ಸೌಹಾರ್ದದ ಬಂಡಾಯ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯವೋ ಪುಣ್ಯ ; ಅಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳ ಸುಗ್ಗಿಯೋ ಸುಗ್ಗಿ . ಮೂಡುಬಿದರೆಯ ಆಳ್ವಾಸ್ ಆಯಿತು , ಧರ್ಮಸ್ಥಳದ ಸಮ್ಮೇಳನ ಆಯಿತು . ಇನ್ನು ಉಡುಪಿಯ ಸಮ್ಮೇಳನದಲ್ಲಿ ಕೈಬಿಡಬಹುದಾದ ಅಂಶಗಳ ಪೂರೈಕೆಗಾಗಿ ಸೌಹಾರ್ದ ಸಾಹಿತ್ಯ ಸಮ್ಮೇಳನವೂ ನಡೆಯಿತು .
ಇದೆಲ್ಲಾ ಒಂಥರಾ ಒಳ್ಳೆಯ ಬೆಳವಣಿಗೆ ಇರಬಹುದು , ಬೇರೆ ಬೇರೆ ವಿಚಾರಧಾರೆಗಳು ಕನ್ನಡದಲ್ಲಿ ಹರಿಯುವುದು , ಚಿಂತನ ಹರಿತವಾಗಲು;ವಿಚಾರ ಶಕ್ತಿ ವಿಸ್ತರಿಸಲು ತುಂಬಾ ಉಪಯುಕ್ತವೂ ಆಗಬಹುದು . ಅದು ಸಂಘಟಕರ ಉದ್ದೇಶದ ಮೇಲೆ ಬಹುಮಟ್ಟಿಗೆ ಹೊಂದಿಕೊಂಡಿರುವ ವಿಷಯ. ಯಾರು ಏನೇ ಹೇಳಿದರೂ ಬಂಡಾಯ ಬಂಡಾಯವೇ ಶಿಷ್ಟರು ಯಾವುದನ್ನು ಕೈ ಬಿಡುತ್ತಾರೋ ಬಂಡಾಯದವರು ಅವುಗಳನ್ನು ಎತ್ತಿಕೊಳ್ಳುವುದು ಸಹಜವೇ ಅಲ್ಲವೆ ?
ಈಗ ಸಾಹಿತ್ಯ ಸಮ್ಮೇಳನಗಳು ಭೋಜನ ಸಮ್ಮೇಳನಗಳೂ ? ಆಗುತ್ತಿರುವುದು ಎಲ್ಲರಿಗೂ ಗೊತ್ತು , ಅದೂ ಸರಿಯೇ ಭೋಜನವೇ ಇಲ್ಲದಿದ್ದರೆ ಸಾಹಿತ್ಯವೆಲ್ಲಿಯದು?
ಸಾಂಪ್ರದಾಯಿಕ ವ್ಯವಸ್ಥೆಯ ಎಲ್ಲವನ್ನೂ ವಿರೋಧಿಸದಿದ್ದರೆ ಅದು ಬಂಡಾಯ ಹೇಗೆ ? ಸೌಹಾರ್ದ ಸಮ್ಮೇಳನದಲ್ಲಿ ಸಾಂಪ್ರದಾಯಿಕ ಭೋಜನ ವ್ಯವಸ್ಥೆಯ ವಿರುದ್ದವೂ ಬಂಡಾಯವೆದ್ದು ವೆಜ್ ಮಾತ್ರ ಏಕೆ ? ನಾನ್ ವೆಜ್ ಏಕೆ ಬೇಡ ? ಅಂತಾ ಮೀನು , ಕೋಳಿಗಳಿಗೆ ಕತ್ತರಿ ಬಿದ್ದ ವರದಿ ಬಂದಿದೆ .
ಲಕ್ಷಾಂತರ ಜನಕ್ಕೆ ಭೋಜನ ವ್ಯವಸ್ಥೆ ಮಾಡುವ ಒರಿಜಿನಲ್ ಸಾಹಿತ್ಯ ಸಮ್ಮೇಳನ ಈ ಮಾದರಿಯನ್ನು ಅನುಸರಿಸಿದರೆ ಸಾವಿರಾರು ಪ್ರಾಣಿಗಳ ಜೀವಕ್ಕೆ ಬಂತು ಸಂಚಕಾರ . ಪ್ರತಿ ವರ್ಷವೂ ಕನ್ನಡಕ್ಕಾಗಿ ಎಷ್ಟೊಂದು ಪಾಪದ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬರುತ್ತೋ ಆ ಭಗವಂತನೇ (ಅವನಿದ್ದರೆ) ಬಲ್ಲ . ಕನ್ನಡ ಸಾಹಿತ್ಯಕ್ಕೂ ರಕ್ತದ ಹೊಳೆಯಲ್ಲಿಯೇ ತೇಲುವ ಸಂಭ್ರಮ .
ಮನುಷ್ಯನ ಸೈದ್ದಾಂತಿಕ ಜಗಳಗಳಲ್ಲಿ ತಮ್ಮ ಪಾತ್ರವೇನೂ ಇಲ್ಲದಿದ್ದರೂ , ಏನೂ ಗೊತ್ತಿಲ್ಲದ ಈ ಮೂಕ ಜೀವಿಗಳು ಸಿದ್ದಾಂತದ ಹೆಸರಿನಲ್ಲಿ ಜನರ ಹೊಟ್ಟೆ ಸೇರಬೇಕಾದ ಅಸಹಾಯಕತೆಗೆ ಒಳಗಾಗುತ್ತವೆ . ಪಾಪ ಅವುಗಳಿಗೆ ಯಾವ ಧರ್ಮವಾಗಲೀ ,ಸಿದ್ದಾಂತವಾಗಲೀ ಇಲ್ಲವಲ್ಲ , ಮನುಷ್ಯನೆದುರು ಅವುಗಳನ್ನು ಕಾಪಾಡಲು .

- csomsekraiah ರವರ ಬ್ಲಾಗ್
- Login or register to post comments
- 267 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: