ನನ್ನ ಕವನಗಳು
ನನ್ನ ಕವನಗಳು, ಬರೀ ನನ್ನ ಕನಸುಗಳಲ್ಲ, ಅವು ಬರೀ ಜೀವನ ಪಾಠಗಳು ಅಥವಾ ಅನುಭವಗಳೂ ಅಲ್ಲ, ಅವು ಕೇವಲ ನನ್ನ ಕಣ್ಣ ಬಿಂಬಗಳಲ್ಲ.
ಇವುಗಳಾಚೆಗೆ ನನ್ನ ಕವನಗಳು, ನನಗೆ ಬೇರೆಯ ಅನುಭವವನ್ನೇ ನೀಡುತ್ತವೆ, ಹಾಗೆಂದು ನನ್ನ ಕವನಗಳು ನನಗೆ ತುಂಬಾ ಖುಷಿ ನೀಡಿವೆ ಎಂದಲ್ಲ.. ಕೆಲವೊಮ್ಮೆ, ನನ್ನ ಕೆಲವು ಕವನಗಳೊಂದಿಗೆ ನಾನು ಅಸಂತುಷ್ಟನೆ..... ನಾ ಬರೆದ ಆ ಕವನ ಹೇಳುವುದರಾಚೆಗೂ ಇನ್ನೂ ಉಳಿದಿದೆ ಎಂದೆನಿಸಿ ನನ್ನ ಕವನ ನನಗೆಯೇ ಅಪೂರ್ಣ ಎಂದೆನಿಸಿ ಬಿಡುತ್ತದೆ.
ಆ ಅಪೂರ್ಣತೆ ಏನೆಂಬುದನ್ನ ತೋರಿಸುವ ಹೊಣೆ ನಿಮ್ಮದಾಗಿದೆ...
ನನ್ನ ಕವನಗಳನ್ನ ಓದಿ, ನಿಮ್ಮ ಸಲಹೆ ಅಥವಾ ವಿಮರ್ಷೆಗಳನ್ನ ನೀಡಿ......
ಮಿನಿ ರಾಮಾಯಣ
ಇದು ನನ್ನ ಮೊದಲ ಕವನ, ನನ್ನ 8ನೇ ತರಗತಿಯಲ್ಲಿ ಬರೆದಿದ್ದು, ಈಗ ತುಂಬಾ ಬಾಲಿಷವಾಗಿ ಕಾಣಬಹುದು..
ನಗಬೇಕು ಅನಿಸಿದರೆ ಸುಮ್ಮನೆ ನಕ್ಕು ಬಿಡಿ, ಬೇರೆಯವರಿಗೆ ಗೊತ್ತಾಗದಂತೆ...
ಮಿನಿ ರಾಮಾಯಣ
ಸೀತೆಯನ್ನು ಹೊತ್ತುಕೊಂಡು ಹೋದ ಲಂಕಾಧಿಪತಿ
ಇದಕ್ಕೆ ಕಾರಣ ಆ ಮಾರೀಚನ ಕಿತಾಪತಿ
ಆಗ ಎಷ್ಟು ನರಳಿದನೋ ಪಾಪ ಸೀತೆಯ ಪತಿ
ಇಷ್ಟಕ್ಕೆಲ್ಲಾ ಕಾರಣ ಸೀತೆಯ ಆಸೆಗಳಿಗಿಲ್ಲದ ಮಿತಿ
ಸೀತೆಯ ಕರೆತರಲು ಹೋದ ಹನುಮಂತ
ಅವನಿಗೆ ಶ್ರೀರಾಮನೇ ಭಗವಂತ
ಲಂಕೆಗೆ ಹೋದ ಹನುಮಂತನಿಂದ ಲಂಕೆ ಸರ್ವನಾಶ
ಲಂಕಾಧಿಪತಿಗೆ ಹಾಕಿದ ಬಿಡಿಸಲಾಗದ ಪಾಶ
ಈ ಜಗತ್ತಿನಲ್ಲಿ ಹೆಚ್ಚಾಗಿದೆ ಮೋಸ
ರಾಮನಿಗೆ ಎಷ್ಟು ಕಷ್ಟದಿಂದ ಕೂಡಿತ್ತೆಂದರೆ ವನವಾಸ
ಅದು ಕಾಯಿಸಿದರೂ ಮುರಿಯಾಲಾಗದ ಕಬ್ಬಿಣ
ಇದುವೇ ರಾಮಸೀತೆಯರ ರಾಮಾಯಣ
-- ಅರುಣ ಸಿರಿಗೆರೆ

- arunasirigere ರವರ ಬ್ಲಾಗ್
- Login or register to post comments
- 99 hits
- Email this blog




RSS: