ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

bhcsb ರವರ ಬ್ಲಾಗ್

ಅಮ್ಮಾ.. ಅಮ್ಮ... ಅಮ್ಮಾ.....ಆಅಅಅ....

ಅಮ್ಮಾ.. ಅಮ್ಮ... ಅಮ್ಮಾ.....ಆಅಅಅ....


ಈಗೊಂದೆರಡು ದಿನದ ಹಿಂದೆ, ಅಂದು ಸಂಜೆ ಸಹೋದ್ಯೋಗಿಗಳೊಡನೆ ಸಂಜೆಯ ವಿಹಾರ ಮುಗಿಸಿ ಮನೆಗೆ ಹಿಂದಿರುಗುವಾಗ, ಒಂದು ಉದ್ಯಾನವನದ ಮೂಲಕ ಬರುತ್ತಿದ್ದೆವು. (ದಿನವೂ ಹಾಗೆಯೇ ಬರುವುದು). ಆದರೆ, ಇಂದು ಒಂದು ಪುಟ್ಟ ಘಟನೆ(??) ನಡೆಯಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಾಸೆಯಾಯಿತು. ಅದೇನದು, ಎಂದರೆ???

ಸುಮಾರು ೨ ರಿಂದ ೩ ವರ್ಷದ ಮಗು ಅಳುತ್ತಿದೆ.

ಅಪ್ಪ `ಅಳಬೇಡ` ಎನ್ನುತ್ತಿದ್ದಾರೆ.

ಮಗು: ನಾನು ಬಿದ್ದೆ. ಪೆಟ್ಟಾಯ್ತು.... ಅಮ್ಮಾ ... ಅಪ್ಪಾಅ..... ಅಳುತ್ತಿದೆ.

ಅಪ್ಪ: ಅಳಬೇಡ. ಜಾಸ್ತಿ ಪೆಟ್ಟಾಗಿಲ್ಲ. ಬಾ ಎತ್ಕೊಂಡು ಹೋಗ್ತೀನಿ. ಅಳಬೇಡ. ಆತನ ಸಾಂತ್ವನ ಮಗುವಿಗೆ.

ಆದರೆ,
ಮಗುವಿನ ಮುಗ್ಧ ಪ್ರಶ್ನೆ: ನಾನು ಬಿದ್ದೆ. `ಯಾಕೆ ಅಳಬಾರದು'? ನಾನು . ನೀನೇ ಬೀಳಿಸಿದ್ದು. ನೀನೇ ಸರಿಯಾಗಿ ಕೈ ಹಿಡಕೊಳ್ಳದೆ ಬೀಳಿಸಿದ್ದು.
 ಮುಂದೆ ಓದಿ »

ಜೊತೆ, ಜೊತೆಯಲಿ...

Alone we can do so little: Together we can do so much. -Helen Keller

ಎಷ್ಟೊಂದು ಅರ್ಥಗರ್ಭಿತವಾದ ನುಡಿಗಳಿವು. ಎಲ್ಲ ಸಂದರ್ಭದಲ್ಲಿಯೂ ಒಪ್ಪುವಂತಹ ಮಾತುಗಳು. ಕೆಲವೊಂದು ಸಂದರ್ಭದಲ್ಲಿ ಒಪ್ಪಿಗೆ ಆಗದಿರಬಹುದು! ಅದು ಬೇರೆ ಮಾತು!!

ಒಬ್ಬ ವ್ಯಕ್ತಿಯ ಚಾರಿತ್ರ್‍ಯ ನಿರ್ಮಾಣವೇ ಆಗಲೀ, ಒಂದು ಸಂಘ-ಸಂಸ್ಥೆಯ ಸ್ಥಾಪನೆಯೇ ಆಗಲಿ, ಒಂದು ಆಟೋಟ, ಸಂಗೀತ ಕಚೇರಿ, ನಾಟಕ, ಸಾಮಾಜಿಕ ಸೇವೆಗಳು, ಸಮಾಜಕ್ಕೆ ಬೇಕಾದ ಉಪಯುಕ್ತ ಯೋಜನೆಗಳು ಇವೆಲ್ಲವಕ್ಕೂ ಇದು ಅನ್ವಯಿಸುವಂತಹುದು.

ಒಗ್ಗಟ್ಟಿನಲ್ಲಿ ಬಲವಿದೆ.  
 ಮುಂದೆ ಓದಿ »

ಶ್ರೀ ವೆಂಕಟಪ್ಪ ಕಲಾ ಮಂದಿರದಲ್ಲಿ, ಒಂದಷ್ಟು ಹೊತ್ತು

ಯೂತ್ ಫೋಟೋಗ್ರಫಿಕ್‌ ಸೊಸೈಟಿ - ೩೧ನೇ ರಾಷ್ಟ್ರೀಯ ಸಲೋನ್ ಛಾಯಾಗ್ರಹಣ ಪ್ರದರ್ಶನ ೫ನೇ ಫೆಬ್ರವರಿಯಿಂದ ಆರಂಭವಾಗಿ ೮ನೇ ಫೆಬ್ರವರಿಗೆ ಮುಕ್ತಾಯವಾಗುತ್ತದೆ ಎಂದು ಮಿತ್ರ ಕೆ.ಶಿವೂ (ಛಾಯಾಕನ್ನಡಿ ಬ್ಲಾಗ್‌) ಅವರ ವಿ-ಅಂಚೆಯಿಂದ ತಿಳಿದೆನು. ಇದನ್ನು ಮಾತ್ರ ತಪ್ಪಿಸಿಕೊಳ್ಳಬಾರದು ಎನಿಸಿತು.  ಅದಕ್ಕೆಂದೇ ಕಾದಿದ್ದು ಭಾನುವಾರ, ೭.೨.೨೦೦೯ ರಂದು ಹೋಗಿದ್ದೆ. ಇದು ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಇತ್ತು.

ವೈಪಿಎಸ್‌ ನವರ ಕಾರ್ಯವೈಖರಿಯು ಛಾಯಾಚಿತ್ರಗಳ ಪ್ರದರ್ಶನ ತುಂಬಾ ಅಚ್ಚುಕಟ್ಟಾಗಿ ಮಾಡಿಸಿತ್ತು.  ನನಗೊಂದು ಆಲೋಚನೆ ಬಂತು. ಇಲ್ಲಿ ಎಷ್ಟು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿರಬಹುದು? ಎಂದು.  ಮತ್ತೊಂದು ಸುತ್ತು ಚಿತ್ರಗಳನ್ನು ಬರಿದೇ ಎಣಿಸುತ್ತಾ ಹೋದೆ. ಅಲ್ಲಿದ್ದದ್ದು ೩೧೯. ಇಷ್ಟೂ ಚಿತ್ರಗಳನ್ನು ಸುಂದರವಾಗಿ, ಪ್ರಮಾಣ ಬದ್ಧವಾಗಿ ಪ್ರದರ್ಶನಕ್ಕೆ ಅಣಿಮಾಡಿದ್ದರು.  ಕಪ್ಪು-ಬಿಳುಪು, ಬಣ್ಣ, ಪ್ರವಾಸೀ ಹಾಗೂ ವನ್ಯಜೀವಿಗಳು ಹೀಗೆ ಬೇರೆ ಬೇರೆ ವಿಭಾಗಗಳನ್ನು ಮಾಡಿ ಚಿತ್ರಗಳನ್ನು ಪ್ರದರ್ಶಿಸಿದ್ದರು.
 ಮುಂದೆ ಓದಿ »

ಹನಿಗಳು...

ಐಡಿಯಾ....


IDEA
ಕೊಡೋ,
ಗೆಳೆಯ ಅಂದ್ರೆ,
ಮಡಗು ಹಂಗಿದ್ರೆ
MONEY ಯ ಎಂದ
* * *


ಅಮಲುದಾರರು
ಅಮಲ್ದಾರು ಅಂತ ಇದ್ರು
ಹಳ್ಳೀಲಿ ಹಿಂದೆ ಅಂದ್ರೆ,
ಹೌದೌದು,
ಈಗ್ಲೂ ಇದಾರೆ ಎಲ್ಲೆಲ್ಲೂ,
ಅಮಲುದಾರರು ಎನ್ನಬೇಕೆ?


* * *
ಐ,ಸೀ, ಐ ಸೀ !!!
ಐಸಿಐಸಿಐ ಕಾರ್ಡ್‍
ತೊಗೊಳ್ಳಿ ಅಂದ್ರೆ,
ಈಗ್ಲೇ ಬೇಡ, ಐಸೀ,
ಐಸೀ, ಅಂತಾರೆ!!
* * *

ಚಂದ್ರಶೇಖರ ಬಿ.ಎಚ್.
[ಈ ಮೇಲಿನವು `ನಗೆ ಮುಗುಳು' ಮಾಸಪತ್ರಿಕೆಯಲ್ಲಿ ೨೦೦೬ ರಲ್ಲಿ ಪ್ರಕಟವಾಗಿವೆ]

ನಾನೂ ಹೋಗಿದ್ದೆ ಚಿತ್ರ ಸಂತೆಗೆ. ಅಲ್ಲಿದ್ದೆ ಸಂಜೆವರೆಗೆ...

ಇಂದು ಬೆಳಗ್ಗೆ (ಜನವರಿ ೩೧, ೨೦೧೦) ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಮುಗಿಸಿಕೊಂಡು, `ಅಂತರಂಗದ ಮಾತುಗಳ'ನ್ನು ಹಂಚಿಕೊಳ್ಳುತ್ತಾ ಇರುವಾಗ ಸ್ಥಳದಲ್ಲಿಯೇ ಸಂಪದ.ನೆಟ್ ನ ಸಂಪದಿಗರ ಪರಿಚಯದೊಂದಿಗೆ (ಹರಿಪ್ರಸಾದ್, ಹರ್ಷ, ವಿನಯ್, ರಶ್ಮಿ ಪೈ... ಇತ್ಯಾದಿ) `ಚಿತ್ರ ಸಂತೆ'ಗೆ ಹೋಗಿದ್ದೆ.  ಅಲ್ಲದೇ ಛಾಯಾಕನ್ನಡಿಯ ಶಿವೂ  ಸಹ ಸಿಕ್ಕಿದ್ದರು, ಅನುಭವ ಮಂಟಪದ ಫಾಲಚಂದ್ರ, ಹೀಗೆ ಇನ್ನೂ ಕೆಲವು ಸಹಬ್ಲಾಗಿಗರ ಪರಿಚಯವಾಯಿತು. 


ಕ್ಷಮಿಸಬೇಕು. ಇಲ್ಲಿ ನನಗೆ ಚಿತ್ರಗಳನ್ನು ಪೋಸ್ಟ್ ಮಾಡಲು ತಿಳಿಯುತ್ತಿಲ್ಲ. ಕಷ್ಟವಾಗುತ್ತಿದೆ.  ಆದ್ದರಿಂದ ಚಿತ್ರಗಳನ್ನು http://kshanachintane.blogspot.com ಇಲ್ಲಿ ಕಾಣಬಹುದು.  ಮುಂದೆ ಓದಿ »

Syndicate content