ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › BogaleRagale ರವರ ಬ್ಲಾಗ್

ಜಾರಕಾರಣಿಗಳ ಆಘ್ರಾಣ ಸಾಮರ್ಥ್ಯದ ಗುಟ್ಟು

December 20, 2006 - 9:19am — BogaleRagale

ಬೊಗಳೂರು, ಡಿ.20- "ಕುಸುಮ ಗಂಧದ ಒಳಗೊ ಗಂಧದೊಳು ಕುಸುಮವೋ, ಕುಸುಮ ಗಂಧಗಳೆರಡೂ ಆಘ್ರಾಣದೊಳಗೊ" ಎಂಬ ದಾಸರ ಶಂಕೆಗೆ ಪರಿಹಾರ ದೊರೆಯುವ ದಿನಗಳು ಸಮೀಪಿಸಿವೆ. (bogaleragale.blogspot.com)

ನಾಯಿಗಳು ಮಾನವರಿಗಿಂತ ಹೆಚ್ಚು ಪ್ರಬಲವಾದ ಆಘ್ರಾಣ ಶಕ್ತಿ ಹೊಂದಿವೆ ಎಂಬುದು ಸರ್ವವಿದಿತ ಸತ್ಯ. ಆದರೆ ಹೊಸ ಅಧ್ಯಯನವೊಂದು ಈ ವಿಷಯವನ್ನು ಬಹುತೇಕ ಸುಳ್ಳಾಗಿಸಲು ಹೊರಟಿದೆ.

ಉನ್ನತ ಅಧಿಕಾರದಲ್ಲಿರುವ ಮಂತ್ರಿಗಳು, ಶಾಸಕರು, ಅಧಿಕಾರಿವರ್ಗವು ಹಗರಣ ಎಂಬ ಪ್ರಜಾಪ್ರಭುತ್ವದ ಅತ್ಯುನ್ನತ ಮೌಲ್ಯವನ್ನು ಎತ್ತಿಹಿಡಿಯಲು ಅಷ್ಟು ಸುಲಭವಾಗಿ ಹೇಗೆ ಯಶಸ್ವಿಯಾಗುತ್ತಿದ್ದಾರೆ ಎಂಬುದರ ಹಿಂದಿನ ರಹಸ್ಯವೂ ಬಯಲಾಗಿದ್ದು, ಅವರ ವಾಸನಾ ಸಾಮರ್ಥ್ಯವೇ ಇದಕ್ಕೆಲ್ಲಾ ಕಾರಣ ಎಂದು ಪತ್ತೆಯಾಗಿದೆ.

ಅಂದರೆ, ನಾಯಿಗಳಿಗಿರುವ ಆಘ್ರಾಣ ಸಾಮರ್ಥ್ಯವನ್ನು ಕೆಲವೊಂದಿಷ್ಟು ತರಬೇತಿ/ ಅಭ್ಯಾಸದ ಮೂಲಕ ಮನುಷ್ಯರೂ ಪಡೆಯಬಹುದು ಎಂಬುದನ್ನು ವಿಜ್ಞಾನಿಗಳು ಇಲ್ಲಿ ಪತ್ತೆ ಹಚ್ಚಿದ್ದರು. ಈ ಪ್ರಯೋಗದ ಫಲಿತಾಂಶವನ್ನು ರಾಜಕಾರಣಿಗಳು ಸಮರ್ಥವಾಗಿ ಬಳಸಿಕೊಂಡ ಪರಿಣಾಮವೇ ಈ ದೇಶದಲ್ಲಿ ಹಗರಣಗಳ ಸಾಲು ಸಾಲು ಆಂದೋಲನಗಳೇ ನಡೆದುಹೋದವು ಎಂದು ತಿಳಿದುಬಂದಿದೆ.

ಘಟಾನುಘಟಿ ರಾಜಕಾರಣಿಗಳ ಆಘ್ರಾಣ ಸಾಮರ್ಥ್ಯದ ಹಿಂದೆ ಬೊಗಳೆ ರಗಳೆ ಬ್ಯುರೋ ಬಿದ್ದಾಗ, ವಿಜ್ಞಾನಿಗಳು ಈ ಸಂಶೋಧನಾ ವರದಿ ನೀಡಿದ್ದೇ ಇದಕ್ಕೆಲ್ಲಾ ಕಾರಣ ಎಂದು ಪತ್ತೆ ಹಚ್ಚಲಾಯಿತು.

ಸರಕಾರದ ಯಾವ್ಯಾವ ಯೋಜನೆಗಳಲ್ಲಿ ಎಲ್ಲಿ ಎಷ್ಟರ ಮಟ್ಟಿಗೆ ಗಂಟು ಸಿಗುತ್ತದೆ, ಎಷ್ಟನ್ನು ಮೇಯಬಹುದು, ಉದಾರ ಕೊಡುಗೆಯಾಗಿ ಮತದಾರರ ಮೂಗಿಗೆ ತುಪ್ಪ ಸವರುವಂತಹ ಮೇಲ್ನೋಟದ ಯೋಜನೆಗಳನ್ನು ಅರ್ಪಿಸಲು ಎಷ್ಟನ್ನು ಉಳಿಸಬಹುದು ಎಂಬುದೆಲ್ಲಾ ಈ ರಾಜಕಾರಣಿಗಳ ಮೂಗಿಗೆ ತಕ್ಷಣವೇ ಗೊತ್ತಾಗಿಬಿಡುತ್ತಿತ್ತು.

ರಾಜಕಾರಣಿಗಳು ಮಾತ್ರವಲ್ಲದೆ ಅಧಿಕಾರಿವರ್ಗ ಕೂಡ ಎಲ್ಲಿಯೇ ಗಂಟಿದ್ದರೂ ಅದರ ನಂಟು ಬಿಡದಂತೆ ಆಘ್ರಾಣಿಸುತ್ತಿದ್ದಾರೆ. ಇವರೆಲ್ಲ ಏನಿದ್ದರೂ ತಮ್ಮ ಮೂಗಿನ ನೇರಕ್ಕೇ ಕೆಲಸ ಮಾಡುವುದರಿಂದ ಈ ಮೂಗಿಗೆ ಮತ್ತಷ್ಟು ಕೆಲಸ ಕೊಡುವುದು ಸುಲಭ. ಯಾರ ಜೇಬಿನಲ್ಲಿ, ಯಾರ ಮನೆಯಲ್ಲಿ, ಯಾರ್ಯಾರ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಗಂಟು ಇದೆ ಎಂಬುದನ್ನೆಲ್ಲಾ ಕ್ಷಣಮಾತ್ರದಲ್ಲಿ ಮೂಸಿ ಪತ್ತೆ ಹಚ್ಚುವಂತಾಗಲು ಈ ಕುರಿತು ತರಬೇತಿ ಪಡೆದು ಅಭ್ಯಾಸನಿರತರಾಗಿದ್ದಾರೆ ಎಂದು ತಿಳಿಯಲಾಗಿದೆ.

ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮನುಜ ಪ್ರಾಣಿಗಳ ನಾಯಿ ಬುದ್ಧಿ... ಕ್ಷಮಿಸಿ... ಶ್ವಾನಬುದ್ಧಿ ಹೆಚ್ಚಾಗುತ್ತಿರುವುದರಿಂದ ಇದಕ್ಕೊಂದು ಹೊಸ ಸೇರ್ಪಡೆಯನ್ನು ಈ ವಿಜ್ಞಾನಿಗಳು ಕೊಡುಗೆಯಾಗಿ ನೀಡಿದ್ದು, ಮನುಜಮತವನ್ನು ವಿಶ್ವಪಥದತ್ತ ಕೊಂಡೊಯ್ಯಲು ವೇದಿಕೆ ರೂಪಿಸಿದ್ದಾರೆ. ನಾಯಿಯು ಮಾನವನ ಆತ್ಮೀಯ ಮತ್ತು ನಂಬಿಕಸ್ಥ ಮಿತ್ರನೂ ಆಗಿರುವುದರಿಂದಾಗಿ ಅದನ್ನು ಸುಲಭವಾಗಿ ಮಂಗ ಮಾಡಬಹುದು ಮತ್ತು ಶ್ವಾನರ (ಶ್ವಾನ-ನರ) ಸಂ-ಬಂಧವನ್ನು ಮತ್ತಷ್ಟು ಬಲಪಡಿಸಬಹುದು ಎಂಬುದು ಅವರ ಅನಿಸಿಕೆಯಾಗಿದೆ.

ಮಾನವರೆಲ್ಲರೂ ಇದೀಗ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಣಿಗಳಾಗಹೊರಟ ಸುದ್ದಿ ಬೊಗಳೆ ರಗಳೆಯಲ್ಲಿ ಪ್ರಕಟಗೊಂಡಿರುವುದರ ಬೆನ್ನಿಗೇ, ಬೊಗಳೆ ರಗಳೆ ಬ್ಯುರೋ ಯಾವತ್ತೂ ನಂಬಿರುವ ತತ್ವಾದರ್ಶಗಳು ಪೊಳ್ಳಾಗದಂತಾಗಲು ಈ ವರದಿ ಪ್ರಕಟಿಸಲಾಗಿದೆ.

~.~
  • BogaleRagale ರವರ ಬ್ಲಾಗ್
  • Login or register to post comments
  • 251 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 20, 2006 - 10:53am — Sunil Jayaprakash

Re: ಜಾರಕಾರಣಿಗಳ ಆಘ್ರಾಣ ಸಾಮರ್ಥ್ಯದ ಗುಟ್ಟು

Sunil Jayaprakash's picture

Quote:
ಸರಕಾರದ ಯಾವ್ಯಾವ ಯೋಜನೆಗಳಲ್ಲಿ ಎಲ್ಲಿ ಎಷ್ಟರ ಮಟ್ಟಿಗೆ ಗಂಟು ಸಿಗುತ್ತದೆ, ಎಷ್ಟನ್ನು ಮೇಯಬಹುದು, ಉದಾರ ಕೊಡುಗೆಯಾಗಿ ಮತದಾರರ ಮೂಗಿಗೆ ತುಪ್ಪ ಸವರುವಂತಹ ಮೇಲ್ನೋಟದ ಯೋಜನೆಗಳನ್ನು ಅರ್ಪಿಸಲು ಎಷ್ಟನ್ನು ಉಳಿಸಬಹುದು ಎಂಬುದೆಲ್ಲಾ ಈ ರಾಜಕಾರಣಿಗಳ ಮೂಗಿಗೆ ತಕ್ಷಣವೇ ಗೊತ್ತಾಗಿಬಿಡುತ್ತಿತ್ತು.

ನಾವಾಗಲೀ, ನೀವಾಗಲೀ, ಋಷಿಗಳಾಗಲೀ, ಮುನಿಗಳಾಗಲೀ, ದೇವರಾಗಲೀ, ದಿಂಡರಾಗಲೀ, ಗೆಳೆಯರಾಗಲೀ, ಬಳಗವಾಗಲೀ, ತಲೆತೂರಿಸೊ ಹಾಗಿಲ್ಲಾಆಆಆಆಆಆ, because, ಇದು ಗಮನಗಳ ವಿಷಯ, ಇದು ವಿಷಯ ವಿಷ-ವಿಷಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 20, 2006 - 4:25pm — BogaleRagale

Re: ಜಾರಕಾರಣಿಗಳ ಆಘ್ರಾಣ ಸಾಮರ್ಥ್ಯದ ಗುಟ್ಟು

BogaleRagale's picture

ಹೌದು ಸುನೀಲರೆ,
ನಾವು ತಲೆ ತೂರಿಸೋ ವಿಷ-ಯವೂ ಅಲ್ಲ....
ಮಾತ್ರವಲ್ಲ ಶ್ವಾನಬುದ್ಧಿ... ಅಂದರೆ ಮೂಗು ತೂರಿಸೋ ವಿಷಯವೂ ಅಲ್ಲ Eye-wink
- ಅಸತ್ಯ ಅನ್ವೇಷಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಾಣಿಗಳ 'ಮಾನವನಿಷ್ಠೆ' ಅಗ್ಗಳಿಕೆಗೆ ಪೈಪೋಟಿ !
  • ಮಾತು ಮದಿರೆಯೇ ಮಾನಿನಿಯರಿಗೆ ?
  • ಮಾನವರ ಮೇಧಾ ಶಕ್ತಿ ನಾಪತ್ತೆಗೆ ಕಾರಣ ಇಲ್ಲಿದೆ
  • ಪ್ರೇಮಿಗಳ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ
  • ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ವಿಶ್ವ ಸುಂದರಿ
Syndicate content

ಲೇಖಕರು

BogaleRagale's picture

ಪರಿಚಯ

ಅಸತ್ಯದ ಅನ್ವೇಷಣೆಯಲ್ಲಿ ಜಗವ ಸುತ್ತುವ ಬೊಗಳೂರಿನ ಬೊಗಳೆ ಪಂಡಿತ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 38 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator