ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು...

ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು
ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ ಗೌಡಾರ ಆಡಳಿತವೇ ಇಂದು

ಅಂದು ದೇವೇಗೌಡರ ನಂತರ ಅವರ ಮಗ ಕುಮಾರ ಗೌಡಾ
ಹಾಗೀಗ ನಮ್ಮ ಯಡ್ಯೂರಪ್ಪನವರೂ ಆಗಿಲ್ಲವೇ ಹೇಳಿ ಗೌಡಾ

ಗೌಡರ ಮಕ್ಕಳೀ ಹೊಸಾ ಗೌಡಾರಿಗೆ ಅದೆಲ್ಲಿ ಗೌರವ ಕೊಡುತ್ತಾರೆ
ಆದರೆ ರಾಜ್ಯದ ಉದ್ದಗಲಕ್ಕೂ ಜನ ಇವರನ್ನು ಗೌಡಾ ಅನ್ನುತ್ತಾರೆ

ನಮ್ಮ ಗೃಹಮಂತ್ರಿಯನ್ನು ಎಲ್ಲ ಡಾಕ್ಟರ್ ಡಾಕ್ಟರ್ ಕರೆಯುತ್ತಾರೆಂದು
ನಮ್ಮ ಮುಖ್ಯಮಂತ್ರಿಗಳು ಪಡೆದಿದ್ದಾರೆ ಗೌರವ ಡಾಕ್ಟರೇಟು ಇಂದು

ನಾವು ಗೃಹಮಂತ್ರಿಯನು ಡಾ. ವಿ. ಎಸ್. ಆ. ಎಂದು ಕರೆಯುವಂತೆ
ಮುಖ್ಯಮಂತ್ರಿಯನ್ನು ಡಾ. ಬಿ.ಎಸ್. ವೈ. ಎಂದು ಕರೆಯಬಹುದಂತೆ

ನಮ್ಮ ಗೃಹಮಂತ್ರಿ ರೋಗಿಗಳ ನಾಡಿ ಬಡಿತವನ್ನು ಅರಿಯುವಂತೆ
ನಮ್ಮ ಮುಖ್ಯಮಂತ್ರಿಗಳು ಜನರ ಮಿಡಿತವನ್ನು ಅರಿಯಬೇಕಂತೆ

ಅವರು ಗಮನ ಕೊಡುತ್ತಿರಲಿ ರಾಜ್ಯದ ಸುರಕ್ಷೆಯ ಆರೋಗ್ಯದತ್ತ
ಇವರು ಗಮನ ನೀಡಲಿ ಜನರಿಗೆ ನೆಮ್ಮದಿಯ ಜೀವನ ನೀಡುವತ್ತ
- ಆಸು ಹೆಗ್ಡೆ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು...

asuhegde's picture

ಅಶೋಕ್ ಕುಮಾರ್ ಉಪಯೋಗಿಸಿದ ಗೌ ಡಾ ಪದದಿಂದ ಸ್ಪೂರ್ತಿಗೊಂಡು ರಚಿಸಿದ ಬರಹ ಇದು.
ಅಶೋಕ್ ರಿಗೆ ಧನ್ಯವಾದಗಳು.

- ಆಸು ಹೆಗ್ಡೆ

ಉ: ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು...

ASHOKKUMAR's picture

ಹೌದು ಡಾ. ಯೆಡ್ಯೂರಪ್ಪ ಜನರ ನಾಡಿಮಿಡಿತ ಅರಿತು ಆಡಳಿತ ನಡೆಸಲಿ

ಗೌ ಡಾ ದಿಂದ ಸ್ಪೂರ್ತಿ ಪಡೆದದ್ದು ಓದಿ ನನ್ನಲ್ಲೂ ಸ್ಪೂರ್ತಿ ಬಂತು---ಹಾಗಾಗಿ ಈ ಜವಾಬು :)

*ಅಶೋಕ್