ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › BogaleRagale ರವರ ಬ್ಲಾಗ್

OBC ಸರ್ಟಿಫಿಕೆಟ್ ಬಿಕರಿ

June 21, 2006 - 11:39am — BogaleRagale

(ಬೊಗಳೂರು ಮೀಸಲಾತಿ ಬ್ಯುರೋದಿಂದ)
ಬೊಗಳೂರು, ಜೂ.19- ಮೀಸಲಾತಿ ಪರವಾಗಿ ಬೊಗಳೆ ಬ್ಯುರೋದ ಜತೆಗೆ ನಮ್ಮ ಪ್ರೇರಕ ಪತ್ರಿಕೆ ಮಜಾವಾಣಿ ಬ್ಯುರೋ ಕೂಡ ಕೈಜೋಡಿಸಿರುವುದರಿಂದ ಇರುವೆ ಬಲ ಬಂದಂತಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ತೀವ್ರಗತಿಯ ತನಿಖೆ ನಡೆಸಿದ ಬೊಗಳೆ ಬ್ಯುರೋಗೆ ಮತ್ತಷ್ಟು ಅಸತ್ಯದ ತಲೆ ಮೇಲೆ ಹೊಡೆಯುವ ಸಂಚುಗಳ ಬಗ್ಗೆ ತಿಳಿಯಿತು.

ಕೇಂದ್ರ ಸಂಪತ್ತಿನ ಮೂಲದ ಸಚಿವ ದುರ್ಜನ್ ಸಿಂಗ್ ಅವರು OBC ಪರವಾಗಿ ಮೀಸಲಾತಿಗೆ ಬಲವಾಗಿ ಹೋರಾಟ ಮಾಡುತ್ತಿರುವುದರ ಹಿಂದೆ ಅವರಿಗೇ ಮೀಸಲಾತಿ ಪಡೆಯುವ ಪರಮಗುರಿಯೇ ಕಾರಣ ಎಂಬ ಅಂಶ ಇಲ್ಲಿ ಬಯಲಾಗಿದೆ.

ಒಂದೆಡೆ ಹೆಚ್ಚಿಸಿದ "ಖೋಟಾ" ಸೀಟುಗಳಿಗೆ ಸಾಕಷ್ಟು ಬಾಚಿಕೊಂಡು ಸೂಕ್ತ ಜಾಗ ಮಾಡುವುದು ಹೇಗೆ ಎಂದು ಬೀರ್‌ಅಪ್ಪ ಮೂಗಿಲಿ ಅವರು ತಲೆಯನ್ನು ರಪರಪನೆ ಕೆರೆದುಕೊಳ್ಳುತ್ತಿದ್ದರೆ, ಹೇಗಾದರೂ ಮಾಡಿ ಈ ದೇಶದಲ್ಲಿ ನಾವೂ ಬದುಕಬೇಕು, ಅದಕ್ಕಾಗಿ OBC ಸರ್ಟಿಫಿಕೆಟ್ ಪಡೆದುಕೊಳ್ಳಬೇಕೆಂದು ಘೋರವಾಗಿ ಚಿಂತಿಸುತ್ತಿರುವವರಿಗೆ ಸರಕಾರ ಈ ರೀತಿ ಸಹಾಯ ಮಾಡಲು ಹೊರಟಿರುವುದು ಸರಕಾರದ ಜನಪರ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ವಿಶ್ಲೇಷಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಜಾತ್ಯಾಧಾರಿತ ರಾಷ್ಟ್ರ ಎಂಬ ಬಿರುದು ದೊರಕಿಸಿಕೊಡುವುದೇ ನಮ್ಮ ಮೂಲ ಗುರಿ ಎಂದು ಈಗಾಗಲೇ ಸರಕಾರ ಸ್ಪಷ್ಟಪಡಿಸಿದೆ.

ಅಟಲ್ ಬಿಹಾರಿ ವಾಜಪೇಯಿ, ಪ್ರಕಾಶ್ ಕಾರಟ್, ರಾಜನಾಥ್ ಸಿಂಗ್ ಹಾಗೂ ಅರ್ಜುನ್ ಸಿಂಗ್‌ರಂಥವರಿಗೇ ಒಂದೇ ಕ್ಷಣದಲ್ಲಿ OBC ಸರ್ಟಿಫಿಕೆಟ್ ದೊರಕಿಸಿಕೊಳ್ಳಬಹುದು ಎಂಬ ಅಂಶವನ್ನು ಇಂಡಿಯನ್ ಎಕ್ಸ್ ಪ್ರೆಸ್ ರೈಲು ಜೂ.17ರ ಮುಖಪುಟದಲ್ಲಿ ತನಿಖಾ ವರದಿ ಪ್ರಕಟಿಸಿ ಭಾರತೀಯರಿಗೆ ಬದುಕಲು ದಾರಿಯೊಂದನ್ನು ತೋರಿಸಿತ್ತು.

ಮಜಾವಾಣಿ ಹೋರಾಟ

ಈ ಮಧ್ಯೆ, ಬೊಗಳೆ-ರಗಳೆಯ ನೆಟ್ಟೊದೆತಗಳ ಸಂಖ್ಯೆ ಒಂದೇ ಸಮನೆ ಹೆಚ್ಚಾದ ಕಾರಣ ಬ್ಯುರೋದಲ್ಲಿ ಭೂಕಂಪನದ ಅನುಭವವಾದ ಕಾರಣ ಅದರ ಹಿನ್ನೆಲೆ ಶೋಧಿಸಹೊರಟಾಗ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ.

ಯಾರಿಂದಲೂ ಹಣ ಪಡೆಯದೆ ಅಸತ್ಯಾನ್ವೇಷಿ ನಡೆಸಿದ ತನಿಖೆ ವೇಳೆ, ಬ್ಲಾಗಿಸುವವರಿಗೂ ಶೇ.27 ಮೀಸಲಾತಿ ಬೇಕು ಅಂತ ಹೋರಾಟ ಮಾಡುತ್ತಿರುವ ಮಜಾವಾಣಿ ಬ್ಯುರೋದ ವಿಷಾದಾಂಕದ ಮೂಲಕವೇ ಈ ಹಿಟ್ಟುಗಳು (ನೆಟ್ಟೊದೆತಗಳು) ಬಂದಿದ್ದವು ಅಂತ ತಿಳಿಯಿತು.

ಇಡೀ ನೆಟ್ಟೋದುಗರನ್ನು ನಗೆಯ ನೆಟ್ಟಿನಲ್ಲಿ ಸಿಲುಕಿಸಿ, ಅವರ ಮನದ ದುಗುಡವನ್ನು ಒಂದೇ ವಾಕ್ಯದ ಡೋಸ್ ನೀಡಿ, ಅರೆಕ್ಷಣದಲ್ಲಿ ನಿವಾರಿಸುತ್ತಾ, ನೆಟ್ಟಿಗರಿಗೆ ಗಟ್ಟಿಗತನದ ನಗೆಯ ಅಮಲೇರಿಸಿದ್ದ ಮತ್ತು ಅಮಲೇರಿಸುತ್ತಲೇ ಇರುವ ಮಜಾವಾಣಿ ಬ್ಯುರೋ, ಬೊಗಳೆ-ರಗಳೆ ಉತ್ತಮ ಗುಣಮಟ್ಟದ್ದು, ಜನಪ್ರಿಯ ಎಂಬಿತ್ಯಾದಿ ಇಲ್ಲ ಸಲ್ಲದ ಅಪಾದನೆಗಳನ್ನು ಮಾಡಿಯಾದರೂ ಮೀಸಲಾತಿ ಪಡೆಯಬೇಕು ಎಂಬ ಕಾರಣಕ್ಕೆ ಮೀಸಲಾತಿ ಪರ ಹೋರಾಟ ಕಣಕ್ಕಿಳಿದಿದೆ ಎಂದು ತಿಳಿದುಬಂದಿದೆ.

ಈ ಕಾರಣಕ್ಕೆ ಮಜಾವಾಣಿ ಬ್ಯುರೋ ಸಂಪಾದಕರೂ, ಪ್ರಕಾಶಕರೂ, ಓದುಗರೂ, ವರದಿಗಾರರೂ ಮತ್ತು ಎಲ್ಲವೂ ಆಗಿರುವ ವಾರ್ತಾವಿದೂಷಕರಿಗೆ ನೆಟ್ಟೊದೆತಗಳಿಗೆ ಪ್ರತಿಯಾಗಿ ಸಾವಿರ ನಮನಗಳನ್ನು ಕೊಡಲು ಏಕಸದಸ್ಯ ಬೊಗಳೆ ರಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

~.~
  • BogaleRagale ರವರ ಬ್ಲಾಗ್
  • Login or register to post comments
  • 701 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಾತು ಮದಿರೆಯೇ ಮಾನಿನಿಯರಿಗೆ ?
  • ರಾಜಕಾರಣಿಗಳ ಬಾಯಲ್ಲಿ 'ಬೊಗಳೆ' ಮಂತ್ರ!
  • 20K ಒದೆತಗಳ ಸಂ-ಕ್ರಾಂತಿ
  • ಹೋರಾಟಕ್ಕೆ ಕಿಡಿ ಹಚ್ಚಿಸಿದ ವಿಪರೀತ ಸಿಂಗ್!
  • ಪ್ರಾಣಿಗಳ 'ಮಾನವನಿಷ್ಠೆ' ಅಗ್ಗಳಿಕೆಗೆ ಪೈಪೋಟಿ !
Syndicate content

ಲೇಖಕರು

BogaleRagale's picture

ಪರಿಚಯ

ಅಸತ್ಯದ ಅನ್ವೇಷಣೆಯಲ್ಲಿ ಜಗವ ಸುತ್ತುವ ಬೊಗಳೂರಿನ ಬೊಗಳೆ ಪಂಡಿತ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 40 ಅತಿಥಿಗಳು ಆನ್ಲೈನ್ ಇರುವರು.


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator