ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › anupkumart ರವರ ಬ್ಲಾಗ್

ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

July 22, 2007 - 2:45am — anupkumart

Saw this compact and wonderful post ..

...... authored by Pratap Simha, Vijaya karnataka

ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

ಅಂದು ಬಸ್ಸಿನಲ್ಲಿ ಹೋಗುತ್ತಿದ್ದೆ. ಲೋಕಾಭಿರಾಮವಾಗಿ ಪರಿಚಯವಾದ ನನ್ನ ಪಕ್ಕದ ಸಹಪ್ರಯಾಣಿಕ ಒಬ್ಬರೊಡನೆ ಹರಟೆ ಶುರುವಾಯಿತು. ಅದೂ ಇದೂ ಮಾತನಾಡುತ್ತಾ ಕೊನೆಗೆ ವಿಷಯ ಡಾ.ರಾಜ್ ಬಗ್ಗೆ ತಿರುಗಿತು. ಇದ್ದಕ್ಕಿದ್ದಂತೆ ಆ ವ್ಯಕ್ತಿ " ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇ ಏನಲ್ಲಾ ಬಿಡ್ರಿ. ಎಷ್ಟೋ ಜನ ಸಾಹಿತಿಗಳೂ ಕವಿಗಳೂ ಕನ್ನಡಕ್ಕಾಗಿ ದುಡಿದಿರುವಾಗ ಕೇವಲ ರಾಜ್‍ಕುಮಾರ್ ಹೆಸರನ್ನ ಹೇಳುವುದು ಅನ್ಯಾಯವಲ್ಲವಾ? ಅಷ್ಟಕ್ಕೂ ರಾಜ್‍ಕುಮಾರ್ ಕನ್ನಡಕ್ಕಾಗಿ ಏನು ತಾನೇ ಮಾಡಿದ್ದಾರೆ? " ಎಂಡುಬಿಡಬೇಕಾ.

ಅದಕ್ಕೆ ನಾನು ಹೇಳಿದೆ.
" ಮಾಹಾಸ್ವಾಮಿ, ಎಷ್ಟೋ ಜನ ಸಾಹಿತಿಗಳೂ, ಕವಿಗಳೂ ಕನ್ನಡಕ್ಕಾಗಿ ದುಡಿದಿದ್ದಾರೆ ನಿಜ. ಆ ಎಷ್ಟೋ ಜನ ಸಾಹಿತಿಗಳೂ, ಕವಿಗಳೂ ಬರೆದ ಎಷ್ಟೋ ಸಾಹಿತ್ಯದಲ್ಲಿ ನೀವೆಷ್ಟರ ಮಟ್ಟಿಗೆ ಓದಿದ್ದೀರಾ? ಕುವೆಂಪು ಬರೆದಿರುವ 'ರಾಮಾಯಣ ದರ್ಶನಂ' ಓದಿದ್ದೀರಾ? ಅಥವಾ ತ.ರಾ.ಸು ಅವರ ದುರ್ಗಾಸ್ತಮಾನವನ್ನೇನಾದರೂ ಓದಿದ್ದೀರಾ? At least 'ಜೈ ಭಾರತ ಜನನಿಯ ತನುಜಾತೆ' ಗೀತೆಯ ಅರ್ಥವಾದರೂ ಗೊತ್ತೇ ನಿಮಗೆ? ಕನ್ನಡ ಸಾಹಿತ್ಯ ಕ್ಷೇತ್ರ ಎಷ್ಟೇ ಅಗಾಧವಾಗಿದ್ದರೂ ಕನ್ನಡ ಓದುವ ಹವ್ಯಾಸದವರೇ ಇಲ್ಲದಿರುವಾಗ ಅವೆಲ್ಲ ಪುಸ್ತಕದ ಬಡನೆಯಂತಾಗಿವೆ. ಸುಮ್ನೇ, ರಾಜ್‍ಕುಮಾರ್ ಮೇಲಿನ ಹೊಟ್ಟೆ ಕಿಚ್ಚಿಗೆ ಅವ್ರನ್ ಬೈದ್ರೇ ಏನ್ ಬಂತು ರೀ. ಇಲ್ಲಿ ಕೇಲ್ರಿ ಹೇಳ್ತೀನಿ. ಕನ್ನಡದ ಮೊದಲ ರಾಜ ಕದಂಬರ ಮಯೂರ ವರ್ಮ ಹೀಗಿದ್ದ. ಚಾಲುಕ್ಯರ ಪುಲಿಕೇಶಿ ಪಲ್ಲವರೊಡನೆ ಹೀಗೆಲ್ಲ ಯುದ್ಧ ಮಾಡಿದ್ದ. ಕೃಷ್ಣದೇವರಾಯ ನ ಆಸ್ಥಾನ ಹೀಗಿತ್ತು. ಮೈಸೂರಿನ ರಣಧೀರ ಕಂಠೀರವ ನರಸರಾಜ ಒಡೆಯರರ ಗಾಂಭೀರ್ಯ (body language) ಹೀಗಿತ್ತು. ಕನ್ನಡದ ಕವಿ ಸರ್ವಜ್ಞ ಹೀಗಿದ್ದ. ನವಕೋಟಿ ನಾರಾಯಾಣನಾಗಿದ್ದ ಜಿಪುಣ, ಪುರಂದರ ದಾಸರಾಗಿ ಬಹಲ್‍ಷ್ಟು ಕೀರ್ತನೆಗಳನ್ನು ರಚಿಸಿದರು ಎಂಬಂತಹ ಕನ್ನಡ ಸಾಹಿತ್ಯ ಚರಿತ್ರೆಯ ಮಹತ್ವಪೂರ್ಣ ಅಂಶಗಳನ್ನೆಲ್ಲ ತೆರೆಯ ಮೇಲೆ ಅಮೋಘವಾಗಿ ಅಭಿನಯಿಸಿ ಕನ್ನಡ ನಾಡಿನ ಮೂಲೆ ಮೂಲೆಗೂ ಕನ್ನಡದ ಬಗ್ಗೆ ಕಾಳಜಿ ಬರುವಷ್ಟು ಕನ್ನಡಕ್ಕಾಗಿ ದುಡಿದಿರುವುದು ಡಾ.ರಾಜ್‍ಕುಮಾರ್ ತಿಳ್ಕೊಲ್ರೀ. ಕರ್ನಾಟಕದ ಏಕೀಕರಣವಾದ ಮೇಲೆ, ಕನ್ನಡದ ಬಗ್ಗೆ ಪ್ರಾಥಮಿಕ ಮತ್ತು ಮೂಲಭೂತವಾದ ಒಂದು ಅರಿವು ಜನಗಳಿಗೆ ಬಂದಿದ್ದು ಡಾ.ರಾಜ್‍ಕುಮಾರ್ ಸಿನಿಮಾಗಳಿಂದ. ಅಂಥವರು ತಾವು ದುಡಿದ ದುಡ್ಡನ್ನು ದಾನ ಮಾಡಿ ಬೆಂಗಳೂರನ್ನು ಸಿಂಗಾಪುರ ಮಾಡುವು ದೇನೂ ಬೇಡ. ಅವರು ಚಿತ್ರಗಳ ಮೂಲಕ ಕನ್ನಡಿಗರಲ್ಲಿ ಮೂಡಿಸಿರುವ ಜಾಗೃತಿ ಇದೆಯಲ್ಲಾ ಅಷ್ಟು ಸಾಕು. ಇನ್ಮೇಲೆ ರಾಜ್‍ಕುಮಾರ್ ಬಗ್ಗೆ ಬಾಯಿಗೆ ಬಂದಂತೆಲ್ಲಾ ಮತಾಡಕ್ಕೆ ಹೋಗ್‌ಬೇಡಿ " ಎಂದೆ.

ಆ ಮಹಾಪುರುಷ ಇನ್ನೂ ತನ್ನ ಹಟ ಬಿಡದೆ ಇನ್ನೇನೋ ರಾಗವೇಳೆಯಲು ತೊಡಗಿದ.

ನಾನ್ ಮನಸ್‌ನಲ್ಲಿ ಅಂದುಕೊಂಡೆ, " ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ "

~.~
  • anupkumart ರವರ ಬ್ಲಾಗ್
  • Login or register to post comments
  • 453 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 22, 2007 - 4:09pm — basavaraj_ts

ಉ: ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

basavaraj_ts's picture

ಈ ರೀತಿಯ ಅನೇಕ ಪ್ರಸಂಗಗಳನ್ನು ನಾವು ಆಗಾಗ ನೋಡುತ್ತಿರುತ್ತೇವೆ ,ಕೇಳುತ್ತಿರುತ್ತೇವೆ.ಕೆಲವರು ಸುಮ್ಮನೆ ರಾಜ್ಕುಮಾರ್ ಅವರನ್ನ ಟೀಕೆ ಮಾಡಬೇಕು ಅಂತ ಮಾಡ್ತಾರೆ ಆಂಥವರಿಗೆಲ್ಲ ತಿಳಿ ಹೇಳುವುದು ಬಹಳ ಕಷ್ಟ .ಆದಾಗ್ಯು ಕನ್ನಡದ ಹಿರಿಯ ಸಾಹಿತಿಗಳ ಕೊಡುಗೆ ಅಪಾರ ,ಆದರೆ ರಾಜ್ ಕನ್ನಡ ಪ್ರಜ್ನೆಯ ಬಹು ಪ್ರಮುಖ ಅಂಗ ಎಂಬುದು ಪ್ರಶ್ನಾತೀತ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2007 - 6:23pm — phmd

ಉ: ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

phmd's picture

ಸದಾ ನಿಮ್ಮವನೇ,
ಪ್ರಸಾದ

ರಾಜ್ಕುಮಾರ್ ಅವರಂಥ ಮೇರು ನಟ ಕನ್ನಡದಲ್ಲಿಲ್ಲ....
ಆದರೆ, ಅದರ ಬಗ್ಗೆ ನಮಗ ಅಭಿಮಾನಕ್ಕಿಂತ ದುರಭಿಮಾನವೇ ಹೆಚ್ಚೆಂದು ಅನಸ್ತದ.
ಆದರ ಉಳಿದವರನ್ನೂ ನೆನದ್ರ ತಪ್ಪೇನು?
ಆ ಸಹ ಪ್ರಯಾಣಿಕನನ್ನು ಕತ್ತೆ ಎಂದು ಹೇಳುವ ಜನರು ಉಳಿದವರ ಬಗ್ಗೆ ಯಾವಭಾವನೆ ಇಟ್ಟುಕೊಂಡಾರ ಅನ್ನೂದು ತಿಳಿತದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2007 - 11:06am — Sunil Jayaprakash

ಉ: ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

Sunil Jayaprakash's picture

ಆದರ ಉಳಿದವರನ್ನೂ ನೆನದ್ರ ತಪ್ಪೇನು?

ನೆನೆಯಿರಿ ಸ್ವಾಮಿ, ಯಾರು ಬೇಡ ಅಂತಾರಾ. ಆದರೆ ರಜನಿಕಾಂತ್ ಹಾಗಂತೆ ಹೀಗಂತೆ. ರಾಜ್ಕುಮಾರ್ ಮಾತ್ರ ಕನ್ನಡಕ್ಕೆ ಏನು ಮಾಡಲೇ ಇಲ್ಲ. ಇಂತಹವುಗಳು ತೀರಾ ಬಾಲಿಶ. ಅಷ್ಟಕ್ಕೂ ರಾಜ್ಕುಮಾರ್ ತೆರೆಯ ಹಿಂದಿನಲ್ಲಿ ಜನಪರ ಕೆಲಸಗಳನ್ನು ಮಾಡಿರಬಹುದು. ಅಥವಾ ಮಾಡಿಲ್ಲ ಅಂತಲೇ ಇಟ್ಟುಕೊಳ್ಳಿ, ಏನಿವಾಗ. ಯಾರೋ ಯಾಕೆ ಬಂದು ನಮಗೆ ಸಹಾಯ ಮಾಡಬೇಕು ಸ್ವಾಮಿ. ನೀವು "ಮಯೂರ" ಸಿನಿಮಾ ನೋಡಿದ್ದೀರಾ. ಕದಂಬ ಸಾಮ್ರಾಜ್ಯದ ಚಕ್ರವತ್ರಿ ಮಯೂರ ಹೇಗಿದ್ದ ಅಂತ ಕಾದಂಬರಿ ಓದಿ ತಿಳಿದುಕೊಳ್ಳುವುದಕ್ಕಾಗುತ್ತದೆಯೇ. "ಶಿವಸ್ಕಂದವರ್ಮ....." ಅಂತ ಗರ್ಜಿಸುತ್ತಾ ನಮ್ಮ ಕನ್ನಡತನವನ್ನು ಗಟ್ಟಿಗೊಳಿಸಿದ ರಾಜ್ಕುಮಾರ್ ನಮಗೆ ಸಾಕಲ್ಲವೇ. ರಾಜ್ಕುಮಾರನ್ನ ರಾಜ್ಕುಮಾರ್ ಆಗಿಯೇ ನಾವುಗಳು ನೋಡಬೇಕು. ಬೇರೆ ಯಾರದೋ ಆದರ್ಶಗಳನ್ನು ರಾಜ್ಕುಮಾರನಿಗೆ ತುರುಕಲೇಕೆ ನಾವುಗಳು ಯತ್ನಿಸಬೇಕು.

ಈ-ಟೀವಿ ವರ್ಷದ ಕನ್ನಡಿಗ ಪ್ರಶಸ್ತಿ ಸ್ವೀಕರಿಸುವಾಗ ರಾಜ್ಕುಮಾರ್ ಆಡಿದ ಮಾತುಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಆ ಮಾತುಗಳು ಅವರ ಅಂತರಾಳದಿಂದ ಬಂದ್ದದ್ದು. ಎಲ್ಲಿಯಾದರೂ ಸಿಕ್ಕಿದರೆ ತಪ್ಪದೆ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವರನಟ ರಾಜ್‍ಕುಮಾರ್ ಪುಣ್ಯತಿಥಿ
  • ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ರಾಜ್ ಕುಟುಂಬದ ಬೆಂಬಲ, ಜೊತೆಗೆ...
  • ಯಾಹೂ! Answers ನಲ್ಲಿ ಕನ್ನಡ
  • ಕನ್ನಡ ದೀಕ್ಷೆ
  • ರಾಜ್-ತಾಜ್
Syndicate content

ಲೇಖಕರು

anupkumart's picture

ಪೂರ್ಣ ಹೆಸರು
ಆನುಪ್ ಮಲೆನಾಡು

ಪರಿಚಯ

"ಸಿಸ್ಕೋ ಸಿಸ್ಟಮ್ಸ್" ಸಂಸ್ಥೆಯಲ್ಲಿ ಸಾಫ್ಟವೇರ್ ಕೆಲಸ. ಬೆಂಗಳೂರಿನ ಜೆ.ಪಿ. ನಗರ ಬಡಾವಣೆಯಲ್ಲಿ ನಿವಾಸ. ಕನ್ನಡ ಸಂಸ್ಕೃತಿ ಬಗ್ಗೆ ಗೌರವ ಮತ್ತು ಕಾಳಜಿ. ಕುವೆಂಪು, ಕಾರಾಂತರ ಕೃತಿಗಳಲ್ಲಿ ಹೆಚ್ಚಿನ ಆಸಕ್ತಿ. ಮಲೆನಾಡಿನಲ್ಲಿ ಒಲವು. ಪ್ರಕೃತಿ ಆರಾಧನೆಯಲ್ಲಿ ನಂಬಿಕೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯಾಹೂ! ಕ್ರಿಕೆಟ್
  • ಓದಿದ್ದು ಕೇಳಿದ್ದು ನೋಡಿದ್ದು-48 ಭಾರತ:ಹುಚ್ಚರೇ ಹೆಚ್ಚು!
  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • gurubaliga
    ಉ: Attitude
    October 13, 2008 - 12:21pm
  • kannadakanda
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 12:17pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:14pm
  • gurubaliga
    ಉ: ದುಶ್ಚಟವಿಲ್ಲದವರೆಲ್ಲಾ ಗಾಂಧಿಯಾಗುತ್ತಾರೆ ಎಂದಾದರೆ…?
    October 13, 2008 - 12:11pm
  • srinivasps
    ಉ: ಶಿವಮಣಿ ಎಂಬ ಅದ್ಭುತ ಪ್ರತಿಭೆ
    October 13, 2008 - 12:10pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:02pm
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 12:00pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 13, 2008 - 11:59am
  • mahesha
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:59am
  • kannadakanda
    ಉ: ಕನ್ನಡದಲ್ಲಿ ಞ ಮತ್ತು ಙ
    October 13, 2008 - 11:57am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 86 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator