ವೇದ ಸಾರ,ಬೆಲೆ ಮತ್ತು ಮಾಣಿಕ್ಯ.
ವೇದ ಸಾರ.
ಆರು-ಮೂರರ
ಊರಲಿ
ಜಾರಿ
ಗೋರಿಯಾಗದ
ವೀರ
ಯಾರು?
ಆರು
ಅರಿಗಳ
ಅರಿತ
ಧೀರ,
ಮೂರು
ಗುಣಗಳ
ಮರೆತ
ಶೂರ,
ಸುರವ
ವರಿಸಿ,
ಅಸುರವ
ಉರಿಸಿ,
ಅರ್ದನಾರಿಯ
ಊರಿಗೋದವ.
ಬೆಲೆ
ಅರ್ಜುನ-ಅಶ್ವತ್ಥಾಮರ,
ಪುತ್ರ-ಪಿತೃ
ಶೋಕದ
ಬೆಲೆ
ಏಕಲವ್ಯನ ಅಂಗುಷ್ಠಿಕ.
ಮಾಣಿಕ್ಯ
ಮೌನ
ಮಾತೆಯಾದರೆ,
ಮಾತು
ಮಗು.
ಮಗು
ಬೆಳೆದಷ್ಟು
ಮುಗ್ಧತೆಯ
ಮಲಿನ.
ಮಾತು
ಬೆಳೆದಷ್ಟು
ಮೌಲ್ಯನಾಶ.
ಮುಗ್ಧತೆಯನ್ನು
ಉಳಿಸಿಕೊಂಡ
ಮನುಷ್ಯನ
ಮಾತು
ಮಾಣಿಕ್ಯ.
ಅಹೋರಾತ್ರ.

- ahoratra ರವರ ಬ್ಲಾಗ್
- Login or register to post comments
- 548 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: