ಬಡತನ ಹೆಸರು ಚಿರಸ್ಥಾಯಿಯಾಗಿಸಲು ಪಣ
(ಬೊಗಳೂರು ಅಸತ್ಯಾನ್ವೇಷಣೆ ಬ್ಯುರೋದಿಂದ)
ಬೊಗಳೂರು, ನ.2- ದೇಶದಲ್ಲಿ ಬಡತನ ನಿವಾರಿಸಲು ಬಡವರ ನಿರ್ನಾಮವೇ ಗುರಿ ಎಂದು ಹಿಂದಿನ ಕಾಲದಿಂದಲೂ ನಮ್ಮನ್ನು ಆಳುತ್ತಿರುವವರು ಹೇಳುತ್ತಾ ಬಂದಿರುವುದರ ಹಿಂದಿನ ರಹಸ್ಯ ಬಯಲಾಗಿಸಲು ಸಕಲ ಸಿಬ್ಬಂದಿ ಸಮೇತ ತಲೆಮರೆಸಿಕೊಂಡಿರುವ ಬ್ಯುರೋ ಎಚ್ಚೆತ್ತು ಹೊರಟ ಪರಿಣಾಮ ರುದ್ರಭೀಕರ ಮಾಹಿತಿಯೊಂದು ಬಯಲಾಗಿದೆ.
ಮಹಾತ್ಮಾ ಗಾಂಧೀಜಿ ತುಳಿದ ಹಾದಿ ಅನುಸರಿಸುತ್ತಿರುವವರು ನಮ್ಮ ರಾಜಕಾರಣಿಗಳು. ಅದನ್ನೀಗ ಗಾಂಧಿ ಹೆಸರಿನಲ್ಲಿ ವಂಶಪಾರಂಪರ್ಯವಾಗಿ ಚಾಚೂ ತಪ್ಪದೆ ಚಾಚಾ ನೆಹರೂ ಅವರ ಕಾಲದಿಂದಲೇ ಅನುಸರಿಸಿಕೊಂಡು ಬರಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿಯದ ವಿಚಾರ. ಅಥವಾ ತಿಳಿದಿದ್ದರೂ ನಮಗೇನೂ ಗೊತ್ತಿಲ್ಲ ಎಂದು ಸುಮ್ಮನಿರಬೇಕಾದ ಸಂಗತಿ.
ಬಡತನ ನಿವಾರಣೆಗೆ ಗಾಂಧೀಜಿ ಕರೆ ನೀಡಿದ್ದರು. ಅದನ್ನು ಅನುಸರಿಸಿದ ನೆಹರೂ ಕೂಡ ಬಡತನ ನಿವಾರಿಸುತ್ತೇವೆ ಎಂದು ಘೋಷಿಸಿದರು. ಇಂದಿರಾ ಗಾಂಧಿ ಅದನ್ನು ಬದಲಾಯಿಸಿ ಗರೀಬೀ ಹಠಾವೋ ಎಂದು ಭಾರತೀಕರಣಗೊಳಿಸಿದರು. ಆಮೇಲೆ ಅಧಿಕಾರಕ್ಕೇರಿದವರೆಲ್ಲಾ ಗರೀಬೋಂ ಕೋ ಹಠಾವೋ ಎನ್ನುತ್ತಾ ಬೆಲೆ ಏರಿಸತೊಡಗಿದರು. ಇತ್ತೀಚೆಗಷ್ಟೇ ಗರೀಬೀ ಹಠಾವೋ-ಭಾಗ-2 ಬಿಡುಗಡೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಇಷ್ಟು ಪೀಠಿಕೆಯೊಂದಿಗೆ ತನಿಖೆಯ ವಿಷಯಕ್ಕೆ ಬಂದಾಗ, ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಪ್ರಧಾನಿಗಳು ಮನಮೋಹಕವಾಗಿ ಇನ್ನು 20 ವರ್ಷಗಳಲ್ಲಿ ಬಡತನ ನಿವಾರಿಸುತ್ತೇವೆ ಎಂದು ಘೋಷಿಸಿದಾಗ ಅವರ ಬೆನ್ನ ಹಿಂದೆಯೇ ಅನ್ವೇಷಿ ಬ್ಯುರೋ ತಿರುಗಾಟ ಮಾಡಿತು.
ಪೂರ್ಣ ವಿವರ: Bogaleragale.blogspot.com

- BogaleRagale ರವರ ಬ್ಲಾಗ್
- Login or register to post comments
- 425 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: