ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › arunhegde ರವರ ಬ್ಲಾಗ್

ಚೆಲುವಿನ ಚಿತ್ತಾರ....

June 25, 2007 - 5:03pm — arunhegde

ಚೆಲುವಿನ ಚಿತ್ತಾರ - ಇದು ಸತ್ಯ ಕಥೆ, ತಮಿಳು ನಾಡಿನ ತಿರುಚ್ಚಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳೂ ಜೀವಂತ ಎಂಬ ಮಾಹಿತಿಯೊಂದಿಗೆ ಎಸ್. ನಾರಾಯಣ್ ಚೆಲುವಿನ ಚಿತ್ತಾರವನ್ನು ಬರೆಯಲು ಆರಂಭಿಸುತ್ತಾರೆ. ತಮಿಳಿನ "ಕಾದಲ್" ಚಿತ್ರವನ್ನು ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕನ್ನಡೀಕರಿಸಿದ್ದಾರೆ ನಾರಾಯಣ್.

ಟಿ. ನರಸೀಪುರದಲ್ಲಿ ಕಥೆ ಆರಂಭಗೊಳ್ಳುತ್ತದೆ... ಮಾದೇಶ ಎಂಬ ಬಡ ಮೆಕ್ಯಾನಿಕ್ ಹುಡುಗ(ಗಣೇಶ್) ಮತ್ತು ಐಶ್ವರ್ಯ (ಅಮೂಲ್ಯ) ಎಂಬ ಶ್ರೀಮಂತ ಬಾಲೆಯ ಭೇಟಿ ಬೈಕ್ ಢಿಕ್ಕಿಗೊಳ್ಳುವ ಪ್ರಕರಣದೊಂದಿಗೆ ಆರಂಭವಾಗಿ, ಆ ಭೇಟಿ ಜಗಳವಾಗಿ, ಆ ಜಗಳವೇ ನಂತರ ಪ್ರೀತಿಯಾಗಿ ಮಾರ್ಪಡುತ್ತದೆ. ಐಶ್ವರ್ಯಳ ಮದುವೆ ಪ್ರಸ್ತಾಪ ಆಕೆಯ ಮಾವನ ಮಗನೊಂದಿಗೆ ನಡೆಯುತ್ತದೆ... ಹೆದರಿದ ಐಶ್ವರ್ಯ ಮತ್ತು ಮಾದೇಶ ಬೇರೆ ಗತಿಯಿಲ್ಲದೆ ಬೆಂಗಳೂರಿಗೆ ಓಡಿ ಹೋಗುತ್ತಾರೆ.ಅಲ್ಲಿ ಸ್ನೇಹಿತನೊಬ್ಬನ (ಕೋಮಲ್) ಸಹಾಯದಿಂದ ಮದುವೆಯಾಗಿ ಬಾಡಿಗೆ ಮನೆಯೊಂದನ್ನು ಹಿಡಿಯುತ್ತಾರೆ... ಅಷ್ಟರಲ್ಲಿ ಐಶ್ವರ್ಯಳ ಗೆಳತಿಯಿಂದ ಆಕೆ ಓಡಿ ಹೋಗಿರುವ ವಿಷಯ ತಿಳಿದ ಐಶ್ವರ್ಯಳ ಮನೆಯವರು ಬೆಂಗಳೂರಿಗೆ ಬಂದು ಅವರನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ. ಆಗಿದ್ದಾಯಿತು, ಮನೆಗೆ ಬನ್ನಿ, ಎಲ್ಲರೊಂದಿಗೆ ಮಾತಾಡಿ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿಸುತ್ತೇವೆ ಎಂದು ನಂಬಿಸಿ ಅವರನ್ನು ವಾಪಾಸ್ ಮನೆಗೆ ಕರೆ ತರುತ್ತಾರೆ... ಆದರೆ ವಾಪಸ್ ಬಂದ ಮೇಲೆ ಅಲ್ಲಿ ನಡೆಯುವ ಘಟನೆಗಳೇ ಬೇರೆ... ಈ ಯುವ ಪ್ರೇಮಿಗಳ ಪರಿಸ್ಥಿತಿ ಹೃದಯ ವಿದ್ರಾವಕವಾಗುತ್ತದೆ... ಚಿತ್ರದ ಅಂತ್ಯ ವಿಭಿನ್ನವಾಗಿದೆ.. ಸತ್ಯ ಕಥೆಯೆಂದು ಮೊದಲೇ ಹೇಳಿರುವುದರಿಂದ ಈ ರೀತಿಯ ಅಂತ್ಯವನ್ನು ಸ್ವೀಕರಿಸಲೇ ಬೇಕಾದುದು ಅನಿವಾರ್ಯವಾಗಿದೆ... ಪೊರ್ವಾರ್ಧ ಸಂಪೂರ್ಣ ಹಾಸ್ಯಮಯ, ಪ್ರೇಮಮಯ, ಲವಲವಿಕೆಯ ಆಗರ... ಉತ್ತರಾರ್ಧ ಪ್ರೇಮಿಗಳು ಪಡುವ ಪಾಡು ಹಾಗೂ ಗೋಳಿನ ಸಾಗರ...

ವಿಭಿನ್ನ ಪಾತ್ರವಾದರೂ ಅಭಿನಯದಲ್ಲಿ ಗಣೇಶ್ ಮಿಂಚುತ್ತಾರೆ.. ಕೋಮಲ್ ಹಾಸ್ಯ ಮನಸ್ಸಿಗೆ ಮುದ ನೀಡುತ್ತದೆ... ಹೊಸ ನಟಿ ಅಮೂಲ್ಯ ಪೂರ್ವಾರ್ಧದಲ್ಲಿ ಲವಲವಿಕೆಯಿಂದ ನಟಿಸಿ ಮನ ಗೆಲ್ಲುತ್ತಾಳೆ.. ಆದರೆ ದುಃಖದ ಸನ್ನಿವೇಶಗಳಲ್ಲಿ ಆಕೆಯ ಅಪ್ರಭುದ್ಧತೆ ಎದ್ದು ಕಾಣುತ್ತದೆ. ಆದರೆ ನಾಯಕಿಯಾಗಿ ಮೊದಲ ಚಿತ್ರವಾಗಿದ್ದರೂ ಹಲವಾರು ಸನ್ನಿವೇಶಗಳನ್ನು ಅಮೂಲ್ಯಳಿಂದ ಉತ್ತಮವಾದ ಅಭಿನಯವನ್ನು ಹೊರತೆಗೆಯುವಲ್ಲಿ ನಾರಾಯಣ್ ಯಶಸ್ವಿಯಾಗಿದ್ದಾರೆ.

ಮನೋಮೂರ್ತಿ ಸಂಗೀತ ಇಂಪಾಗಿದೆ. ಎರಡು ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಪೋಷಕ ನಟರೆಲ್ಲ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಕಥೆಯಲ್ಲಿ ಅಂತ ಹೊಸತನವೇನೂ ಇಲ್ಲದಿದ್ದರೂ ಚಿತ್ರಕಥೆ ಎಲ್ಲೂ ಹಳಿ ತಪ್ಪುವುದಿಲ್ಲ. ಮಹಿಳಾ ಪ್ರೇಕ್ಷಕರನ್ನು ಆಕರ್ಷಿಸುವ ಎಲ್ಲ ಮಸಾಲಗಳನ್ನು ಚಿತ್ರ ಒಳಗೊಂಡಿರುವುದರಿಂದ ಹಾಗೂ ಒಂದೆರಡು ಹಾಡುಗಳು ಚೆನ್ನಾಗಿರುವುದರಿಂದ ಚಿತ್ರ ಯಶಸ್ವಿಯಾದರೆ ಯಾವುದೇ ಆಶ್ಚರ್ಯವಿಲ್ಲ.

  • ಚಲನಚಿತ್ರ
  • ಸಿನೆಮಾ ವಿಮರ್ಶೆ
~.~
  • arunhegde ರವರ ಬ್ಲಾಗ್
  • Login or register to post comments
  • 364 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ
  • ಕೋಮಲ್ - ಉದಯೋನ್ಮಕ ಹಾಸ್ಯ ಕಲಾವಿದ
  • ಚೆಲುವಿನ ಚಿತ್ತಾರ - ಚೆಲುವು, ಚಿತ್ತಾರ ಎರಡೂ ಮುಗಿದ ಮೇಲೆ................... 'ಣಮ್ ಣಮ್ ಣಮ್':)
  • "ಗಾಳಿಪಟ" ಹಾರಿಸಬಹುದು.......!!!
  • ಮುದನೀಡುವ "ಮೀರಾ ಮಾಧವ ರಾಘವ"
Syndicate content

ಲೇಖಕರು

arunhegde's picture

ಪೂರ್ಣ ಹೆಸರು
ಅರುಣ್ ಹೆಗಡೆ

ಪರಿಚಯ

ನಾನು ಅರುಣ್ ಕುಮಾರ್ ಡಿ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಮೂಲತಃ ಉತ್ತರ ಕನ್ನಡ ಜಿಲ್ಲೆಗೆ ಸೇರಿದವನು. ಕನ್ನಡದ ಬಗ್ಗೆ ಗೌರವ ಅಭಿಮಾನವಿದ್ದು ಕನ್ನಡ ಅಂತರ್ಜಾಲ ತಾಣಗಳಿಗೆ ಭೇಟಿ ಕೊಡುವುದು, ಸಾಧ್ಯವಾದರೆ ನಾನೂ ಒಂದಿಷ್ಟು ಬರೆಯುವುದು ನನ್ನ ಹವ್ಯಾಸಗಳಲ್ಲೊಂದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 33 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator