ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › anupkumart ರವರ ಬ್ಲಾಗ್

ಸಂಸ್ಕೃತಿಯೆಂದರೆ ನೃತ್ಯ, ಗಾಯನ, ಉಡುಗೆ, ಅಡುಗೆ ಮಾತ್ರವೆ ?

September 2, 2007 - 11:42pm — anupkumart

ಸಂಸ್ಕೃತಿಯೆಂದರೇನು ಎಂದು ಈಗಿನ ಪೀಳಿಗೆಯವರನ್ನು ಕೇಳಿ ನೋಡಿ; ನಿಮಗೆ ಸಿಗುವ ಉತ್ತರ ’ಭರತನಾಟ್ಯ, ಶಾಸ್ತ್ರೀಯ ಸಂಗೀತ, ಜುಬ್ಬ-ಪೈಜಾಮ, ರೇಶಿಮೆ ಸೀರೆ, ಅರಿಶಿನ-ಕುಂಕುಮ, ಸರ-ಬಳೆ-ಗೆಜ್ಜೆ, ದೇಶೀಯ ಅಡುಗೆ ...’ ಇತ್ಯಾದಿ ಬಾಹ್ಯ ಇಂದ್ರಿಯಗಳಿಗೆ ಗ್ರಹ್ಯವಾಗುವ ವಿಷಯಗಳು (ಆಚಾರಗಳು).

ವಿಚಾರಗಳೇ ಪ್ರಮುಖವಾಗಿರುವ ಸಂಸ್ಕೃತಿಗೆ ಕೇವಲ ಆಚಾರಗಳ ರೂಪ ಕೊಟ್ಟಿರುವುದು ಒಂದು ದೊಡ್ಡ ದುರಂತ. ಇದಕ್ಕೆ ಕಾರಣ ನಮ್ಮ ಪಠ್ಯಪುಸ್ತಕಗಳು, ಮಾಧ್ಯಮಗಳು ಹಾಗು ನಮ್ಮಲ್ಲಿ ಅಳಿದು ಹೋಗುತ್ತಿರುವ ಇತಿಹಾಸ ಪ್ರಜ್ಞೆ.

ಸಂಸ್ಕೃತಿಯೆಂದರೇನು?

-----------------

ಸರಳವಾಗಿ ಹೇಳುವುದಾದರೆ, ನಮ್ಮಲ್ಲಿರುವ ಉನ್ನತ ವಿಚಾರಗಳು ಹಾಗು ಅದಕ್ಕೆ ಪೂರಕವಾಗುವಂತೆ ನಮ್ಮ ವೈಯಕ್ತಿಕ /ಸಾಮಾಜಿಕ ಜೀವನಗಳಲ್ಲಿ ನಾವು ಮಾಡುವ ಆಚಾರಗಳು(ಕೃತಿಗಳು); ಇವೇ ಸಂಸ್ಕೃತಿಯ ತಿರುಳು. ವಿಚಾರವಿಲ್ಲದ ಆಚಾರ rituals ಆಗಿಬಿಡುತ್ತವೆ; ಆಚಾರವಿಲ್ಲದ ವಿಚಾರ fruitless ಆಗಿಬಿಡುತ್ತದೆ.

ಸಂಸ್ಕೃತಿಯನ್ನು ಬೆಳೆಸಿಕೊಳ್ಳುವುದು ಹೇಗೆ?

----------------------------------

ಚಿಕ್ಕವರಾಗಿರುವಾಗ ಮನೆಯಲ್ಲಿ ಹಿರಿಯರನ್ನು ಗಮನಿಸುತ್ತಾ ನಾವು ಆಚಾರಗಳನ್ನು ಮಾತ್ರ ರೂಢಿ ಮಾಡಿಕೊಳ್ಳುತ್ತೇವೆ. ಪ್ರೌಢರಾದ ಮೇಲೆ ವಿಚಾರ-ಆಚಾರಗಳನ್ನು ಒಂದಕ್ಕೊಂದು ಪೂರಕವೆಂಬಂತೆ ಬೆಳೆಸಿಕೊಳ್ಳಬೇಕಾಗುತ್ತದೆ. ಹಾಗಾದರೆ ಈ ವಿಚಾರಗಳನ್ನು ಎಲ್ಲಿಂದ ಹುದುಕಿ ತೆಗೆಯಬೇಕು? ಇದಕ್ಕೆ ಉತ್ತರ ನಮ್ಮ ಇತಿಹಾಸ. 

ಒಂದು ನಾಗರಿಕತೆಯ ವೈಯಕ್ತಿಕ ಹಾಗು ಸಾಮಾಜಿಕ ಜೀವನವು ಬೆಳೆದು ಬಂದ ದಾರಿಯನ್ನು ತಿಳಿದುಕೊಂಡರೆ ನಮಗೆ ಹಿಂದೆ ನಡೆದ ತಪ್ಪು-ಒಪ್ಪುಗಳ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. History contains in itself a lot of examples for us, both good and bad. ಹಿಂದಿನ ಪೀಳಿಗೆಯವರು ನೀಡಿದ ಸಂಸ್ಕೃತಿಯನ್ನು ಅರಿತು ಅದನ್ನು ಸರಿಯಾದ ದಾರಿಯಲ್ಲಿ ಬೆಳೆಸುವುದು ಮುಂದಿನ ಪೀಳಿಗೆಯ ನೊಗಬಾರ.

ಸ್ವಾಮಿ ವಿವೇಕಾನಂದರು ಹೇಳಿರುವಂತೆ ’ಪ್ರತಿಯೊಂದು ಸಮಾಜಕ್ಕೂ ತನ್ನದೇ ಆದ ಆತ್ಮವಿರುತ್ತದೆ. ಇಂಗ್ಲೆಂಡಿನದ್ದು ವ್ಯವಹಾರಿಕಾತ್ಮವಾದರೆ ಭಾರತದ್ದು ಆಧ್ಯಾತ್ಮಿಕಾತ್ಮ.’ ಅಂದರೆ ಉನ್ನತ ವಿಚಾರಗಳಿಗೆ ನಮ್ಮ ಸಂಸ್ಕೃತಿ ಎಷ್ಟು ಪ್ರಾಮುಖ್ಯತೆ ಕೊಡುತ್ತದೆಂಬುದನ್ನು ಇಲ್ಲಿ ತಿಳಿಯಬೇಕಾಗಿದೆ ಹಾಗು ಅವುಗಳಿಗೆ ಸದಾಚಾರದ ರೂಪು ಕೊಡಬೇಕೆಂಬುದು ಇದರ ಅರ್ಥ.

~.~
  • anupkumart ರವರ ಬ್ಲಾಗ್
  • Login or register to post comments
  • 397 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 3, 2007 - 3:43pm — ಶಿವ

ಉ: ಸಂಸ್ಕೃತಿಯೆಂದರೆ ನೃತ್ಯ, ಗಾಯನ, ಉಡುಗೆ, ಅಡುಗೆ ಮಾತ್ರವೆ ?

ಶಿವ's picture

ಹಂದಿಯಿಂದ ಸಂಗೀತದವರೆಗೆ ಎಲ್ಲವೂ ಸಂಸ್ಕೃತಿಯೇ(ಹೇಳಿದವನ ಹೆಸರು ನೆನಪಾಗುತ್ತಿಲ್ಲ).ಅಶ್ಟೇ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮನೋರಮಾದಲ್ಲಿ ಕನ್ನಡದ ಸ್ಥಾನ
  • ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ
  • ನಮ್ಮ ಬೆಂಗಳೂರು ಅಥವ ಅವರ್ ಬ್ಯಾಂಗ್ಳೂರ್
  • ಅಡುಗೆ ಮಾಡಿ ಕಲಿ... ಉಡುಗೆ ನೋಡಿ ಕಲಿ ...
  • ಇವರ ಮೌನ ಕನ್ನಡಕ್ಕೆ ಒಳಿತು ...
Syndicate content

ಲೇಖಕರು

anupkumart's picture

ಪೂರ್ಣ ಹೆಸರು
ಆನುಪ್ ಮಲೆನಾಡು

ಪರಿಚಯ

"ಸಿಸ್ಕೋ ಸಿಸ್ಟಮ್ಸ್" ಸಂಸ್ಥೆಯಲ್ಲಿ ಸಾಫ್ಟವೇರ್ ಕೆಲಸ. ಬೆಂಗಳೂರಿನ ಜೆ.ಪಿ. ನಗರ ಬಡಾವಣೆಯಲ್ಲಿ ನಿವಾಸ. ಕನ್ನಡ ಸಂಸ್ಕೃತಿ ಬಗ್ಗೆ ಗೌರವ ಮತ್ತು ಕಾಳಜಿ. ಕುವೆಂಪು, ಕಾರಾಂತರ ಕೃತಿಗಳಲ್ಲಿ ಹೆಚ್ಚಿನ ಆಸಕ್ತಿ. ಮಲೆನಾಡಿನಲ್ಲಿ ಒಲವು. ಪ್ರಕೃತಿ ಆರಾಧನೆಯಲ್ಲಿ ನಂಬಿಕೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator