ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಅದಲು ಬದಲು

December 3, 2007 - 1:52pm — anivaasi

ಹೋದ ವಾರ ಆಸ್ಟ್ರೇಲಿಯಾದಲ್ಲಿ ಚುನಾವಣೆ ಮುಗಿಯಿತು. ಸರ್ಕಾರ ಬದಲಾಯಿತು.ಅದರ ಬಗ್ಗೆ ಬರೀ ಬೇಕು ಅಂತ ಅನ್ಕೊಂಡರೂ ಆಗಲಿಲ್ಲ. ಈವತ್ತು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತಂತೆ.

ಹೋದ ಸರ್ಕಾರ ಬಿದ್ದಿದ್ದು, ಹೀನಾಮಾನವಾಗಿ ಸೋತಿದ್ದು ಯಾಕಿದ್ದೀತು? ಇದಕ್ಕೆಲ್ಲಾ ಏನು ಅರ್ಥ ಅಂತ ಯೋಚಿಸುತ್ತಿದ್ದೀನಿ.

ಬರೇ ಬೇಸತ್ತು ಜನ ಸರ್ಕಾರ ಬದಲಿಸಿದರೆ? ಇದು ನಿಜವಿರಬಹುದಾದರೂ ಒಪ್ಪಲು ಮನಸ್ಸಾಗುತ್ತಿಲ್ಲ!

ಯಾಕೆಂದರೆ, ಆಸ್ಟ್ರೇಲಿಯಾದಲ್ಲಿ ಈಗ ಸುಲಭವಾಗಿ ಕೆಲಸ ಸಿಗುತ್ತಿದೆ. ಇದಕ್ಕೆ ಹೋದ ಸರ್ಕಾರ ತಂದಿದ್ದ ವರ್ಕ್ ಚಾಯ್ಸಸ್ ಎಂಬ ಒಂದು ಕಾಯಿದೆಯೇ ಕಾರಣ ಎಂದು ಅದು ಎದೆ ತಟ್ಟಿ ಹೇಳಿಕೊಳ್ಳುತ್ತಿತ್ತು. ಅದು ಯೂನಿಯನ್‌ಗಳ ಬೆನ್ನು ಮುರಿಯಲೇ ತಂದ ಕಾಯಿದೆ. ಅದರಿಂದ ಎಷ್ಟೋ ಜನರಿಗೆ ಕೆಲಸದಲ್ಲಿ ಅಭದ್ರತೆ ಬೆನ್ನತ್ತಿದ್ದು ಸುಳ್ಳಲ್ಲ. ಸರ್ಕಾರ ಬದಲಾಯಿಸಲಿಕ್ಕೆ ಇದು ಕಾರಣ ಆಯಿತ?

ಈ ಸೋತ ಪ್ರಧಾನಿ, ಹೋದ ಸಲದ ಚುನಾವಣೆನಲ್ಲಿ ಇಂಟರೆಸ್ಟ್ ರೇಟ್ ಅದುಮಿಡ್ತೀವಿ ಅಂದಿದ್ದ. ಅದು ತನ್ನ ಕೈಲಾಗೊಲ್ಲ ಅಂತ ಗೊತ್ತಿದ್ದೂ... ಈ ಚುನಾವಣೆಗೆ ಮುನ್ನ ಐದಾರು ಸಲ ಇಂಟರೆಸ್ಟ್ ರೇಟ್ ಏರಿತ್ತು... ಸರ್ಕಾರ ಬದಲಾಯಿಸಲಿಕ್ಕೆ ಇದು ಕಾರಣ ಆಯಿತ?

ಇಡೀ ಲೋಕವೇ ಪರಿಸರದ ಬಗ್ಗೆ ತಲೆ ಕೆಡೆಸಿಕೊಂಡಿದ್ದಾಗ, ಈ ಸೋತ ಪ್ರಧಾನಿ ಅವೆಲ್ಲಾ ಸುಳ್ಳು ಅನ್ನುತ್ತಾ ವರ್ಷಾನುಗಟ್ಟಲೆ ಹಾಳು ಮಾಡಿದ. ಹೋದ ವರ್ಷ ತಾನೆ "ಏನಾದರೂ ಮಾಡಬೇಕು" ಅಂತ ಗೊಣಗತಾ ಇದ್ದ. ಜನರಿಗೆ ಇದು ಅಕ್ಷಮ್ಯ ಅನ್ನಿಸ್ತ? ಸರ್ಕಾರ ಬದಲಾಯಿಸಲಿಕ್ಕೆ ಇದು ಕಾರಣ ಆಯಿತ?

ಈ ಸೋತ ಪ್ರಧಾನಿ ಜನರಿಗೆ "ಸುಮ್ಮನೆ ಸರ್ಕಾರ ಬದಲಾಯಿಸೋದು ರಿಸ್ಕ್. ಹಾಗೆ ಮಾಡಬೇಡಿ. ನಾವು ಚೆನ್ನಾಗಿ ಆಳ್ತಾ ಇದ್ದೀವಲ್ಲ. ಯಾಕೆ ಸುಮ್ಮನೆ" ಅಂತ ಹೆದರಿಸಿದ್ದ. ಆದರೆ ತನ್ನ ಸುತ್ತ ನಾಡು ಬದಲಾಗಿರೋದು, ಜನ ಎಚ್ಚತ್ತಿರೋದು ಈ ಮುದಕಂಗೆ ಗೊತ್ತೇ ಆಗಲಿಲ್ಲ ಅಂತ ಪೇಪರಲ್ಲಿ ಈಗೀಗ ಬರೀತಾ ಇದ್ದಾರೆ. ಇದೇ ನಿಜವಾಗಿದ್ದು - ಸರ್ಕಾರ ಬದಲಾಯಿಸಲಿಕ್ಕೆ ಇದು ಕಾರಣ ಆಯಿತ?

ಅಥವಾ ನಿಜವಾಗಲೂ ಈ ಸರ್ಕಾರದ ಅನೈತಿಕ ನಡೆವಳಿಕೆ ಜನರಲ್ಲಿ ವಾಕರಿಕೆ ಬರಿಸ್ತ? ಇರಾಖ್ ಯುದ್ಧ, ಆದಿವಾಸಿಗಳ ಮೇಲಿನ ದಬ್ಬಾಳಿಕೆ, ನಿರಾಶ್ರಿತರ ಮೇಲಿನ ಕ್ರೌರ್ಯ. ಇವುಗಳ ಬಗ್ಗೆ ಹೆಚ್ಚು ಚರ್ಚೆ ಆಗಿಲ್ಲ ಅಂತ ಕಳವಳ ಆಗಿತ್ತು (ಆ ಕಳವಳ ಮಾತ್ರ ಈ ಸರ್ಕಾರ ಸೋತರೂ ಇದೆ). ಆದರೆ ಅವುಗಳ ಬಗ್ಗೆ ಮೊದಲೇ ಜನ ಮನಸು ಮಾಡಿ ಬಿಟ್ಟಿದ್ದರ?  ಸರ್ಕಾರ ಬದಲಾಯಿಸಲಿಕ್ಕೆ ಇದು ಕಾರಣ ಆಯಿತ? ಇದು ಬರೇ ನನ್ನ ಉಟೋಪಿಯನ್ ಕನಸಿನ ಭಾಗ ಇರಬಹುದು. ಇದೆಲ್ಲಾ ಅಷ್ಟು ಸುಲಭದಲ್ಲಿ ನಮ್ಮ ಕೈಗೆ ಸಿಗೋ ಅಂಥದ್ದು ಅಲ್ಲವೇನೋ. ನಮ್ಮ ಮನಸ್ಸಿಗೆ ಸಮಾಧಾನ ಆಗೋ ಅಂತ ಉತ್ತರ ಕಲ್ಪಿಸಿಕೊಂಡು ಖುಷಿ ಪಡಬಹುದಷ್ಟೆ.

ಆದರೆ, ಈ ಹವರ್ಡ್ ಎಂಬ ಅನಿಷ್ಟ ತೊಲಗಿದ ರೀತಿ ಮಾತ್ರ ತುಂಬಾ ಮುದಕೊಡುವ ಸಂಗತಿ. ಈ ದೇಶದ ಪ್ರಧಾನಿಯಾಗಿದ್ದವನೊಬ್ಬ ಚುನಾವಣೆಯಲ್ಲಿ ಸೋತಿರುವುದು 79 ವರ್ಷದಲ್ಲಿ ಇದೇ ಮೊದಲು. ಸೋತಿದ್ದು ಕೂಡ, ಜರ್ನಲಿಸ್ಟ್ ಆಗಿದ್ದು ಅವನನ್ನು ಸೋಲಿಸಲೆಂದೇ ಚುನಾವಣೆಗೆ ನಿಂತ ಮ್ಯಾಕ್ಸೀನ್ ಮೆಕ್ಯೂ ಎಂಬ ದಿಟ್ಟ ಹೆಂಗಸಿನ ಎದುರು. ಹವರ್ಡ್ ಆ ಸೀಟಿನಲ್ಲಿ 33 ವರ್ಷದಿಂದ ಕೂತಿದ್ದ!

ಆಯ್ತು. ಇನ್ನೇನು ಬದಲಾವಣೆ ಆಗತ್ತೆ ಅಂತ ಕಾದಿದ್ದೇನೆ. ಈ ಹನ್ನೊಂದುವರೆ ವರ್ಷದಿಂದ ಅಧೋಗತಿಗೆ ಇಳಿದಿದ್ದ ನಾಡಿನ ಅಂತರಂಗವಾದರೂ ಉಳಿಯುತ್ತದೋ ನೋಡಬೇಕು. ಅಥವಾ ಕೆವಿನ್ ರಡ್, ಮತ್ತೊಬ್ಬ ಹವರ್ಡ್ ಆಗ್ತಾನೋ!?

ಎಚ್ಚರವಾಗಿರದೇ ಬೇರೆ ದಾರಿ ಇಲ್ಲ.

~.~
  • anivaasi ರವರ ಬ್ಲಾಗ್
  • Login or register to post comments
  • 341 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕ ಸರ್ಕಾರದ ನೂರು ದಿನದ ಸಾಧನೆ
  • B-A-D ಹಾಗೂ ರಾಜಕಾರಣ
  • 'ಟಾಟಾ' ಹೋದ 'ಟಾಟಾ'!
  • ಅನುವಾದ ಅಕಾಡೆಮಿ ಏನು ಮಾಡಬಹುದು?
  • ೭೫ ವರ್ಷ ತುಂಬಿದ ಸೇತುವೆ
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 5:31am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 13, 2008 - 5:28am
  • venkatesh
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 13, 2008 - 4:54am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 1:37am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 69 ಅತಿಥಿಗಳು ಆನ್ಲೈನ್ ಇರುವರು.


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator