Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › Sampada Blogs › anmanjunath ರವರ ಬ್ಲಾಗ್

ನಮಸ್ಕಾರ ಸ್ವಾಮಿ

ಕೆಲವು ಅನಿಸಿಕೆಗಳು, ಬರಹಗಳು, ವಿಚಾರಗಳು.

ಚರಿತ್ರೆಯ ಕಾರ್ಮೋಡಗಳಲ್ಲಿ ಮರೆಯಾದ "ಚಂದ್ರ" - ಚಂದ್ರಶೇಖರ್

July 9, 2007 - 11:31am — anmanjunath

ಭಾನುವಾರ ನಿಧನರಾದ ಮಾಜಿ ಪ್ರಧಾನಿ ಚಂದ್ರಶೇಖರ್ ಸಂಕೀರ್ಣವಾದ
ನೆನಪುಗಳನ್ನು ಬಿಟ್ಟುಹೋಗಿದ್ದಾರೆ. ಅರವತ್ತರ ದಶಕದಲ್ಲಿ ಮತ್ತು ಎಪ್ಪತ್ತರ
ದಶಕದಲ್ಲಿ, ಚಂದ್ರಶೇಖರ್ ನಮ್ಮಂಥ ಯುವಜನರ ಹಾಟ್ ಫೇವರಿಟ್ ಆಗಿದ್ದರು. ರಾಮಮನೋಹರ
ಲೋಹಿಯಾ ಅವರ ನಂತರದ ಭಾರತೀಯ ಸಮಾಜವಾದಿ ರಾಜಕಾರಣದ ಪರ್ವದಲ್ಲಿ ತುಂಬ ಭರವಸೆಯ
ನಾಯಕರೆನಿಸಿದ್ದವರು ಅವರೇ. ಉತ್ತರಪ್ರದೇಶದಂತಹ ನಿರ್ಣಾಯಕ ಜನಬಲದ ರಾಜ್ಯದಿಂದ ಬಂದ,
ಬಲಿಯಾ ಕ್ಷೇತ್ರದಿಂದ ನಿರಂತರ ಚುನಾವಣಾ ಗೆಲುವು ಸಾಧಿಸಿದ ರಾಜಕಾರಣಿ ಎಂಬುದಕ್ಕಿಂತ
ಅಪ್ಪಟ ಸಮಾಜವಾದಿ ಎಂಬುದು ನಮಗೆ ಸಂಭ್ರಮದ ಸಂಗತಿಯಾಗಿತ್ತು. ಕಾಂಗ್ರೆಸ್ ನಲ್ಲಿದ್ದೇ
ಅವರು ನೆಹರೂ-ಇಂದಿರಾ ಶೈಲಿಯ ವಂಶಪಾರಂಪರ್ಯದ ರಾಜಕೀಯವನ್ನು ವಿರೋಧಿಸಿದವರು.
ಕಾಂಗ್ರೆಸ್ ನ ದೈತ್ಯ ರಾಜಕೀಯ ಶಕ್ತಿಯೆದುರು ವಿರೋಧಪಕ್ಷಗಳು ದುರ್ಬಲವಾಗಿದ್ದಂತಹ ಆ
ಕಾಲದಲ್ಲಿ, ಕಾಂಗ್ರೆಸ್ ನಲ್ಲೇ "ಯಂಗ್ ಟರ್ಕ್ಸ್" ಗುಂಪನ್ನು ಹುಟ್ಟು ಹಾಕಿದವರಲ್ಲಿ
ಒಬ್ಬರು. ಲೋಕನಾಯಕ ಜಯಪ್ರಕಾಶ ನಾರಾಯಣರ ೧೯೭೪ ರ ಇತಿಹಾಸ ಪ್ರಸಿದ್ಧ "ಸಂಪೂರ್ಣ
ಕ್ರಾಂತಿ" ಆಂದೋಲನದಲ್ಲಿ ತೊಡಗಿಸಿಕೊಂಡಿದ್ದ ಅವರು ಎಲ್ಲರ ಕಣ್ಮಣಿ ಆಗಿದ್ದರು. ಬರೀ
ನೆಹರು - ಇಂದಿರಾ - ಸಂಜಯ್ - ರಾಜೀವ್ ಗಾಂಧಿಯವರ ಕುಟುಂಬ ರಾಜಕೀಯದಿಂದ ಬೇಸತ್ತಿದ್ದ
ನಮಗೆ, "ಆದರೆ ಚಂದ್ರಶೇಖರ್ ಅಂತಹವರು ಈ ದೇಶದ ಪ್ರಧಾನಿ ಆಗಬೇಕು" ಎಂದು
ಅನ್ನಿಸುತ್ತಿದ್ದುದು ಸಹಜವೇ.

ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ರಾಜಕೀಯ ಹೊಲಸೆದ್ದು ಹೋದಾಗ, ಇದೇ
ಚಂದ್ರಶೇಖರ್ ೧೯೮೩ರಲ್ಲಿ ಕನ್ಯಾಕುಮಾರಿಯಿಂದ ದೆಹಲಿಯ ರಾಜಘಾಟ್ (ಮಹಾತ್ಮಾ ಗಾಂಧೀ
ಸಮಾಧಿ)ವರೆಗೆ ಪಾದಯಾತ್ರೆ ಕೈಗೊಂಡಾಗ, ದೇಶದ ರಾಜಕೀಯದಲ್ಲಿ ಆಶಾಪೂರ್ಣ ಸಂಚಲನ
ಉಂಟಾಯಿತು. ರಾಜಕೀಯದಲ್ಲೂ ವಿಶ್ವಾಸವಿಡಬಹುದಾದ ಜನ ಇರುತ್ತಾರೆ
ಎಂದುಕೊಳ್ಳುವಂತಾಯಿತು.

ಇಲ್ಲಿ ನಮ್ಮ ಬೀಚಿಯವರು ಹೇಳುತ್ತಿದ್ದುದು ನೆನಪಾಗುತ್ತದೆ. ಕತ್ತೆಮರಿ
ಚಿಕ್ಕದಿದ್ದಾಗ ಎಷ್ಟು ಚೆನ್ನಾಗಿತ್ತು, ಬೆಳೆದಂತೆ ಬೆಳೆದಂತೆ ಯಾಕೆ ಹೀಗಾಯಿತು, ಎಂದು
ಅವರು ಲೇವಡಿ ಮಾಡುತ್ತಿದ್ದರು. ನಮ್ಮ ಜನರು, ನಮ್ಮ ರಾಜಕಾರಣಿಗಳು ಬೀಚಿಯವರ ಎಲ್ಲ
ವಿಡಂಬನೆಗಳನ್ನು ಚಾಚೂತಪ್ಪದೆ ನಿಜಮಾಡುವ, ಅನುಸರಿಸುವ ಹಟದಲ್ಲಿದ್ದಾರೆ.

ಇದೇ ಚಂದ್ರಶೇಖರ್, ವಂಶವಾಹಿ ರಾಜಕೀಯದ ಕೂಸು ರಾಜೀವ್ ಗಾಂಧಿಯವರ ಮನೆಯ ಫುಟ್ ರಗ್
ಮೇಲೆ ಕಾದು ಕೂತು, ಅವರ ಕೃಪಾಶ್ರಯದಲ್ಲಿ "ಪ್ರಧಾನಮಂತ್ರಿ" ಆಗೇ ಬಿಟ್ಟರು. ಮಂತ್ರಿ,
ಮುಖ್ಯಮಂತ್ರಿ ಅಂತಹ ಯಾವ ಮೆಟ್ಟಿಲೂ ಇಲ್ಲದೆ (ರಾಜೀವ್ ಗಾಂಧಿಯವರಿಗಾದರೋ ಕುಟುಂಬ
ರಾಜಕೀಯದ, ನೆಹರೂ - ಇಂದಿರಾ ಹೆಸರಿನ ಹಿನ್ನೆಲೆಯಿತ್ತು) ನೇರವಾಗಿ ಪ್ರಧಾನಿಯಾದ
ಖ್ಯಾತಿ ಅವರದೆಂದು ಮಾಧ್ಯಮದ ಜನ ಅವರನ್ನು ಅಟ್ಟಕ್ಕೇರಿಸಿದ್ದೂ ಆಯಿತು.

ಆದರೆ ಬೀಚಿಯವರ ಕತ್ತೆಮರಿಯ ಉದಾಹರಣೆ ನಿಜವಾಗಿದ್ದು ಮಾತ್ರ ನೋವಿನ ಸಂಗತಿ.

ಭೋಂಡ್ಸಿ ಬಳಿ, ತಮ್ಮ ಭಾರತ ಯಾತ್ರಾ ಕೇಂದ್ರದ ಹೆಸರಿನಲ್ಲಿ, ಆಸ್ಪತ್ರೆಗೆಂದು
ಜನಸೇವಾ ಕಾರ್ಯಗಳಿಗೆಂದು ಭೂಮಿ ಗಿಟ್ಟಿಸಿಕೊಂಡರು. ಕಾಲಾನಂತರ ಅದು ೫೦೦ ಎಕರೆಯಷ್ಟು
ಒತ್ತುವರಿಯೂ ಆಯಿತು. ಆಸ್ಪತ್ರೆ ಮರೆತುಹೋಗಿ, ಗೆಸ್ಟ್ ಹೌಸ್ ಫಾರ್ಮ್ ಹೌಸ್ ಗಳು
ನಿರ್ಮಾಣವಾದವು. 'ಕಾಡುಪ್ರಾಣಿಗಳಿಂದ' ರಕ್ಷಿಸಲು ಆ ಭೂಮಿಗೆ ಬೇಲಿಯೂ ಬಂದಿತು.
ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಸ್ವಂತದ ಸೊತ್ತೆನಿಸಿಕೊಡಿತು. ವೈಯಕ್ತಿಕ,
ರಾಜಕೀಯದ ಉಪಯೋಗಕ್ಕೆ ಸೀಮಿತವಾಯಿತು. ಕೊನೆಗೆ ಸುಪ್ರೀಮ್ ಕೋರ್ಟು ಉಗಿಯುವವರೆಗೆ
ಭೋಂಡ್ಸಿ 'ಅಶ್ರಮ' ಮುಂದುವರಿಯಿತು.

ಚಂದ್ರಶೇಖರ್ ಅವರ ರಾಜಕೀಯದ ಉತ್ತರಾರ್ಧ, ಮುದಿಹಾವಿನ ಕಾರ್ಕೋಟಕ ವಿಷದ ಕಥೆಯನ್ನು
ನೆನಪಿಸುತ್ತದೆ. ತುಂಬ ಸೀನಿಯರ್, ತುಂಬ ಅನುಭವಿ ರಾಜಕೀಯ ಪಟು ಎನಿಸಿದ್ದ ಅವರ
ಕೃತಿ - ವರ್ತನೆ, ಬೆನ್ನಿಗೆ ಚೂರಿ ಇರಿಯುವ, ವಿಶ್ವಾಸದ್ರೋಹದ ಪುಟಗಳಿಂದ
ತುಂಬಿಹೋಯಿತು. ಕೆಲವೊಮ್ಮೆ ಅವರು ವಿಶ್ವನಾಥ ಪ್ರತಾಪ ಸಿಂಗ್ ರ "ರಾಜಕೀಯ"ವನ್ನೂ
ಮೀರಿಸುವಂತಾದುದು ನಮ್ಮ ದುರಂತ ಕೂಡ.

ಕೊನೆಗೊಂದು ಜೋಕ್ : ಭಾರತದ ರಾಜಕಾರಣದಲ್ಲಿ ಸಮಾಜವಾದಿ ಪಕ್ಷ ಅದೆಷ್ಟು ಬಾರಿ,
ಅದೆಷ್ಟು ಚೂರುಗಳಾಗಿ ಒಡೆಯಿತೆಂದರೆ, ಒಮ್ಮೆ ಚಂದ್ರಶೇಖರ್ ಅವರೇ ಸಂಸತ್ತಿನಲ್ಲಿ
"ನನ್ನ ಪಕ್ಷ ಯಾವುದು, ನಾನು ಯಾವ ರಾಜಕೀಯ ಪಕ್ಷಕ್ಕೆ ಸೇರಿದ್ದೇನೆ ಎಂಬುದು ನನಗೇ
ಗೊತ್ತಿಲ್ಲ", ಎಂದು ಹೇಳಿಕೆ ನೀಡಿದ್ದರು. ಅದು ಅವರ ವೈಯಕ್ತಿಕ ರಾಜಕೀಯದ ದುರಂತವೂ
ಹೌದು, ಭಾರತದ ಸಮಾಜವಾದಿ ರಾಜಕಾರಣದ ದುರಂತವೂ ಹೌದು.

ಇಂದು ಚಂದ್ರಶೇಖರ್ ನಿಧನದ ನಂತರ, ಯಾರಾದರೂ ದೇಶಕ್ಕೆ ಅವರ ಕೊಡುಗೆ ಏನು ? ಅವರ
ಸಾಧನೆ ಏನು ? ಎಂದು ಪ್ರಶ್ನೆ ಹಾಕಿದರೆ, ಕಳೆದ ನಲವತ್ತೈದು ವರ್ಷಗಳಿಂದ
ವೃತ್ತಪತ್ರಿಕೆ ಕೈಗೆತ್ತಿಕೊಂಡೇ ಪ್ರತಿ ಮುಂಜಾನೆ ಕಣ್ ಬಿಡುವ ನನ್ನಂತಹವರಿಗೂ, ಕಣ್
ಕಣ್ ಬಿಡುವಂತಾಗುತ್ತದೆ, ಗೊಂದಲ ಉಂಟಾಗುತ್ತದೆ, ಖಿನ್ನತೆ ಆವರಿಸುತ್ತದೆ.

ಮಂಜುನಾಥ ಅಜ್ಜಂಪುರ, ಬೆಂಗಳೂರು.

  • ಲೇಖನ
Ornamental seperator
  • anmanjunath ರವರ ಬ್ಲಾಗ್
  • Login or register to post comments
  • 364 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 10, 2007 - 7:04am — venkatesh

ಉ: ಚರಿತ್ರೆಯ ಕಾರ್ಮೋಡಗಳಲ್ಲಿ ಮರೆಯಾದ "ಚಂದ್ರ" - ಚಂದ್ರಶೇಖರ್

venkatesh's picture

ಮಂಜುನಾಥರವರೆ,

"ಇಂದು ಚಂದ್ರಶೇಖರ್ ನಿಧನದ ನಂತರ, ಯಾರಾದರೂ ದೇಶಕ್ಕೆ ಅವರ ಕೊಡುಗೆ ಏನು ? ಅವರ
ಸಾಧನೆ ಏನು ? ಎಂದು ಪ್ರಶ್ನೆ ಹಾಕಿದರೆ, ಕಳೆದ ನಲವತ್ತೈದು ವರ್ಷಗಳಿಂದ
ವೃತ್ತಪತ್ರಿಕೆ ಕೈಗೆತ್ತಿಕೊಂಡೇ ಪ್ರತಿ ಮುಂಜಾನೆ ಕಣ್ ಬಿಡುವ ನನ್ನಂತಹವರಿಗೂ, ಕಣ್
ಕಣ್ ಬಿಡುವಂತಾಗುತ್ತದೆ, ಗೊಂದಲ ಉಂಟಾಗುತ್ತದೆ, ಖಿನ್ನತೆ ಆವರಿಸುತ್ತದೆ."

ಇದು ನಮ್ಮದೇಶದ ವೈಚಾರಿಕ ಪ್ರಜ್ಞೆ ಜಾಗೃತವಾಗಿರುವ ಪ್ರತಿನಾಗರಿಕನೂ ದಿಢೀರನೆ ಕೇಳುವ ಸಹಜ ಪ್ರಶ್ನೆ !
ಅತ್ಯಂತ ಸೊಗಸಾಗಿ ಕೊಟ್ಟಿರುವ ನಿಮ್ಮ ಬರಹಕ್ಕೆ, ಧನ್ಯವಾದಗಳು.

ವೆಂ.

  • Login or register to post comments
  • link
  • Email this ಪ್ರತಿಕ್ರಿಯೆ
July 11, 2007 - 3:04am — omshivaprakash

ಉ: ಚರಿತ್ರೆಯ ಕಾರ್ಮೋಡಗಳಲ್ಲಿ ಮರೆಯಾದ "ಚಂದ್ರ" - ಚಂದ್ರಶೇಖರ್

omshivaprakash's picture

ಗೊಂದಲಗಳ ಎಳೆಗಳನ್ನ ಬಿಡಿಸಿಟ್ಟಿದ್ದಕ್ಕೆ ತುಂಬಾ ದನ್ಯವಾದಗಳು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾರತದ ಮಾಜಿಪ್ರಧಾನಿ , ಶ್ರೀ. ಚಂದ್ರಶೇಖರ್ ನಿಧನ !
  • ಅಪರೂಪದ ಪ್ರಧಾನಮಂತ್ರಿ ಮುರಾರಜೀ ದೇಸಾಯಿ
  • ಚುನಾವಣಾ ಭವಿಷ್ಯ
  • ರಾಜಕೀಯ
  • ಸಮಾಜವಾದಿಗಳ ಕಾಂಗ್ರೆಸ್ಸೀಕರಣ: ಮುಂದೇನು?
Syndicate content

ಲೇಖಕರು

anmanjunath's picture

ಪೂರ್ಣ ಹೆಸರು
Manjunatha Ajjampura

ಪರಿಚಯ

I am a Kannada writer, columnist. I am a retired Bank Manager. I am interested in music (Hindustani Classical)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯೂಹೂ ಮ್ಯಾಪ್ ಕನ್ನಡದಲ್ಲಿ
  • ’ರಾತ್ರಿಯ ಕನಸಿನಲಿ, ಸುರಿಯುವ ಸೋನೆಯಲಿ ಬರೀ ನಿನದೇ ನೆನಪು’
  • ವಿಮರ್ಶೆ
  • ಯು ಮಿ ಔರ್ ಹಮ್
  • ಸೃಷ್ಟಿ(ನಾಲ್ಕು)-ಮುಂಗಾರು ಮಳೆಗೆ ಮೈಯೊಡ್ಡಿದಾಗ..
  • ಹೆಲ್ಮೆಟ್ ಇದ್ರೆ ಸಾಕಾ.. ???
  • ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
  • ಮನಸಲ್ಲಿ ಬರುತ್ತೆ ಯೋಚನೆ
  • ಸುಮ್ನೆ ಗೀಚಿದ್ದು ...
  • ಹೂವಿನ ಹುಡುಗಿ....
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 11:40pm
  • Sunil Jayaprakash
    ಉ: ಯೂಹೂ ಮ್ಯಾಪ್ ಕನ್ನಡದಲ್ಲಿ
    May 22, 2008 - 11:10pm
  • prasannasp
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 9:32pm
  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 9:18pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 7:23pm
  • Sunil Jayaprakash
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 7:03pm
  • shylaswamy
    ಉ: ಅದೃಷ್ಟ
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:34pm
  • ಮನಹ್ಪಠಲ
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 5:21pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator