ಅಭಯಂಕರ
ಅಭಯಂಕರ.
ಭಯವೇಕೆ ಭಯವೇಕೆ ಏನಾಗಬಹುದು
ಸಾವಿಗಿಂತಾ ಮೇಲೆ ಏನಾಗಬಹುದು.
ಹುಲಿಸಿಂಹ ಕಾಡಾನೆ
ಕರಿನಾಗ ಕಾಳಿಂಗ
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ಕಾರ್ಮೋಡ ಕೋಲ್ಮಿಂಚು
ಬರಸಿಡಿಲು ಭೂಕಂಪ
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ಕಟುಕಜನ ಕಳ್ಳರು
ದೊಂಬಿ ದರೋಡೆಗಳು
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ದುಶ್ಯ್ಶತೃ ವಂಚಕರು
ಗೋಮುಖ ವ್ಯಾಘ್ರರು
ಒಟ್ಟಾರೆ ಎರಗಿದರೂ
ಏನಾಗಬಹುದು.
ಸಾವಿಗಿಂತಾ ಮೇಲೆ ಏನಾಗಬಹುದು.
ಭಯವೆಲ್ಲಿ ಭಯವೆಲ್ಲಿ
ಅಭಯಂಕರನಿರುವಲ್ಲಿ
ನಿರ್ಭಯದ ಸುಖವಿದು
ಹರಿನಾಮ ಫಲವಿದು.
ಅಹೋರಾತ್ರ.
ರಾತ್ರಿ ೧.
೨೦/೩/೬.

- ahoratra ರವರ ಬ್ಲಾಗ್
- Login or register to post comments
- 452 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಅಭಯ೦ಕರ
ಧೈರ್ಯವ೦ತನಿಗೆ ಲಕ್ಷ್ಮಿಯೂ ಒಲಿಯುತ್ತಾಳೆ ಎನ್ನುತ್ತದೆ ಸ೦ಸ್ಕೃತ ಸುಭಾಷಿತ. ಹೇಡಿಯು ತನ್ನ ಸಾವಿಗಿ೦ತ ಮೊದಲೇ ಅನೇಕ ಬಾರಿ ಸಾಯುತ್ತಾನೆ ಎನ್ನುತ್ತದೆ ಆ೦ಗ್ಲ ಗಾದೆ. ಇಲಿಯಾಗಿ ನೂರು ದಿನ ಬಾಳುವುದಕ್ಕಿ೦ತ ಹುಲಿಯಾಗಿ ಒ೦ದು ದಿನ ಬಾಳು ಎನ್ನುವ ಮಾತೊ೦ದಿದೆ. ಇದನ್ನೆಲ್ಲ ಒಟ್ಟಾಗಿಸಿ ಬರೆದಿರುವ ತಮ್ಮ ಕವನ ಬಹಳ ಚೆನ್ನಾಗಿದೆ. ಮು೦ದೆಯೂ ಇ೦ತಹ ಕವನಗಳು ತಮ್ಮಿ೦ದ ಸೃಷ್ಟಿಯಾಗಲಿ.
ಕವನದಷ್ಟೆ ಚೆನ್ನಾಗಿದೆ ನಿಮ್ಮ ಮಾತು.
ಧನ್ಯವಾದ ವಿ ನಾಗ್ರಿಗೆ ತಮ್ಮ ಹಿತಭಾಷೆಗಾಗಿ.
ಅಹೋರಾತ್ರ