ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಆತ್ರಾಡಿ ಸುರೇಶ ಹೆಗ್ಡೆ
ಪರಿಚಯ
ಇಲ್ಲಿ ನನ್ನ ಬರಹಗಳೇ ನೀಡಲಿ ಪರಿಚಯ,
ಆಸುಮನದಲ್ಲಿದೆ ನನ್ನ ಪೂರ್ಣ ಪರಿಚಯ;
ಆಸುಮನ (http://athradi.wordp...);
ನಾವು ಅರಳಿಸಲೆತ್ನಿಸಿದಾಗ ಅರಳುವುದಿಲ್ಲ ಹೂವು,
ಅನ್ಯರು ಕೆರಳಿಸಲೆತ್ನಿಸಿದಾಗ ಕೆರಳುವುದಿಲ್ಲ ನಾವು.
ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
ಅವನು - ಅವರು
ನೀನು - ನೀವು
ಮನುಜ
ಮನುಜರ
ನಡುವೀ
ಏಕವಚನ
ಬಹುವಚನಗಳ
ಗೊಂದಲವದೇಕೆ?
ಬಹುವಚನದಲೇ
ಗೌರವ
ಅಡಗಿಹುದಾದರೆ
ಆ ದೇವರಿಗೆ
ಅಗೌರವವದೇಕೆ?
ದೇವರನ್ನು
ಹೆಚ್ಚಿನೆಲ್ಲಾ
ಮನುಜರೂ
ಏಕವಚನದಲ್ಲೇ
ಸಂಬೋಧನೆ
ಮಾಡುತ್ತಿರುವುದನ್ನು
ಮರೆತಿರುವರೇಕೆ?
ಮಂತ್ರಿ
ಮಹೋದಯರನ್ನು
ಬೆನ್ನ ಹಿಂದೆ
ನಾವೆಲ್ಲಾ
ಏಕವಚನದಲೇ
ನೆನಪಿಸಿಕೊಳ್ಳುವುದೇಕೆ?
*****
ಆತ್ರಾಡಿ ಸುರೇಶ ಹೆಗ್ಡೆ
- asuhegde's blog
- Login or register to post comments
- 688 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
ಕರ್ನಾಟಕದ ರಾಮ ತಮಿಳುನಾಡಿನಲ್ಲಿ ರಾಮರ್
ಕರ್ನಾಟಕದ ಆಂಜನೇಯ ತಮಿಳುನಾಡಿನಲ್ಲಿ ಆಂಜನೇಯರ್
ಅವರವರ ಭಾವ ಬಕುತಿ ಅಷ್ಟೆ ಮರ್ಯಾದೆ ಇಲ್ಲ ಎಂದಲ್ಲವಲ್ಲ
ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
ತಾಯಿಯ ಮೇಲೆ ಗೌರವಕ್ಕಿಂತಲೂ ಪ್ರೀತಿ ಹೆಚ್ಚು. ಅದಕ್ಕೆ ತಾಯಿಯನ್ನು ಏಕವಚನದಲ್ಲಿ ಕರೆಯುವುದು. ದೇವರ ಮೇಲೆ ಪ್ರೀತಿಯಿದ್ದರೆ (ಭಕ್ತಿಯಿದ್ದರೆ) ಏಕವಚನದಲ್ಲಿ ಕರೆಯುವುದರಲ್ಲಿ ತಪ್ಪೇನು? ಇದರ ಮೇಲೆ ಯಾರೋ ಹೇಳಿದಂತೆ 'ಅವರವರ ಭಾವಕ್ಕೆ ತಕ್ಕಂತೆ'.
ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
ವ್ಯಾಜ ನಿಂದೆ, ವ್ಯಾಜ ಸ್ತುತ್ಯಲಂಕಾರಗಳಿಗೆ ಉದಾಹರಣೆ ಇದರಲ್ಲಿ ಹುಡುಕಬಹುದೇ?
ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
<ಮಂತ್ರಿ ಮಹೋದಯರನ್ನು ಬೆನ್ನ ಹಿಂದೆ ನಾವೆಲ್ಲಾ ಏಕವಚನದಲೇ ನೆನಪಿಸಿಕೊಳ್ಳುವುದೇಕೆ?>
ಅವರವರು ಮಾಡಿರುವ ಘನ ಕಾರ್ಯಗಳಿಗೆ ಅನುಗುಣವಾಗಿ ಅವರನ್ನು ನೆನಪಿಸಿಕೊಳ್ಳುವುದು... ;)
ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
:)
ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
ಅಮ್ಮ ಎನ್ನುವ ವ್ಯಕ್ತಿಯಷ್ಟು ಆಪ್ತರು ಬೇರೆ ಯಾರು ಇರಲು ಸಾಧ್ಯ ? ಮತ್ತೊಬ್ಬ ಅಮ್ಮ ಎನ್ನುವ ಪದವಲ್ಲದೇ ! ಅವಳನ್ನು ಏಕವಚನದಲ್ಲಿ ಸಂಭೋದಿಸಲು ನನಗೆ ಬಹಳ ಇಷ್ಟ. ಆದರೆ ನಮ್ಮ ತಂದೆಯವರನ್ನು ಹಾಗೆ ಕರೆಯಲು ಕಷ್ಟಪಡಬೇಕಾಗಿತ್ತು. ಒಟ್ಟಿನಲ್ಲಿ ಹೃದಯಕ್ಕೆ ಅಂಟಿದ ಸಂಬಂಧ ಆ ಮಾತೆಗೆ ಮಾತ್ರ ಸೀಮಿತ. ಇನ್ನು ಒಂದಕ್ಷರವನ್ನೂ ಉಪಯೋಗಿಸಬಾರದೇಕೆ ? ಮಾ, ಎನ್ನಬಹುದಲ್ಲವೇ?
ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
ಪ್ರೀತಿ ಜಾಸ್ತಿಯಿದ್ದಲ್ಲಿ ಏಕವಚನ ಸಾಮಾನ್ಯ.
ಹೌದು ಅವರವರ ಭಾವಕ್ಕೆ ಅವರವರ ಭಕುತಿಗೇ,
ಅವರವರ ತೆರನಾಗಿ.......
ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
ಅದಕ್ಕೇ ಸ್ವಾಮೀ, ಆ ಪ್ರೀತಿ ಜಾಸ್ತಿಯಾಗಿರುವುದಕ್ಕೇ, ನಮ್ಮ ದೇವೇಗೌಡರು ಯಡ್ಯೂರಪ್ಪನವರನ್ನು ಏಕವಚನದಲ್ಲಿ ಕರೆಯುವುದು, ಜೊತೆಗೆ ವಿಶೇಷ `ಹೊಗಳಿಕೆ' ಪದಗಳನ್ನು ಉದುರಿಸುವುದು. ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಪ್ರತಿಯೊಬ್ಬರನ್ನೂ ಏಕವಚನದಲ್ಲೇ ಸಂಬೋಧಿಸುತ್ತಿದ್ದುದು.
ಬಂ, ಗುಂ, ಮೂಗಿಲಿ, ಮ್ಯಾಗಿ, ಇತ್ಯಾದಿ..