January 6, 2010 - 1:56pm
ಈ ಮಹಾನ್ ದಶಕದ ಫಸ್ಟ್ ಕಂತಲ್ಲಿ :
~ ವಿಷ್ಣು ಪುರಾಣ
~ ಅಶ್ವತ್ಥ ಮರದ ನೆರಳು
~ ಗಾಂಧಿ – ನೆಹರೂ – ಗಾಂಧಿ
~ 'ಇಸ್ಪೀಟ್ ರಾಜ್ಯ' ನಾಟಕದ ಹಾಡಿನ ಹಾಡುಗಾರರನ್ನು ಗುರುತಿಸಿ!
~ ಉಳಿದಂತೆ ನಿಮಗೆ ಗೊತ್ತೇ ಇದೆ
ಮಾತು-ಮಾತು: ಪರಮೇಶ್/paramesh ಸುದರ್ಶನ್/sudarshan
ರೆಕಾರ್ಡಿಂಗ್, ನಿರ್ವಹಣೆ/recording, producer : ಸಾರಂಗ/saranga
~~~~~~~~~~~~~~~~~~~~~~~~~~~~~~~~~~~~~~~~~
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:






ಪ್ರತಿಕ್ರಿಯೆಗಳು
ಉ: ಮಹಾನ್ ದಶಕದ ಫಸ್ಟ್ ಕಂತು! :)
ಸುದರ್ಶನ್ ನೀವು ನಾಗರಹಾವು ನೋಡಿಲ್ಲ, ಪರಮೇಶ್ ನಾಗರಹಾವು ಬಿಟ್ಟರೆ ವಿಷ್ಣುವರ್ಧನ್ ಅಭಿನಯಿಸಿದ ಬೇರಾವ ಚಿತ್ರವೂ ನೋಡಿಲ್ಲವಂತೆ!! ನೀವಿಬ್ಬರೂ ಕುಳಿತು ವಿಷ್ಣು ಬಗ್ಗೆ ಮಾತಾಡುವುದನ್ನು ಕೇಳಿ ನಾನು ಕಕ್ಕಾಬಿಕ್ಕಿಯಾದೆ!!! ಇನ್ನು ಗಾನ ಗಾರುಡಿಗ ಅಶ್ವಥ್ ವಿಚಾರಕ್ಕೆ ಬಂದರೆ ಕಾಳಿಂಗರಾವ್ ಮತ್ತು ಮೈಸೂರು ಅನ೦ತಸ್ವಾಮಿಯವರ ಜೊತೆ ಅಶ್ವಥ್ ಅವರನ್ನು ಹೋಲಿಸಿಕೊಂಡು ಅವರು ಸಾಧಿಸಿದಂಥಾದ್ದೇನನ್ನೂ ಇವರು ಸಾಧಿಸಲಿಲ್ಲ, ಅದ್ಯಾಕೆ ಜನ ಹಿಂಗಾಡ್ತಾರೋ ಗೊತ್ತಿಲ್ಲ ಅನ್ನುವ ಶೈಲಿಯಲ್ಲಿ ಸಂಭಾಷಿಸಿದ್ದೀರಿ.. ಅದೇನು ಅಗಲಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದಿರೋ, ತೆಗಳಾಂಜಲಿ ಸಲ್ಲಿಸಿದಿರೋ ಅರ್ಥವೇ ಆಗಲಿಲ್ಲ!!!! ಒಟ್ಟಾರೆ ವರ್ಷದ ಮೊದಲ ಪಾಡುಕಾಸ್ಟು ಅರ್ಥ ಕಳೆದುಕೊಂಡಿದೆ ಅನ್ನಿಸಿತು.
ಉ: ಮಹಾನ್ ದಶಕದ ಫಸ್ಟ್ ಕಂತು! :)
ಓ ಇದು ನೋಡಿರಲಿಲ್ಲ...
ಹುಂರಿ ಸುದರ್ಶನ್! ವಿಶ್ಣು ಬಗ್ಗೆ ನೀವು ಮಾತಾಡಿಕೊಂಡಿದ್ದು... ನಂಗೂ ಸರಿಗಾಣಲಿಲ್ಲ.
ಉ: ಮಹಾನ್ ದಶಕದ ಫಸ್ಟ್ ಕಂತು! :)
ಅನಿವಾಸಿಯವರೇ 'ಮಹಾನ್ ದಶಕದ ಫಸ್ಟ್ ಕಂತು' ಅಷ್ಟು ಹಿಡಿಸಲಿಲ್ಲ. bright ಆದ ವಿಷಯಗಳನ್ನ ಬಹಳ light ಆಗಿ ಮಾತಡಿದ್ದಿರ. ಒಬ್ಬರು ಕೇವಲ 'ನಾಗರ ಹಾವು'ನೋಡಿದವರು ಮತ್ತಿನ್ನೊಬ್ಬರು 'ಅದನ್ನು' ನೋಡಿಲ್ಲ, ಹೀಗಿದ್ದಮೇಲೆ ಅವರ ಬಗ್ಗೆ ಮಾತಾಡಿದ್ದು ಸರಿ ಅನ್ನಿಸಲಿಲ್ಲ,ಅಶ್ವತ್ ವಿಷಯಕ್ಕೆ ಬಂದರೆ ಕಲಾವಿದರನ್ನು ಇನ್ನೊಬ್ಬರ ಜೊತೆ ಹೋಲಿಸುವುದೇ ಅವರಿಗೆ ನಾವು ಮಾಡುವ ಅವಮಾನ ಅಂತ ನನ್ನ ಅನಿಸಿಕೆ. ಇವೆರಡು ಬಹುಷಃ ಪ್ರಕಟ ಯೋಗ್ಯವಾದ ಪಾಡುಕಾಸ್ಟು ಕೂಡ ಅನ್ನಿಸಲಿಲ್ಲ.