ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ಬಾಳಿಗೊಂದು ನಂಬಿಕೆ
ಬಾಳಿಗೊಂದು ನಂಬಿಕೆ
ಇದು ಡಾ|| ಡಿ ವಿ ಜಿ ಅವರ ಲೇಖನಗಳ ಸಂಗ್ರಹ.
ಇದು ಅವರು ನೀಡಿದ ಭಾಷಣಗಳು, ಚರ್ಚೆಗಳು ಇದರಲ್ಲಿ ಇವೆ. ಬಹುಶಃ ಇದು ಅವರು ಕಗ್ಗ ಬರೆಯುದಕ್ಕಿಂತ ಮುಂಚೆ ಬರೆದಂತ ಕೃತಿ ಇರಬೇಕು.
ಸಾದ್ಯವಾದರೆ ಈ ಪುಸ್ತಕ ಕೊಂಡು ಓದಿ.

- betala ರವರ ಬ್ಲಾಗ್
- Login or register to post comments
- 339 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬಾಳಿಗೊಂದು ನಂಬಿಕೆ
DVಜಿ
ಬಗ್ಗೆ ಕೆಲವು ಮಾತಿದೆ.
ಎರಡನೇ ತಮಿಳು world conferance ಅಲ್ಲಿ ರಾಜಾಜಿ "Kannada is nothing but Tamil written in Telugu Script" ಎಂದು ಸಾರಿದುದನ್ನು, ಇವರು ಬೆಂಬಲಿಸಿ "ಹೌದು" ಅಂದಿದ್ದರಂತೆ. ( ತಮಿಳು ತಲೆಗಳ ನಡುವೆ )
ಕರ್ನಾಟಕ ಒಗ್ಗೂಡುವಿಕೆಯ ಹೊತ್ತಲ್ಲಿ "ಯಾಕೆ ಒಂದು ಕರ್ನಾಟಕ, ನಾಲ್ಕು ಕರ್ನಾಟಕವಾಗಲಿ" ಎಂದಿದ್ದರಂತೆ. ( ಉತ್ಥಾನ ಪತ್ರಿಕೆ )
ಬಿ.ಜಿ.ಎಲ್ ಸ್ವಾಮಿ ಅವರಿಗೆ "ನೀನೇನು ಕನ್ನಡದಲ್ಲಿ ಬರೆಯುವುದು ಬೇಡ. ಕನ್ನಡದಲ್ಲಿ ನಾನೊಬ್ಬ ಬರೆದುದು ಸಾಕು" ಅಂದಿದ್ದರಂತೆ. (ಹಸುರು ಹೊನ್ನು ಹೊತ್ತಗೆ)
- ಮಾಯ್ಸ !!
ಉ: ಬಾಳಿಗೊಂದು ನಂಬಿಕೆ
ಅಯ್ಯೋ ಡಿ.ವಿ.ಜಿ ಯವರಿಗೆ ರಾಜಾಜಿ ಅ೦ದರೆ ಸ್ವಲ್ಪ ಕೋಪ. ಕಾರಣ ಅವರು ಕರ್ನಾಟಕ ಸ೦ಗೀತವನ್ನು ಹೆಸರು ಬದಲಿಸಿ
ದಕ್ಷಿಣ ಭಾರತ ಸ೦ಗೀತ ಎ೦ದಿದ್ದ್ರ೦ತೆ. ರಾಜಾಜಿಯವ ಪ್ರಕಾರ ಕರ್ನಾಟಕ ಸ೦ಗೀತ ಕರ್ನಾಟಕದಲ್ಲಿ ಹುಟ್ಟಿಲ್ಲಾ ಎ೦ಬ ವಾದ.
ಅದಕ್ಕೆ ಅವರು ಸಾಕ್ಷಿಯ ಸಮೇತ ವಾದ ಮಾಡಿರುವುದು ಅವರ ಸಮಗ್ರ ಬರಹದಲ್ಲಿ ಓದಿದ್ದೆ.
ಡಿ.ವಿ.ಜಿ ಯವರ ಬರವಣಿಗೆ ಕನ್ನಡದಲ್ಲಿ ಎಲ್ಲಾ ವಿಷಯದ ಮೇಲಿದೆ.ಶಿಕ್ಷಣ, ಪತ್ರಿಕಾ ವ್ಯವಹಾರ, ಸರ್ಕಾರ,ಡೆಮೊಕ್ರಸಿ.
ಮೈಸೂರಿನ ದಿವನದಾಗಿದ್ದ ಮಿರ್ಜಾ ಇಸ್ಮೇಲ್ ರವರು ಅವರ ಆಪ್ತ ಸ್ನೇಹಿತರು. ಪ್ರಜಾಪಭುತ್ತ್ವ ದ ಬಗ್ಗೆ ಅವರಿಗೆ ನ೦ಬಿಕೆ ಇರಲಿಲ್ಲವ೦ತೆ.
ಆದರೆ ಡಿ.ವಿ.ಜಿ ಅವರನ್ನು ಒಪ್ಪಿಸಿ ಮೈಸೂರು ಸ೦ಸ್ಥಾನ ಸುಲಭವಾಗಿ ಭಾರತಕ್ಕೆ ಸೇರುವ೦ತೆ ಮಾಡಿದರ೦ತೆ.
ಆದರೆ ಸ್ವಾತ೦ತ್ರ್ಯ ನ೦ತರ ನಮ್ಮ ರಾಜ ಕರಣಿಗಳ ವ್ಯವಹಾರ ವನ್ನು ಕ೦ಡು ತೀರಾ ಬೇಸರಗೊ೦ಡು ತಮ್ಮ ಕೆಲಸಕ್ಕೆ
ತಾವೇ ಬೇಜಾರು ಮಾಡಿಕೊ೦ಡಿದ್ದರ೦ತೆ.
ಉ: ಬಾಳಿಗೊಂದು ನಂಬಿಕೆ
ಇವನ್ನೇ ಬೇರಾಗಿಟ್ಟುಕೊಂಡು ಡಿ.ವಿ.ಜಿ ಯವರನ್ನು ಕನ್ನಡ ಕೆಡುಕರು ಅನ್ನಲಾಗದು. ಅವರ ಯಾವ ಬರಹಾನೂ ನನಗಂತು ರುಚಿ ಕಂಡಿಲ್ಲ.
ಉ: ಬಾಳಿಗೊಂದು ನಂಬಿಕೆ
ಅಯ್ಯಾ
ಅವರು ಕನ್ನಡಕ್ಕೆ ಕೆಡುಕರು ಅಂತ ತೀರಾ ಅಂದುಕೊಳ್ಳುವುದು ಬೇಡಣ್ಣ.!! ಅದು ನನ್ನ ಅನಿಸಿಕೆಯೂ ಅಲ್ಲ.
ನಾನು ಅವರ ಬಗ್ಗೆ ಕೆಲವು ಹೊತ್ತಗೆಗಳಲ್ಲಿ ಬಂದ ಸಂಗತಿಯನ್ನು ಅರುಹಿದೆನು!
- ಮಾಯ್ಸ !!