Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ASHMYA ರವರ ಬ್ಲಾಗ್

ಆತ

January 9, 2008 - 5:26pm — ASHMYA

ಅ ದಿನ ನಾನು ನನ್ನ ಗೆಳತಿ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಮೆಜೆಸ್ಟಿಕ್ ಕಡೆಗೆ ಹೊರಟಿದ್ದೆವು.ಏನೊ ನಮ್ಮ ಪುಣ್ಯಕ್ಕೆ ಅವತ್ತು ಇಬ್ಬರಿಗೂ ಕೂರಲು ಸ್ಥಳ ಸಿಕ್ಕಿತ್ತು.ಮೆಜೆಸ್ಟಿಕಿಗೆ ತಲುಪಲು ಏನಿಲ್ಲ ಅಂದ್ರು ಮುಕ್ಕಾಲು ಘಂಟೆ ಬೆಕಿತ್ತು.ಇಬ್ಬರಲ್ಲೂ ಮುಗಿಯದ ಮಾತು ಕಥೆ.ಕಂಡಕ್ಟರ್ ಬಂದದ್ದು,ಟಿಕೆಟ್ ತೆಗೆದುಕೊಂಡದ್ದು, ಇವು ಯಾವುವು ನನ್ನ ಪರಿವೆಗೆ ಬರಲೇ ಇಲ್ಲ.ನಾನೆ ಪರ್ಸ್ ತೆಗೆದು ದುಡ್ಡು ಕೊಟ್ಟೆನಾದರೂ ಕೂಡಾ!!!!!ಮೆಜೆಸ್ಟಿಕ್ ಬಂದದ್ದು ಗೊತ್ತಾದದ್ದೇ ಬಸ್ ಪೂರಾ ಖಾಲಿಯಾದಾಗ!ಇಬ್ಬರು ಅವಸರವಸರವಾಗಿ ಇಳಿದು ತುಮಕೂರಿನ ಪ್ಲಾಟ್ ಫಾರ್ಮ್ ತಲುಪಿದೆವು.ನನ್ನ ಗೆಳತಿಗೆ ಕಾಫಿ ಅಭ್ಯಾಸ..ಅಲ್ಲ..ಹುಚ್ಚು..ದಿನಕ್ಕೆ ಐದು ಕಾಫಿಯಾದ್ರು ಕುಡೀತಾಳೆ.ಅಂತಹವಳು ಕಾಫಿ ಕುಡಿಯದೆ ತುಮಕೂರಿನ ಬಸ್ ಹೇಗೆ ತಾನೆ ಹತ್ತುತ್ತಾಳೆ?ಸರಿ ಅವಳು ಅಲ್ಲೆ ಇದ್ದ ಅಂಗಡಿಯಲ್ಲಿ ಕಾಫಿ ಕುಡಿದಳು.ನಾನು ದುಡ್ಡು ಕೊಡೋಣವೆಂದು ಪರ್ಸ್ಗಾಗಿ ಕೈ ಹಾಕಿದರೆ ಪರ್ಸೆ ಇಲ್ಲ!ನನಗೆ ಮೈಯೆಲ್ಲಾ ನಡುಕ,ಯಾಕೇಂದ್ರೆ ಅದರಲ್ಲಿ ನನ್ನ ದುಡ್ಡು ಹಾಗು ಕಾರ್ಡ್ಸುಗಳ ಜೊತೆಗೆ ನನ್ನ ಗೆಳತಿಯ ಅಕ್ಕನ ಡೆಬಿಟ್ ಕಾರ್ಡ್ ಸಹ ಇತ್ತು.ಇನ್ನು ಅವರ ಹತ್ರ ಬೈಗುಳ ಗ್ಯಾರಂಟಿ!ಅದನ್ನು ನೆನೆದೆ ಇಬ್ಬರು ಬೆವೆತ್ತಿದ್ದೆವು.ಆಗ ನಾನು ಸಂಕಟ ಬಂದಾಗ ವೆಂಕಟರಮಣ ಎಂದು ದೇವರಲ್ಲಿ ಮೊರೆಯಿಟ್ಟೆ.ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಹೋದ ಪರ್ಸು,ಸಮುದ್ರಕ್ಕೆ ಹಾಕಿದ ಉಪ್ಪು ಎರಡು ಒಂದೇ ಅಂತ ಗೊತ್ತಿದ್ದರೂ,ಒಂದು ಚಾನ್ಸ್ ನೋಡುವ ಅಂತ ನಾನು ಅವಳು, ಬಿ.ಎಂ.ಟಿ.ಸಿ ಸ್ಟಾಂಡಿನತ್ತ ಓಡಿದೆವು.ನಾವು ಬಂದಿದ್ದ ಬಸ್ ಅದಾಗಲೇ ಹೊರಟುಹೋಗಿತ್ತು.ಆ ಬಸ್ ಎಲ್ಲಿಗೆ ಹೋಗುತ್ತದೆ ಅಂತ ನಮಗೆ ಗೊತ್ತಿದ್ದ ಕಾರಣ,ನಾವು ಆಟೋ ಹಿಡಿದು ಬಸ್ಸನ್ನು ಹಿಂಬಾಲಿಸಲು ಹೋದೆವು.ನಮ್ಮ ಅದ್ರಿಷ್ಟಕ್ಕೆ ಬಸ್ಸೇನೊ ಸಿಕ್ಕಿತು ಅದರೆ, ಅದು ಮೆಜೆಸ್ಟಿಕಿಗೆ ವಾಪಸಾಗುತ್ತಿತ್ತು.ನಾವು ಅದರ ಹಿಂದೆಯೆ ಮೆಜೆಸ್ಟಿಕ್ ತಲುಪಿದೆವು.ಬಸ್ಸಿನಿಂದ ಇಳಿಯುತ್ತಿದ್ದ ಎಲ್ಲರನ್ನು ತಳ್ಳಿ, ಬಸ್ಸಿನ ಕಂಡಕ್ಟರ್ ಬಳಿ ತಲುಪಿದ ನಮ್ಮ ಸಾಹಸಕ್ಕೆ ನಮಗೆ ಖುಶಿ, ಹಾಗೆಯೆ ಹುಚ್ಚು ಪ್ರಯತ್ನಕ್ಕೆ ನಗು.ಹೀಗೆ ಮೇಲೆ ಹತ್ತಿದ ನಮ್ಮನ್ನು,ರೇಗದೆ ನಗುತ್ತ ಸ್ವಾಗತಿಸಿದ ಕಂಡಕ್ಟರನ್ನು ನಾವು,ಪರ್ಸ್ ಏನಾದರು ಸಿಕ್ತಾ? ಎಂದು ವಿಚಾರಿಸಿದೆವು.'ಇಲ್ಲ ಹೋಗ್ರಿ' ಅನ್ನುವ ಉತ್ತರಕ್ಕಾಗಿ ಎದುರು ನೋದುತ್ತಿದ್ದ ನಮಗೆ, ಆತ ಯಾವ ಬಣ್ಣದ್ದು ಎಂದಾಗ, ಪರ್ಸ್ ಸಿಕ್ಕಷ್ಟೆ ಖುಶಿ!ಅದರ ಬಣ್ಣ, ಇದ್ದ ದುಡ್ಡು, ಎಲ್ಲವನ್ನು ವಿಚಾರಿಸಿ,ನನ್ನ ಕೈಗೆ ಪರ್ಸ್ ಇಟ್ಟಾಗ, ಆತ ನಾವು ಪ್ರಾರ್ಥಿಸಿದ್ದ ದೇವರಿಗಿಂತಲೂ ಎತ್ತರದಲ್ಲಿ ನಗುತ್ತಲಿದ್ದ.

  • ಅನುಭವ!
Ornamental seperator
  • ASHMYA ರವರ ಬ್ಲಾಗ್
  • Login or register to post comments
  • 382 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 9, 2008 - 8:17pm — rameshbalaganchi

ಉ: ಆತ

rameshbalaganchi's picture

ಕುತೂಹಲಕಾರಿಯಾಗಿತ್ತು. ನಿಮ್ಮಪ್ರಯತ್ನ ಫಲಕೊಟ್ಟಿದೆ. ಹೆಚ್ಚಿನ ಜನ ಕಳೆದ ವಸ್ತು ಎಲ್ಲಿ ಸಿಗುತ್ತೆ ಅಂತ ಭರವಸೆ ಕಳೆದುಕೊಳ್ಳುವವರೆ!! ಕಂಡಕ್ಟರ್ ಅವರ ನಡತೆ ಅನುಕರಣೀಯ

  • Login or register to post comments
  • link
  • Email this ಪ್ರತಿಕ್ರಿಯೆ
January 11, 2008 - 3:12pm — ASHMYA

ಉ: ಆತ

ASHMYA's picture

ಬದುಕು ಬರಡಾಗದಿರಲಿ..........

ಧನ್ಯವಾದಗಳು..ಗಡಿಬಿಡಿಯಲ್ಲಿ ಆ ಪುಣ್ಯಾತ್ಮನನ್ನು ಸರಿಯಾಗಿ ಅಭಿನಂದಿಸಲೂ ಇಲ್ಲ... Sad

  • Login or register to post comments
  • link
  • Email this ಪ್ರತಿಕ್ರಿಯೆ
January 10, 2008 - 1:18pm — girish.rajanal

ಉ: ಆತ

girish.rajanal's picture

ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ.

ಗಿರೀಶ ರಾಜನಾಳ.

  • Login or register to post comments
  • link
  • Email this ಪ್ರತಿಕ್ರಿಯೆ
January 11, 2008 - 3:07pm — ASHMYA

ಉ: ಆತ

ASHMYA's picture

ಬದುಕು ಬರಡಾಗದಿರಲಿ..........

ಧನ್ಯವಾದಗಳು..Smiling

  • Login or register to post comments
  • link
  • Email this ಪ್ರತಿಕ್ರಿಯೆ
January 11, 2008 - 5:04pm — raghavendra.s

ಉ: ಆತ

raghavendra.s's picture

ಬಿ.ಎಂ.ಟಿ.ಸಿ ಯಲ್ಲಿ ಕೆಲವೊಮ್ಮೆ ಕಳ್ಳತನವಾಗದಿದ್ದರೂ, ನಮ್ಮ ತಪ್ಪಿನಿಂದ ಬಸ್ಸಿನಲ್ಲೇ ನಮ್ಮ ವಸ್ತುಗಳನ್ನು ಉದುರಿಸಿಕೊಂಡುಬಿಡುತ್ತೇವೆ. ಕಂಡಕ್ಟರ್ ನಿಜಕ್ಕೂ ಶ್ಲಾಘನೀಯ. ನಾನೂ ಕೂಡ ಒಮ್ಮೆ ಕೋರಮಂಗಲ ಬಳಿ ಬಸ್ಸಿನಲ್ಲಿ ಸಿಕ್ಕಿದ ಲೇಡೀಸ್ ಪರ್ಸನ್ನೆತ್ತಿ ಕಂಡಕ್ಟರ್ ಗೆ ಕೊಟ್ಟಿದ್ದೆ. ಆದರೆ ಆ ಪರ್ಸು ಸರಿಯಾದ ವ್ಯಕ್ತಿಗೆ ತಲುಪಿತೋ ಇಲ್ಲವೋ ಗೊತ್ತಿಲ್ಲ. ಇದೊಂದು ಉದಾಹರಣೆ ಅಷ್ಟೆ. ಎಲ್ಲರೂ ಕೂಡ ತಮ್ಮ ವಸ್ತು ಕಳೆದು ಹೋದಾಗ ಉದಾಸೀನ ಮಾಡದೆ ಕೊನೆಯ ಪ್ರಯತ್ನವಾಗಿ ಕಂಡಕ್ಟರ್ ಬಳಿ ವಿಚಾರಿಸಿದರೆ, ಕಳೆದು ಹೋದ ವಸ್ತು ಸಿಕ್ಕಿದರೂ ಸಿಗಬಹುದು.

  • Login or register to post comments
  • link
  • Email this ಪ್ರತಿಕ್ರಿಯೆ
January 12, 2008 - 8:49pm — muralihr

ಉ: ಆತ

muralihr's picture

ನಿಮ್ಮ ವಸ್ತು ಕಳೆದಾಗ ನೀವು ದೇವರಲ್ಲಿ ಮೊರೆಯಿಟ್ಟ ಮ೦ತ್ರವನ್ನು ಹೇಳುವರಾಗಿ . ನನ್ನ ಕೆಲವು ಪುಸ್ತಕಗಳು ಕಳೆದು ಹೋಗಿದೆ.
ಸಿಗುವ ಭರವಸೆ ಇರಲಿಲ್ಲಾ.. ನಿಮ್ಮ ಕತೆ ಓದಿದ ನ೦ತರ ಭರವಸೆ ಮೂಡಿದೆ. ನಾನು ದೇವರಲ್ಲಿ ಮೊರೆ ಯಿಟ್ಟೂ ಪ್ರಯತ್ನ ಮಾಡ್ತೀನಿ..
ಯಾವ ದೇವರ ಹತ್ರಾ ಮೊರೆಯಿಡಬೇಕು .. ಯಾವ ರೀತಿ .. ಯಾವ ವ್ರತವನ್ನು ಆಚರಣೆ ಮಾಡಬೇಕು ..ಎಲ್ಲಾ ತಿಳಿಸಿ...

