ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › benaka ರವರ ಬ್ಲಾಗ್

ಕನ್ನಡಪುಟ

ಪುಟವಿಡಲು ನುಡಿಯೇನು ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ!

೯. 'ಕ್ಯೂಶೂ'ನಲ್ಲಿ ಕನ್ನಡ!

November 5, 2006 - 1:26am — benaka
ನನ್ನ ಜಪಾನ್ ಪ್ರವಾಸ - ೯. 'ಕ್ಯೂಶೂ'ನಲ್ಲಿ ಕನ್ನಡ!
------------------------------

ಸರಿ, ಹೊಸ ಜಪಾನಿನ ಜೀವನ ಶೈಲಿ ನನಗರ್ಥವಾಯಿತು! ಜೊತೆಗೆ ಬಾಬಾ ಭಕ್ತ ಅಸಾಮಿಯೂ ಇದ್ದುದರಿಂದ ಹೇಗೋ ಕಾಲ ತಳ್ಳುತ್ತಿದ್ದೆ. ಆದರೂ ಒಂದು ತಿಂಗಳ ಕಾಲ ಕನ್ನಡ-ಇಂಗ್ಲಿಷ್-ಹಿಂದೀ ಗಳ ಸಹವಾಸವೇ ಇಲ್ಲದೆ ಜಪಾನೀ ಭಾಷೆಯಲ್ಲಿ ಮಾತ್ರ ಮಾತುಕತೆ ನಡೆಯಿತು. ಅಬ್ಬ! ಅಂತಹ ಕಷ್ಟ ಅನುಭವಿಸಿದವನಿಗೇ ಗೊತ್ತು! ಏಕೆಂದರೆ ಜಪಾನೀಭಾಷೆಯಲ್ಲಿ ನನಗೆ ತಿಳಿದದ್ದು ಅಲ್ಪ-ಸ್ವಲ್ಪ ಮಾತ್ರ; ಅದೂ ತೋಕಿಯೋದ 'ಶುದ್ಧ' ಭಾಷೆ. ಇಲ್ಲಿಯೋ, ಅಸಾಮಿಯ 'ಓಸಾಕಾಬೆನ್' ಹಾಗೂ ಇತರರ 'ಕ್ಯೂಶೂಬೆನ್' ನುಡಿಭೇದಗಳನ್ನೇ ಕೇಳಿ ಕೇಳಿ ನನಗೆ ಜಪಾನೀಭಾಷೆ ಬರುತ್ತದೆಯೇ ಎಂದೇ ಸಂದೇಹವಾಗುತ್ತಿತ್ತು! ಬಹುಶಃ ಬೆಂಗಳೂರಿನಲ್ಲಿ ಕನ್ನಡ ಕಲಿತ ವಿದೇಶೀಯನೊಬ್ಬ ಮಂಗಳೂರಿಗೆ ಹೋಗಿ ಹುಬ್ಬಳ್ಳಿಯ ಕನ್ನಡಿಗರೊಂದಿಗೆ ಮಾತನಾಡಿದಂತಾಗಿತ್ತು ನನ್ನ ಸ್ಥಿತಿ! ಮಂಗಳೂರು ಎಂದಾಗ ನೆನಪಿಗೆ ಬಂತು ನೋಡಿ; ಇಲ್ಲಿ ನಾನು ಪ್ರತಿದಿನ ಅನ್ನ ಕೊಳ್ಳುತ್ತಿದ್ದ 'ಕೊಂಬಿನಿ'ಯಲ್ಲೊಮ್ಮೆ ಎಂದಿನಂತೆ ಅನ್ನ, ಸಿಹಿಮೊಸರು ಕೊಂಡು ಅಸಾಮಿಯೊಡನೆ ಹೊರಬರಲು ತಿರುಗಿದಂತೆಯೇ, ಮೀಸೆ ಬಿಟ್ಟ ಕೆಂಗೂದಲ ಜಪಾನೀಯನೊಬ್ಬ ಕಣ್ಣಿಗೆ ಬಿದ್ದ. ನಮ್ಮಪ್ಪ ಹೇಳುತ್ತಿದ್ದ ರಾಗಿ ಮುದ್ದೆ ಬಗೆಗಿನ ನಾಣ್ಣುಡಿ ನೆನಪಾಗಿ ಅದು ಆಶು-ಅಣಕವಿತೆಯಾಗಿ ಆಗಲೇ ನನಗೆ ನಗೆಬುಗ್ಗೆಯುಕ್ಕಿಬಂತು!

ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ ! ಹಿಟ್ಟಂ ಬಿಟ್ಟಂ ಕೆಟ್ಟಂ! ಇದು ಹಳೇ ಮೈಸೂರಿನ ಬಾಯಿಪಾಠಂ!
ಆದರೆ ಜಪಾನಿನಲ್ಲಿ ಮೀಸೆ ಬಿಟ್ಟಂ, ಕೆಟ್ಟಂ! ಇದು ನನಗೆ ಜಪಾನೀ ಗುರುಗಳ ಪಾಠಂ!

ಮೀಸೆ ಬಿಟ್ಟವರೆಲ್ಲ ಕಳ್ಳಕಾಕರೆಂದುಕೊಳ್ಳುವ ಜಪಾನಿನಲ್ಲಿ ಇವನಾವನೋ ಮೀಸೆ ಬಿಟ್ಟಿದ್ದಾನಲ್ಲಪ್ಪ! ಎಂದು ಅಚ್ಚರಿಗೊಂಡು ಹಲಸಿಗೆ ಹಬ್ಬಿದ ಹುಲುಸಾದ ಕಸ್ಕ್ಯೂಟ ಕಳ್ಳಿ-ಬಳ್ಳಿಯಂತಿದ್ದ ಅವನ ಮೀಸೆಯನ್ನೇ ನೋಡುತ್ತಾ, ಬೋಳಿಸುವ ಮೊದಲು ಬೆಳೆದಿದ್ದ ನನ್ನ ಮೀಸೆಯ ನೆನಪಾಯಿತು. ಅವನನ್ನೇ ವಿಚಿತ್ರವಾಗಿ ನೋಡುತ್ತಾ ಮುನ್ನಡೆದಂತೆ, ಅವನ ಕೈಲಿದ್ದ ಒಂದಷ್ಟು ಕಾಗದಗಳತ್ತ ಕಣ್ಣು ಹರಿಯಿತು. ದಪ್ಪ ಅಕ್ಷರಗಳ ಕೈಬರಹದಲ್ಲಿ ಬರೆದಿದ್ದುದು ಕನ್ನಡ! ಪಂಪನ "ಆರಂಕುಶಮಿಟ್ಟೊಡಂ...", ನಾರಣಪ್ಪನ "ಜವನ ಮೀಸೆಯ ಮುರಿದನೋ..", ನೃಪತುಂಗನ "ಕಾವ್ಯಪ್ರಯೋಗಪರಿಣತಮತಿಗಳ್.." ಎಲ್ಲವೂ ಒಮ್ಮೆಲೇ ಕಿವಿಯಲ್ಲಿ ಮೊರೆದಂತೆ, ಕಣ್ಮುಂದೆ ಕನ್ನಡತಾಯಿ ಭುವನೇಶ್ವರಿಯೇ ಬಂದಂತಾಗಿ, ಕರ್ನಾಟಕ ಹೃದಯಶಿವನ ಮೂರ್ತಿ ಕನ್ನಡಡಿಂಡಿಮವನ್ನೇ ಬಾರಿಸುತ್ತಿರುವಂತೆ ಭಾಸವಾಗಿ ಅರೆಕ್ಷಣ, ಕಣ್ಕತ್ತಲಿಟ್ಟಿತು!

ನಾನೆಲ್ಲಿದ್ದೇನೆಂಬುದನ್ನೇ ಮರೆತುಹೋಗಿ, ಜೋರಾಗಿ "ಕನ್ನಡ! ಕನ್ನಡ! ಇದು ನನ್ನ ಭಾಷೆ ಕನ್ನಡ!" ಎಂದು ಕೂಗಿದೆ!

ಮೀಸೆಯವನು ಬೆಚ್ಚಿ ತಿರುಗಿನೋಡಿದ; ಅಸಾಮಿ ಗಾಬರಿಯಿಂದ ಏನಾಯ್ತು ಎಂದ!

ನಾನು "ಅಸಾಮಿ ಸಾನ್! ಕೊರೆವ ವತಾಶಿನೊ ಬೊಕೊಕುಗೊನೊ ಕನ್ನದಗೊ ದೇಸುಯೋ!" [ಅಸಾಮಿಯವರೇ, ಇದು ನನ್ನ ತಾಯ್ನುಡಿ ಕನ್ನಡಭಾಷೆ ಕಣ್ರೀ!] ಎಂದೆ!

