ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › BogaleRagale ರವರ ಬ್ಲಾಗ್

ಬಿಹಾರದಲ್ಲಿ ಬ್ರೇಕ್ಲಾ ತಂತ್ರ-ಜ್ಞಾನ ವಿವಿ ಆರಂಭ

November 9, 2006 - 9:21am — BogaleRagale

(ಬೊಗಳೂರು ಶೈಕ್ಷಣಿಕ ಬ್ಯುರೋದಿಂದ)
ಬೊಗಳೂರು, ನ.9- ಐಟಿ ಶಿಕ್ಷಣಕ್ಕೆ ಸೀಟು ದೊರೆಯಲಿಲ್ಲ ಎಂದು ಹಲುಬುವ ವಿದ್ಯಾರ್ಥಿಗಳಿಗೆ ಇದೋ ಬೊಗಳೆ ರಗಳೆ ಬ್ಯುರೋ ಹೊತ್ತು ತಂದಿದೆ ಸಂತಸಕರ ಸುದ್ದಿ. ಐಟಿ, ಬಿಟಿ ಮತ್ತು ಬಿಟ್ಟಿ ಟೆಕ್ನಾಲಜಿಗಳೆಲ್ಲಾ ಹಳತಾಗತೊಡಗಿದ್ದು, ಬಿಹಾರದಲ್ಲಿ ಹೊಸ ತಂತ್ರಜ್ಞಾನ ಕ್ರಾಂತಿಯೊಂದು ನಡೆಯುತ್ತಿರುವುದನ್ನು ನಮ್ಮ ಓದುಗರಿಗೋಸ್ಕರವೇ ಪತ್ತೆ ಹಚ್ಚಲಾಗಿದೆ. (Bogalergale.blogspot.com)

ಬಿಹಾರದಾದ್ಯಂತ ಈ ತಂತ್ರ-ಜ್ಞಾನ ಬೋಧಿಸುವ ಶಾಲಾ ಕಾಲೇಜುಗಳೂ ಅಲ್ಲಿ ತಲೆ ಎತ್ತತೊಡಗಿದ್ದು, ಇವೆಲ್ಲವೂ All India Institute of Break-law Technology (AIIBT) ಮಾನ್ಯತೆಗೊಳಪಟ್ಟಿವೆ.

ಹಾಗಾಗಿ ಅದಕ್ಕೆ ಸ್ವಲ್ಪ ಮಟ್ಟಿನ ಪ್ರಚಾರ ನೀಡುವುದು ನಮ್ಮ ಕರ್ತವ್ಯವಾಗಿರುವುದರಿಂದ (ಜಾಹೀರಾತು ನೀಡಲು ಒಪ್ಪಿಕೊಂಡಿದೆ ಎಂದು ಯಾರಿಗೂ ಹೇಳಬಾರದಾಗಿ ವಿನಂತಿ!) ಈ ವರದಿ ಬಿತ್ತರಿಸಿ ತತ್ತರಿಸಲಾಗುತ್ತಿದೆ.

ಈ ವಿವಿಯಲ್ಲಿ ಏನೆಲ್ಲಾ ಕಲಿಸಲಾಗುತ್ತದೆ? ಒಬ್ಬ ಮಾನವ ಎಂದು ಕರೆಸಿಕೊಳ್ಳುವ ಪ್ರಾಣಿಯು ಅಮಾನವನಾಗುವುದು ಹೇಗೆ, ಅಮಾನವೀಯತೆ ಮೆರೆಯಲು ಎಷ್ಟೆಲ್ಲಾ ಮಾರ್ಗಗಳಿವೆ ಎಂಬುದನ್ನು ಈ ಕಾಲೇಜು ಮತ್ತು ವಿವಿಗಳಲ್ಲಿ ಆದ್ಯಂತವಾಗಿ ಹೇಳಿಕೊಡಲಾಗುತ್ತದೆ.

ಒಂದಲ್ಲ, ಎರಡಲ್ಲ, ಹತ್ತಾರು ಕೊಲೆ ಮಾಡಿ ಏನೂ ಆಗದಂತೆ ತಲೆ ಎತ್ತಿ ತಿರುಗಾಡುವುದು ಹೇಗೆ, ನ್ಯಾಯಾಲಯದ ಆದೇಶವನ್ನು ತಿರುಚುವುದು ಹೇಗೆ, ಅತ್ಯಾಚಾರ, ಅನಾಚಾರ ಮಾಡಿಯೂ ಏನೂ ಆಗದವರಂತೆ ಬದುಕುವುದು ಹೇಗೆ ಎಂಬಿತ್ಯಾದಿಗಳನ್ನು ಇಲ್ಲಿ ಕಲಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಲಿರುವ ಇಂಥ ವ್ಯವಸ್ಥೆಯ ಬಗ್ಗೆ ಜನಜಾಗೃತಿ ಮೂಡಿಸಿ ಈಗಿಂದೀಗಲೇ ಜನಾಂಗ ರೂಪಿಸಲು ಮತ್ತು ಆ ಮೂಲಕ ಭಾರಿ ಪ್ರಮಾಣದಲ್ಲಿ ಬಾಚಿಕೊಳ್ಳಲು ರೂಪು ತಳೆದಿದೆ All India Institute of Break-law Technology (AIIBT).

ಕಾನೂನು ಹೇಗೆ ಮುರಿಯಬಹುದು ಎಂದು ತಿಳಿದುಕೊಳ್ಳಲು, ಕಾನೂನಿನ ಎಲ್ಲಾ ಮಜಲು ಮಜಲುಗಳನ್ನು ಅಧ್ಯಯನ ಮಾಡಿ ಪದವಿ ಪಡೆದಿರುವ ಶಹಾಬುದ್ದೀನ್ ಅವರನ್ನು ಈ ವಿವಿಯ ಕುಲಾಧಿಪತಿಗಳನ್ನಾಗಿ ನೇಮಿಸಲಾಗಿದ್ದು, ಈ ರೀತಿಯಾಗಿ ಕಾನೂನು ಮುರಿಯಲೆಂದೇ ಕಾನೂನು ಪದವಿ ಪಡೆದಿರುವ ಇತರೆಲ್ಲರನ್ನೂ ಪ್ರತಿ ಕಾಲೇಜುಗಳ ಪ್ರಾಂಶುಪಾಲರಾಗಿ ನಿಯೋಜಿಸಲಾಗುತ್ತದೆ.

ಈ ಕುಲಾಧಿಪತಿಗಳ ವಿಶೇಷ ಸಂದರ್ಶನವನ್ನು ಈ ಹಿಂದೆಯೇ ಬೊಗಳೆ ರಗಳೆ ಬ್ಯುರೋ ಚಿಕ್ಕದಿರುವಾಗಲೇ ಮಾಡಿತ್ತು. ಈಗ ಕೆಲಸದ ಒತ್ತಡದಿಂದಾಗಿ ಮತ್ತೊಮ್ಮೆ ಸಂದರ್ಶನಕ್ಕೆ ಪುರುಸೊತ್ತು ಇಲ್ಲದಿರುವುದರಿಂದ ಅದನ್ನು ಇಲ್ಲಿ ಓದಿ ಬೆಚ್ಚಿ ಬೀಳಬಹುದು.

ಒಟ್ಟಿನಲ್ಲಿ ಈ ಕಾಲೇಜುಗಳ ಪ್ರಾಂಶುಪಾಲರಾಗಲು ಆಸಕ್ತರು ಅರ್ಜಿ ಸಲ್ಲಿಸಿದಲ್ಲಿ, ಕೂಡಲೇ ಮಚ್ಚು-ಲಾಂಗುಗಳೊಂದಿಗೆ ಆಸಕ್ತರಲ್ಲಿಗೇ ಜನ ಕಳುಹಿಸಲಾಗುವುದು ಎಂದು ಬೊಗಳೆ ರಗಳೆ ಪತ್ರಿಕೆಗೆ ಮಾತ್ರವೇ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ AIIBT ತಿಳಿಸಿದೆ.

~.~
  • BogaleRagale ರವರ ಬ್ಲಾಗ್
  • Login or register to post comments
  • 294 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾನೂನು ಉಲ್ಲಂಘಿಸಲು ಕಾನೂನು ಪದವಿ
  • ಮಾತು ಮದಿರೆಯೇ ಮಾನಿನಿಯರಿಗೆ ?
  • ಪ್ರಾಣಿಗಳ 'ಮಾನವನಿಷ್ಠೆ' ಅಗ್ಗಳಿಕೆಗೆ ಪೈಪೋಟಿ !
  • ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ವಿಶ್ವ ಸುಂದರಿ
  • ಕನ್ನಡಕ್ಕಳಿವಿಲ್ಲ, ಬೆಂಗಳೂರಲ್ಲಿ ಜತನದಿಂದಿದೆ!!!
Syndicate content

ಲೇಖಕರು

BogaleRagale's picture

ಪರಿಚಯ

ಅಸತ್ಯದ ಅನ್ವೇಷಣೆಯಲ್ಲಿ ಜಗವ ಸುತ್ತುವ ಬೊಗಳೂರಿನ ಬೊಗಳೆ ಪಂಡಿತ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
    August 30, 2008 - 11:27am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:04am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:00am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:56am
  • csomsekraiah
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 10:46am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 59 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator