್ನಡ ಕಾವ್ಯಭಿಮಾನಿ,
ಶಿವಣ್ಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 6, 2006 - 11:23am — ahoratra

Re: ಆರು ವೈರಿಗಳು - ಸೊಗಸಾಗಿದೆ!!!

ahoratra's picture

ಆಧ್ಯಾತ್ಮಿಕ ಕಾವ್ಯಾಸಕ್ತ ಶಿವಣ್ಣರಿಗೆ,

ಅಹೋರಾತ್ರನ ಅಭಿವಂದನೆಗಳು.

ತಾವು ಧಯವಿಟ್ಟು ಡಿ ವಿ ಜಿ ಯವರ ಕಗ್ಗಕ್ಕೊಂದು ಕೈಪಿಡಿ ಓದಿ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 20, 2007 - 2:49pm — krishnamurthy bmsce

Re: ಆರು ವೈರಿಗಳು

krishnamurthy bmsce's picture

ಆತ್ಮೀ ಯ ಅಹೋರಾತ್ರ ರವರೆ ನಿಮ್ಮ ಆರು ವೈರಿಗಳು ಸೊಗಸಾಗಿದೆ ನಿಮ್ಮ ಬರವಣಿಗೆ ಸದಾ ಕಾರಂಜಿಯಾಗಿ ಹರಿಯಲೆಂಬ ಮಹದಾಸೆ ನಮ್ಮದು ನೈಜ ಮೌಲ್ಯಗಳ ಅರಿವು ಪ್ರತಿಯೊಬ್ಬರಲ್ಲಿ ಇದ್ದರೆ ಮನುಷ್ಯ ಮನುಷ್ಯನಾಗಿ ಉಳಿಯುತ್ತಾನೆ ಇದು ಸತ್ಯ.

ನಮ್ಮ ವಂದನಾಭಿನಂದನೆಯೊಂದಿಗೆ

ಕೃಷ್ಣಮೊರ್ತಿಅಜ್ಜಹಳ್ಳಿ ಬಿ ಎಂ ಎಸ್ ಸಿ ಇ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 25, 2007 - 9:49pm — ahoratra

Re: ಆರು ವೈರಿಗಳು

ahoratra's picture

ಕೃಷ್ಣ ಮೂರ್ತಿಗಳ ಹೂವಿನ ಹೃದಯಕ್ಕೆ ತಲೆಬಾಗಿ ವಂದಿಸುವೆ. ತಮ್ಮ ಆಶೀರ್ವಾಧ ಸದಾ ನನ್ನನ್ನು ಬರೆಯುವಂತೆ ಮಾದಲಿ ಎಂದು ಈಶನಲ್ಲಿ ಪ್ರಾರ್ಥನೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 20, 2007 - 6:26pm — muralihr

Re: ಆರು ವೈರಿಗಳು

muralihr's picture

ನೀವು ಈ ಮನುಷ್ಯ ಸ್ವಭಾವದ ಅವಗುಣಗಲನ್ನು ವೈರಿ ಎ೦ದು ನೋಡಿದರೆ
ಅವನ್ನು ಗೆಲ್ಲಬೇಕು . ಹಾಗೆ ನೋಡಿದರೆ ನಮ್ಮ ಮನಸ್ಸು ನಮಗೆ ಶತ್ರು
ಎ೦ದು ನೀವು ಹೇಳಬಹುದು. ಭಗವದ್ಗೀತೆಯಲ್ಲಿ ಕೃಷ್ಣ ಈ ಪದಗಳನ್ನು
ಉಪಯೋಗಿಸಿದರಲ್ಲಿ ಅರ್ಥ ಇತ್ತು , ಹಿ೦ದೆ ಯುದ್ಧದ ಸ೦ಧರ್ಭ ಬೇರೆ ಇತ್ತು.
ನನ್ನ ಪ್ರಕಾರ ಈ ಗುಣಗಳನ್ನು ವೈರಿ ಅನ್ನು ವುದಕಿನ್ನಾ ,
ಇವು ವ್ಯಕ್ತಿಯ ಜೀವನವನ್ನು ಹೇಗೆ ರೂಪಿಸುತ್ತವೆ, ಮನುಷ್ಯ
ಇವಗಳ ವಶದಲ್ಲಿ ಯಾವ ಮಟ್ಟಕ್ಕೆ ಹೋಗ್ತಾನೆ ಅ೦ತಾ ತಿಳಿದುಕೊ೦ಡರೆ,
ಆ ಅರಿವಿನಲ್ಲಿ ನಾವು ಗುಣಗಳಿ೦ದ ಬಿಡುಗಡೆಯನ್ನು ಕಾಣುತ್ತೇವೆ.
ಅಲ್ಲಿ ಯವರೆಗೂ ಗಾಳಿಯಲ್ಲಿ ಗುಣಗಳೊಡನೆ ಕತ್ತಿ ವರಸೆ ನಡೆಯುತ್ತಿರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 25, 2007 - 10:01pm — ahoratra

Re: ಆರು ವೈರಿಗಳು

ahoratra's picture

ಮುರಳಿಯವರ ಮಾತನ್ನು  ಕೃಷ್ಣನ ಮಾತೆಂದೆ ಭಾವಿಸಿ ಮುಂದುವರಿಯುವೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2007 - 12:17am — muralihr

Re: ಆರು ವೈರಿಗಳು- ಒ೦ದು ವ್ಯತ್ಯಾಸ.

muralihr's picture

ದಯವಿಟ್ಟೂ ಆ ರೀತಿ ಭಾವಿಸ ಬೇಡಿ.
ಮಹಾತ್ಮನೂ ಮಹಾನುಭಾವನು ಆದ ಶ್ರಿ ಕೃಷ್ಣನ ವಾಣಿ ಅಮೃತ ವಾಣಿ.
ಅವನು ಆಡಿದ ಒ೦ದೊ೦ದು ಮಾತು ಒ೦ದು ರಾಷ್ಟ್ರ, ಒ೦ದು ಸ೦ಸಾರ,
ಒ೦ದು ಜನಾ೦ಗವನ್ನು ಕಟ್ಟಿದೆ. ನಮ್ಮ ದೇಶ ಯಾವಾಗ ತೀರ ಕೆಳಗಿನ
ಮಟ್ಟಕ್ಕೆ ಹೋಗಿ ಕೊಚ್ಚೆಯಲ್ಲಿ ಬಿದ್ದಾಗ ಈ ಮಹಾನುಭಾವನು ನುಡಿದ ಗೀತೆಯ ಚೈತನ್ಯ
ಶಕ್ತಿ ಜನರ ಮನರ ಮೋಹಾ೦ಧಕಾರವನ್ನು ತೊಲಗಿಸಿ ನಮ್ಮನ್ನು ಮು೦ದಕ್ಕೆ ತ೦ದಿದೆ.

ಆತನ ಜೀವನ ಅದೆಷ್ಟೋ ಸಾಹಿತ್ಯ, ಕಾವ್ಯಕ್ಕೆ ಅಡಿಪಾಯ ಹಾಕಿದೆ.
ಆತನ ಚೇತನ ಅದೆಷ್ಟೋ ಋಷಿಗಳಿಗೆ ಸತ್ಯ ದರ್ಶನ ವನ್ನು ಮಾಡಿಸಿದೆ.
ಇ೦ತಹವನಾಡುವ ಮಾತು ಮಾತಲ್ಲಾ ವೇದ ವಾಕ್ಯ.
ನಾವಾಡುವ ಮಾತು ಬರೀ ಮಾತು..ಭೇದ ವಾಕ್ಯ.
ಆದರಿ೦ದ .. ಮುರಳಿಯ ಮಾತು ಮುರಳಿಯದು..
ಕೃಷ್ಣನ ಮಾತು ...ಮುರಳಿಯ(ಕೊಳಲು) ಗಾನದಲ್ಲಿ ಕೇಳಿ...
ಇನ್ನೂ ಎಲ್ಲಾ ಕಡೆಗಳಿ೦ದ ಕೇಳಬಹುದು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 25, 2007 - 10:40pm — Sunil Jayaprakash

ಅರಿಷಡ್ವರ್ಗಗಳು v/s ಸಪ್ತರಿಪುವರ್ಗ

Sunil Jayaprakash's picture

ಗೆಳೆಯರೇ, ಇತ್ತೀಚೆಗೆ ನನಗೆ ಹೊಸ ವಿಷಯವೊಂದು ತಿಳಿಯತು.

ಪ್ರಸಿದ್ಧವಾದ ಅರಿಷಡ್ವರ್ಗಕ್ಕೆ ಬದಲಾಗಿ, ಕನ್ನಡದ ಕವಿರಾಜಮಾರ್ಗದಲ್ಲಿ ಸಪ್ತರಿಪುವರ್ಗ ಹೇಳಲ್ಪಟ್ಟಿದೆ(೩ನೇ ಪರಿಚ್ಛೇದ, ಪದ್ಯದ ಎಣ್ಕೆ, ೨೨೭)

ಆ ಏಳು ಶತ್ರುಗಳೆಂದರೆ,
ಮದ, ಮಾನ, ಮಾಯ, ಭಯ, ಲೋಭ, ವಿಷಾದ, ಹರ್ಷಾಭ್ಯುದಿ -

ಇವೆಲ್ಲವೂ ಅಂತರಂಗ ರಿಪುವರ್ಗ ಎಂದು ಕವಿರಾಜಮಾರ್ಗದ ಕರ್ತೃ ಹೇಳಿದ್ದಾನೆ. ಇದರಲ್ಲಿ ಮಾಯ, ವಿಷಾದ ಮತ್ತು ಹರ್ಷಾಭ್ಯುದಿಯ ಪ್ರಸ್ತಾಪ ತುಂಬಾ ಸಮಂಜಸವಾಗಿದೆ ಎಂದು ನನಗನ್ನಿಸಿತು. ಅದರಲ್ಲಿಯೂ, ವಿಷಾದದ ಪ್ರಸ್ತಾಪ, ಆನಂದವೇ ಬ್ರಹ್ಮ ಎಂಬ ಮಾತಿಗೆ ಪುಷ್ಟಿಯನ್ನು ನೀಡಿತ್ತಿದೆ ಎಂದನಿಸುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 25, 2007 - 10:41pm — ASHOKKUMAR

Re: ಆರು ವೈರಿಗಳು

ASHOKKUMAR's picture

 >>ಪಲಿಸದಾಗ

ಫಲಿಸದಾಗ

 >>ಸುಲುಭವು

ಸುಲಭವು

Embarassedಭಯವಾಗ್ತಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2007 - 1:50pm — ahoratra

Re: ಆರು ವೈರಿಗಳು

ahoratra's picture

ಅಶೋಕರೆ ಈ ವ್ಯಾಕರಣ ದೋಷಗಳಿಂದಲೇ ನಾನು ಕವಿಯಾಗಲಿಲ್ಲ. ಕವಿಯಾದವನು ಸಕಲಕಲಾ ವಲ್ಲಭನಾಗಿರಬೇಕು, ದೋಷವಿಲ್ಲದವನಾಗಿರಭೇಕು, ಆ ಪದವಿ ನಮ್ಮ ಗುರಿಯಾಗಿರಬಾರದು, ಹಾಗಂತ ನಮ್ಮ ಪ್ರಯತ್ನವೂ ನಿಲ್ಲಬಾರದು. ತಪ್ಪುಗಳನ್ನು ಮನ್ನಿಸಿ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 26, 2007 - 12:52pm — Prabhu Murthy

Re: ಆರು ವೈರಿಗಳು

Prabhu Murthy's picture

ಗೀತೆಯ "ಧ್ಯಾಯತೋ ವಿಶಯಾನ್ ಪುಂಸಃ..." ಈ ಕೆಲವು ಶ್ಲೋಕಗಳ ನೆರಳು ಇರುವಂತೆ ಕಾಣುತ್ತದೆ. ನಿಮ್ಮಿಂದ ಇನ್ನೂ ಅನೇಕ ಕವಿತೆಗಳು ಹೊರಹೊಮ್ಮಲಿ.

 ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆರು ವೈರಿಗಳು.
  • ಯಶೋಧಾನಂದನ
  • ನಗೆ ಗವನ
  • ನುಡಿ ಮುತ್ತುಗಳು
  • ಇನ್ನೊಂದೆರಡು........
Syndicate content

ಲೇಖಕರು

ahoratra's picture

ಪರಿಚಯ

ನ ಅಂದರೆ ಗೊತ್ತಿಲ್ಲ,
ದಾನ ಮಾಡಲು ಧನವಿಲ್ಲ,
ಪ್ರಧಾನಿಯಾಗಲೂ ಮನವಿಲ್ಲ,
ವಿಜ್ಞಾನಿಯಾಗಲು ಜ್ಞಾನವಿಲ್ಲ,
ಜ್ಞಾನಿಯಾಗಲು ಧ್ಯಾನವಿಲ್ಲ,
ಧ್ಯಾನಿಯಾಗಲು ನಿಧಾನವಿಲ್ಲ,
ಕದನವಿಲ್ಲದೆ ನಿದನವಿಲ್ಲ,
ಭಜನೆಯಿಲ್ಲದೆ ಭೋಜನವಿಲ್ಲ,
ದುರ್ಜನರಿಂದ ವಿಭಜನೆಯಾಗಿ,
ಸಜ್ಜನ ಸಂಗದ ಮಜ್ಜನಮಾಡಿ,
ಜನಾರ್ಧನ ಸೇವೆಯ ಸಾಧನೆ ಮಾಡುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:03am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:01am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 10:59am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 10:58am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 10:57am
  • mahesha
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 10:56am
  • mahesha
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 10:53am
  • ಸಂಗನಗೌಡ
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 10:06am
  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 85 ಅತಿಥಿಗಳು ಆನ್ಲೈನ್ ಇರುವರು.


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator