ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರೇಮ ಭಾವ

ಪ್ರೇಮ ಭಾವ

ನನ್ನ ಮನದಾಳದ ಭಾವನೆಗಳ
ಕೆದಕಿದ ಚೆಲುವೆ,
ಹೀಗೇಕೆ ನನ್ನನು
ಕನಸಿನಲಿ ಕಾಡಿ ಕೊಲುವೆ?

ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ?
ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ?
ನಿನ್ನ ಪ್ರೀತಿಯೊಂದನ್ನೇ ನಾ ಬಯಸುವೆ
ಆದರೆ ಹೀಗೇಕೆ ನೀ ನನ್ನ ಕಾಡಿ ಕೊಲ್ಲುವೆ?

ಬೇರೆಯ ಲೋಕದಲ್ಲಿ ವಿಹರಿಸುತ್ತಿದ್ದ ನನ್ನ
ಏಕೆ ಮಾಡಿಕೊಂಡೆ ಗುಲಾಮನಾಗಿ ನಿನ್ನ,
ಅರ್ಥವಿರದ ಭಾವನೆಗಳಿಗೆ ನೀಡಿದೆ ನೀ ಮೆರುಗು
ದೂರ ಮಾಡಿದೆ ನಾ ಅನಾಥನೆಂಬ ಕೊರಗು.

ನೋಡಿದಾಗ ನಿನ್ನ ಬೆಳದಿಂಗಳ ಮುಗುಳ್ನಗೆ
ಅಮಿತಾನಂದ ನನ್ನ ಮನದೊಳಗೆ
ನಿನ್ನ ಪ್ರೀತಿಯ ಆರಾಧಕ ನಾನು,
ದೂರ ಮಾಡದಿರು ನನ್ನ ನೀನು.
-- ಅರುಣ ಸಿರಿಗೆರೆ

No votes yet

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