ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › cmariejoseph ರವರ ಬ್ಲಾಗ್

ವಿಮಾನಪುರ

May 30, 2007 - 7:07pm — cmariejoseph

'ವಿಮಾನಪುರ' ಎಂಬ ಹೆಸರು ವಿಮಾನ ಕಾರ್ಖಾನೆಯ ಸುತ್ತಲಿನ ಬಡಾವಣೆಗಳಿಗೆ ೧೯೬೦ರಷ್ಟು ಹಿಂದಿನಿಂದಲೂ ಬಹು ಅನ್ವರ್ಥಕವಾಗಿ ಬಳಸಲಾಗುತ್ತಿದೆ. ಇಲ್ಲಿ ನಾವು ವಿಮಾನಪುರ ಅಂಚೆಕಚೇರಿ, ವಿಮಾನಪುರ ತಂತಿಕಚೇರಿ, ವಿಮಾನಪುರ ದೂರವಾಣಿ ವಿನಿಮಯಕೇಂದ್ರ, ವಿಮಾನಪುರ ರೈಲುನಿಲ್ದಾಣ, ವಿಮಾನಪುರ ಪಶ್ಚಿಮ ಪ್ರಾಥಮಿಕ ಶಾಲೆ, ವಿಮಾನಪುರ ಪೂರ್ವಪ್ರಾಥಮಿಕ ಶಾಲೆ, ವಿಮಾನಪುರ ಪ್ರೌಢಶಾಲೆ, ವಿಮಾನಪುರ ಸಹಕಾರ ಸಂಘ, ವಿಮಾನಪುರ ಪೊಲೀಸ್ ಠಾಣೆ ಇತ್ಯಾದಿಗಳನ್ನು ಕಾಣಬಹುದಾಗಿತ್ತು.

ದೂರವಾಣಿಕೇಂದ್ರ ಮತ್ತು ಅಂಚೆಕಚೇರಿಗಳನ್ನು ಹೊರತುಪಡಿಸಿದರೆ ವಿಮಾನಪುರ ರೈಲುನಿಲ್ದಾಣ ಈಗ ಮಾಯವಾಗಿ ಅದರ ಜಾಗದಲ್ಲಿ ಎಚ್‌ಎಎಲ್ ಮಾರ್ಕೆಟ್ ಬಂದಿದೆ. ವಿಮಾನಪುರ ಪೊಲೀಸ್‌ಠಾಣೆ ಯಾವುದೆಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಇನ್ನು ವಿಮಾನಪುರ ಶಾಲೆಗಳೂ ಹೋಗಿ ಐಸಿಎಸ್ಇ, ಸಿಬಿಎಸ್ಇ ಶಾಲೆಗಳಿಗೆ ಸ್ಥಳಾವಕಾಶ ಮಾಡಿಕೊಟ್ಟಿವೆ. ಈ ಪ್ರದೇಶದ ಎಲ್ಲ ಬ್ಯಾಂಕುಗಳೂ, ಕಚೇರಿಗಳೂ, ಅಂಗಡಿ ಮುಂಗಟ್ಟೆಗಳೂ, ಮಂದಿರ ಮಸೀದಿ ಚರ್ಚುಗಳೂ ಶಾಲೆಗಳೂ ವಿಮಾನಪುರದ ಹೆಸರನ್ನು ಕಡೆಗಣಿಸುತ್ತಿವೆ.

ನಮ್ಮ ವಸತಿ ಪ್ರದೇಶದ ಜನ ತಮ್ಮ ವಿಳಾಸಗಳಲ್ಲಿ 'ವಿಮಾನಪುರ' ಎಂಬ ಹೆಸರಿನ ಉಲ್ಲೇಖ ಮಾಡುವುದೇ ಇಲ್ಲ. ಜನಗಳ ಬಾಯಲ್ಲಾದರೂ "ವಿಮಾನಪುರ" ಎಂಬ ಸೊಲ್ಲು ಕೇಳುತ್ತದೆಯೇ? ಅದೂ ಇಲ್ಲ. ಬಸ್ಸಿನಲ್ಲಿ ಹಿಂದೊಮ್ಮೆ ವಿಮಾನಪುರ ಎಂಬ ಹೆಸರು ಹೇಳಿ ಟಿಕೆಟ್ ಪಡೆಯಬಹುದಿತ್ತು. ಇಂದು ವಿಮಾನಪುರ! ಅದೆಲ್ಲಿದೆ? ಎಂದು ಕೇಳುವ ಸನ್ನಿವೇಶ ಎದುರಾಗುತ್ತದೆ.

೬೦ರ ದಶಕದಲ್ಲಿ ಈ ಪ್ರದೇಶವೆಲ್ಲ ತಮಿಳರ ದೌರ್ಜನ್ಯದಲ್ಲಿ ನಲುಗಿದ್ದಾಗ ನಾರಾಯಣರಾವ್ ಪಿಸ್ಸೆ ಎಂಬ ಜನಾನುರಾಗಿ ವೈದ್ಯರು ಹಾಗೂ ತಿಮ್ಮರಾಜೇ ಅರಸು ಮುಂತಾದ ಕಟ್ಟಾ ಕನ್ನಡಿಗರು ಹುಟ್ಟುಹಾಕಿದ "ಕನ್ನಡ ಸೇವಾ ಸಮಾಜ"ವು ಡಾ. ರಾಜ್ ಕುಮಾರ್, ವಾಟಾಳ್ ನಾಗರಾಜ್ ಮುಂತಾದ ಮಹನೀಯರನ್ನು ಕರೆಸಿ ಕನ್ನಡಕ್ಕೊಂದು ಸ್ಥಾನ ಕಲ್ಪಿಸಿಕೊಟ್ಟಿತು. ವಾಟಾಳರ ಅಭಿಮಾನಿಯಾಗಿ ರೂಪುಗೊಂಡ ಅ ತಿ ರಂಗನಾಥ ಎಂಬ ಯುವಕ ಇಲ್ಲಿನ ಕನ್ನಡದ ಕೆಲಸಗಳಲ್ಲಿ ತನ್ನದೇ ಛಾಪು ಮೂಡಿಸಿದರು. ಅವರೆಲ್ಲ ಸೂಚಿಸಿದ ಹೆಸರು ವಿಮಾನಪುರ. ಇದು ನಮ್ಮ ಕನ್ನಡದ ಹೆಸರು. ಈ ಹೆಸರಲ್ಲಿ ಕನ್ನಡತನದ ಸೊಗಡಿದೆ. ಕನ್ನಡ ಸಂಸ್ಕೃತಿಯ ಪ್ರತೀಕವಿದೆ. ಕನ್ನಡಿಗರಾದ ನಾವೇ ಇದನ್ನು ಮರೆತುಬಿಡುವುದು ಸಾಧುವಲ್ಲ. ನಮ್ಮ ಹಿರಿಯರು ಮಾಡಿಟ್ಟುಹೋದ ಈ ಕನ್ನಡತನದ ಆಸ್ತಿಯನ್ನು ನಾವು ಬಹು ಜತನದಿಂದ ಉಳಿಸಿಕೊಳ್ಳಬೇಕಿದೆ.

ಅನ್ನಸಂದ್ರಪಾಳ್ಯ, ಲಾಲ್ ಬಹದ್ದೂರ್‌ಶಾಸ್ತ್ರೀ ನಗರ, ಇಸ್ಲಾಂಪುರ, ಕೋಣಯ್ಯನ ಅಗ್ರಹಾರ, ಶ್ರೀರಾಮನಗರಿ, ನಂಜಾರೆಡ್ಡಿ ಕಾಲನಿ, ಮೃಗೇಶಪಾಳ್ಯ (ಮುರುಗೇಶಪಾಳ್ಯ ಎನ್ನುವುದು ತಪ್ಪು), ಎಚ್‌ಎಎಲ್ನ ಹಳೇ ವಸತಿ ಪ್ರದೇಶ, ಇಸ್ರೋ, ಎನ್‌ಎಎಲ್, ಚಲ್ಲಘಟ್ಟ, ಬೇಚಿರಾಕ್ ಬೇಲೂರು, ವಿಮಾನನಿಲ್ದಾಣ, ವಿಮಾನನಿಲ್ದಾಣ ಪೊಲೀಸ್‌ಠಾಣೆ, ಎಂಎಸ್‌ಐಎಲ್, ಎಚ್‌ಎಎಲ್ ಮುಖ್ಯ ಕಾರ್ಖಾನೆ, ನಿಯಂತ್ರಣಗೋಪುರ, ಹೆಲಿಕಾಪ್ಟರ್ ವಿಭಾಗ, ಎರಕ ಕುಲುಮೆ ವಿಭಾಗ, ತರಬೇತಿಕೇಂದ್ರ, ಸಿಬ್ಬಂದಿ ಕಾಲೇಜು, ಎಚ್‌ಎಎಲ್ ಆಸ್ಪತ್ರೆ, ಎಚ್‌ಎಎಲ್ ಕಲ್ಯಾಣಮಂಟಪ, ಎಚ್‌ಎಎಲ್ ಮಾರುಕಟ್ಟೆ, ಎಚ್ಎಇಎ, ಎಚ್‌ಎಒಜಿ, ಅಂಬೇಡ್ಕರ್ ಸಂಘ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವೆಲ್ಲವುಗಳೂ ವಿಮಾನಪುರದ ವ್ಯಾಪ್ತಿಯಲ್ಲಿ ಬರುವುದರಿಂದ ಅತಿ ತುರ್ತಾಗಿ ಹಾಗೂ ಅವಶ್ಯವಾಗಿ "ವಿಮಾನಪುರ" ಹೆಸರನ್ನು ಬಳಸಬೇಕು.

  • ಹೆಸರು
~.~
  • cmariejoseph ರವರ ಬ್ಲಾಗ್
  • Login or register to post comments
  • 335 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೆಸರು ಬರೆಯುವುದು ಹೇಗೆ?
  • ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
  • ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!
  • 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
  • ಯೂನಿಕೋಡ್
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಆಟೋದ ಆಟೋಪ
  • ನನ್ನಜ್ಜನ ಬೆಚ್ಚಗಿನ ನೆನಪುಗಳು
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
  • ಕನ್ನಡದ ನುಡಿದಾಟಿ ಎಂತದು?
  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sathishcv
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 8:40pm
  • ಮನಹ್ಪಠಲ
    ಉ: ಎಂ ಪಿ ಶಂಕರ್ - ಟಾಟಾ
    July 20, 2008 - 5:47pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:45pm
  • rasheedgm
    ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
    July 20, 2008 - 5:32pm
  • rasheedgm
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 20, 2008 - 4:49pm
  • anil.ramesh
    ಉ: ಧಾರವಾಡದ ನವಿಲೂರ ಕೆರೆಯಲ್ಲಿ ಆಹಾರ ಹೆಕ್ಕುತ್ತಿರುವ ಶಾಪಗ್ರಸ್ಥ ! ಟಿಟ್ಟಿಭ ಹಕ್ಕಿ ಕುಟುಂಬ. ಚಿತ್ರ: ಹರ್ಷವರ್ಧನ ಶೀಲವಂತ.
    July 20, 2008 - 11:49am
  • ASHOKKUMAR
    ಉ: ನನ್ನಜ್ಜನ ಬೆಚ್ಚಗಿನ ನೆನಪುಗಳು
    July 20, 2008 - 11:32am
  • Ananth.R
    ಉ: ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ
    July 20, 2008 - 11:22am
  • ರೇಖಾ
    ಉ: ಒ೦ದು ಬೆಚ್ಚನೆಯ ನೆನಪು..
    July 20, 2008 - 9:45am
  • Jayalaxmi.Patil
    ಉ: ಕತ್ತಲೆಯಿಂದ ಹೊರ ಬಂದ ಖಾದಿ
    July 19, 2008 - 11:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator