ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಬಾಣಲೆ ಬೆಂಕಿ

November 17, 2007 - 5:57am — anivaasi

ಕರ್ನಾಟಕದ "ವಚನಭ್ರಷ್ಟತೆ", "ಮಾನ-ಅವಮಾನ", "ಗೌರವ-ಅಗೌರವ" ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ.

ಒಣ ತಾತ್ವಿಕತೆ, ಹಸಿ ಸುಳ್ಳುಗಳ್ಳಿಂದ ತುಂಬಿ ಹೋಗಿರುವ ಕರ್ನಾಟಕದ ರಾಜಕೀಯ ಭಾಷೆಯನ್ನು ಕೇಳಿ ಏನೋ-ಎಲ್ಲೋ-ಯಾರೋ-ಯಾರಿಗೋ ಮಾತಾಡುತ್ತಿದ್ದಾರೆ ಅನಿಸಿತ್ತು. ಇದು ಮಾಧ್ಯಮಗಳ ತುಂಡಾಟ ಇರಬಹುದೆನ್ನುವ ಗುಮಾನಿಯೂ ಇಲ್ಲದಿಲ್ಲ. ಇದೆಲ್ಲವನ್ನು ರಾಜಕೀಯ ಎಂದು ಕರೆಯುವುದು ಕೂಡ ಸರಿಯಲ್ಲ. ರಾಜಕೀಯದ ಘನತೆಯನ್ನು ರಾಜಕಾರಣಿಗಳಿಗೆ ತಿಳಿಸಿಕೊಡುವ ಮಾರ್ಗ ಜನಕ್ಕಿದೆಯೆ ಎಂದು ಯೋಚಿಸುವಂತಾಯಿತು. ಕರ್ನಾಟಕದ ಪ್ರಜಾತಂತ್ರದಲ್ಲಿ ಇನ್ನೂ ಪ್ರಬಲವಾಗಿರುವ ಫ್ಯೂಡಲ್ ವ್ಯವಸ್ಥೆ ಬೇಡವೆಂದರೂ ಕಣ್ಣಿಗೆ ರಾಚುತ್ತದೆ. ದೊಡ್ಡ-ದೊಡ್ಡ ಹಾರಗಳು, ದೊಡ್ಡ-ದೊಡ್ಡ ಸಿಂಹಾಸನದಂಥ ಕುರ್ಚಿಗಳು, ದೊಡ್ಡ-ದೊಡ್ಡ ಚೇಲಾಗಳ ಗುಂಪು, ದೊಡ್ಡ-ದೊಡ್ಡ ಮಾನ-ಅವಮಾನದ ಮಾತುಗಳು. ಇವೆಲ್ಲವನ್ನು ಹೇಸಿಗೆಯಿಂದ ನೋಡಿ ಪ್ರಯೋಜನವಿಲ್ಲ. ಇವೆಲ್ಲಾ ಜನತೆಯ ಮನಸ್ಸಿನ ಮೇಲೆ ಪ್ರಭಾವ ಬೀರುವ ಕ್ರಿಯಾಶೀಲ ಕುರುಹುಗಳು. "ಪ್ರಜಾತಂತ್ರ" ಎಂದುಕೊಳ್ಳುವ ನಮ್ಮ ವ್ಯವಸ್ಥೆಯಲ್ಲಿ, ನಮ್ಮ ಜನರ ಸುಪ್ತಪ್ರಜ್ಞೆಗೆ ಸಲ್ಲುವಂಥ ಆಟಗಳು. ಹೊರ ಜಗತ್ತಿನ ತವಕ-ತಲ್ಲಣಗಳನ್ನು, ಆಸೆ-ಭದ್ರತೆಗಳ ಹಾತೊರೆಯುವಿಕೆಯನ್ನು ಒಳಮನಸ್ಸಲ್ಲಿ ಸೂಕ್ಷ್ಮವಾಗಿ ತಣಿಸಲು ಹವಣಿಸುವ ಪ್ರಯತ್ನಗಳು. ಎಷ್ಟೇ ಕುಟಿಲವಾಗಿದ್ದರೂ ಕೂಡ ಅವು ನಿಜ, ವಾಸ್ತವ ಎಂದು ಗೊತ್ತಾಗಲು ಹೆಚ್ಚು ಶ್ರಮಬೇಕಾಗುವುದಿಲ್ಲ.

ಇನ್ನು ಆಸ್ಟ್ರೇಲಿಯಾದ ರಾಜಕೀಯದಲ್ಲಿ ಎಲ್ಲ ತಾತ್ವಿಕತೆಗಳನ್ನು ಮೂಲೆಗೆ ತಳ್ಳಿರುವುದು ಬೇಡವೆಂದರೂ ಕಣ್ಣಿಗೆ ರಾಚುತ್ತದೆ. ರಾಶಿ ರಾಶಿ ಸುಳ್ಳು ಹೇಳಿ ಸಿಕ್ಕಿಬಿದ್ದಿರುವ ಈ ಸರ್ಕಾರ ಯಾವ ಮುಖದಿಂದ ಜನರನ್ನು ವೋಟು ಕೇಳೀತು ಎಂದು ಅಚ್ಚರಿಪಡುವುದು ಮುಗ್ಧತೆ ಅನಿಸುತ್ತದೆ. ಈ ಸರ್ಕಾರ ಆಸ್ಟ್ರೇಲಿಯಾದ ಆದಿವಾಸಿಗಳನ್ನು, ಅಂಗವಿಕಲರನ್ನು, ವಯೋವೃದ್ಧರನ್ನು, ಮಕ್ಕಳನ್ನು, ಬಡವರನ್ನು, ನಿರಾಶ್ರಿತರನ್ನು ನಡೆಸಿಕೊಂಡ ರೀತಿ ಎಂಥ ಕಲ್ಲೆದೆಯವರನ್ನೂ ನಾಚಿಸುವಂಥದು. ಅದಾವುದೂ ಈ ಚುನಾವಣಾ ಮಾತುಕತೆಗಳಲ್ಲಿ ಸುಳಿಯುತ್ತಿಲ್ಲ. ಮನೆ ಕೊಳ್ಳಲು ಸಹಾಯವಾಗುವಂಥ ಪಾಲಿಸಿ ಯಾರು ಮುಂದೊಡ್ಡುತ್ತಾರೆ, ವೇತನ ಹೆಚ್ಚುವಂಥ ಪಾಲಿಸಿ ಯಾರು ಮುಂದೊಡ್ಡುತ್ತಾರೆ ಎಂಬಂಥ ಒಂದೆರಡು ಕ್ಷುಲ್ಲಕ ವಿಷಯಗಳೇ ಮಹತ್ತರವಾಗಿಬಿಟ್ಟಿದೆ. ನಾಡಿನ ಒಳಗಿಗೆ ಹಿಡಿದಿರುವ ಅನೈತಿಕ ಒರಲೆಯ ಬಗ್ಗೆ ಅನುಕೂಲಕರ ನಿರ್ಲಕ್ಷ್ಯವನ್ನು ಗಮನಿಸಿದರೆ ವಾಕರಿಕೆಯಾಗುತ್ತದೆ. ಇರುವ ಎರಡು ಮುಖ್ಯ ಪಾರ್ಟಿಗಳು ಒಂದೇ ಬಗೆಯ ಮಾತಾಡುತ್ತಿರುವುದು ವಿರೋಧ ಪಕ್ಷದ ನರಹೀನತೆಯನ್ನು ಜಗಜ್ಜಾಹೀರು ಮಾಡಿದೆ.

ರಾಜಕೀಯ ಯಾವಾಗಲೂ ಎಲ್ಲ ಕಡೆಯೂ ಹೀಗೆಯೆ ಎಂಬ ಒಣನಿಲುವು ತಳೆಯಲಾದೀತೆ? ನಾವು ಯಾವಾಗಲೂ ಹೀಗೇ ಎಂಬುದನ್ನು ಹತಾಶರು ಇನ್ನೊಂದು ರೀತಿಯಲ್ಲಿ ಹೇಳಿದಂತಲ್ಲವೆ ಅದು?

ಇರಲಿ, ಎಲ್ಲ ಬಿಟ್ಟು ನನ್ನೆದುರಿಗಿರುವ ಬೇಸಿಗೆಯಲ್ಲಿ ಒಂದಷ್ಟು ಅಲೆದಾಡಬೇಕು. ಈ ಹಿಂದೆ ಹೋಗಿರದ, "ಅಲ್ಲೇನಿದೆ" ಎಂದು ಯಾರೂ ಹೋಗದ ಕಡೆಯೆಲ್ಲಾ ಅಲೆಯಬೇಕು. ಅಲೆದಾಡಿ ಹೊಸ ಜನರನ್ನು ಮಾತಾಡಿಸಬೇಕು ಎಂದು ಹುರಿದುಂಬಿಸಿಕೊಳ್ಳುತ್ತೇನೆ.

~.~
  • anivaasi ರವರ ಬ್ಲಾಗ್
  • Login or register to post comments
  • 336 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೈಟೊ ಕಾಫಿ !!! - ೧
  • ಇಂದಿನ ಸುದ್ದಿ...!
  • ಮುಕ್ತಾಯ
  • ನಾಳೆ ನೀವೂ ಮಾಯ.............
  • ನೀಳ್ಗತೆ
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shylaswamy
    ಉ: ಹಂಸನಾದ
    January 10, 2009 - 8:43am
  • manjunath s reddy
    ಉ: ಹೀಗೊಂದು ಘಟನೆ
    January 10, 2009 - 8:32am
  • manjunath s reddy
    ಉ: ನಾವು ಅದೆಷ್ಟು ಬಡವರು!
    January 10, 2009 - 8:25am
  • manjunath s reddy
    ಉ: ಯಾವುದು ಬೇಕು?
    January 10, 2009 - 8:20am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:11am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:07am
  • JAYADEV
    ಉ: ಯಾವುದು ಬೇಕು?
    January 10, 2009 - 8:05am
  • JAYADEV
    ಉ: ಮನೆಗೆ ಬಂದದ್ದು: ಕಾಫ್ಕಾ ಕಥೆ
    January 10, 2009 - 8:03am
  • anivaasi
    ಉ: ನಾವು ಅದೆಷ್ಟು ಬಡವರು!
    January 10, 2009 - 8:01am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:54am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 204 ಅತಿಥಿಗಳು ಆನ್ಲೈನ್ ಇರುವರು.


ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator