ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › cmariejoseph ರವರ ಬ್ಲಾಗ್

ಮುಳ್ಳಿನ ಕಿರೀಟ ಎಂಬ ನಾಟಕ

June 16, 2007 - 6:17pm — cmariejoseph

ಕಾದಂಬರಿಯ ಭಿತ್ತಿಯಲ್ಲಿ ವಿಶಾಲವಾದ ಪ್ರಪಂಚವನ್ನು ಓದುಗನಿಗೆ ನೀಡಲು ಸಾಧ್ಯವಾಗುತ್ತದೆ. ಆದರೆ ನಾಟಕವು ದೃಶ್ಯಕಾವ್ಯ. ಅಲ್ಲಿನ ಸೀಮಿತ ವೇದಿಕೆಯಲ್ಲಿ ಕಾದಂಬರಿಯ ವಸ್ತುವನ್ನು ಕಾಣಿಸಲು ಸಾಧ್ಯವಿಲ್ಲವಾದರೂ ಪಾತ್ರಗಳ ಮಾತುಗಳಲ್ಲಿ ಗಿಡಗಂಟಿಗಲನ್ನೂ ಗುಡ್ಡಬೆಟ್ಟಗಳನ್ನೂ ನದಿಯ ಹರಿವನ್ನೂ ಜಲಪಾತದ ಓಘವನ್ನೂ ಕಡಲ ಮೊರೆತವನ್ನೂ ದೋಣಿಯ ನಡೆಯನ್ನೂ ಸಮರಾಂಗಣದ ಗದ್ದಲವನ್ನೂ ಮಕ್ಕಳ ಕಲರವವನ್ನೂ ಕಾಣಿಸಬಹುದಾಗಿದೆ.
ಇಷ್ಟೆಲ್ಲವನ್ನೂ ನಾಟಕದಲ್ಲಿ ಕಾಣಿಸಬೇಕಾದರೆ ಅದರ ಕರ್ತೃ, ಪಾತ್ರಧಾರಿ, ನಿರ್ದೇಶಕ ಹಾಗೂ ರಂಗಪರಿಕರಗಳು ಎಲ್ಲವೂ ಏಕಪ್ರಕಾರವಾಗಿ ಮೇಳೈಸಬೇಕಾಗುತ್ತದೆ. ಇಂಥ ಒಂದು ಪ್ರಸಂಗ ನಾ.ಡಿಸೋಜರು ಬರೆದ “ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ” ಎಂಬ ಕಾದಂಬರಿಯನ್ನು “ಮುಳ್ಳಿನ ಕಿರೀಟ” ಎಂಬ ನಾಟಕವಾಗಿ ಪ್ರಯೋಗಿಸಿದಾಗ ಕಂಡುಬಂತು.
ಆ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕಕ್ಕೆ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮದಲ್ಲಿ ‘ಮುಕುಂದರಾಜ್’ ಅವರು ಬರೆದ “ಮುಳ್ಳಿನ ಕಿರೀಟ” ಪುಸ್ತಕದ ಲೋಕಾರ್ಪಣೆಯಾಯಿತು. ಕವಯಿತ್ರಿ ಎಚ್ಎನ್ ಆರತಿ ಅವರು ಮಾತನಾಡುತ್ತಾ ಬರಗೂರರ ಮುನ್ನುಡಿಯನ್ನು ಉದ್ಧರಿಸಿದರು. ಶಾಸಕ ಪಿ ಜಿ ಆರ್ ಸಿಂಧ್ಯಾ ಅವರು ಮಾತನಾಡಿ ವರ್ತಮಾನ ಪತ್ರಿಕೆಗಳನ್ನು ಓದುವುದರಲ್ಲಿಯೇ ನಮ್ಮ ಅಧ್ಯಯನದ ಸಮಯ ಮುಗಿದುಹೋಗುತ್ತೆ. ತುರ್ತುಪರಿಸ್ಥಿತಿಯ ಕಾಲದಲ್ಲಿ George Argon ಬರೆದ Animal Fair ಎಂಬ ಪುಸ್ತಕ ನನ್ನ ಮೇಲೆ ಗಾಢ ಪರಿಣಾಮ ಬೀರಿತ್ತು. ಇಂದು ಈ ಪುಸ್ತಕ ಅದೇ ರೀತಿಯ ಚಲನೆಯನ್ನು ಉಂಟುಮಾಡಿದೆ. ನಾನೂ ಸಂಘಪರಿವಾರದಲ್ಲಿದ್ದವನು. ಆದರೆ ಈ ಪುಸ್ತಕದಲ್ಲಿನ ಪಾದ್ರಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ದುರುಳನಂತೆ ಚಿತ್ರಿಸಲಾಗಿದೆ ಎಂದು ನನ್ನ ಭಾವನೆ ಎಂದರು.
ಇನ್ನು ನಾಟಕದ ಬಗ್ಗೆ ಹೇಳುವುದಾದರೆ ನಾಟಕದ ಪಾತ್ರಧಾರಿಗಳ ವೇಷಭೂಷಣವೆಲ್ಲ ಬೆಂಗಳೂರಿನ ರೈತಮಕ್ಕಳ ಸಾಧಾರಣ ಉಡುಗೆಯಾಗಿತ್ತು. ಹೆಸರುಗಳು ಮಾತ್ರವೇ ಕರಾವಳಿ ಪರಿಸರದವು. ನಾಟಕ ಮಂದಿರದ ಎಂಬತ್ತುಭಾಗ ತುಂಬಿತ್ತು. ಬಂದಿದ್ದವರೆಲ್ಲ ಕಲೆಯ ಅಭ್ಯಾಸಿಗಳು ಹಾಗೂ ವಿದ್ವತ್ ಜನ. ನಾಟಕವನ್ನು ಮನರಂಜನೆಯಾಗಿ ಆಸ್ವಾದಿಸಬಲ್ಲ ಸಾಮಾನ್ಯಜನ ಇರಲಿಲ್ಲವೆನ್ನಬಹುದು. ಅಲ್ಲಿ ಚಪ್ಪಾಳೆ ಇರಲಿಲ್ಲ, ಸಿಳ್ಳೆ ಇರಲಿಲ್ಲ, ಸಂಭಾಷಣೆಗಳಿಗೆ ಹಾಗೂ ಸನ್ನಿವೇಶಕ್ಕೆ ತಕ್ಕ ತಲೆದೂಗುವಿಕೆ ಮಾತ್ರವಿತ್ತು. ನಾಟಕದ ಧ್ವನಿವ್ಯವಸ್ಥೆ ರಂಗಸಜ್ಜಿಕೆ ಚೆನ್ನಾಗಿತ್ತು. ಎರಡಾಳೆತ್ತರದ ಮರದ ಶಿಲುಬೆ, ಅದರ ಮೇಲೆ ಮುಳ್ಳಿನ ಬಳ್ಳಿಯ ಚಿತ್ರಣ, ಮುಂದೆ ಮೇಣದ ಬತ್ತಿಯ ಸ್ಟ್ಯಾಂಡು, ಪಾದ್ರಿಗಳು ಕೂರುವ ತೇಗದ ಕುರ್ಚಿ, ಬೈಬಲ್ ಪೀಠ ಎಲ್ಲವೂ ಚೆನ್ನಾಗಿತ್ತು. ಆದರೆ ನಾಟಕದ ಎಲ್ಲ ಅಂಕಗಳಲ್ಲೂ ಈ ಹಿನ್ನೆಲೆ ಅನಿವಾರ್ಯವಾಗಿದ್ದುದೇ ಒಂದು ನ್ಯೂನತೆ. ದೇವಾಲಯದ ದೃಶ್ಯ, ಕಾಮತರ ಮನೆ, ಹೆಂಡದಂಗಡಿ, ಪೊಲೀಸರ ನಡಿಗೆ ಎಲ್ಲವೂ ಸಹಜವಾಗಿದ್ದವು. ಇದು ಹೇಳಿಕೇಳಿ ಸ್ವಾತಂತ್ರ್ಯಪೂರ್ವದ ವಸ್ತು. ಆದರೆ ಪಾದ್ರಿಗಳ ನಡವಳಿಕೆ ಇಂದಿಗೂ ಪ್ರಸ್ತುತವಾಗಿದೆಯಲ್ಲಾ ಎನಿಸದಿರದು.

  • ನಾಟಕ
~.~
  • cmariejoseph ರವರ ಬ್ಲಾಗ್
  • Login or register to post comments
  • 531 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಎಲ್ಲಿ ಸಿಗಬಹುದು?
  • Sex - ಕಾಮ; ಅದರ ಮಹತ್ವ !
  • ಖರೇ ಚರಣದಾಸನೆಂಬ ಕಳ್ಳ- ಮಕ್ಕಳ ನಾಟಕದ ದೃಶ್ಯ
  • ಪಂಡಿತ್ ಡಿ.ಎಸ್.ಗರೂಡರ ಪುಸ್ತಕ ಬಿಡುಗಡೆ
  • ವಿವೇಕರ ಕಥಾಲೋಕ-4
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator