"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಚೇತನ್ ಕೋಡುವಳ್ಳಿ
ಪರಿಚಯ
ನಾನು ಮಲೆನಾಡಿನ ಹುಡುಗ, ಮಲೆನಾಡಿನಲ್ಲಿ ಪ್ರಾಥಮಿಕ ಅಭ್ಯಾಸ ಮಾಡಿ ಕರಾವಳಿಯಲ್ಲಿ ಪದವಿ ಪೂರ್ವ ಮುಗಿಸಿ ತದನಂತರ ಬಯಲುಸೀಮೆಯಲ್ಲಿ ಪದವಿಯನ್ನು ಮುಗಿಸಿ ಈಗ ರಾಜಧಾನಿಯಲ್ಲಿ ಜೀವನ ಸಾಗಿಸುತ್ತಿದ್ದೇನೆ.
ನನ್ನ ಜೀವನದಲ್ಲಿ ನಡೆದ ಘಟನೆಗಳ ಪರಿಚಯ, ನನ್ನ ಗೆಳೆಯರ, ಕುಟುಂಬದವರ ಜೊತೆ ಒಡನಾಟ, ಅವರೊಂದಿಗಾದ ಅನುಭವಗಳನ್ನು ಇಲ್ಲಿ ವ್ಯಕ್ತಪಡಿಸುವ ಬಯಕೆಯಲ್ಲಿ....http://naanadevahaadiyalli.blogspot.com/
ಮೊನ್ನೆ ಯುಗಾದಿ ಹಬ್ಬದಂದು...
ಯುಗಾದಿ ಹಬ್ಬಕ್ಕೆ ಊರಿಗೆ ಹೋಗಿದ್ದೆ. ಹಬ್ಬದ ದಿನ ಬೆಳಗ್ಗೆ ಸ್ನಾನ ಮಾಡಿ, ಮಾವಿನಸೊಪ್ಪು ತರಲು ತೋಟಕ್ಕೆ ಹೋಗಿ ಮರ ಹತ್ತಿ ಸೊಪ್ಪು ಕುಯ್ದು ತಂದು ತೋರಣ ಕಟ್ಟಿ ನನ್ನ ಕೆಲಸವಾಯಿತೆಂದು ಟೀ.ವಿ ಹಾಕಿ ಕುಳಿತು ಕಲಾಸಿಪಾಳ್ಯ ನೋಡ್ತಾ ಕೂತ್ಕೊಂಡೆ.
ಅರ್ಧ ನೋಡಿರಬೇಕು, ಅಮ್ಮ ಬಂದು ಪೂಜೆ ಮಾಡಿಸ್ಕೊಂಡು ಬಾ ದೇವಸ್ಥಾನಕ್ಕೆ ಹೋಗಿ ಅಂದ್ರು. ನಾನು, ಅಮ್ಮ ಆಮೇಲೆ ಹೋದ್ರೆ ಆಗಲ್ವ ಆಗ್ಲೇ ಅರ್ಧ ಫಿಲ್ಮ್ ನೋಡಿದೀನಿ ಅಂದೆ..
ಅದಕ್ಕೆ ಅಮ್ಮ ಕ್ಯಾಕರಿಸಿ ಉಗಿದ್ರು (ಅವಿನಾಶ್ ಕಲಾಸಿಪಾಳ್ಯ ಫಿಲ್ಮಲ್ಲಿ ದರ್ಶನ್ ಗೆ ಬಯ್ಯೋ ಹಾಗೆ).
ಅಲ್ಲೇ ಇದ್ದ ಅಕ್ಕನ ನೋಟ, ದರ್ಶನ್ ರೌಡಿಗಳಿಗೆ ಕೊಡೋ ಲುಕ್ ಇತ್ತು.
ನಾನು ವಿಧಿಯಿಲ್ಲದೆ ದೇವಸ್ಥಾನದ ಕಡೆ ಹೆಜ್ಜೆ ಹಾಕಬೇಕಾಯಿತು....
- Chikku123's blog
- Login or register to post comments
- 376 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಮೊನ್ನೆ ಯುಗಾದಿ ಹಬ್ಬದಂದು...
ಪಾಪ ದೇವರ ಗತಿ.....:-)
ಉ: ಮೊನ್ನೆ ಯುಗಾದಿ ಹಬ್ಬದಂದು...
:) :)
ಉ: ಮೊನ್ನೆ ಯುಗಾದಿ ಹಬ್ಬದಂದು...
:) ಪಾಪಾ
ಉ: ಮೊನ್ನೆ ಯುಗಾದಿ ಹಬ್ಬದಂದು...
;) ;-)