ಅಲ್ಲಿದ್ದವರೆಲ್ಲ ನನ್ನ ಮಾತಿಗೆ ಅಚ್ಚರಿಗೊಂಡು ಅವನ ಕೈಲಿದ್ದ ಕಾಗದವನ್ನು ಬಗ್ಗಿ ಬಗ್ಗಿ ನೋಡಲಾರಂಭಿಸಿದರು! ಆ ಮೀಸೆಯವನು ಆ ಕಾಗದದ ಪ್ರತಿಯೊಂದನ್ನು ನನ್ನ ಕೈಲಿಟ್ಟು ಓದಿ ನೋಡಿ ಎಂದ. ಶುದ್ಧ ಕನ್ನಡದಲ್ಲಿ ಕೈಬರಹದಲ್ಲಿ ಬರೆದಿದ್ದುದು ಇಷ್ಟೇ : 'ರುಚಿಯಾದ ಆಹಾರ'! ಮಿಕ್ಕೆಲ್ಲವೂ ಜಪಾನೀ ಭಾಷೆಯಲ್ಲಿತ್ತು! ಅದು 'ಗಣೇಶ' ಎಂಬ ಉಪಾಹಾರಮಂದಿರದ ಮೆನು ಅಥವಾ ತಿಂಡಿಪಟ್ಟಿ! ಇದು ನಿಮಗೆಲ್ಲಿ ಸಿಕ್ಕಿತೆಂದು ಕೇಳಿದೆ; ಅವನು ಆ 'ಗಣೇಶಭವನ'ದಲ್ಲಿ ಕೆಲಸ ಮಾಡುವವನಂತೆ! ತಿಂಡಿಪಟ್ಟಿಯ ನೆರಳಚ್ಚು ತೆಗೆಸಲು ಕೊಂಬಿನಿಗೆ ಬಂದವನಂತೆ. ಅದರ ಯಜಮಾನ ಮಂಗಳೂರಿನವನಂತೆ! ನಾನು ಕನ್ನಡಿಗನೆಂದ ಮೇಲೆ ಕಾಗುಣಿತ ಸರಿಯಿದೆಯೇ ನೋಡಿ ಎಂದ! ಕನ್ನಡ ಕಂಡ ಆನಂದದಲ್ಲಿ ಸರಿಯೆಂದುಬಿಟ್ಟೆ! ನಿಜವಾಗಿ 'ಯ'ಕಾರದ ಇಳಿ ಇರಬೇಕಿತ್ತು; ಇದ್ದದ್ದು 'ರುಚಿಯದ ಆಹಾರ' ಎಂದು! ಆ ಗಣೇಶಮಂದಿರದ ವಿಳಾಸ ಅದರಲ್ಲೇ ಇದ್ದುದರಿಂದ ಸಮಯವಾದರೆ ಬನ್ನಿ ಎಂದು ಹೊರಟ! ಕನ್ನಡದ ಕಂಪು ಜಪಾನಿನಲ್ಲಿಯೂ ಪಸರಿಸಿದೆಯೆಂದು ತಿಳಿದು ನನಗೆ ಕಣ್ಣು ತುಂಬಿ ಬಂತು!

"ಶಾರದೆ! ನಾನು ನಿನ್ನ ನಾಡನ್ನು ಬಿಟ್ಟೆ; ನೀನು ನನ್ನನ್ನು ಬಿಡಲಾರದೆ ಹುಡುಕಿಕೊಂಡು ಬಂದೆಯೇನು?! ಧನ್ಯನಾದೆ!" ಎಂದುಕೊಂಡೆ.

ಕ್ಯೂಶೂದ್ವೀಪದ ಕೊಕುರಾದಲ್ಲಿನ ಆ 'ಗಣೇಶಭವನ'ಕ್ಕೆ ನಾನು ಹೋಗಲಾಗಲಿಲ್ಲ. ಅದು ಮಾಂಸಾಹಾರಿ ಉಪಾಹಾರಗೃಹವೆಂಬುದು ಒಂದು ಕಾರಣ; ಜೊತೆಗೆ ಸಮಯವೂ ಇರಲಿಲ್ಲ; ಅಸಾಮಿಗೆ ಬೇಕಿರಲಿಲ್ಲ -

"ನೀನು ತಿನ್ನುವುದು ಅಲ್ಲೇನೂ ಇಲ್ಲವೆನಿಸುತ್ತದೆ - ಸಮೋಸ ಒಂದು ಬಿಟ್ಟು" ಎಂದ.

ನಾನು ತಿಂಡಿಪಟ್ಟಿಯನ್ನೋದಿದೆ; ಹೌದೆನಿಸಿತು. ಸಮೋಸ ಒಂದಕ್ಕೆ ೬೦೦ ಯೆನ್ ಎಂದು ಓದುತ್ತಲೇ, ನಿಡುಸುಯ್ದು, ಜೋಪಾನವಾಗಿ ತಿಂಡಿಪಟ್ಟಿಯನ್ನು ಮಡಚಿ ಒಳಗಿಟ್ಟುಕೊಂಡು, ಕೋಣೆಗೆ ಹೆಜ್ಜೆ ಹಾಕಿದೆ. ಮರುದಿನವೇ ಕ್ಯೂಶೂನಲ್ಲಿನ ಕೆಲಸ ಮುಗಿಸಿ ಓಸಾಕಾಗೆ ಮರಳಬೇಕಿತ್ತು - ನನ್ನ ಕೋಣೆಗೆ! ಸಂತಸಗೊಂಡೆ! ರಾತ್ರಿಯೆಲ್ಲ ಕನ್ನಡದ ಕನಸು! ಮುದ್ದಾದ ಸಿರಿಗನ್ನಡದ ಅಕ್ಷರಗಳನ್ನು ನೋಡಿಯೇ ಇಷ್ಟು ಆನಂದವಾಗಬೇಕಾದರೆ, ಎಂಥ ಶಕ್ತಿಯಿರಬೇಕು ಈ ಭಾಷೆಗೆ! ಮಂಪರಿನಲ್ಲೂ ಕನ್ನಡದ ಗುನುಗು! ಮುದ್ದಣ ಮನೋರಮೆಯರ ರಸಮಯ ಸಂಭಾಷಣೆಯಿಂದ ಹಿಡಿದು ಕೈಲಾಸಂ ಕಂಗ್ಲಿಷ್ ನಾಟಕಗಳವರೆಗೆ ಏನೇನೋ ನೆನಪಾಯಿತು! ಹಿಂದಿನವರ ಸಂತಸಮಯ ಬದುಕೂ ನಮ್ಮ ಈಗಿನ ಯಾಂತ್ರಿಕ ಬದುಕೂ ಎಷ್ಟು ವ್ಯತ್ಯಸ್ತವೆನಿಸಿತು.

ಅದಕ್ಕಲ್ಲವೇ ಗುಂಡಪ್ಪನವರು ಹೇಳಿದ್ದು ...ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸೆ ಸೊಗಸು ಜೀವನವು ಮಂಕುತಿಮ್ಮ....! ಹೌದು; ಆದರೆ ಈಗ ಇಲ್ಲಿ ಅದು ನಡೆಯದೋ ತಮ್ಮ! ಮುಸುಕೆಳೆದು ಮಲಗಿದೆ; ಕನಸಲಿ ಬಂದುದು ಅಮ್ಮ!

* * *

(ಮುಂದಿನ ಬಾರಿ: ರೈಲಿನ ರಾಜ್ಯ!)

~.~
  • benaka ರವರ ಬ್ಲಾಗ್
  • Login or register to post comments
  • 1471 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 5, 2006 - 1:31am — benaka

ನನ್ನ ಜಪಾನ್ ಪ್ರವಾಸ - ೯. 'ಕ್ಯೂಶೂ'ನಲ್ಲಿ ಕನ್ನಡ

benaka's picture

ಗೆಳೆಯರೇ,
ನನ್ನ ಜಪಾನ್ ಪ್ರವಾಸ - ೯. 'ಕ್ಯೂಶೂ'ನಲ್ಲಿ ಕನ್ನಡ ನಿಮ್ಮ ಮುಂದಿದೆ.
ನನ್ನ ಜಪಾನ್ ಪ್ರವಾಸ - ೧೦. ರೈಲಿನ ರಾಜ್ಯ ಇಷ್ಟರಲ್ಲೇ ಬಲೆಯೇರಲಿದೆ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಹಳ್ಳಿ
  • ಕನಸ್ಸು
  • ಓ ನನ್ನ ಜೀವವೇ
  • ಕೆಂಡದ ದಾರಿಯ ಪಯಣ
Syndicate content

ಲೇಖಕರು

benaka's picture

ಪರಿಚಯ

ಹೊಯ್ಸಳರ ವೈಭವದಿ ಮೆರೆದು
ಪರಕೀಯರ ದಾಳಿಗೆ ಕೈಮುರಿದು
ದಂತವ ಎಡದ ಕೈಯಲಿ ಹಿಡಿದು
ನವಭಾರತವ ಕನ್ನಡದಿ ಬರೆಯೆ ಕಾದಿಹ ಬೆನಕ ಮೈಮುರಿದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶರಣರ ಸಾವನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
  • ಕುಮಾರವ್ಯಾಸ ಭಾರತ
  • ಬನವಾಸಿ ಆಸುಪಾಸಿನ ಕನ್ನಡ
  • ಬಾರೋ ಸಾಧನಕೇರಿಗೆ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 53 ಅತಿಥಿಗಳು ಆನ್ಲೈನ್ ಇರುವರು.


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator