ಶಾಂತಣ್ಣ ಸತ್ತು ಶಾಂತನಾದ!
ನಾನು ಮೂರನೇ ತರಗತಿಯಲ್ಲಿದ್ದಾಗಲಿಂದಲೂ ಈ ಶಾಂತಣ್ಣನನ್ನು ಬಲ್ಲೆ. ಊರಿನಲ್ಲಿ ಏನೇ ಕಾರ್ಯಕ್ರಮವಿರಲಿ, ಈತ ಹಾಜರಾಗುತ್ತಿದ್ದ. ಶ್ರಾವಣ ಮಾಸದಲ್ಲಿ ಕರೆದವರ ಮನೆಗೆ ಹೋಗಿ ಶನಿಮಹಾತ್ಮೆ ಕಥೆ ಓದುತ್ತಿದ್ದ. ಹೆಚ್ಚು ಬಾರಿ ಅವನು ಅಥವಾ ಜೊತೆಗೆ ಇನ್ನೊಬ್ಬರು ಇರುತ್ತಿದ್ದರು. ಎಲ್ಲೋ ಒಂದೆರಡು ಬಾರಿ ಏಳೆಂಟು ಜನರ ಗುಂಪು ಮಾಡಿಕೊಂಡು ಕಥೆ ಓದುವುದಕ್ಕೆ ಬಂದದ್ದನ್ನು ನೋಡಿದ್ದೇನೆ. ಅದಕ್ಕೇನೂ ಆತ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಊಟ, ತಿಂಡಿ, ಬೀಡಿಕಾಸು ಮಾತ್ರ. ಆದರೆ ಕರೆಸಿದ ಮನೆಯವರು ಕೊಟ್ಟರೆ ಬೇಡವೆನ್ನುತ್ತಿರಲಿಲ್ಲ. Read more about ಶಾಂತಣ್ಣ ಸತ್ತು ಶಾಂತನಾದ!







