ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › ahoratra ರವರ ಬ್ಲಾಗ್

ಭರತಾಗ್ರಜ

May 14, 2006 - 10:54pm — ahoratra

ಭರತಾಗ್ರಜ.

ಗ್ರಾಮ ಗ್ರಾಮದಲಿ ರಾಮನವಮಿಯ
ಮಾಮರತೋರಣ ಸಾರುತಿದೆ//
ಪುಣ್ಯಧಾಮದಲಿ ರಾಮನಾಮದಾ
ಕೋಟಿ ಕೋಟಿ ಜಪ ಸೇರುತಿದೆ//

ಭರತಖಂಡಕೇ ಭಾಗ್ಯವತಂದ
ಭರತಾಗ್ರಜ ನೀ ಬಾ ಎಂದು/
ಅಸುರಭಾರವ ದೂರಗೊಳಿಸುತ
ಭೂರಮೆಯಾ ನೀ ರಮಿಸೆಂದು/೧/

ಸೀಮೆಯ ದಾಟಿದಸೀಮಪರಾಕ್ರಮಿ
ಸೀತಾಪತಿ ನೀ ಬಾ ಎಂದು/
ಸಿಂಧು ನದಿಯನು ಸೀಮೆಗೆ ಸೇರಿಸಿ
ಸೀಮೆಯ ದುಃಖವ ಸರಿಸೆಂದು/೨/

ವಾಲಿಯ ಮಣಿಸಿದ ವಾನರ ಪ್ರಿಯ ನೀ
ವಸುಮತಿಯಾಪತಿ ಬಾ ಎಂದು/
ವನವನು ತಣಿಸಿ ಜನರುಧ್ಧರಿಸುವ
ವೀರಪುಂಗವನು ನೀನೆಂದು/೩/

ಧರೆಗವತರಿಸಿದ ದಶರಥ ತನಯ
ದಾರಿತೋರು ನೀ ಬಾ ಎಂದು/
ದಿವಾಕರಕಿರಣಾಭರಣವ ಧರಿಸಿ
ಧರಣಿಗೆ ಕರುಣೆಯ ತೋರೆಂದು/೪/

ಅಹೋರಾತ್ರ

 ರಾತ್ರಿ  ೪:೨೫.
೭/೪/೬.
ರಾಮನವಮಿ.

 

~.~
  • ahoratra ರವರ ಬ್ಲಾಗ್
  • Login or register to post comments
  • 492 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 15, 2006 - 9:03am — benaka

ರಾಮ ಭರತಾಗ್ರಜ

benaka's picture

ಅಹೋರಾತ್ರ ಕವಿಗಳೇ,

ಕವನ ಭೇಷಾಗಿದೆ! ಲಯಕ್ಕೆ ಗಮನ ಹರಿಸಿರುವುದು ನಿಜಕ್ಕೂ ಸಂತಸದ ಸಂಗತಿ.
ಆದರೆ ಒಂದು ತಪ್ಪು ನುಸುಳಿಕೊಂಡು ಬಿಟ್ಟಿದೆ! ನೀವು ರಾಮನವಮಿಯಂದು ಕರೆಯುತ್ತಿರುವುದು ರಾಮನನ್ನು ಅಲ್ಲವೇ?
ಅಂದರೆ ಭರತಾನುಜನನ್ನಲ್ಲ; ಭರತಾಗ್ರಜನನ್ನು ! ಅನುಜ = ತಮ್ಮ ; ಅಗ್ರಜ = ಅಣ್ಣ .
ಸಂಸ್ಕೃತದಲ್ಲಿ :
ಅಗ್ರೇ ಜಾತ ಇತಿ ಅಗ್ರಜಃ = (ತನಗಿಂತ) ಮೊದಲು ಹುಟ್ಟಿದವನು = ಅಣ್ಣ
ಅನು(ಅನುಸೃತ್ಯ) ಜಾತ ಇತಿ ಅನುಜಃ = (ತನ್ನನ್ನು) ಅನುಸರಿಸಿ ಹುಟ್ಟಿದವನು = ತಮ್ಮ
ಎಂದರ್ಥ. ರಾಮನು ಭರತನಿಗೆ ಅಣ್ಣನಾದ್ದರಿಂದ ಅವನು ಭರತಾಗ್ರಜ; ಭರತಾನುಜನಲ್ಲ.
ಭಾವಾವೇಶದಲ್ಲಿ ಕವನ ಹೊರಹೊಮ್ಮುವಾಗ ಇವೆಲ್ಲ ಮೊದಮೊದಲು ಸರ್ವೇಸಾಮಾನ್ಯ;
ಎದೆಗುಂದದೆ ಮುಂದುವರೆಸಿ. ಭರತಾಗ್ರಜನು ನಿಮಗೆ ಅನುಗ್ರಹಿಸಲಿ.

ನಿಮ್ಮವ

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2006 - 11:36am — ahoratra

ಭರತಾಗ್ರಜ,

ahoratra's picture

ಆತ್ಮೀಯ ಬೇನಕರೇ,

ಮನ್ನಿಸಿ, ತಮ್ಮಂತಹ ಗುರುಗಳಿದ್ದರೆ ನಾವು ಏನು ಬೇಕಾದರೂ ಸಾದಿಸಬಹುದು,

ತಮ್ಮ ಮಾತಿನಂತೆ ಈ ಕವನವನ್ನು ಬದಲಿಸಿದ್ದೇನೆ, ಮುಂದೆಯೂ ಹೀಗೆಯೇ ತಪ್ಪುಗಳನ್ನು  ವದಿಸಿ ನನ್ನನ್ನು ಅಶೀರ್ವದಿಸಿರಿ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2006 - 9:24am — ಮಹೇಶ ಭೋಗಾದಿ

ವಿಭಕ್ತಿ ಸರಿಯಿಲ್ಲ

ಮಹೇಶ ಭೋಗಾದಿ's picture

ನನ್ನ ಅನಿಸಿಕೆಗಳನ್ನು ಬರೆದಿದ್ದೇನೆ.
ಬಲ್ಲವರು ಸರಿಪಡಿಸಿರಿ.

ತಪ್ಪು - ಸರಿ
ರಾಮನಾಮದಾ - ರಾಮನಾಮದ
ಭರತಖಂಡಕೇ - ಭರತಖಂಡಕೆ
ಭಾಗ್ಯವತಂದ - ಭಾಗ್ಯವ ತಂದ
ಭೂರಮೆಯಾ - ಭೂರಮೆಯ
ದಾಟಿದಸೀಮಪರಾಕ್ರಮಿ - ದಾಟಿದ ಸೀಮಪರಾಕ್ರಮಿ
ವಸುಮತಿಯಾಪತಿ - ವಸುಮತಿಯ ಪತಿ
ಜನರುಧ್ಧರಿಸುವ - ಜನರುದ್ಧರಿಸುವ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2006 - 4:59pm — shreekant.mishrikoti

ಕವಿಗೆ ವ್ಯಾಕರಣದ ಮಿತಿಗಳಿಲ್ಲ ?

shreekant.mishrikoti's picture

ಕವಿಗೆ ವ್ಯಾಕರಣದ ಮಿತಿಗಳಿಲ್ಲ , ಅವನು ತನಗೆ ಬೇಕಾದ ಸ್ವಾತಂತ್ರ್ಯವನ್ನು ವಹಿಸಬಹುದು ಎಂದು ಎಲ್ಲಿಯೋ ಓದಿದ್ದೇನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2006 - 6:07pm — ಮಹೇಶ ಭೋಗಾದಿ

ಕವನ ಮತ್ತು ವ್ಯಾಕರಣ

ಮಹೇಶ ಭೋಗಾದಿ's picture

ಕವನಗಳಿಗೆ ವ್ಯಾಕರಣದ ಸಡಿಲಿಕೆಯುಂಟೇ ಹೊರತು, ಅವು ಎಲ್ಲ ವ್ಯಾಕರಣಾಂಶಗಳನ್ನು, ಅದರಲ್ಲೂ ಭಾಷೆಯ ಮೂಲಭೂತದ ನಿರ್ಮಾಣಾಂಶವಾದ ವಿಭಕ್ತಿ-ಪ್ರತ್ಯಯದಂಥ ಅಂಶಗಳನ್ನು ಕಡೆಗಣಿಸಬಾರದು.

ಹೀಗೆ ಮಾಡಿದರೆ ಓದುಗರಿಂದ ತಥಾರ್ಥವನ್ನು ತಿಳಿಯಲು ಸಾಧ್ಯವಾಗದೇ ಹೋಗಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭರತಾನುಜ.
  • ದೇವರ ಲೀಲೆ............
  • ದೇವರ ಲೀಲೆ...
  • ಮಿಸ್ ಮಾಚೆನ್ಹಳ್ಳಿ
  • ಭಕ್ತಿಯ ಶಕ್ತಿ.
Syndicate content

ಲೇಖಕರು

ahoratra's picture

ಪರಿಚಯ

ನ ಅಂದರೆ ಗೊತ್ತಿಲ್ಲ,
ದಾನ ಮಾಡಲು ಧನವಿಲ್ಲ,
ಪ್ರಧಾನಿಯಾಗಲೂ ಮನವಿಲ್ಲ,
ವಿಜ್ಞಾನಿಯಾಗಲು ಜ್ಞಾನವಿಲ್ಲ,
ಜ್ಞಾನಿಯಾಗಲು ಧ್ಯಾನವಿಲ್ಲ,
ಧ್ಯಾನಿಯಾಗಲು ನಿಧಾನವಿಲ್ಲ,
ಕದನವಿಲ್ಲದೆ ನಿದನವಿಲ್ಲ,
ಭಜನೆಯಿಲ್ಲದೆ ಭೋಜನವಿಲ್ಲ,
ದುರ್ಜನರಿಂದ ವಿಭಜನೆಯಾಗಿ,
ಸಜ್ಜನ ಸಂಗದ ಮಜ್ಜನಮಾಡಿ,
ಜನಾರ್ಧನ ಸೇವೆಯ ಸಾಧನೆ ಮಾಡುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
  • D.S.NAGABHUSHANA
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 8:37pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator