25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

BRS ರವರ ಬ್ಲಾಗ್

2010 ಸೆಪ್ಟಂಬರ್ 15 ಐತಿಹಾಸಿಕ ದಿನವಾಗಬೇಕು

September 9, 2010 - 11:22am
BRS

ಮೊನ್ನೆ ಮೊನ್ನೆ ಪೇಜಾವರ ಸ್ವಾಮೀಜಿಗಳು ದಲಿತಕೇರಿಯಲ್ಲಿ ಪಾದಯಾತ್ರೆ ಮಾಡಿ ಜಾತಿ ನಿರ್ಮೂಲನೆಯ ಹಾದಿಯಲ್ಲಿ ಆರಂಭದ ಹೆಜ್ಜೆಗಳನ್ನು ಇಟ್ಟರು. (ಈ ಹಿಂದೆಯೂ ಒಮ್ಮೆ ಅವರು ದಲಿತಕೇರಿಗೆ ಬೇಟಿ ಕೊಟ್ಟಿದ್ದು ಉಂಟು). ನಾಡಿನಾದ್ಯಂತ ಇದರ ಬಗ್ಗೆ ಬಿಸಿ ಬಿಸಿ ಚರ್ಚೆಗಳಾದವು. ಮಾದ್ಯಮಗಳೂ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟವು. ಸುವರ್ಣ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಎಲ್. ಹನುಮಂತಯ್ಯನವರು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಹಿನ್ನೆಲೆಯಲ್ಲಿ ಅಸ್ಪೃಷ್ಯತೆಯ ನಿರ್ಮೂಲನೆಗೆ ಇರುವ ಎಡರು ತೊಡರುಗಳನ್ನು ಗುರುತಿಸಿದರೆ, ಗೀತಾ ರಾಮಾನುಜಂ ಅವರು ಕೇವಲ ಮೇಲ್ವರ್ಗದವರು ಪ್ರಯತ್ನ ಪಟ್ಟರೆ ಸಾಲದು; ಅಸ್ಪೃಷ್ಯರೂ ಸಹಕರಿಸಬೇಕು. ಅಸ್ಪೃಷ್ಯತೆಯ ನಿವಾರಣೆಗಾಗಿ ನಾವು (ಮೇಲ್ವರ್ಗ?) ಏನೂ ಮಾಡಲು ಸಿದ್ಧರಿದ್ದೇವೆ. Read more about 2010 ಸೆಪ್ಟಂಬರ್ 15 ಐತಿಹಾಸಿಕ ದಿನವಾಗಬೇಕು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಗೋಪಿನಾಥ ರಾವ್ ಅವರ ’ಸಾರ್ವಭೌಮ’ದ ಕೆಲವು ಕಥೆಗಳು: ಸ್ವಗತ

September 3, 2010 - 10:50am
BRS

ಇತ್ತೀಚಿಗೆ ಗೋಪಿನಾಥ ರಾವ್ ಅವರ ಬೇಟಿಯಾಗಿತ್ತು. ಅವರ ಒಂದೆರಡು ಕಥೆಗಳನ್ನು ಹಿಂದೆ ಓದಿದ್ದೆ. ಅದ್ಭುತವಾದ ಕಥೆಗಾರಿಕೆ ಅವರಲ್ಲಿದೆ ಎಂದು ಅರ್ಥಮಾಡಿಕೊಂಡಿದ್ದೆ. ಅವರ ಚೊಚ್ಚಲ ಕಥಾ ಸಂಕಲನ ಸಆರ್ವಭೌಮ ದೂರದ ದುಬೈನಲ್ಲಿ ಬಿಡುಗಡೆಯಾಗಿತ್ತು. ಮೊನ್ನೆ ಅವರು ಬಂದಾಗ ಕಥಾಸಂಕಲನವನ್ನು ಕೊಟ್ಟರು. ಅವರನ್ನು ಬೀಳ್ಕೊಟ್ಟ ತಕ್ಷಣ ನಾನು ಕೆಲವು ಕಥೆಗಳ ಮೇಲೆ ಕಣ್ಣಾಡಿಸಿದೆ. ಅದರ ಹಲವಾರು ಕಥೆಗಳು ಒಂದೇ ಬಾರಿಗೆ ನನ್ನಿಂದ ಓದಿಸಿಕೊಂಡವು. ಒಂದೇ ಒಂದು ಪದ ಆಚೀಚೆಯಾಗದಂತೆ ಬರೆಯುವ ಅವರ ಕಲೆಗಾರಿಕೆ ನನಗೆ ಇಷ್ಟವಾಯಿತು. ಒಂದು ಕಥೆಯಾದ ಮೇಲೆ ಅದರ ಬಗ್ಗೆ ನನಗನ್ನಿಸಿದ್ದನ್ನು ಆಗಲೇ ಟೈಪಿಸಿಬಿಡುತ್ತಿದ್ದೆ. ಅಂತಹ ಅನಿಸಿಕೆಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಬಯಸಿದ್ದೇನೆ. ಆ ಸಂಕಲನದ ಇನ್ನುಳಿದ ಕಥೆಗಳನ್ನು ಓದಿದ ನಂತರ ಮತ್ತೆ ಬರೆಯುತ್ತೇನೆ. Read more about ಗೋಪಿನಾಥ ರಾವ್ ಅವರ ’ಸಾರ್ವಭೌಮ’ದ ಕೆಲವು ಕಥೆಗಳು: ಸ್ವಗತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಸಹೃದಯ

August 12, 2010 - 2:00pm
BRS

ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯ ಪರಿಕಲ್ಪನೆಯಿದೆ

Read more about ಸಹೃದಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಮುತ್ತಿನ ತೆನೆ : ಜಾನಪದ ಹಾಡುಗಳ ಸಂಗ್ರಹ

June 29, 2010 - 1:51pm
BRS

ಗೆಳೆಯ ಬಂಡ್ಲಹಳ್ಳಿ ವಿಜಯಕುಮಾರ್ ‘ಮುತ್ತಿನ ತೆನೆ’ ಎಂಬ ಹೆಸರಿನಲ್ಲಿ ಒಂದುನೂರ ಮೂವತ್ತಮೂರು ಜಾನಪದ ಹಾಡುಗಳನ್ನು ಒಂದೆಡೆ ಸಂಪಾದಿಸಿದ್ದಾರೆ. ಜಾಗೃತಿ ಪ್ರಿಂಟರ‍್ಸ್ ಪ್ರಕಟಣೆ ಮಾಡಿದೆ. ಸ್ವತಃ ಜಾನಪದ ಕಲಾವಿದರೂ ತಜ್ಞರೂ ಆದ ವಿಜಯಕುಮಾರ್ ಅತ್ಯಂತ ಪರಿಶ್ರಮದಿಂದ ಸಾಧ್ಯವಾದಷ್ಟೂ ಪಾಠದ ಗೊಂದಲಗಳನ್ನು ನಿವಾರಿಸಿ, ಕಾಗುಣಿತದ ತಪ್ಪುಗಳನ್ನು ಇಲ್ಲವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಜನಪ್ರಿಯ ಗೀತೆಗಳಿಂದ ಹಿಡಿದು, ಜನಪ್ರಿಯವಲ್ಲದಿದ್ದರೂ ಅತ್ಯಂತ ಮೌಲಿಕವಾದ ಗೀತೆಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಈ ನಿಟ್ಟಿನಲ್ಲಿ ವಿಜಯಕುಮಾರ್ ಅಭಿನಂದನಾರ್ಹರು.

ಆಯ್ದ ಒಂದೆರಡು ಗೀತೆಗಳನ್ನು ಇಲ್ಲಿ ನೀಡುತ್ತಿದ್ದೇನೆ.

೧. ಸರಸ್ವತಿ

ಸರಸೋತಿ ಎಂಬೋಳು ಸರುವಕ್ಕೆ ದೊಡ್ಡೋಳು

ಸ್ವರವ ಹಾಕ್ಯವ್ಳೆ ಐನೂರು - ವಜ್ರಾವ

ತಿರುವೌಳೆ ಕುಣಿಕೆ ಕೊರಳಲ್ಲಿ

 

ನಗ್ಗಾಲ ಮರದಡಿ ನಿದ್ರೆ ಮಾಡೋದ ಬಿಟ್ಟು

ಎಗ್ಗಿಲ್ದೆ ಬಂದೆ ನಿನ ಬಳಿಗೆ - ಸರಸೋತಿ

ಚೆಂದುಳ್ಳ ಹಾಡ ಕಲಿಸಮ್ಮ

  Read more about ಮುತ್ತಿನ ತೆನೆ : ಜಾನಪದ ಹಾಡುಗಳ ಸಂಗ್ರಹ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಸಮವಸ್ತ್ರ : ಒಂದು ಹಳೆಯ ಕಥೆ

June 7, 2010 - 2:37pm
BRS
[ಇಂದು ನಮ್ಮ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ತರಗತಿಗಳು ಪ್ರಾರಂಭವಾದವು. ಬಣ್ಣ ಬಣ್ಣದ ಬಟ್ಟೆ ತೊಟ್ಟು ಸಂಭ್ರಮದಿಂದ (ಆತಂಕದಿಂದಲೂ ಹೌದು) ಕಾಲೇಜಿನ ಒಳಗೆ ಕಾಲಿಡುತ್ತಿದ್ದ ಹುಡುಗ-ಹುಡುಗಿಯರನ್ನು ನೋಡಿ ನಾನು ಸುಮಾರು ಒಂಬತ್ತು ವರ್ಷಗಳ [15.08.2001] ಹಿಂದೆ ಬರೆದಿದ್ದ ಸಮವಸ್ತ್ರ ಎಂಬ ಕಥೆ ನೆನಪಾಯಿತು. ಆ ಕಥೆಗೂ ಹೀಗೇ ಸಂಭ್ರಮದಿಂದ ಕಾಲೇಜಿಗೆ ಬಂದ ಸೀಮಾ ಎಂಬ ಹುಡುಗಿಯೊಬ್ಬಳು ಪ್ರೇರಣೆಯಾಗಿದ್ದಳು! ತನ್ನ ಸ್ನಿಗ್ಧ ಚೆಲುವಿನಿಂದ, ಮುಗ್ಧಮುಖದಿಂದ ಅದಕ್ಕಿಂತಲೂ ಹೆಚ್ಚಾಗಿ ಬೇರೆ ಬೇರೆ ತರಗತಿಗಳ ಹಿರಿ ಯಹುಡುಗರ ಜೊತೆಯಲ್ಲೂ ಅವಳು ಬೆರೆಯುತ್ತಿದ್ದ ರೀತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದಳು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

Pages

Subscribe to RSS - BRS ರವರ ಬ್ಲಾಗ್