ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › BogaleRagale ರವರ ಬ್ಲಾಗ್

ಪ್ರಧಾನಿ ಪದೇ ಪದೇ ವಿದೇಶ ಪ್ರಯಾಣ ಗುಟ್ಟು ರಟ್ಟು

October 31, 2006 - 11:21am — BogaleRagale

(ಬೊಗಳೂರು ನಿಧಾನಿ ಬ್ಯುರೋದಿಂದ)
ಬೊಗಳೂರು, ಅ.31- ಮೇರಾ ಮಹಾನ್ ಭಾರತದ ನಿಧಾನಿ ಪ್ರಧಾನಿ ಮನಮೋಹಕ ಸಿಂಗ್ ಅವರು ಪದೇ ಪದೇ ವಿದೇಶ ಪ್ರಯಾಣ ಮಾಡುತ್ತಿರುವುದೇಕೆ ಎಂಬುದನ್ನು ಶೋಧಿಸಲು ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋ ಕೂಡ ವಿದೇಶ ಪ್ರವಾಸದ ಮೇಲೆ ಕಣ್ಣಿಟ್ಟು ತನಿಖೆ ನಡೆಸಲಾರಂಭಿಸಿದೆ.

ಹವಾನಾದಲ್ಲಿ ಹೋಗಿ ಮುಷರಫ್ ಜತೆ ಶಾಂತಿಯ ಹವಾ ಅನುಭವಿಸಿ ಬರುವಾಗ ವಿರೋಧ ಪಕ್ಷಗಳು ಗಲಾಟೆ ಎಬ್ಬಿಸಿದವು. ಅಂತೆಯೇ ರಷ್ಯಾ, ದಕ್ಷಿಣ ಆಫ್ರಿಕಾ, ಫಿನ್ಲೆಂಡ್, ಬ್ರಿಟನ್ ಅಂತೆಲ್ಲಾ ತಿರುಗಾಟ ಮುಗಿಸಿ ಮರಳಿ ಬರುವಾಗ ಭಾರತದಲ್ಲಿ ಗಲಾಟೆ, ಭಯೋತ್ಪಾದನೆ ಅಶಾಂತಿ, ನಕ್ಸಲ್ ಹಿಂಸಾಚಾರ, ಯುಪಿಎಯೊಳಗೆ ಭಿನ್ನಮತ....

ಈ ಕುರಿತಾಗಿಯೇ ತನಿಖೆ ನಡೆಸಲಾಗಿದ್ದು, ಹಲವಾರು ವಿಷಯಗಳು ಬಯಲಾಗಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ವಿದೇಶಾಂಗ ಸಚಿವರ ನೇಮಕಕ್ಕೆ ಹೆಚ್ಚುತ್ತಿರುವ ಒತ್ತಡ.ಯಾಕೆ ಎಂದು ನಿಧಾನಿಯ ಆಪ್ತರನ್ನು ಪ್ರಶ್ನಿಸಿದಾಗ ಅವರು ಹೇಳದಿದ್ದ ವಿಷಯವೆಂದರೆ, ವಿದೇಶಾಂಗ ಸಚಿವರ ನೇಮಕವಾದರೆ ತಮಗೆಲ್ಲಿ ವಿದೇಶ ಪ್ರವಾಸದ ಯೋಗ ತಪ್ಪಿ ಹೋಗುತ್ತದೆ ಎಂಬ ಆತಂಕ.

ಹಾಗಿದ್ದರೆ ಅವರು ವಿದೇಶ ಪ್ರಯಾಣಕ್ಕೆ ಹಾತೊರೆಯುತ್ತಿರುವುದೇಕೆ? ಎಂದು ಕೇಳಿದಾಗ... ಮೊದಲಿಗೆ ಉತ್ತರಿಸಲು ಹಿಂದು ಮುಂದು ನೋಡಿದರೂ, ಆ ಬಳಿಕ ಬಾಯಿ ಮುಚ್ಚಿ ವಿಷಯ ಹೇಳಿಯೇ ಬಿಟ್ಟರು.

ಸರಕಾರ ಅಧಿಕಾರಕ್ಕೆ ಬಂದು ಅದರ ಅರ್ಧ ಅವಧಿ ಮುಗಿಯುತ್ತಾ ಬಂದಿದೆ. ಈ ಅವಧಿಯಲ್ಲಿ ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿಯಲ್ಲಿ ಅದು ಹೇಗೆ ಬದುಕುತ್ತಾರೋ ಗೊತ್ತಿಲ್ಲ. ಹಾಗಾಗಿ ಭಾರತದಲ್ಲಿ ಜೀವಿಸುವುದಕ್ಕಿಂತ ವಿದೇಶ ವಾಸವೇ ಅಗ್ಗದ ಸಂಗತಿ. ಅಲ್ಲೆಲ್ಲಾ ಪೆಟ್ರೋಲ್ ಬೆಲೆ ಏರಿತು, ತರಕಾರಿ ಬೆಲೆ ಏರಿತು ಅಂತ ಹೇಳಿಕೊಳ್ಳುವವರೂ ಇಲ್ಲ. ಯಾವ ಮಂಡೆ ಬಿಸಿಯೂ ಇಲ್ಲ ಎಂಬುದು ನಿಧಾನಿ ಕಚೇರಿಯಿಂದ ದೊರೆಯದ ಸಮಜಾಯಿಷಿ.

ಅದಲ್ಲದೆ, ಭಾರತದಲ್ಲಿದ್ದರೆ ಎಡಪಕ್ಷಗಳನ್ನು ಆಗಾಗ್ಗೆ ಎದುರಿಸಬೇಕು, ಮಾಜಿ ವಿದೇಶಾಂಗ ಸಚಿವ ನಟವರ ಸಿಂಗರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ನೋಸಿಯಾ ಗಾಂಧಿ ಕೂಡ ಯಾಕೋ ಮುಗುಂ ಆಗಿದ್ದಾರೆ... ಈ ಎಲ್ಲ ತೊಂದರೆ ತಾಪತ್ರಯಗಳು ನಮಗೇಕೆ ಎಂಬುದು ಅವರ ಅಭಿಮತವೆಂದು ತಿಳಿದುಬಂದಿದೆ.

ಇಲ್ಲಿದ್ದರೆ ಒಂದಿಲ್ಲೊಂದು ಹಗರಣ ಬಯಲಾಗುತ್ತಾ ಇರುತ್ತದೆ, ಯುಪಿಎ ಸರಕಾರ ಮಾಡಿದ 'ಮಹಾನ್' ಕಾರ್ಯಗಳಿಗೆಲ್ಲಾ ನ್ಯಾಯಾಂಗವು ತಲೆ ತೂರಿಸಿ ಹಿಂದೆ ಜಗ್ಗುತ್ತಾ ಅಪಮಾನ ಮಾಡುತ್ತಿದೆ, ಈ ಕೋರ್ಟುಗಳು ಕೂಡ ನಮಗೆ ಮನಬಂದಂತೆ ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವೆನ್ನಲಾಗುತ್ತಿದೆ.

-----------------------

ಸುವರ್ಣ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕೊಡುಗೆ.....

ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ....

ನಾಳಿನ ಸಂಚಿಕೆಯಲ್ಲಿ....

ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡವೇ ನಮ್ಮ ತಾಯಿ ತಂದೆ ಎಂದೆಲ್ಲಾ ಹೇಳುತ್ತಿರುವವರಿಗಾಗಿಯೇ ಸಿದ್ಧಪಡಿಸಲಾದ ವಿಶೇಷ ಕೊಡುಗೆ.

ಹೆಚ್ಚಿನ ವಿವರಗಳಿಗೆ ನಾಳಿನ ಬೊಗಳೆ ರಗಳೆ ನೋಡಿ...!!!

ನೋಡಲು ಮರೆಯದಿರಿ.... ಮರೆತು ನಿರಾಶರಾಗದಿರಿ!!!

bogaleragale.blogspot.com

~.~
  • BogaleRagale ರವರ ಬ್ಲಾಗ್
  • Login or register to post comments
  • 300 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಡವರ ನಿರ್ಮೂಲನೆಯೇ UPA ಗುರಿ: ನಿಧಾನಿ
  • ಮಾತು ಮದಿರೆಯೇ ಮಾನಿನಿಯರಿಗೆ ?
  • OBC ಸರ್ಟಿಫಿಕೆಟ್ ಬಿಕರಿ
  • ಹೋರಾಟಕ್ಕೆ ಕಿಡಿ ಹಚ್ಚಿಸಿದ ವಿಪರೀತ ಸಿಂಗ್!
  • ಕನ್ನಡಕ್ಕಳಿವಿಲ್ಲ, ಬೆಂಗಳೂರಲ್ಲಿ ಜತನದಿಂದಿದೆ!!!
Syndicate content

ಲೇಖಕರು

BogaleRagale's picture

ಪರಿಚಯ

ಅಸತ್ಯದ ಅನ್ವೇಷಣೆಯಲ್ಲಿ ಜಗವ ಸುತ್ತುವ ಬೊಗಳೂರಿನ ಬೊಗಳೆ ಪಂಡಿತ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:04am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:00am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:56am
  • csomsekraiah
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 10:46am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:46am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 65 ಅತಿಥಿಗಳು ಆನ್ಲೈನ್ ಇರುವರು.


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator