ಅನಿವಾಸಿ
*~*~*~*
ಜಿಂಬಾಬ್ವೆ ಯುಗಾದಿ
ಈ ಯುಗಾದಿಯ ಹೋಳಿಗೆ ಎಣ್ಣೆ ನೀರು ಸಂಭ್ರಮದಲ್ಲಿ ಜಿಂಬಾಬ್ವೆ ಜನರ ದನಿಗೆ ಬೆಲೆ ಸಿಗಬಹುದು, ಅವರಿಗೊಂದು ಹೊಸ ಯುಗ ಶುರುವಾಗಬಹುದು ಎಂದು ಆಶಿಸುತ್ತೇನೆ.
ಆದರೂ ನೋಡಿ - ತನ್ನ ಜನರಿಗಾಗಿ ದುಡಿಯುತ್ತಲೇ ಧೂರ್ತನಾದ, ತನ್ನವರನ್ನೇ ಬಡಿದು ಕೊಲ್ಲತೊಡಗಿದ ಮುಗಾಬೇ ಒಂದು ಕಡೆ. ತನ್ನ ಜನರಿಗಾಗಿ ಪಶ್ಚಿಮದ ಸರ್ಕಾರಗಳ ಜತೆ ಒಳಗೊಳಗೇ ಪಿತೂರಿ ನಡೆಸಲೂ ಹಿಂದೊಮ್ಮೆ ಸೈಯೆಂದಿದ್ದ ತ್ಸ್ವೆಂಗಿರಾಯ್ ಇನ್ನೊಂದು ಕಡೆ. ಇವರಿಬ್ಬರ ನಡುವೆ ಆರಿಸಬೇಕಾದ ವ್ಯಂಗ್ಯ ಜಿಂಬಾಬ್ವೆಯ ತಪ್ತ ಜನರದ್ದು. ಯಾರು ಬೇವು? ಯಾರು ಬೆಲ್ಲ? ಯಾವುದಕ್ಕೆ ಏನು ಅರ್ಥ?
ಅತಿ ನಿಧಾನವಾಗದೆ ಚುನಾವಣೆಯ ಫಲ ಜನರಿಗೆ ಬೇಕಾದಂತೆ ಒದಗಲಿ. ಹಸಿವು, ಬಡತನ ಮತ್ತು ಹತ್ತಾರು ಸಾವಿರ ಪರ್ಸೆಂಟ್ ಇನ್ಫ್ಲೇಶನ್ನಿಂದ ತನ್ನ ಜನರು ನರಳುವಂತೆ ಮಾಡಿರುವ ಜಿಂಬಾಬ್ವೆ ನಾಯಕರು ಇನ್ನಾದರೂ ಒಳ್ಳೇ ಬುದ್ಧಿಯಿಂದ ನಡೆದುಕೊಳ್ಳುವಂತಾಗಲಿ ಅನ್ನುವ ಆಶಯ ಒಳಗೊಳಗೇ ಈ ಯುಗಾದಿಯಂದು ನನಗೆ.

- anivaasi ರವರ ಬ್ಲಾಗ್
- Login or register to post comments
- 390 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಜಿಂಬಾಬ್ವೆ ಯುಗಾದಿ
ಮೊನ್ನೆ ತಾನೆ ಎಕಾನಾಮಿಕ್ ಟೈಮ್ಸ್ ನಲ್ಲಿ ಓದುತ್ತಿದ್ದೆ ವಿಶ್ವ ಕಪ್ ಕ್ರಿಕೆಟ್ ಆಡಲು ಹೋದ ಭಾರತ ತಂಡ ಝಿಂಬಾಬ್ವೆಯಲ್ಲಿ ತಂಗಿದ್ದಾಗ ಸೆಹ್ವಾಗ್ ಊಟ ಮಾಡಿ ಹೊರಗೆ ಬಂದು
"ಹಮ್ ಚೈನೀಸ್ ಖಾಯೇತೆ ಕಲ್. ಮಾಲೂಮ್ ಹೇ ಬಿಲ್ ಕಿತ್ನಾ ಥಾ? ಡೇಡ್ ಲಾಖ್ ಡಾಲರ್"
ಎಂದನಂತೆ.
("ನಿನ್ನೆ ಚೈನೀಸ್ ತಿಂದ್ವು. ಎಷ್ಟಾಯ್ತು ಗೊತ್ತ ಬಿಲ್ಲು? ಒಂದೂವರೆ ಲಕ್ಷ!")
ಈಗ ಅದೇ ಊಟದ ಬಿಲ್ಲು ೨.೫ ಬಿಲಿಯನ್ ಝಿಂಬಾಬ್ವೆ ಡಾಲರ್ ಆಗುತ್ತದೆ ಎಂದು ಆ ಲೇಖಕರು ಬರೆದಿದ್ದಾರೆ.
ಲೇಖನದಲ್ಲಿರುವ ಇನ್ನೊಂದು ಪಾಯಿಂಟ್ ನೋಡಿ (ಇದು ಬಹುಮುಖ್ಯವಾದದ್ದು ಅನ್ನಿಸಿತು):
ಇಷ್ಟು ಝಿಂಬಾಬ್ವೆಯ ಬಗ್ಗೆ ಮಾತನಾಡಿ, ನಮ್ಮ ದೇಶ, ನಮ್ಮ ರಾಜ್ಯಕ್ಕೇ ಬರೋಣ. ನಾಯಕತ್ವ ಹದಗೆಟ್ಟಿಲ್ಲವೆ? ತಮಿಳು ನಾಡಿನಿಂದ ಕನ್ನಡದವರನ್ನು ಓಡಿಸೋಣ, ಕರ್ನಾಟಕದಿಂದ ತಮಿಳರನ್ನು. ಮುಗಾಬೆಯ ಪ್ರತಿಮೆ ಎಂ ಜಿ ರೋಡಿನಲ್ಲಿ ಹಾಕಿ ಗಹಗಹಿಸಿ ನಗೋಣ. ಏನಂತೀರಿ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಜಿಂಬಾಬ್ವೆ ಯುಗಾದಿ
ನಗಪ್ಪ.. ಯಾರ್ ಬೇಡ ಅಂದ್ರೂ....!