  • Login or register to post comments
  • link
  • Email this ಪ್ರತಿಕ್ರಿಯೆ
January 14, 2008 - 10:57am — ASHMYA

ಉ: ಆತ

ASHMYA's picture

ಬದುಕು ಬರಡಾಗದಿರಲಿ..........

ನಂಬಿಕೆ,ಜೊತೆಯಲ್ಲಿ ಪ್ರಯತ್ನ ಇದ್ದರೆ ಖಂಡಿತ ಸಿಗುತ್ತೆ...ದೇವರು ಯಾವುದಾದರೇನು?

  • Login or register to post comments
  • link
  • Email this ಪ್ರತಿಕ್ರಿಯೆ
March 28, 2008 - 1:33pm — SURESH BHAT 79

ಉ: ಆತ

SURESH BHAT 79's picture

ಒಂದು ಸಣ್ಣ ಸಂಶಯ.....ನಿಮ್ಮ ಪರ್ಸ್ ಬಸ್ ನಲ್ಲಿ ಬಿದ್ದು ಹೋಗಿತ್ತೂಂತ ಗೊತ್ತಾಯ್ತು .....ನೀವು ಬಸ್ ಸ್ಟ್ಯಾಂಡ್ ನಲ್ಲಿ ಕುಡಿದ ಕಾಫಿ ಹಣ ಮತ್ತೆ ಆಟೋದವನಿಗೆ ಹಣ ಯಾರು ಕೊಟ್ರು...?

  • Login or register to post comments
  • link
  • Email this ಪ್ರತಿಕ್ರಿಯೆ
March 28, 2008 - 2:07pm — ASHMYA

ಉ: ಆತ

ASHMYA's picture

ನನ್ನ ಗೆಳತಿಯ ಪರ್ಸ್ ಇತ್ತಲ್ಲ ಸರ್,ಬಿದ್ದು ಹೋಗಿದ್ದ ಪರ್ಸ್ ನನ್ನದು.ಚಿಲ್ಲರೆ ದುಡ್ಡು ಮತ್ತು ಕಾರ್ಡ್ಗಳು ನನ್ನ ಪರ್ಸಲ್ಲಿ,ಜಾಸ್ತಿ ದುಡ್ಡು ಅವಳ ಪರ್ಸಲ್ಲಿ ಇಡ್ತಿದ್ವಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನಸು
  • ಕರ್ನಾಟಕ ನೀರಿಗೆ ದುಡ್ಗು ಕೊಡಬೇಕಂತೆ!!!
  • ಭಾವನ ತ೦ಗಿ!
  • ನಾವು ಮಾಡಿದವರು ನಮಗೆ (ಎಡರೊತ್ತಿನಲ್ಲಿ) ಆಗಲ್ಲ - ತಿಳಿವು/ನೀತಿ
  • ವಚನಚಿಂತನ: ೧೧ : ಮಲಗುವುದು ಅರ್ಧ ಮಂಚ!
Syndicate content

ಲೇಖಕರು

ASHMYA's picture

ಪೂರ್ಣ ಹೆಸರು
Ashmya

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
  • ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್
  • ತೆರೆದ ಕಣ್ಣು
  • ಅನುಭವ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸುಭಾಷಿತಗಳು
    May 12, 2008 - 2:57am
  • kannadakanda
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 2:47am
  • hpn
    ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
    May 12, 2008 - 1:00am
  • hpn
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:52am
  • hpn
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 12, 2008 - 12:48am
  • hamsanandi
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 12:20am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 12:09am
  • ಗಣೇಶ
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 11, 2008 - 11:33pm
  • ವೈಭವ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 11, 2008 - 8:45pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 11, 2008 - 8:29pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator