ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › arunasirigere ರವರ ಬ್ಲಾಗ್

ನನ್ನ ಕವನಗಳು

ನನ್ನ ಕವನಗಳು, ಬರೀ ನನ್ನ ಕನಸುಗಳಲ್ಲ, ಅವು ಬರೀ ಜೀವನ ಪಾಠಗಳು ಅಥವಾ ಅನುಭವಗಳೂ ಅಲ್ಲ, ಅವು ಕೇವಲ ನನ್ನ ಕಣ್ಣ ಬಿಂಬಗಳಲ್ಲ.
ಇವುಗಳಾಚೆಗೆ ನನ್ನ ಕವನಗಳು, ನನಗೆ ಬೇರೆಯ ಅನುಭವವನ್ನೇ ನೀಡುತ್ತವೆ, ಹಾಗೆಂದು ನನ್ನ ಕವನಗಳು ನನಗೆ ತುಂಬಾ ಖುಷಿ ನೀಡಿವೆ ಎಂದಲ್ಲ.. ಕೆಲವೊಮ್ಮೆ, ನನ್ನ ಕೆಲವು ಕವನಗಳೊಂದಿಗೆ ನಾನು ಅಸಂತುಷ್ಟನೆ..... ನಾ ಬರೆದ ಆ ಕವನ ಹೇಳುವುದರಾಚೆಗೂ ಇನ್ನೂ ಉಳಿದಿದೆ ಎಂದೆನಿಸಿ ನನ್ನ ಕವನ ನನಗೆಯೇ ಅಪೂರ್ಣ ಎಂದೆನಿಸಿ ಬಿಡುತ್ತದೆ.

ಆ ಅಪೂರ್ಣತೆ ಏನೆಂಬುದನ್ನ ತೋರಿಸುವ ಹೊಣೆ ನಿಮ್ಮದಾಗಿದೆ...
ನನ್ನ ಕವನಗಳನ್ನ ಓದಿ, ನಿಮ್ಮ ಸಲಹೆ ಅಥವಾ ವಿಮರ್ಷೆಗಳನ್ನ ನೀಡಿ......

ಹೃದಯವೀಣೆ

January 4, 2008 - 4:17pm — arunasirigere

ಹೃದಯವೀಣೆ

ನೀ ಮೀಟಿದಾಗಲೆ ನಾನರಿತದ್ದು
ನನ್ನದೊಂದು ಮಿಡಿವ ಹೃದಯವೆಂದು
ಅದ್ಯಾವ ರಾಗವ ನುಡಿಸಿದೆಯೋ ನೀನಂದು
ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು

ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು
ಯಾವ ಕೈಗಳೂ ನುಡಿಸಲಿಲ್ಲ ನೀ ನುಡಿಸಿದ ರಾಗವನೆಂದೂ
ನೀ ಮೀಟಿದ ತಂತಿಗಳು ಕಂಪಿಸಿರಲು ಇಂಪಿನಲಿ
ನಾ ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ

ನನಗೀಗ ಬೇರೆ ರಾಗಗಳ ಅರಿವೇ ಇಲ್ಲ
ನೀ ಮೂಡಿಸುವ ರಾಗಗಳ ಪರಿವೇ ಎಲ್ಲ
ನುಡಿಸುತಿರು ರಾಗಗಳ ನೀ ಹೀಗೆ ಎಡೆಬಿಡದೆ
ಚುಂಬಿಸಲಿ ಅವು ನನ್ನೆದೆಯ ಹಾಗೆಯೆ ಕ್ಷಣ ಬಿಡದೆ
ನೀ ನುಡಿಸುವ ರಾಗವದಾವುದೇ ಆಗಿರಲಿ
ನನ್ನೆದೆಯ ತಂತಿಗಳು ಹರಿಯದೆ ಉಳಿದಿರಲಿ

- - ಅರುಣ ಸಿರಿಗೆರೆ

  • ಕನ್ನಡ
  • ಕವನ
  • ರಾಗ
  • ವೀಣೆ
  • ಹೃದಯ
~.~
  • arunasirigere ರವರ ಬ್ಲಾಗ್
  • Login or register to post comments
  • 224 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನವ
  • ಹೀಗೇಕೆ ನೀ ಮಾಡಿದೆ?
  • ನವ್ಯ ಪಯಣ
  • ಭರತೇಶ ವೈಭವದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ - ಕಲ್ಪು ೧೧
  • ಜೇಡರ ಬಲೆ
Syndicate content

ಲೇಖಕರು

arunasirigere's picture

ಪೂರ್ಣ ಹೆಸರು
ಅರುಣ ಸಿರಿಗೆರೆ

ಪರಿಚಯ

ನನ್ನ ಹೆಸರು ಅರುಣ ಸಿರಿಗೆರೆ, ಮೂಲತಃ ಚಿತ್ರದುರ್ಗ ಜಿಲ್ಲೆ ಸಿರಿಗೆರೆ ಹಳ್ಳಿಯವನು....
ಸಿರಿಗೆರೆ, ಶಿವಮೊಗ್ಗ, ರಾಣೆಬೆನ್ನೂರು, ಬೆಂಗಳೂರು, ಈ ಎಲ್ಲಾ ಕಡೆ ನನ್ನ ವಿದ್ಯಾಭ್ಯಾಸದ ವಿವಿಧ ಮಜಲುಗಳನ್ನ ಮುಗಿಸಿ ಈ ಬೆಂಗಳೂರಿನಲ್ಲಿಯೆ ನೆಲೆಸಿದ್ದೇನೆ.

ನಾನು ತಂತ್ರಾಂಶ ಅಭಿಯಂತರನಾಗಿ ಕೆಲಸ ನಿರ್ವಹಿಸಿತ್ತಿದ್ದೇನೆ.

ಒಮ್ಮೆ ನಾನು 8ನೇ ತರಗತಿಯಲ್ಲಿದ್ದಾಗ, ಒಮ್ಮೆ ಹೀಗೆ ಪದಗಳ ಜೋಡಣೆ ಮಾಡಿ, ಆದು ನನ್ನ ಕವನ ಎಂದು ನನ್ನ ಗೆಳೆಯರಿಗೆಲ್ಲಾ ತೋರಿಸಿದೆ, ಅವರೆಲ್ಲಾ ಚೆನ್ನಾಗಿದೆ ಅಂತ ಹೇಳಿದ್ರು... ಅಷ್ಟೆ, ಮತ್ತೆ ಕವನಗಳ ಬಗ್ಗೆ ಯಾವತ್ತು ಯೋಚಿಸಿರಲಿಲ್ಲ, ಆದರೂ ಆಗೊಮ್ಮೆ ಹೀಗೊಮ್ಮೆ ಏನಾದರೂ ಗೀಚುತ್ತಲೇ ಇರುತ್ತಿದ್ದೆ, ಅವುಗಳನ್ನ ಎಂದಿಗೂ ಗಂಭೀರವಾಗಿ ಪರಿಗಣಿಸರಲಿಲ್ಲ.... ಆದರೆ ನಾನು ನನ್ನ ಪದವಿ ತರಗತಿಗೆ ಬಂದ ಮೇಲೆ ಅವುಗಳ ಬಗ್ಗೆ ಯೋಚಿಸ್ತಾ ಇದ್ದ್ದೆ.. ಆದ್ರೂ ಅಷ್ಟೇನು ಗಂಭೀರವಾಗಿ ಅಲ್ಲ... ನನ್ನ ವಿದ್ಯಾಭ್ಯಾಸ ಮುಗಿದ ಮೇಲೆ ಈ ಕವನದ ಗೀಳು ತುಂಬಾ ಬಂದಿದೆ... ಮೊದಲಿನಿಂದ ಇಲ್ಲಿಯವರೆಗೆ ನಾನು ಗೀಚಿದ ಕೆಲವು ಕವನಗಳು ಇಲ್ಲಿವೆ, ಓದಿ ನಿಮ್ಮ ಸಲಹೆಗಳನ್ನ ನೀಡಿ, ನನ್ನನ್ನ ತಿದ್ದಿಕೊಳ್ಳಲು, ಉತ್ತಮಪಡಿಸಿಕೊಳ್ಳಲು ಅವು ದಾರಿಯಾಗಲಿ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:04am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:00am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:56am
  • csomsekraiah
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 10:46am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:46am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 60 ಅತಿಥಿಗಳು ಆನ್ಲೈನ್ ಇರುವರು.


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator