ಹಾಗೆ ಸುಮ್ಮನೆ...
ಹೇಳ್ಕೊಳಕ್ಕೊಂದೂರು, ತಲೆಮ್ಯಾಗೆ ಒಂದ್ಸೂರು, ಮಲ್ಕೊಳಕ್ ಭೂಮ್ತಾಯಿ ಮಂಚ....
ತಲೆಯಲ್ಲಿ ಒಂದ್ ಯೋಚ್ನೆ, ಪದಗಳಲ್ಲಿ ಮೂಡ್ದಾಗ, ಅಲ್ಲೊಂದು ಸುಮ್ನೆ ಪರ್ಪಂಚ...
"ಮೃತರ ಆತ್ಮಕ್ಕೆ ಶಾಂತಿ ಸಿಗಲಿ!"
ಇವತ್ತು "ಗುಡ್ ಫ್ರೈಡೆ". "ಏಸು" ತನ್ನ ಶರೀರವನ್ನು ತ್ಯಜಿಸಿದ ದಿನ. ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಸತ್ತವರಿಗೆ ಸಲ್ಲುವ ಗೌರವವನ್ನು ಕುರಿತು ಸ್ವಲ್ಪ ಚಿಂತಿಸೋಣ.
ನಮ್ಮ ದೇಶದಲ್ಲಿ ಯಾವ ಗಣ್ಯವ್ಯಕ್ತಿ ಸತ್ತರೂ ರಜೆ ಕೊಡ್ತಾರೆ. ನಮ್ಮ ಸಾವಿರಾರು ರಾಜಕಾರಣಿಗಳು ಕೆಲಸ ತಪ್ಪಿಸೋದನ್ನೇ ಕಾಯ್ತಾ ಇರ್ತಾರೆ. ಆದರೆ ಇಂಗ್ಲೆಂಡಿನಲ್ಲಿ "ಎಡಿಸನ್"ರವರು ಸತ್ತಾಗ ಅವರ ಗೌರವಾರ್ಥ ಒಂದು ನಿಮಿಷ ವಿದ್ಯುತ್ ನಿಲುಗಡೆಯಾಗಿತ್ತು! ಜಪಾನ್ ಕಾರ್ಮಿಕರು ಎರಡು ಗಂಟೆ ಹೆಚ್ಚಗೆ ದುಡಿದರು! ಒಂದು ನಿಮಿಷ ಸಲ್ಲಿಸಿದ ಗೌರವಕ್ಕೆ ಹೆಚ್ಚು ಬೆಲೆ.
"ದೇಶಕ್ಕೆ ತುಂಬಲಾರದ ನಷ್ಟವಾಗಿದೆ", "ಮೃತರ ಆತ್ಮಕ್ಕೆ ಶಾಂತಿ ಸಿಗಲಿ", ಮುಂತಾದ ನೂರೆಂಟು ಮಾತುಗಳನ್ನಾಡಬಹುದು. ಆದರೆ ಮಹಾತ್ಮರ ಕನಸು ನನಸಾಗುವುದು, ನಾವು ಅವರು ನಡೆದ ದಾರಿಯಲ್ಲಿ ನಡೆದಾಗ, ಅವರ ಧ್ಯೇಯವನ್ನು ಪಾಲಿಸಿದಾಗ, ಅವರ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಾಗ ಮಾತ್ರ.

- bachi ರವರ ಬ್ಲಾಗ್
- Login or register to post comments
- 168 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: