ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ಮೂಡನಂಬಿಕೆ
ಮೂಡನಂಬಿಕೆ
೧. ಮನೆಯಿಂದ ಹೊರಗಡೆ ಹೋಗಬೇಕೆಂದಾಗ ಎಡವಿದರೆ , ನೀವು ಕುಳಿತು ಹೋಗಬೇಕಂತೆ .
೨. ನೀವು ಮನೆಯಿಂದ ಹೊರಗಡೆ ಹೋಗಬೇಕಾದರೆ, ಎದುರುಗಡೆ ಖಾಲಿ ಬಿಂದಿಗೆ ನೋಡಿದರೆ, ನಿಮ್ಮ ಕೆಲಸ ಆಗಲ್ವಂತೆ .
೩. ಬೆಕ್ಕು ಅಡ್ಡ ಬಂದರೆ, ನಿಂ ಕೆಲಸ ಎಡವಟ್ಟು.
೪. ಎಡ (ಬಲ) ಗಣ್ಣು ರೆಪ್ಪೆ ಬಡಿದರೆ, ಏನೊ ಆಪತ್ತು.
೫. ನೀವು ಎನೋ ಯೋಚನೆ ಮಾಡ್ತ ಇರ್ ಬೇಕಾದ್ರೆ , ಹಲ್ಲಿ ಕೂಗಿದರೆ ಅದು ಸತ್ಯ.... ಖಚಿತವಾಗಿ ನಡಿಯುತ್ತೆ !!
೬. ನಾಯಿ ಅತ್ತರೆ, ಯಾರಾದ್ರು ನೆಗೆದು ಬಿದ್ದು ನೆಲ್ಲಿಕಾಯಿ ಆಗ್ತರೆ.
೭. ಬೆಳಿಗ್ಗೆ ಎಡಗಡೆ ಎದ್ದರೆ , ಏಟು ತಿಂತಿಯಾ

- betala ರವರ ಬ್ಲಾಗ್
- Login or register to post comments
- 399 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಮೂಡನಂಬಿಕೆ
ಮೂಢ ನಂಬಿಕೆಗೆ ಪ್ರಚಾರವೇ? ಇದರಿಂದ ಲಾಭವಾಗುತ್ತದೆ ಎನ್ನುವ ಮೂಢನಂಬಿಕೆಯೂ ಇರಬಹುದು.
*ಅಶೋಕ್
ಉ: ಮೂಡನಂಬಿಕೆ
ನನಗೆ ಮೇಲಿನ ೩ನೇ ಪಾಯಿಂಟು ಎಷ್ಟು ನಗು ತರಿಸುತ್ತೆ ಅಂದರೆ ಯಪ್ಪಾ, ನೀವು ಕೂಡ ತುಂಬಾ ನಗುತ್ತೀರಿ. ಕಟದ, ಕಟದ, ಕಟದ.
ನಾನು ಸಣ್ಣವನಿದ್ದಾಗ, ತಪ್ಪದೇ ಚಂದಮಾಮ ಓದುತ್ತಿದ್ದೆ. ಯಪ್ಪಾ ಅದೇನು ಹುಚ್ಚು ಅಂತೀರಿ. ಈಗಲೂ ಕೂಡ ಬೇರೆಊರಿಗೆ ಹೋಗಬೇಕಾದರೆ ನಮ್ಮ ಗುಂಪಿನಲ್ಲಿ ಯಾರಾದರೂ ಚಿಕ್ಕಮಕ್ಕಳಿದ್ದರೆ ಅವರಿಗೆ ಚಂದಮಾಮ ಕೊಡಿಸಿ ನಂತರ ನಾನೂ ಓದುತ್ತೇನೆ. ತುಂಬಾ ತುಂಬಾ ಹಿಂದೆ, ಬಹುಶಃ ೧೩-೧೪ ವರ್ಷಕ್ಕೂ ಹಿಂದೆ ಇರಬಹುದು ಮಹಾಭಾರತಕ್ಕೆ ನಂಟಾದ ಒಂದು ಕತೆಯನ್ನು ಓದಿದ್ದೆ ಅದರಲ್ಲಿ. ನನಗೆ ಸರಿಯಾಗಿ ನೆನಪಿಲ್ಲ. ಏನಾದರೂ ತಪ್ಪಿದ್ದರೆ ಸರಿಯಾದ ವರ್ಷನ್ ಹಾಕಿ. ಯಾರೋ ಸತ್ತಿರುತ್ತಾರೆ (ಕೃಷ್ಣ ಇರಬೇಕು). ಆಗ ನಕುಲ ಸಹದೇವರಿಗೆ ಹೆಣವನ್ನು ಕಾಯಲು ಹೇಳಿ ಮಿಕ್ಕ ಮೂವರು ಪಾಂಡವರು ಎಲ್ಲಿಗೋ ಹೋಗುತ್ತಾರೆ. ಆಗ ನಕುಲ ಮತ್ತು ಸಹದೇವ, ಕೃಷ್ಣನ ಕಿರುಬೆರಳನ್ನು ಕಿತ್ತು(ಅಥವಾ ಹೆಬ್ಬೆರಳೋ ಗೊತ್ತಿಲ್ಲ) ತಿಂದುಬಿಡುತ್ತಾರೆ. ಆ ಕಿರುಬೆರಳಲ್ಲಿ "ಮುಂದೇನಾಗುತ್ತದೆ ಎಂದು ತಿಳಿಯುವ ಶಕ್ತಿ" ಇರುತ್ತಂತೆ. ಆ ಕತೆಯಲ್ಲಿ ಒಂದು ಬೆಕ್ಕು ಬರುತ್ತೆ. ಕತೆಯಲ್ಲಿ ಇನ್ನೂ ಏನೇನೋ ಆಗುತ್ತೆ. ನನಗೆ ಸರಿಯಾಗಿ ನೆನಪಿಲ್ಲ. ಆದರೆ ಕತೆ ಹೀಗೆ ಕೊನೆಗೊಂಡಿತ್ತು. ದಾರಿಯಲ್ಲಿ ಎಲ್ಲಾದರೂ ಬೆಕ್ಕನ್ನು ಕಂಡರೆ, "ಮಂಗಳಂ ಕೃಷ್ಣ ಮಾರ್ಜಾಲಂ" ಎಂಬ ಮಹಾಮಂತ್ರವನ್ನು ಹೇಳಬೇಕು ಎಂಬುದಾಗಿ. ಇದಾವುದೋ ಸೂಪರ್ ಸುಪ್ರೀಂ (
ಸಿಲ್ಲಿ ಲಲ್ಲಿ ಪ್ರಭಾವ) ಮಂತ್ರ ಅಂತ ತಿಳಿದಿದ್ದೆ. ಈ ಸಾಲು ಎಷ್ಟು ಅಚ್ಚುಒತ್ತಿತ್ತು ಎಂದರೆ ನೋಡಿ, ಈಗಲೂ ಕತೆ ನೆನಪಿನಲ್ಲಿದಿದ್ದರೂ ಈ ಕೊನೆಯ ಮಾತು ನೆನಪಿದೆ. ಮುಂದೆ ಎಷ್ಟೋ ವರ್ಷಗಳಾದ ಮೇಲೆ ಹೈಸ್ಕೂಲಿನಲ್ಲಿ, ಇದರ ಅರ್ಥ ತಿಳಿದ ಮೇಲೆ, ಹಾಯ್, ಇಷ್ಟೇನಾ ಇದು ಅನಿಸುತ್ತು.
ನೋಡಿ ಆ ಮಂತ್ರ, ಮಂಗಳಂ - ಒಳ್ಳೆಯದು, ಕೃಷ್ಣ - ಕಪ್ಪು, ಮಾರ್ಜಾಲಂ - ಬೆಕ್ಕು.
ಇದಾಗಿ ಹಲವು ವರ್ಷಗಳ ನಂತರ, ಒಮ್ಮೆ ನಾನು ಮತ್ತು ನಮ್ಮ ಮಾವ ಎಲ್ಲಿಗೋ ಹೋಗುತ್ತಿದ್ದಾಗ, ಒಂದು ಬೆಕ್ಕು ಅಡ್ಡಬರಲಾಗಿ ಅವರು ಏನುಮಾಡುವುದೆಂದು ಪರಿತಪಿಸುತ್ತಿದ್ದಾಗ, ಅವರಿಗೆ "ಕಪ್ಪು ಬೆಕ್ಕು ಒಳ್ಳೆಯದು" ಅಂತ ಅಂದುಕೊಂಡು ಮುಂದೆ ನಡೀರಿ ಎಂದೆ. ಆದರೆ ಅವರಿಗೆ ಸಮಸ್ಯೆ ಪರಿಹಾರವಾಗಲೇ ಇಲ್ಲ. "ತಲೆಹರಟೆ, ಮನೆಗೆ ವಾಪಸ್ ಹೋಗಿ ಅಥವಾ ಇಲ್ಲಿಯೇ ಎಲ್ಲಿಯಾದರೂ ಕೂತ ಹಾಗೆ ಮಾಡಿ ಮುಂದೆಹೋಗೋಣ" ಎಂದರು. ಆಗ ನಾನು, ನಮ್ಮ ಮಾವನಿಗೆ, ನಾನು ಹಿಂದೆ ಮಂತ್ರವೊಂದನ್ನು ಓದಿರುವುದಾಗಿಯೂ, ಬೆಕ್ಕು ಅಡ್ಡಬಂದಾಗ ಇದನ್ನು ಹೇಳಬೇಕೆಂದೂ, ಅವರಿಗೆ "ಮಂಗಳಂ ಕೃಷ್ಣ ಮಾರ್ಜಾಲಂ" ಹೇಳಿಕೊಟ್ಟೆ. ಆಗ ಅವರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ತುಂಬಾ ಸಂತೋಷಗೊಂಡು ಎಲ್ಲಿಯೂ ನಿಲ್ಲದೆ ಮುಂದುವರಿದೆವು.
ನೋಡಿ, ಸಂಸ್ಕೃತದಲ್ಲಿ "ಮಂಗಳಂ ಕೃಷ್ಣ ಮಾರ್ಜಾಲಂ" ಎಂದರೆ ದಿವ್ಯವಾದ ಮಂತ್ರ, ಕನ್ನಡದಲ್ಲಿ ಅದನ್ನೇ "ಕಪ್ಪು ಬೆಕ್ಕು ಒಳ್ಳೆಯದು" ಎಂದು ಹೇಳಿದರೆ ತಲೆಹರಟೆ
ನನಗಂತೂ ಕಟದ ನಗು ಬರುತ್ತೆ.
ಉ: ಮೂಡನಂಬಿಕೆ
veena.
ಬೆಕ್ಕು ಕಪ್ಪಗಿದ್ದರೆ ನೀವು ಹೇಳಿದ್ದು ಸರಿ, ಆದರೆ ಬೆಕ್ಕು ಬಿಳಿ ಅಥವಾ ಕೆಂಬಣ್ಣದ್ದಾಗಿದ್ದರೆ ?
ಉ: ಮೂಡನಂಬಿಕೆ
ಆಗ ಅದು ಅರ್ದಂಬರ್ದ ಅಪಸಕುನ....
ಅದನ್ನು ಬೇಕಾದರೆ round up ಮಾಡ್ಕೋಬೋದು, ಇಲ್ಲ ಬಿಡಬೋದು 
- ಮಾಯ್ಸ
ಉ: ಮೂಡನಂಬಿಕೆ
ತುಂಬಾ ಸಿಂಪಲ್, "ಬಿಳಿ ಬೆಕ್ಕು ಒಳ್ಳೆಯದು", "ಕಂದು ಬೆಕ್ಕು ಒಳ್ಳೆಯದು". ಹಾಗೆಯೇ "ಬೂದಿ ಗೂಬೆ ಒಳ್ಳೆಯದು", "ಕಪ್ಪು ಕಾಗೆ ಒಳ್ಳೆಯದು", "ಒಂಟಿ ಸೀನು ಒಳ್ಳೆಯದು" @#@!@#!@#@!#
ಉ: ಮೂಡನಂಬಿಕೆ
ಹಾಗೇ ಈ ಮಂತ್ರ ಕೇಳಿದ್ದೀಯಾ?
"ಊಧ್ವಾತ್ ಖಗಪಾತಿತಂ ಮಹಾಶ್ರೇಯಂ"
- ಮಾಯ್ಸ
ಉ: ಮೂಡನಂಬಿಕೆ
ಇನ್ನೂ ಕೆಲವು ಕುರುಡು ನಂಬಿಕೆಗಳು,
೧) ಹೊರಗಡೆ ಹೊರಟಾಗ ತುಂಬಿದ ಕೊಡ ಬಂದರೆ, ಹೊಂಟ ಕೆಲಸ ಗ್ಯಾರಂಟಿ ಸಕ್ಸಸ್.
೨) ಹಾಗೆ, ನಮಗೆ ಕಾಣುವ ಮೊದಲ ಕಾಗೆ, ಬಲಕ್ಕೆ ಹೋದರೆ ಕೆಲಸ ಆಗುತ್ತೆ, ಎಡಕ್ಕೆ ಹೋದರೆ ಆಗಲ್ಲ.
೩) ಮನೆಯಲ್ಲಿ ಬೆಕ್ಕುಗಳು ಜಗಳವಾಡಿದರೆ, ಮನೆಯಲ್ಲಿ ಜಗಳ ಆಗುತ್ತೆ.
೪) ಮನೆ ಮೇಲೆ ಕಾಗೆ ಕಾವ್ ಕಾವ್ ಅಂದರೆ, ನೆಂಟರು ಬರ್ತಾರೆ.
೫) ಮನೆಯ ಹೊರಸಲಿನ ಮೇಲೆ ಸೀನಬಾರದು.
೬) ನೀರು ನೆತ್ತಿಗೇರಿದರೆ ಯಾರಾದ್ರು ನಮ್ಮನ್ನು ನೆನೆಸ್ಕೊತಿರುತ್ತಾರೆ.
೭) ಹೊರಗಡೆ ಹೊಂಟಾಗ ಮುತ್ತೈದೆ ಎದುರು ಬಂದರೆ ಒಳ್ಳೇದು.
ಉ: ಮೂಡನಂಬಿಕೆ
ನಮ್ಗೇನೋ ಹೊರಗಡೆ ಹೊಂಟಾಗ ಸಕ್ಕತ್ ಹುಡುಗಿ ಅಲ್ಲ ಬೆಡಗಿ ಬಂದ್ರೆ ಒಳ್ಳೇದು
- ಮಾಯ್ಸ