ಗೌಡರ ಗಲಾಟೆ
ಈ ದೇವೇಗೌಡ-ನಾರಾಯಣಮೂರ್ತಿ ತಿಕ್ಕಾಟ ರಾಜಕಾರಣಿಗಳ ಮತ್ತು ಉದ್ಯೋಗಪತಿಗಳ ನಡುವೆ ವಿರಳವಾದ ತಿಕ್ಕಾಟದ ಒಂದು ಉದಾಹರಣೆ. ಸಾಧಾರಣವಾಗಿ ರಾಜಕಾರಣಿಗಳು ಮತ್ತು ಉದ್ಯೋಗಪತಿಗಳು ಸಾಮರಸ್ಯದಿಂದಿದ್ದು ಒಬ್ಬರಿಗೊಬ್ಬರು ಸಹಾಯಮಾಡಿಕೊಂಡಿರುತ್ತಾರೆ.
ಗೌಡರಿಗೆ ನಾಡಿನ ಪ್ರಧಾನಿಯಾಗಿದ್ದವರಿಗಿರಬೇಕಾದ ಘನತೆವೆತ್ತ ನಡವಳಿಕೆಯಿಲ್ಲ. ಅವರು ಪ್ರಧಾನಿಯಾದಾಗ ದೇಶಕ್ಕೆ ಮಹತ್ತರ ಸೇವೆಯನ್ನೇನೂ ಸಲ್ಲಿಸಿಲ್ಲ. ನಾರಾಯಣಮೂರ್ತಿಯವರ ಕೆಲಸ ಪಟ್ಟಣದಲ್ಲಿ ವಾಸಿಸುವ ಕೆಲವು ಜನರಿಗೆ ಉದ್ಯೋಗ ಒದಗಿಸಿದೆ ಹಾಗೂ ತೆರಿಗೆಯ ರೂಪದಲ್ಲಿ ರಾಜ್ಯದ ಬೊಕ್ಕಸಕ್ಕೆ ಹಣ ಬರುವಂತೆ ಮಾಡಿದೆ.
ಈ ಸಂದರ್ಭದಲ್ಲಿ ಗೌಡರು ಕೇಳಿರುವ ಪ್ರಶ್ನೆಗಳು ಸಮ್ಮತವಾಗಿವೆ. ಸರಕಾರದಿಂದ ಇನ್ಫೊಸಿಸ್ ಸಹಾಯ ಪಡೆದಿದೆಯೆಂದಾದರೆ ಅದರ ವಿವರ ಕೊಡುವುದರಲ್ಲಿ ಅವಮಾನವಿಲ್ಲ. ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ಸಾಕಷ್ಟು ಯೋಗದಾನವಿಲ್ಲವೆನ್ನುವ ಆರೋಪಕ್ಕೆ ಆಗಿರುವ ಪ್ರಗತಿಯನ್ನು ಉದಾಹರಿಸಬಹುದಾಗಿತ್ತು. ರಾಜೀನಾಮೆ ಕೊಡುವ ಕಾರಣವಿರಲಿಲ್ಲ.
ನನ್ನ ಅಭಿಪ್ರಾಯದಲ್ಲಿ ಆ ಪ್ರಶ್ನೆಗಳನ್ನು ಕೇಳಲು ಗೌಡರು ಸರಿಯಾದ ವ್ಯಕ್ತಿಯಲ್ಲ. ಅವರ ಆರೋಪಕ್ಕೆ ರಾಜೀನಾಮೆ ಕೊಡಬಾರದಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರೊ, ಸಮಾಜದ ಗಣ್ಯರೊ ಆರೋಪ ಮಾಡಿದ್ದರೆ ರಾಜೀನಾಮೆಗೊಂದು ಅರ್ಥವಿತ್ತು.

- bharath ರವರ ಬ್ಲಾಗ್
- Login or register to post comments
- 548 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಬಿಡಿಎ ಸೈಟ್ ಚರ್ಚಾಕೂಟವನ್ನೂ ಓದಿ
ಬೆಂಗಳೂರಿನ ಸ್ಥಿರಾಸ್ತಿ ಬಗ್ಗೆ ಚರ್ಚೆ ನಡೆಯುವ ತಾಣದಲ್ಲಿ ಈ ಜಟಾಪಟಿ ಬಗ್ಗೆ ದೀರ್ಘವಾದ ಚರ್ಚೆ ನಡೆಯುತ್ತಿದೆ. ಇಲ್ಲಿ ಕ್ಲಿಕ್ ಮಾಡಿ ಓದಿ.
ಅಂದ ಹಾಗೆ ಈ ಚರ್ಚಾ ವೇದಿಕೆಯನ್ನು ಹುಟ್ಟು ಹಾಕಿದವನು ನಾನು
(ಸ್ವಲ್ಪ ನನ್ನ ತುತ್ತೂರಿ ಊದಿದರೆ ಅಡ್ಡಿ ಇಲ್ಲ ತಾನೆ?)
ಸಿಗೋಣ,
ಪವನಜ
-----------
Think globally, Act locally
ತಥ್ಯ
ಈ ವಿಷಯದಲ್ಲಿ ಬಹಳಷ್ಟು ತಥ್ಯಗಳು ನೀವು ಕೊಟ್ಟ ಲಿಂಕ್ನಲ್ಲಿ ಇತ್ತು. ವರ್ತಮಾನ ಪತ್ರಿಕೆಗಳಲ್ಲಿ ಇಷ್ಟು ಮಾಹಿತಿ ಇರಲ್ಲ. ಧನ್ಯವಾದಗಳು.
>> ಸ್ವಲ್ಪ ನನ್ನ ತುತ್ತೂರಿ ಊದಿದರೆ ಅಡ್ಡಿ ಇಲ್ಲ ತಾನೆ?
ಮೈಕ್ರೊಸಾಫ್ಟ್ ನಲ್ಲಿ ಮತ್ತು ವಿಶ್ವಕನ್ನಡದಲ್ಲಿ ನಿಮ್ಮ ತುತ್ತೂರಿ ಸುಶ್ರಾವ್ಯವಾಗಿ ನುಡಿದಿದೆ.
ತಥ್ಯ?
'ತಥ್ಯ' ಅಂದ್ರೇನು, ಭರತ್?
--
http://hpnadig.net/blog
http://kn.wikipedia.org
"ಹೊಸ ಚಿಗುರು, ಹಳೆ ಬೇರು"
ತಥ್ಯ ಅಂದರೆ
ತಥ್ಯ = ನಿಜವಾದುದು, ಸತ್ಯ
(ಕ.ಸಾ.ಪ. ಸಂಕ್ಷಿಪ್ತ ನಿಘಂಟು)
ಸಿಗೋಣ,
ಪವನಜ
-----------
Think globally, Act locally