ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › BogaleRagale ರವರ ಬ್ಲಾಗ್

ಸಮ್ಮಿಶ್ರಣ ಸರಕಾರದಲ್ಲಿ ನೈಜ ಕಿತ್ತಾಟವೇಕಿಲ್ಲ?

October 30, 2006 - 10:58am — BogaleRagale

(ಬೊಗಳೂರು ಕಚ್ಚಾಟ ಬ್ಯುರೋದಿಂದ)
ಬೊಗಳೂರು, ಅ.30- ಜನತಾ ದಳದ ತೆನೆ ಹೊತ್ತ ರೈತ ಮಹಿಳೆಯ ಬದಲಾಗಿ ಹಿಂದಿನ ಚಕ್ರವೇ ಉರುಳಿಸಿದ ಪರಿಣಾಮವಾಗಿ ಮುಖ್ಯಮಂತ್ರಿ ಪಟ್ಟದಿಂದ ದಿಢೀರನೆ ಕೆಳಗೆ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ ಭವಿಷ್ಯ ನುಡಿಯಲು ಹೊರಟಿದ್ದು ಕೇಳಿ ಆಸಕ್ತಿಯಿಂದ ಬೊಗಳೆ ರಗಳೆ ಬ್ಯುರೋ ಹೀಗೇ ತಿರುಗಾಡಿಕೊಂಡು ಅತ್ತ ಧಾವಿಸಿ ಬರಲು ಹೊರಟಿತು.

ಕಿತ್ತಾಟದಿಂದಲೇ ಸರಕಾರ ಪತನವಾಗುತ್ತದೆ ಎಂದು ಅವರು ಅನುಭವದ ನುಡಿಗಳಿಂದ ಭವಿಷ್ಯ ನುಡಿದಿದ್ದರೂ, ಈ ಬಾರಿ ಅದನ್ನು ಪ್ರಯೋಗ ಮಾಡಿಯೇ ತೀರಬೇಕು ಎಂದು ಬ್ಯುರೋ ತೀರ್ಮಾನಿಸಿ, ಕೆಲವೊಂದು ಹಣ್ಣು ಹಂಪಲುಗಳನ್ನು, ಮಾಲೆಪಟಾಕಿಯನ್ನು, ಕೊಳೆತ ಟೊಮೆಟೊವನ್ನು ಹಿಡಿದುಕೊಂಡು ಹೊರಟಿತು.

ಉಭಯ ಬಣಗಳಿಗೂ ಸರಿ ಸಮಾನಾಗಿ ಹಂಚುವ ಬದಲು, ಕಡಿಮೆ ಶಾಸಕರನ್ನು ಹೊಂದಿರುವ ತೆನೆ ಹೊತ್ತ ಮಹಿಳೆಗೆ ಹೆಚ್ಚು ಕೊಳೆತ ಟೊಮೆಟೋವನ್ನೂ, ಹೆಚ್ಚು ಶಾಸಕ ಬಲವಿರುವ ಕಮಲನಿಗೆ ಕಡಿಮೆ ಕೊಳೆತ ಮೊಟ್ಟೆಯನ್ನೂ ನೀಡಿ ಏನಾಗುತ್ತದೆ ಎಂದು ಕಾದು ಕೂರಲಾಯಿತು.

ಎಷ್ಟು ಕಾದರೂ ಏನೂ ಆಗಲೇ ಇಲ್ಲ. ಅವರದು ತಮಗೆ ಬೇಕು, ಇವರದು ಅವರಿಗೆ ಬೇಕು ಅಂತ ಅವರ್ಯಾರೂ ಎಳೆದಾಟ, ಕಿತ್ತಾಟ ಮಾಡಲೇ ಇಲ್ಲ!!!!

ಇದರ ಹಿಂದಿನ ರಹಸ್ಯ ಭೇದಿಸಲು ಹೊರಟಾಗ ಒಂದೇ ಒಂದು ವಿಷಯ ಗೊತ್ತಾಯಿತು.

ಅದೆಂದರೆ, ಇವರೆಷ್ಟು ಕಿತ್ತಾಟ ಮಾಡಿದರೂ ಏನೂ ದಕ್ಕುವುದಿಲ್ಲ. ಈಗಾಗಲೇ ತೆನೆ ಹೊತ್ತ ರೈತ ಮಹಿಳೆಯೂ ಕೈಯೂ ಪರಸ್ಪರ ಕಿತ್ತಾಡುತ್ತಲೇ ಎಲ್ಲವನ್ನೂ ಬರಿದು ಮಾಡಿದ್ದರಿಂದ, ಈಗ ಕಿತ್ತಾಟ ಮಾಡಿ ಪ್ರಯೋಜನವಿಲ್ಲ ಎಂದು ಉಭಯ ಬಣಗಳೂ ಸುಮ್ಮನಿದ್ದವು!

ಸಮ್ಮಿಶ್ರ ಸರಕಾರಗಳು ಈ ವಿಷಯದಲ್ಲಿ ಕಚ್ಚಾಟದೇ ಇರುವುದು, ಬರೇ ಮತದಾರರನ್ನು ಓಲೈಸಲು ಕೆಲವೊಂದಿಷ್ಟು ವಿಷಯಗಳನ್ನು ಎಳೆದು ತಂದು ರಾದ್ಧಾಂತ ಮಾಡುವುದು ಯಾಕೆಂಬುದರ ಹಿಂದಿನ ರಹಸ್ಯ ಬಯಲು ಮಾಡಿದ ಸಂತೋಷದಲ್ಲಿ ಬೊಗಳೆ ಬ್ಯುರೋ ಗಂಟು ಮೂಟೆ ಕಟ್ಟಿ ವಾಪಸಾಯಿತು.

Bogaleragale.blogspot.com

~.~
  • BogaleRagale ರವರ ಬ್ಲಾಗ್
  • Login or register to post comments
  • 321 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಾಣಿಗಳ 'ಮಾನವನಿಷ್ಠೆ' ಅಗ್ಗಳಿಕೆಗೆ ಪೈಪೋಟಿ !
  • ಬಡತನ ಹೆಸರು ಚಿರಸ್ಥಾಯಿಯಾಗಿಸಲು ಪಣ
  • Theft Tech. ಕೋರ್ಸ್
  • OBC ಸರ್ಟಿಫಿಕೆಟ್ ಬಿಕರಿ
  • ಮಾತು ಮದಿರೆಯೇ ಮಾನಿನಿಯರಿಗೆ ?
Syndicate content

ಲೇಖಕರು

BogaleRagale's picture

ಪರಿಚಯ

ಅಸತ್ಯದ ಅನ್ವೇಷಣೆಯಲ್ಲಿ ಜಗವ ಸುತ್ತುವ ಬೊಗಳೂರಿನ ಬೊಗಳೆ ಪಂಡಿತ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕನ ಮಗಳು ಇಂಜಿನೀರ್ ಆದಾಗ :)
  • ನಗಲಿಕ್ಕೊಂದು ಚಿತ್ರ 10
  • ಕನ್ನಡೀಕರಿಸಿದ ಶ್ಲೋಕಗಳು - ೨
  • ಹಾಸ್ಯ - ೭
  • ಕನ್ನಡೀಕರಿಸಿದ ಶ್ಲೋಕಗಳು - ೧
  • ನವೆಂಬರ್ ೧೮
  • ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ
  • ಕಾಸ್ಟ್ ಕಟ್ಟಿಂಗ್ .......ಬದಲಾವಣೆಗಳು.
  • ಓದಿದ್ದು ಕೇಳಿದ್ದು ನೋಡಿದ್ದು-84 ಕದ್ದು ಕ್ಲಿಕ್ಕಿಸುವವರು
  • ಹುರುಪುಳ್ಳವರಿಗೆ ಮಾಡಲಾಗದ್ದೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಅಕ್ಕನ ಮಗಳು ಇಂಜಿನೀರ್ ಆದಾಗ :)
    November 20, 2008 - 4:25am
  • shaamala
    ಉ: ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...
    November 20, 2008 - 4:06am
  • hpn
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 20, 2008 - 1:12am
  • hpn
    ಉ: ಹುಟ್ಟು ಹಬ್ಬದ ಶುಭಾಶಯಗಳು
    November 20, 2008 - 12:59am
  • hpn
    ಉ: ನಿತ್ಯ ಹುಟ್ಟಿ ಮುಳುಗುವ ರವಿ.
    November 20, 2008 - 12:36am
  • ಸಂಗನಗೌಡ
    ಉ: ನವೆಂಬರ್ ೧೮
    November 20, 2008 - 12:32am
  • palachandra
    ಉ: ನವೆಂಬರ್ ೧೮
    November 20, 2008 - 12:22am
  • hpn
    ಉ: ನವೆಂಬರ್ ೧೮
    November 20, 2008 - 12:09am
  • shylaswamy
    ಉ: ನವೆಂಬರ್ ೧೮
    November 20, 2008 - 12:09am
  • Achala Sethu
    ಉ: ಕತೆ: ಬೇರುಗಳಂತಹ ಬಳ್ಳಿಗಳು
    November 20, 2008 - 12:09am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 123 ಅತಿಥಿಗಳು ಆನ್ಲೈನ್ ಇರುವರು.


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator