Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › csomsekraiah ರವರ ಬ್ಲಾಗ್

ಸಾಹಿತ್ಯದ ಗುರಿ ಮತ್ತು ಉದ್ದೇಶ

December 17, 2007 - 12:50pm — csomsekraiah

ಸಾಹಿತ್ಯಕ್ಕೆ ಒಂದು ಗುರಿಯಾಗಲೀ, ಉದ್ದೇಶವಾಗಲೀ ಇರುವುದು ಸಾಧ್ಯವೇ ? ಅಥವಾ ಇರಬೇಕೇ ? ಎಂಬ ಪ್ರಶ್ನೆ ತುಂಬಾ ಹಳೆಯದು . ಸಾಹಿತ್ಯಕ್ಕೆ ಗುರಿ , ಉದ್ದೇಶ ಇರುವುದಿಲ್ಲ , ಇರಕೂಡದು . ಎನ್ನುವುದೂ ಅಷ್ಟೇ ಹಳೆಯ ಅಭಿಪ್ರಾಯ .ಈ ಅಭಿಪ್ರಾಯ , ಭಿನ್ನಾಭಿಪ್ರಾಯ ಹೇಗೇ ಇರಲಿ; ಸಾಹಿತ್ಯ ಉದ್ದೇಶಪೂರ್ವಕವೋ , ನಿರುದ್ದೇಶವೋ ಏನಾದರೂ ಇರಲಿ .ಅದು ಅಂತಿಮವಾಗಿ , ಯಾವುದೋ ಒಂದು ಗುರಿಯನ್ನು ತಲುಪುವುದು , ಒಂದು ಉದ್ದೇಶ ಸಾಧನೆಯತ್ತ ಹೆಜ್ಜೆ ಹಾಕುವುದು ಮಾತ್ರ ನಿಶ್ಚಿತ .

ಕೋಗಿಲೆ ಯಾರು ಹೊಗಳಲಿ ಅಂತ ಆಗಲೀ; ಯಾರಿಗಾಗಿ ಅಂತ ಆಗಲೀ ಸ್ವರ ಎತ್ತುವುದಿಲ್ಲವಾದರೂ , ಅದರ ಕಂಠ ಮಾಧುರ್ಯಕ್ಕೆ ಮನಸ್ಸು ಸೋತೇ ಸೋಲುತ್ತದೆ . ಕವಿಯೊಬ್ಬ , ತನ್ನ ಸ್ವಂತ ಆಂತರಿಕ ಒತ್ತಡಗಳಿಗಾಗಿಯೇ ಬರೆಯಲಿ ; ತನ್ನ ಮನಸ್ಸಮಾಧಾನಕ್ಕಾಗಿ ಯಾದರೂ ಬರೆಯಲಿ ,ಅದಕ್ಕೆ ಪ್ರತಿಸ್ಪಂದನವಂತೂ ಇದ್ದೇ ಇರುತ್ತದೆ . ಹಾಗಾಗಿ ಸಾಹಿತ್ಯದ ಉದ್ದೇಶ, ಗುರಿಗಳನ್ನು ಬದಿಗಿರಿಸಿದರೂ ಅದರ ಪ್ರಯೋಜನ , ಪರಿಣಾಮಗಳ ಪ್ರಶ್ನೆ ಉಳಿದೇ ಉಳಿಯುತ್ತದೆ .

ಏನು ಅದರ ಪರಿಣಾಮ ? ಮನರಂಜನೆಯೇ ? ಮನಸ್ಸಮಾಧಾನವೇ? ಅರಿವಿನ ವಿಸ್ತಾರವೇ ? ಮಾಹಿತಿಯ ವಿನಿಮಯವೇ ? ಒಂದು ಕಾಲಘಟ್ಟದ ಅಥವಾ ಕಾಲ ಘಟ್ಟದ ಜೀವನ ವಿಧಾನಗಳ ಸಮಗ್ರ ಪರಿಚಯವೇ ? ವ್ಯಕ್ತಿತ್ವ ನಿರ್ಮಾಣವೇ ? ಇತ್ಯಾದಿ ಅನೇಕ ಪ್ರಶ್ನೆಗಳ ಸರ ಮಾಲೆಗಳು ಎದುರಾಗುತ್ತವೆ . ಸಾಹಿತ್ಯದ ಪ್ರಯೋಜನ ಇವೆಲ್ಲವೂ ಹೌದು , ಇನ್ನೂ , ಇನ್ನೂ ಹೌದು . ಇವುಗಳಾಚೆಗಿನ ಅಂತರಂಗದ ಸೌಂದರ್ಯ ಮತ್ತು ಕಾಲ ದೇಶಾತೀತವಾದ ಅನುಭೂತಿಯೂ ಹೌದು .

ಆದರೆ ಇದೆಲ್ಲಾ ಸಾಧ್ಯವಾಗುವುದು , ನಿಷ್ಕಲ್ಮಷವಾಗಿ ಎಲ್ಲ ವೈಯುಕ್ತಿಕ ಲಾಭ ನಷ್ಟಗಳಾಚೆಗಿನ ,ಸತ್ಯ ಮತ್ತು ಸೌಂದರ್ಯೋಪಾಸಾನೆಯ ಮತ್ತು ಮಾನವಾನುಕಂಪದ ನಿರ್ಲಿಪ್ತ ಸ್ತರದಲ್ಲಿ ಸಾಹಿತ್ಯ ರಚನೆಯಾದಾಗ ಮಾತ್ರ . ಉಳಿದಂತೆ ಹೆಸರಿಗೆ ಮತ್ತು ಪ್ರತಿಷ್ಟೆಗೆ ; ಸಾಮಾಜಿಕ ಲಾಭ ನಷ್ಟಗಳ ಲೆಕ್ಕಾಚಾರಕ್ಕೆ ; ವರ್ತಮಾನದ ಪರಿಸ್ಠಿತಿಗಳ ದುರ್ಲಾಭ ಪಡೆದು , ಗಾಳಿ ಬಂದಾಗ ತೂರಿಕೊಳ್ಳುವ ಸಂಕುಚಿತ ರೀತಿಯ ಬರವಣಿಗೆಯು ,ಆಶ್ಚರ್ಯಕ್ಕೆ ಕಾರಣವಾಗಬಲ್ಲುದಾದರೂ ,ಅನಾಹುತಕಾರಿ ಮತ್ತು ಗಾಳಿಗೆ ತೂರಿ ಹೋಗಬಹುದಾದ ಹಗುರಾದ ಸಾಹಿತ್ಯಕ ದೊಂಬರಾಟ ಮಾತ್ರ ಆಗಬಲ್ಲುದು .

  • ಸಾಹಿತ್ಯ ಚಿಂತನ
Ornamental seperator
  • csomsekraiah ರವರ ಬ್ಲಾಗ್
  • Login or register to post comments
  • 289 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾಹಿತ್ಯದ ಗುರಿ ಮತ್ತು ಉದ್ದೇಶ
  • ಸಾಹಿತ್ಯದ ಗುರಿ ಏನು ? ಪ್ರಯೋಜನವೇನು?
  • ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ
  • 'ನಮಸ್ಕಾರ'- ಡಾ. ಎಚ್. ಎಸ್. ರಾಘವೆಂದ್ರರಾವ್, ರವರ ಸಾಹಿತ್ಯ ವಿಮರ್ಶೆ.
  • ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?
Syndicate content

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ನನ್ನ ಪುಸ್ತಕಗಳನ್ನು ನನ್ನದೇ ’ಅರಿವು ಪ್ರಕಾಶನ' ದಲ್ಲಿ ಪ್ರಕಟಿಸಿದ್ದೇನೆ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 16 ಅತಿಥಿಗಳು ಆನ್ಲೈನ್ ಇರುವರು.

ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator