ಪಾನ(ಕ) ಸಮಾರಾಧನೆ
ಶ್ರೀರಾಮ ನವಮಿಯ ದಿನದಂದು ಎಲ್ಲೆಲ್ಲೂ ಪಾನಕ-ಕೋಸಂಬರಿ ವಿತರಣೆ ನಡೆಯಿತು. ಈ ಸುದ್ದಿ ದಿನಪತ್ರಿಕೆ, ರೇಡಿಯೋ/ಟಿ.ವಿ. ವಾರ್ತೆ ಇವುಗಳಲ್ಲಿ ಎಲ್ಲ ಬಿತ್ತರಗೊಂಡಿದ್ದೇನೋ ಸರಿ. ಆದರೆ, ಇದೇ ದಿನ ಸಂಜೆಯ ವೇಳೆಗೇ ಪಾನ(ಕ) ಸಮಾರಾಧನೆ ಹೆಚ್ಚೇ ನಡೆಯುತ್ತಿತ್ತು. ಎಂದಿನಂತೆ ಬಾರು-ರೆಸ್ಟೋರಂಟುಗಳ ನಂಟಿನಲ್ಲಿ ಪಾನ ಸಮಾರಾಧನೆ ಅವ್ಯಾಹತವಾಗಿ ನಡೆಯುತ್ತಿತ್ತು. ಅನೇಕ ಹಬ್ಬಗಳ (ಉದಾ: ಶಿವರಾತ್ರಿ, ಕೃಷ್ಣಾಷ್ಟಮಿ, ಇತ್ಯಾದಿ) ಒಂದೆರಡು ದಿನಗಳ ಮುಂಚೆಯೇ ಪತ್ರಿಕೆಗಳಲ್ಲಿ `ಮದ್ಯ-ಮಾಂಸ' ಮಾರಾಟ ಮಾಡುವಂತಿಲ್ಲ ಎಂದೆಲ್ಲ ಓದಿದ್ದ ನೆನಪು. ಆದರೆ ಇಂದಿನ ದಿನಗಳಲ್ಲಿ `ಮಧ್ಯೆ ಮಧ್ಯೆ ಪಾನೀಯಂ ಸಮರ್ಪಯಾಮಿ' ಎಂಬಂತೆ ಸಂಜೆಯಾಗುತ್ತಿದ್ದಂತೆ ಜನರ ಸರತಿ ಸಾಲುಗಳನ್ನು ಕಾಣಬಹುದು. ಭಾರತೀಯ ಸಂಸ್ಕೃತಿ ಮೇರು ಸಂಸ್ಕೃತಿ ಎಂದೆಲ್ಲಾ ಬೆಳಗ್ಗೇ ಹಾಡಿ-ಕುಣಿದು (???!!!), ಸಂಜೆಗೇ ಪಾನ(ಕ) ಸಮಾರಾಧನೆಗೆ ಮಾರು(ರಿ) ಹೋಗುತ್ತಿರುವುದು ವಿಷಾದದ ವಿಷಯ. ನೀವೇನಂತೀರಿ???

- bhcsb ರವರ ಬ್ಲಾಗ್
- Login or register to post comments
- 403 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪಾನ(ಕ) ಸಮಾರಾಧನೆ
ಅವರವರ ಇಷ್ಟಕ್ಕೆ ತಕ್ಕಂತೆ ಇರುತ್ತದೆ. ಎಲ್ಲರೂ ಪಾನ(ಕ) ಕುಡೀಲೇಬೇಕು ಅಂತಿಲ್ವಲ್ಲ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಉ: ಪಾನ(ಕ) ಸಮಾರಾಧನೆ
ಪಾನಕ ಸಿಗದೋರು, ಹಾಗಾದರೂ "ಪರಮಾತ್ಮ"ನ್ನ ಒಳಗೆ ಹಾಕ್ಕೊಳ್ಳಿ ಬಿಡಿ...
"ಯಂಡ ಯೆಡ್ತಿ ಕನ್ನಡ ಪದಗೊಳ್ ಅಂದರೆ ರತ್ನಂಗ್ ಪ್ರಾಣ"
=======================================