Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › Chamaraj ರವರ ಬ್ಲಾಗ್

ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ

April 17, 2008 - 4:08pm — Chamaraj

ಒಮ್ಮೊಮ್ಮೆ ಶಬ್ದವೊಂದು ಮನಸ್ಸನ್ನು ಆವರಿಸಿಕೊಳ್ಳುವ ರೀತಿ ಕಂಡು ಅಚ್ಚರಿಯಾಗುತ್ತದೆ.

ಇಂಗ್ಲಿಷ್‌ನಲ್ಲಿ ಹಿಪಾಕ್ರಸಿ ಎಂಬ ಶಬ್ದವಿದೆ. ಕನ್ನಡದಲ್ಲಿ ಅದಕ್ಕೆ ಆಷಾಡಭೂತಿ ಎಂಬ ಅಧ್ವಾನದ ಹೆಸರಿದೆ. ಹಾಗಂದರೇನು ಎಂದು ತಕ್ಷಣಕ್ಕೆ ಗೊತ್ತಾಗದಿದ್ದರೆ ಹುಸಿವಾದ ಎಂತಲೋ, ಡಾಂಭಿಕತೆ ಎಂದೋ ಅರ್ಥ ಮಾಡಿಕೊಳ್ಳಬಹುದು. ಒಂದು ಉದಾಹರಣೆ ಮೂಲಕ, ಈ ಶಬ್ದದ ಅರ್ಥ ಹಾಗೂ ನಮ್ಮ ಅನೇಕ ಬುದ್ಧಿಜೀವಿಗಳ ಗೊಡ್ಡುತನವನ್ನು ನಿಮ್ಮ ಮುಂದಿಡಲು ಯತ್ನಿಸುತ್ತೇನೆ.

ಕರ್ನಾಟಕ-ಭಾರತ ಬಿಡಿ, ಜಗತ್ತಿನ ಯಾವುದೇ ಭಾಗದಲ್ಲಿ ಹಿಂದುಗಳಲ್ಲದವರ ಮೇಲೆ, ಮುಖ್ಯವಾಗಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ನರ ಮೇಲೆ ಹಲ್ಲೆಗಳಾಗಲಿ, ಅನ್ಯಾಯದ ಘಟನೆಗಳು ನಡೆಯಲಿ, ಕೋಮು ಸೌಹಾರ್ದ ಹೆಸರಿನ ಸಂಘಟನೆಗಳಿಗೆ ಜೀವ ಬಂದುಬಿಡುತ್ತದೆ. ಅವರು ನೀಡುವ ಪತ್ರಿಕಾ ಪ್ರಕಟಣೆಗಳೋ, ನಡೆಸುವ ಪತ್ರಿಕಾಗೋಷ್ಠಿಗಳೋ, ಹಮ್ಮಿಕೊಳ್ಳುವ ವಿಚಾರಗೋಷ್ಠಿಗಳೋ- ಅಬ್ಬಬ್ಬಾ ಒಂದಕ್ಕಿಂತ ಒಂದು ಭೀಕರ. ಜಗತ್ತಿನಲ್ಲಿ ಇದಕ್ಕಿಂತ ಕೆಟ್ಟದ್ದು ಇನ್ಯಾವುದೂ ಇರಲಿಕ್ಕಿಲ್ಲ ಎನ್ನುವಂತೆ, ಹೊಟ್ಟೆಯಲ್ಲಿ ಹುಟ್ಟಿದವರಿಗೇ ತೊಂದರೆಯಾಯಿತೇನೋ ಎಂಬಂತೆ ಶಾಬ್ದಿಕ ಅನುಕಂಪ ಹರಿಸಿದ್ದೇ ಹರಿಸಿದ್ದು, ಭಾಷಣ ವ್ಯಭೀಚಾರ ಎಸಗಿದ್ದೇ ಎಸಗಿದ್ದು.

ಇದನ್ನೇಕೆ ವ್ಯಭೀಚಾರಕ್ಕೆ ಹೋಲಿಸುತ್ತಿದ್ದೇನೆಂದರೆ, ಒಂದು ವೇಳೆ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಇತರ ಧರ್ಮೀಯರ ಮೇಲೆ ದಾಳಿ ಮಾಡಿದ್ದರೆ ಇವರ ಕಾಳಜಿ ಕಾಣುವುದಿಲ್ಲವಾದ್ದರಿಂದ. ಉದಾಹರಣೆಗೆ ನೋಡಿ, ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ ಹಾಗೂ ಎಸಗಲು ಹೊಂಚು ಹಾಕುತ್ತಿದ್ದ ಸಾಲು ಸಾಲು ಉಗ್ರರನ್ನು ಪೊಲೀಸರು ಬಂಧಿಸಿದಾಗ, ಕೋಮು ಸೌಹಾರ್ದ ವೇದಿಕೆ ಕತ್ತೆ ಮೇಯಿಸಲು ಹೋಗಿತ್ತೇನೋ. ಧಾರ್ಮಿಕ ಅಲ್ಪಸಂಖ್ಯಾತರ ಪರ ಎಂದು ಘೋಷಣೆ ಕೂಗುವ ಈ ನಾಯಕ-ನಾಯಕಿಯರು ತುಟಿ ಬಿಚ್ಚದೇ ಸುಮ್ಮನೇ ಕೂತಿದ್ದರು.

ಏಕೆ?

ಏಕೆಂದರೆ, ಹಿಂದುಗಳ ಪರ ನಿಲ್ಲುವುದಕ್ಕೆ ಅವರಿಗೆ ನಾಚಿಕೆ. ತಪ್ಪು ಯಾರೇ ಮಾಡಲಿ, ಅದು ಖಂಡನಾರ್ಹ ಎಂಬ ನಿಲುವು ತಳೆಯಲು ನಿಜವಾದ ಆದರ್ಶದ, ಸಚ್ಚಾರಿತ್ಯ್ರದ ಕೊರತೆ. ಹೇಗಿದ್ದರೂ ಹಿಂದುಗಳ ಪರ ನಿಲ್ಲಲು ಬಿಜೆಪಿ ಇದೆ. ಹಿಂದು ಪರ ಸಂಘಟನೆಗಳಿವೆ. ಅವರಿಗೆ ಎದುರಾಗಿ ನಿಂತರೆ ಬಿಟ್ಟಿ ಪ್ರಚಾರ ಸಿಗುವ ಖಾತರಿ ಇರುವುದರಿಂದ ಕೋಮು ಸೌಹಾರ್ದತೆ ಭಾಷಣಗಳು, ಭಾಷಣ ವ್ಯಭೀಚಾರಿಗಳು ಹುಟ್ಟಿಕೊಂಡಿದ್ದಾರೆ.

ಇವರಲ್ಲಿ ಬಹುತೇಕ ಜನ ಹುಸಿ ಆದರ್ಶವಾದಿಗಳು. ಢೋಂಗಿಗಳು. ಸರಿಯಾಗಿ ಹೇಳಬೇಕೆಂದರೆ ಆಷಾಡಭೂತಿಗಳು. ಕೂಗಾಡಲು ವಿಷಯ ಇಲ್ಲದ ದಿನಗಳಲ್ಲಿ ಅವರ ಚಟುವಟಿಕೆ ನೋಡಿದರೆ ಸಾಕು, ಸತ್ಯ ಗೊತ್ತಾಗುತ್ತದೆ. ಅದೂ ಬೇಡ, ಅವರು ಕೆಲಸ ಮಾಡುವಲ್ಲಿ, ವಾಸಿಸುವಲ್ಲಿ ಒಂದೆರಡು ಗಂಟೆ ಇದ್ದರೆ ಸಾಕು, ಆಷಾಡಭೂತಿತನ ಅಥವಾ ಹಿಪಾಕ್ರಸಿ ಎಂಬ ಶಬ್ದಕ್ಕೆ ಸಜೀವ ಅರ್ಥ ಸಿಕ್ಕಿಬಿಡುತ್ತದೆ.

ಇಂಥ ನೀಚ-ನೀಚೆಯರಿಂದಾಗಿ ಕೋಮುವಾದ ಹಾಗೂ ಕೋಮು ಸೌಹಾರ್ದ ಶಬ್ದಗಳೆರಡೂ ನಿಜಾರ್ಥ ಕಳೆದುಕೊಂಡಿವೆ. ಒಂದು ವರ್ಗದ ಜನರನ್ನು ತಿರಸ್ಕರಿಸುತ್ತ, ಇನ್ನೊಂದು ವರ್ಗದವರನ್ನು ಓಲೈಸುವ ಮೂಲಕ ಪ್ರಚಾರ ಪಡೆಯಲು ಈ ಜನ ಯತ್ನಿಸುತ್ತಿದ್ದಾರೆ. ಇಂಥ ಆಷಾಡಭೂತಿಗಳಿಗೂ ಹಾಗೂ ಇದೇ ಕೆಲಸವನ್ನು ನಿರ್ಲಜ್ಜವಾಗಿ ಮಾಡುತ್ತಿರುವ ಹಿಂದು ಪರ ಸಂಘಟನೆಗಳಿಗೂ ಏನೂ ವ್ಯತ್ಯಾಸವಿಲ್ಲ.

ಎರಡೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಂಟಿಕೊಂಡ ವ್ರಣಗಳೇ!

- ಚಾಮರಾಜ ಸವಡಿ

  • ಆಷಾಡಭೂತಿತನ
  • ಕೋಮವಾದ
  • ಕೋಮು ಸೌಹಾರ್ದತೆ
  • ಬೂಟಾಟಿಕೆ
  • ಭಂಡತನ
  • ಹಿಪಾಕ್ರಸಿ
Ornamental seperator
  • Chamaraj ರವರ ಬ್ಲಾಗ್
  • Login or register to post comments
  • 122 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
  • ಕೋಮುವಾದಿ/ವಿಚಾರವಾದಿ- ಯಾರು ಹಿತವರು ಕಷ್ಟಕಾಲದಿ?
  • ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ
  • ಪೊಲೀಸರ ಮೇಲೆ ಅನುಮಾನ...ಸರೀನಾ?
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

See my blog: chamarajsavadi@blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.

ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator