ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Chamaraj ರವರ ಬ್ಲಾಗ್

ಚಾಮರಾಜ ಸವಡಿ

ಸತ್ಯದ ಹಸಿ ದರ್ಶನ

ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ!

July 15, 2008 - 2:23pm — Chamaraj
ಕಳೆದ ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ಜೀವನ ಸಾಗಿಸುತ್ತಿರುವ ಧಾರವಾಡದ ಬಸಪ್ಪ ಮುಳಗುಂದ

ಈತನ ಹೆಸರು ಬಸಪ್ಪ ಫಕೀರಪ್ಪ ಮುಳಗುಂದ. ವಯಸ್ಸು ೭೫ ವರ್ಷ.

ಧಾರವಾಡದ ವಿರಕ್ತಮಠ ಓಣಿಯ ಮೂವತ್ತಡಿಯ ಪುಟ್ಟ ರಸ್ತೆಯ ಒಂದು ಪಕ್ಕದಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದ ಈತ ಠಿಕಾಣಿ ಹೂಡ್ಡಿದ್ದಾನೆ. ಯಾರನ್ನೂ ಏನೂ ಕೇಳುವುದಿಲ್ಲ. ಯಾರಾದರೂ ಹಣ ಅಥವಾ ಆಹಾರ ಕೊಡಲು ಬಂದರೆ ಸ್ವೀಕರಿಸುವುದಿಲ್ಲ. ರಸ್ತೆ ಪಕ್ಕ, ಚರಂಡಿ ಮೇಲೆ ದಿನಕ್ಕೆ ಎರಡು ಹೊತ್ತು ಅಡುಗೆ ಮಾಡುತ್ತಾನೆ. ಉಳಿದಂತೆ ಅವರಿವರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ರಾತ್ರಿಯಾಗುತ್ತಲೇ ಅಲ್ಲೇ ರಸ್ತೆ ಪಕ್ಕ ಮಲಗಿ ಬಿಡುತ್ತಾನೆ.

ಕಳೆದ ಮೂವತ್ತೆರಡು ವರ್ಷಗಳಿಂದ ಒಂದು ದಿನವೂ ವ್ಯತ್ಯಾಸವಾಗದಂತೆ ಈತ ಇಂತಹ ಬದುಕನ್ನು ನಡೆಸುತ್ತ ಬಂದಿದ್ದಾನೆ. ಒಂದು ವೇಳೆ ಈತ ಯಾರಿಂದಾದರೂ ಏನನ್ನಾದರೂ ಕೇಳ್ದಿದರೆ ಅದು ‘ವೇಳೆ ಎಷ್ಟು?’ ಎಂದು ಮಾತ್ರ.

ಏಕೆಂದರೆ ಈತ ಅಡುಗೆ ಮಾಡುವುದೇ ಎರಡು ಹೊತ್ತು. ಬೆಳಿಗ್ಗೆ ೧೦ಕ್ಕೆ ಹಾಗೂ ಸಂಜೆ ೫ಕ್ಕೆ. ಅದಕ್ಕಾಗಿ ಮಾತ್ರ ಸಮಯ ವಿಚಾರಿಸುವುದು. ಅದು ಬಿಟ್ಟರೆ ಆತನಿಗೆ ಈ ಜಗತ್ತಿನಿಂದ ಆಗಬೇಕಾಗಿರುವುದು ಏನೂ ಇಲ್ಲ.

ಸಿನಿಮಾ ಚಟ

ಬಸಪ್ಪ ಮುಳಗುಂದ ಮೊದಲು ಹೀಗಿದ್ದಿಲ್ಲ. ಅಂದರೆ ರಸ್ತೆ ಬದಿ ವಾಸವಾಗಲು ಬರುವುದಕ್ಕೆ ಮುಂಚೆ ಮಂಗಳವಾರಪೇಟೆಯ್ಲಲಿ, ವಕೀಲರೊಬ್ಬರ ಮನೆಯ ಪಕ್ಕ ಸ್ವಂತ ಮನೆ ಹೊಂದಿದ್ದ. ಮದುವೆಯಾಗಿದ್ದಿಲ್ಲ. ಪರಿಚಯದವರ ಬಟ್ಟೆ ಬರೆಗಳನ್ನು ಒಂದಾಣೆಗೆ ಎರಡರಂತೆ ಒಗೆದು, ಇಸ್ತ್ರೀ ಮಾಡುವ ಕೆಲಸ ಮಾಡುತ್ತಿದ್ದ. ಬಂದ ಹಣದಲ್ಲಿ ಊಟದ ಖರ್ಚು ತೆಗೆದರೆ ಮಿಕ್ಕಿದ್ದೆಲ್ಲ ಸಿನಿಮಾ ನೋಡಲು ಖರ್ಚಾಗುತ್ತಿತ್ತು.

ಕ್ರಮೇಣ ಸಿನಿಮಾ ವೀಕ್ಷಣೆ ಹುಚ್ಚಿನ ರೂಪಕ್ಕೆ ತಿರುಗಿತು. ಊಟದ ಪರಿವೆಯೂ ಇಲ್ಲದೇ ಸಿನಿಮಾ ನೋಡುವುದು ರೂಢಿಯಾಯಿತು. ಒಂಟಿಯಾಗ್ಗಿದ್ದ ಬಸಪ್ಪ ಸಿನಿಮಾ ವೀಕ್ಷಣೆಯಲ್ಲಿ ಮುಳುಗಿಹೋದ. ಇತ್ತ ಆತನ ಏಕೈಕ ಆಸ್ತಿಯಾಗಿದ್ದ ಮನೆ ಪಕ್ಕದಲ್ಲೇ ಇದ್ದ ವಕೀಲರ ಪಾಲಾಯಿತು.

ಬೀದಿಗೆ ಬಂದ ಬದುಕು

ಬಸಪ್ಪ ಬೀದಿಗೆ ಬಂದಿದ್ದು ಹಾಗೆ. ಮನೆ ಹೋಗಿದ್ದಕ್ಕೆ ಆತನಿಗೆ ವ್ಯಥೆ ಇರಲಿಲ್ಲ. ಆಸ್ತಿಯ ಬಗ್ಗೆ ಮೋಹವೂ ಇರಲಿಲ್ಲ. ಅದ್ಹೇಗೋ ಸಿನಿಮಾ ಚಟ ಬಿಟ್ಟು ಹೋಯಿತು. ಮೊದಲೇ ಮಾತು ಕಡಿಮೆ ಇದ್ದ ಬಸಪ್ಪ ಈಗ ಪೂರ್ತಿ ಮೌನಿಯಾದ. ತನ್ನ ಪಾಡಿಗೆ ತಾನು ರಸ್ತೆ ಬದಿ ಅಡುಗೆ ಮಾಡಿಕೊಂಡು, ಅಲ್ಲೇ ಬದುಕು ಪ್ರಾರಂಭಿಸಿದ. ಅವತ್ತಿನಿಂದ ವಿರಕ್ತಮಠದ ಪುಟ್ಟ ರಸ್ತೆ ಬದಿಯೇ ಆತನಿಗೆ ಮನೆಯಾಗಿದೆ.

ಬೆಳಿಗ್ಗೆ ಊಟವಾದ ನಂತರ ಸುತ್ತಲಿನ ಮನೆಗಳಿಗೆ ಹೋಗಿ ಕರೆಂಟ್-ನೀರಿನ ಬಿಲ್ ಕಟ್ಟುವುದು, ನೀರು ತುಂಬಿಕೊಡುವುದು ಮುಂತಾದ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ಪರಿಚಯದವರ ಹಿಟ್ಟಿನ ಗಿರಣಿಗೆ ಹೋಗಿ, ಕೆಳಗೆ ಬಿದ್ದ ಹಿಟ್ಟನ್ನು ತಂದು ತನ್ನ ಅಡುಗೆ ಮಾಡಿಕೊಳ್ಳುತ್ತಾನೆ. ಅದು ಬಿಟ್ಟರೆ ತನ್ನ ಸೇವೆಗೆ ಆತ ಯಾರಿಂದಲೂ ಒಂದು ಪೈಸೆಯನ್ನೂ ಪಡೆಯುವುದಿಲ್ಲ. ಹಬ್ಬ ಇರಲಿ, ದುರ್ದಿನಗಳು ಬರಲಿ, ತನ್ನ ಮುದ್ದೆಯಂತಹ ಹಿಟ್ಟಿನ ರೊಟ್ಟಿ ಬಿಟ್ಟರೆ ಆತ ಬೇರೆ ಏನನ್ನೂ ತಿನ್ನುವುದಿಲ್ಲ.

ಇದೊಂಥರಾ ಮಾನಸಿಕ ವ್ಯಕಲತೆ. ಆದರೆ, ಬಸಪ್ಪನ ದುರಾದೃಷ್ಟಕ್ಕೆ ಯಾರೂ ಚಿಕಿತ್ಸೆ ಮಾಡಿಸಿಲ್ಲ. ಕಳೆದ ಮೂರು ದಶಕಗಳಲ್ಲಿ ಧಾರವಾಡ ಸಾಕಷ್ಟು ಬದಲಾಗಿದೆ. ಬೇಕಾದಷ್ಟು ಬೆಳೆದಿದೆ. ಇಡೀ ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದ ಮಾನಸಿಕ ಆರೋಗ್ಯ ಆಸ್ಪತ್ರೆ ಧಾರವಾಡದಲ್ಲಿದ್ದರೂ ಬಸಪ್ಪನಿಗೆ ಆ ಸೇವೆ ದಕ್ಕಿಲ್ಲ. ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗಿ, ಹೀಗೇ, ರಸ್ತೆಯ ಮೇಲೆ ಉಳಿದುಕೊಂಡೇ ಆತ ತನ್ನ ಯೌವನ ಕಳೆದುಬಿಟ್ಟ.

ಎಲ್ಲದಕ್ಕೂ ಸರ್ಕಾರವನ್ನು ಬೇಡುವ ದೂರುವ ಜನರ ನಡುವೆ ಏನನ್ನೂ ಕೇಳದ, ಏನಾದರೂ ಕೊಡಲು ಬಂದರೂ ನಿರಾಕರಿಸುವ, ಸುತ್ತಲಿನವರ ನೆಮ್ಮದಿ ಹೆಚ್ಚಿಸುತ್ತಲೇ ರಸ್ತೆ ಬದಿ ತನ್ನ ನೆಮ್ಮದಿ ಕಂಡುಕೊಂಡಿರುವ ಬಸಪ್ಪ ಮುಳಗುಂದ ನಿಜಕ್ಕೂ ವಿಕ್ಷಿಪ್ತ, ಆದರೆ ಅಪರೂಪದ ವ್ಯಕ್ತಿ.

- ಚಾಮರಾಜ ಸವಡಿ

  • ಧಾರವಾಡ
  • ವಿಕ್ಷಿಪ್ತ
  • ಸಮಾಜ
~.~
  • Chamaraj ರವರ ಬ್ಲಾಗ್
  • Login or register to post comments
  • 119 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
  • ಕಳೆದ ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ಜೀವನ ಸಾಗಿಸುತ್ತಿರುವ ಧಾರವಾಡದ ಬಸಪ್ಪ ಮುಳಗುಂದ
  • ಕಳೆದ ೩೦ ವರ್ಷಗಳಿಂದ ರಸ್ತೆ ಬದಿಯ್ಲಲಿಯೇ ಜೀವನ ಸಾಗಿಸಿರುವ ಧಾರವಾಡದ ಬಸಪ್ಪ ಮುಳಗುಂದ.
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ರಸ್ತೆ ನೀರಿನಿಂದ ಮಸ್ತ್ ಬೆಳೆ
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ನ್ಯೂಸ್‌ ಎಡಿಟರ್‍. ಬರವಣಿಗೆ ಇಷ್ಟದ ಕೆಲಸ.
See my blog: http://chamarajsavadi@blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 142 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator