ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಅನಿವಾಸಿ
ಪರಿಚಯ
ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ
ಅಲ್ಲದೆ ಇವುಗಳಿದೆ :
http://anivaasi.word...
http://paaducastu.wo...
ನೀಳ್ಗತೆ
ಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಮುದುಕ ಮುದುಕಿ;
ಆಕೆಯ ಸುಕ್ಕುಗಟ್ಟಿದ ಅಂಗೈಯೊಳಗೆ
ಆತನ ಸುಕ್ಕುಗಟ್ಟಿದ ಅಂಗೈ
ದಾರಿಯುದ್ದಕ್ಕೂ ಮಾತುಕತೆ-
ಮುದುಕಿ : "ಕೇಳಿಸ್ತ?"; ಮುದುಕ : "ಅಂ?"
ಮುದುಕಿ : "ಕೇಳಿಸ್ತ?"; ಮುದುಕ : "ಅಂ?"
ಮುದುಕಿ : "ಕೇಳಿಸ್ತ?"; ಮುದುಕ : "ಅಂ?"
ಅಂಗೈಗಳು
ಒಂದನ್ನೊಂದು ಸವರುತ್ತಲೇ ಇದ್ದವು.
- anivaasi's blog
- Login or register to post comments
- 1172 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ನೀಳ್ಗತೆ
ಮುದುಕ ಮುದುಕಿಗೆ ಕಣ್ಣೂ ಕಾಣಲ್ಲ.. ಪಾಪ..
ಇದೇ ಕತೆ ಹೀಗೆ ಬರೆದರೆ.. ಹೇಗೆ?
ಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಹುಡುಗ ಹುಡುಗಿ;
ಆಕೆಯ ನಣುಪು ಅಂಗೈಯೊಳಗೆ
ಆತನ ಬಿರುಸು ಅಂಗೈ
ದಾರಿಯುದ್ದಕ್ಕೂ ಸದ್ದಿಲ್ಲದ ಮಾತುಕತೆ-
ಅವನ ಕಣ್ಣುಮನ ಇವಳ ಮೇಲೆ... ಇವಳ ಮನಗಣ್ಣು ಅವನ ಅವನ ಮೇಲೆ.
ಅಂಗೈಗಳು ಕಣ್ಣುನೋಟಗಳು
ಒಂದನ್ನೊಂದು ಸವರುತ್ತಲೇ ಇದ್ದವು....
:) ಚನ್ನಾಗಿಲ್ವ? ತಲೆಹರಟೇನಾ? :)
ಉ: ನೀಳ್ಗತೆ
ಮಹೇಶರೆ,
ಚೆನ್ನಾಗಿದೆ! "ಇದೇ" ಹಂದರದಲ್ಲಿ "ಬೇರೆ" ಕತೆ ಹೇಳಿದ್ದೀರ ಅನಿಸಿತು.
ನಿಮ್ಮ ಬರಹದ ಒಳಗನ್ನು ಅನುಭವಿಸುತ್ತಿರುವವರಿಗೆ ಅದು ಕ್ಲೀಷೆ ಅನಿಸುವುದಿಲ್ಲ ಅಲ್ಲವೆ? :)
ನನ್ನ ಮೂಲ ಬರಹದಲ್ಲಿ ಬೇಕಂತಲೇ ಕಣ್ಣಿನ ಸಂಗತಿಯಿಲ್ಲ. ಅದಕ್ಕಿಂತ ಮಿಗಿಲಾದ ಕಿವಿಯ ಮತ್ತು ಸೋಂಕಿನ ಸಂಗತಿಯಿದೆ! ಯೋಚಿಸಿ ನೋಡಿ.