ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನೀಳ್ಗತೆ

ಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಮುದುಕ ಮುದುಕಿ;
ಆಕೆಯ ಸುಕ್ಕುಗಟ್ಟಿದ ಅಂಗೈಯೊಳಗೆ
ಆತನ ಸುಕ್ಕುಗಟ್ಟಿದ ಅಂಗೈ
ದಾರಿಯುದ್ದಕ್ಕೂ ಮಾತುಕತೆ-
ಮುದುಕಿ : "ಕೇಳಿಸ್ತ?"; ಮುದುಕ : "ಅಂ?"
ಮುದುಕಿ : "ಕೇಳಿಸ್ತ?"; ಮುದುಕ : "ಅಂ?"
ಮುದುಕಿ : "ಕೇಳಿಸ್ತ?"; ಮುದುಕ : "ಅಂ?"

ಅಂಗೈಗಳು
ಒಂದನ್ನೊಂದು ಸವರುತ್ತಲೇ ಇದ್ದವು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನೀಳ್ಗತೆ

mahesha's picture

ಮುದುಕ ಮುದುಕಿಗೆ ಕಣ್ಣೂ ಕಾಣಲ್ಲ.. ಪಾಪ..

ಇದೇ ಕತೆ ಹೀಗೆ ಬರೆದರೆ.. ಹೇಗೆ?

ಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಹುಡುಗ ಹುಡುಗಿ;
ಆಕೆಯ ನಣುಪು ಅಂಗೈಯೊಳಗೆ
ಆತನ ಬಿರುಸು ಅಂಗೈ
ದಾರಿಯುದ್ದಕ್ಕೂ ಸದ್ದಿಲ್ಲದ ಮಾತುಕತೆ-

ಅವನ ಕಣ್ಣುಮನ ಇವಳ ಮೇಲೆ... ಇವಳ ಮನಗಣ್ಣು ಅವನ ಅವನ ಮೇಲೆ.

ಅಂಗೈಗಳು ಕಣ್ಣುನೋಟಗಳು
ಒಂದನ್ನೊಂದು ಸವರುತ್ತಲೇ ಇದ್ದವು....

:) ಚನ್ನಾಗಿಲ್ವ? ತಲೆಹರಟೇನಾ? :)

ಉ: ನೀಳ್ಗತೆ

anivaasi's picture

ಮಹೇಶರೆ,
ಚೆನ್ನಾಗಿದೆ! "ಇದೇ" ಹಂದರದಲ್ಲಿ "ಬೇರೆ" ಕತೆ ಹೇಳಿದ್ದೀರ ಅನಿಸಿತು.
ನಿಮ್ಮ ಬರಹದ ಒಳಗನ್ನು ಅನುಭವಿಸುತ್ತಿರುವವರಿಗೆ ಅದು ಕ್ಲೀಷೆ ಅನಿಸುವುದಿಲ್ಲ ಅಲ್ಲವೆ? :)

ನನ್ನ ಮೂಲ ಬರಹದಲ್ಲಿ ಬೇಕಂತಲೇ ಕಣ್ಣಿನ ಸಂಗತಿಯಿಲ್ಲ. ಅದಕ್ಕಿಂತ ಮಿಗಿಲಾದ ಕಿವಿಯ ಮತ್ತು ಸೋಂಕಿನ ಸಂಗತಿಯಿದೆ! ಯೋಚಿಸಿ ನೋಡಿ.