ಅಮ್ಮ.
ಅಮ್ಮ.
ಗಮ್ಮತ್ತಮ್ಮ ಗಮ್ಮತ್ತು
ಗಮಗಮಗಮಿಸುವ ಗಮ್ಮತ್ತು//
ಅಮ್ಮನ ಪ್ರೀತಿಯ ಕೈತುತ್ತು
ತಿಂದರೆ ಬರುವ ತಾಖತ್ತು
ನಿತ್ಯವು ಮಾಡುವ ಕಸರತ್ತು
ತಪ್ಪದೆ ಬರುವುದು ಮೈಕಟ್ಟು/೧/
ಅಮ್ಮನ ಪ್ರೀತಿಯ ಕಿಮ್ಮತ್ತು
ಮರಣದ ನಂತರ ಗೊತ್ತಾಯ್ತು
ಗೀತೆಯ ಮಾತು ಗೊತ್ತಿತ್ತು
ಆದರೂ ದುಃಖವು ಒಡೆದಿತ್ತು/೨/
ಪ್ರಣತಿಯ ನಿರ್ಮಲ ಸಿಹಿಮುತ್ತು
ಅಮ್ಮನ ನೆನಪನು ತರುತಿತ್ತು
ನನ್ನ ಗೌರವದ ಒಳಗುಟ್ಟು
ಅಮ್ಮನು ಕೊಟ್ಟ ಸಂಪತ್ತು/೩/
ಭವಭಾರದ ಸಾಲಕೆ ತಲೆಕೊಟ್ಟು
ಮುರಿಯಿತು ಅಮ್ಮನ ನಡುಕಟ್ಟು
ಬಾರವು ಬೆಳೆಯಿತು ದುಪ್ಪಟ್ಟು
ಸಾಲವೆ ಅಮ್ಮನ ಕೊಂದಿತ್ತು/೪/
ಹೇಳುವೆ ಕೇಳಿ ಈ ಗುಟ್ಟು
ಸಾಲವೆ ದುಃಖದ ತಲೆಕಟ್ಟು
ಯಾರಿಗು ಬೇಡ ಈ ಕುತ್ತು
ಅಮ್ಮನು ಇಲ್ಲದ ಆಪತ್ತು/೫/
ಆಪತ್ತಮ್ಮ ಆಪತ್ತು
ಸಾಲವು ನಮಗೆ ಆಪತ್ತು//
ಅಹೋರಾತ್ರ.
೧೦:೪೦ ರಾತ್ರಿ.
೨/೫/೬.
ಮುಂಬೈ.

- ahoratra ರವರ ಬ್ಲಾಗ್
- Login or register to post comments
- 608 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಅದ್ಭುತ!
ಅಹೋರಾತ್ರ ಕವಿಗಳೇ,
ಅದ್ಭುತ! ನಿಮ್ಮಲ್ಲಿರುವ ಕವಿಗೆ ಜೀವನೀಡಿದ್ದೀರಿ!
ಕವನವನ್ನು ಮಾಲೆಯಂತೆ ಪೋಣಿಸುವಾಗ ಎಲ್ಲ ಮಣಿಗಳಿಗೂ ಗಮನವಿರಲಿ.
ನಿಜಕ್ಕೂ ಒಳ್ಳೆಯ ಪ್ರಯತ್ನ.
ನಿಮ್ಮವ
ಬೆನಕ
ಅಮ್ಮ, ಗೀತೆ ಮತ್ತು ಸಾಲ.
ಅಹೋರಾತ್ರರೆ, ಕವನದ ಶೀರ್ಷಿಕೆ ನೋಡಿದಾಗ, "mother's day" ದಿನಕ್ಕಾಗಿ ಬರೆದಿರುವ ಒಂದು ಪದ್ಯವಿರಬಹುದು ಎಂದು ಭಾವಿಸಿದ್ದೆ. ಆದರೆ ಈ ಕವನದ ವಸ್ತುವೇ ಬೇರೆ. ಸುಮ್ಮನೆ ಸಾಲ ಮಾಡಬೇಡಿ ಎಂದು ಹೇಳಿದರೆ ಯಾರೂ ಕೇಳುವುದಿಲ್ಲ. ಆದರೆ ನಮಗೆ ಹತ್ತಿರವಿರುವ ಮುಖಾಂತರ ಹೇಳಿಸಿದರೆ ಮನಸ್ಸಿಗೆ ನಾಟುತ್ತದೆ.
ಹಾಗಾಗಿ, ಸಾಲ ಮಾಡಿದರೆ ನನಗೆ ಕೇಡಾಗುತ್ತದೆ ಎನ್ನುವುದಕ್ಕಿಂತ, ಅಮ್ಮನಿಗೆ ಕೇಡಾಗುತ್ತದೆ ಎಂದು ಹೇಳುತ್ತಾ, ಸಾಲ ಮಾಡಬೇಡ ಎಂಬ ಉಪದೇಶ ನೀಡುವಂತಿದೆ.
ನಿಮ್ಮ ಕವನ ಬಹಳವೇ ಇಷ್ಟವಾಯಿತು. ಕಾರಣ, ಇಷ್ಟೇ, ಇದರಲ್ಲಿರುವ ಪದಗಳೆಲ್ಲವೂ ಸರಳ, ದಿನವೂ ಉಪಯೋಗಿಸುವಂತದ್ದು.
ಅದರಲ್ಲೂ
ಅಮ್ಮನ ಪ್ರೀತಿಯ ಕೈತುತ್ತು
ತಿಂದರೆ ಬರುವ ತಾಖತ್ತು
ನಿತ್ಯವು ಮಾಡುವ ಕಸರತ್ತು
ತಪ್ಪದೆ ಬರುವುದು ಮೈಕಟ್ಟು
ಮೇಲಿನ ಸಾಲುಗಳಂತೂ, ಯಾುವ ಇಂಗ್ಲೀಷ್ ರೈಮ್ಸಗೂ ಕಡಿಮೆಯಿಲ್ಲ. ಇದನ್ನು ಓದಿದ ನಾವು, ನಮ್ಮ ಮಕ್ಕಳಿಗೆ, ಕಡೇ ಪಕ್ಷ, ಈ ಸಾುಲುಗಳನ್ನಾದರು ಹೇಳಿಕೆೊಡೋಣ. ಮಕ್ಕಳು ಊಟ ಮಾಡುವುದಿಲ್ಲ ಎಂದು ಹಠಮಾಡಿದಾಗ, ಈ ಪದ್ಯ ಹೇಳಬಹುದು.
ಹಾಗೆಯೇ, ತಿಳಿದವರು ಇದರ ಅರ್ಥ ಸ್ವಲ್ಪ ವಿಷದವಾಗಿ ತಿಳಿಸುವುಕ್ಕಾಗುತ್ತದೆಯೇ.
ಗೀತೆಯ ಮಾತು ಗೊತ್ತಿತ್ತು.
ಗೀತೆಯ ಮಾುತು ಯಾವುದು.?
ಧನ್ಯವಾದಗಳು.
ಗೀತೆಯ ಮಾತು
ಸುನಿಲರೇ,
ನನಗೆನಿಸುವಂತೆ ಕವಿ ಇಲ್ಲಿ ಹೇಳಹೊರಟಿದ್ದು ಆಧ್ಯಾತ್ಮದ ಮಾತನ್ನು:
ಬಹುಶಃ ನನಗೆ ಈ ನಾಲ್ಕು ಸಾಲುಗಳು ಇಷ್ಟವಾಗಲು ಅದೇ ಕಾರಣವಿರಬಹುದು.
ಅಮ್ಮನ ಪ್ರೀತಿಯ ಕಿಮ್ಮತ್ತು
ಮರಣದ ನಂತರ ಗೊತ್ತಾಯ್ತು
ಗೀತೆಯ ಮಾತು ಗೊತ್ತಿತ್ತು
ಆದರೂ ದುಃಖವು ಒಡೆದಿತ್ತು/೨/
ಇಲ್ಲಿ ಆಪ್ತರ ಸಾವಿನ ಮಾತಿದೆ; ಸಾವಿನ ದುಃಖವಿದೆ. ಸಮಾಧಾನಿಸಿಕೊಳ್ಳಲು ಕವಿಗೆ
ತೋಚಿದ್ದು ಗೀತೆಯ ಮಾತು: ಅಂದರೆ ಭಗವದ್ಗೀತೆಯ ಸಾರ; ಅದ್ಭುತ!
ಆ ಗೀತೆಯ ಮಾತು ಇನ್ನೇನೂ ಅಲ್ಲ ಇಷ್ಟೇ: ಆತ್ಮಕ್ಕೆ ಸಾವಿಲ್ಲ!
ನೈನಂ ಛಿಂದಂತಿ ಶಸ್ತ್ರಾಣಿ
ನೈನಂ ದಹತಿ ಪಾವಕಃ
ನಚೈನಂ ಕ್ಲೇದಯಂತ್ಯಾಪೋ
ನ ಶೋಷಯತಿ ಮಾರುತಃ
ಅಂದರೆ:
ಸೀಳದಿದನು ಆಯುಧವು
ಸುಡದು ಇದನು ಬೆಂಕಿ
ತೋಯಿಸದು ನೀರು ಕೂಡಾ
ಇದನೊಣಗಿಸದು ಗಾಳಿ
ಭಲಾ! ಒಳ್ಳೆಯ ಸಾಲು!
ನಿಮ್ಮವ
ಬೆನಕ
ಗೀತೆಯ ಮಾತು ಗೊತ್ತಿತ್ತು.
ಪ್ರೀತಿಯ ಸುನಿಲರೇ,
'ಸುಖದುಃಖೇ ಸಮೇ ಕೃತ್ವ' ಎಂಬ ಮಾತು ನನ್ನನ್ನು ದುಃಖಿಯಾಗದಂತೆ ಎಚ್ಚರಿಸುತ್ತಿತ್ತು, ಆದರೂ ನನಗೆ ತಡೆಯಲಾಗಲಿಲ್ಲ.
ಅಹೋರಾತ್ರ