ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › gopinatha ರವರ ಬ್ಲಾಗ್

ಬೆಳ್ಳಾಲ ಗೋಪಿನಾಥ ರಾವ್

ಮರೆಯದಿರಿ ಕನ್ನಡ

ನೀವು ಬೆಳಕಿನಲ್ಲಿದ್ದಾಗ ಎಲ್ಲವೂ ನಿಮ್ಮ ಹಿಂಬಾಲಿಸುವುದು.ಆದರೆ ಕತ್ತಲೆಯಲ್ಲಿದ್ದಾಗ ನೆರಳೂ ಹಿಂಬಾಲಿಸದು.ಈ ಸತ್ಯ ಗೊತ್ತಿದ್ದರೆ ಕತ್ತಲೆಯಲ್ಲಿದ್ದಾಗ ಬೇಸರವಾಗುವುದಿಲ್ಲ.

ಭಾಷೆಯ ಸ್ವಾಮ್ಯ

December 5, 2007 - 10:44am — gopinatha

1. ಅಹೋಯ್! ಹೋಯ್!! ಹ್ಯೋಯ್!!! ಹಾಯ್!

ಯಾರಾದರೂ ಕುಂದಾಪುರದ ಕಡೆಯವರಿದ್ದರೆ ಅವರಿಗೆ ಮೇಲಿನ ಎರಡು ಮೂರನೆಯ ಪದ ಸಾಮಾನ್ಯವಾಗಿರುತ್ತದೆ. ಅಲ್ಲಿ ಸಂಭೋಧನಾ ಕ್Rಈಯೆಯ ಯಾವುದೇ ರೀತಿಯ ಮಾತುಕಥೆ ಶುರುವಾಗುವುದೇ ಈ ಮೇಲಿನೆರಡು ಶಬ್ದಗಳಿಂದ. ಈ ಕುಂದಾಪುರದ ಭಾಷೆ ಕೆಲವರಿಗೆ ವಿಚಿತ್ರ ಅನ್ನಿಸೀತು, ಈ ಸಮಯದಲ್ಲಿ ಒಂದು ಜೋಕು ನೆನಪಿಗೆ ಬರ್ತಾ ಇದೆ,. ಹಿಂದೊಮ್ಮೆ ಕನ್ನಡ ಭಾಷೆಯನ್ನು ತುಳಿದರು, ಅಳಿಸಿದರು, ಅಂತ ಎಲ್ಲ ಕಡೆ ಕೂಗು ಹಾಕುತ್ತ ಇರಬೇಕಾದರೆ, ಮೀಡಿಯಾದವರು ಬರೆದರು! ದಕ್ಷಿಣ ಕನ್ನಡದಲ್ಲಿ ಅಂತಹ ಕೂಗು ಎದ್ದಿಲ್ಲ ಯಾಕೆ ಅಂತ ? "ಅಲ್ಲಿ ಬೇರೆ ಭಾಷೆ ಇದ್ದರಲ್ಲವಾ ಮಾರಾಯರೇಅಲ್ಲ ಎಲವೂ ಎಲ್ಲರೂ ಕನ್ನಡವೇ ಅಲ್ಲವಾ?" ಅಂತ ಉತ್ತರ ಬಂತು. ಇದು ಹಿಂದಿನ ಮಾತು, ಈಗ ಅಲ್ಲಿಯೂ ಮಲೆಯಾಳಮಯ ಆಗಿದ್ದು, ಕುಂದಾಪುರ ಉಡುಪಿಗೆ ಸೇರಿಯೂ ಆಯ್ತು.

ಆ ಭಾಷೆ ಯಾಕೆ ಹೀಗೆ ಆಗಿರಬಹುದೂ ಅನ್ನುವುದಕ್ಕೆ ನನ್ನ ಸಮಜಾಯಿಸಿ ಇದು. ಅಲ್ಲಿಯ ಕನ್ನಡ ನೀವು ಸರಿಯಾಗಿ ಯೋಚಿಸಿ ನೋಡಿದರೆ ನಿಮಗೆ ಅರಿವಾದೀತು, ಹಳೆಗನ್ನಡದ ಒತ್ತು ಜಾಸ್ತಿಯಿದ್ದು, ಕನ್ನಡದ ಎಲ್ಲಶಬ್ದಗಳೂ ಹೃಸ್ವವಾಗಿರುವುದು ನಿಮಗೆ ಅರಿವಿಗೆ ಬಂದೀತು.ಹೋಗಲಿ ಬಿಡಿ ಈ ವಿಷಯ ಇನ್ಯಾವಾಗಲಾದರೂ ಮುಂದುವರಿಸೋಣ.ಈಗ ವಿಷಯಕ್ಕೆ ಬರುತ್ತೇನೆ.

ಹೋಯ್ ಎಂತ ಮಾಡ್ತ್ರಿ? ಊಟ್ ಆಯ್ತಾ

ಹೋಯ್ ಯಾರದು? ಎತ್ಲಾಗ್ ಆಯ್ತ್!

ಹೋY ಎಲ್ಲಿಗೆ ಹೊರಟದ್ದು, ನಾನೂ ಬತ್ತೆ ತಡಿಯಾ.

ಹೋಯ! ನಾನಾ! ನೀನ್ ಯಾರ ಅಂದ್ಕಂಡೆ!

ಹ್ಯೋಯ್ ಎಂತ್ ಮರ್ರಾಯ್ರೆ? ನಿಮ್ಗೆ ಮಂಡೆ ಸಮ ಇತ್ತಾ?

ಹಾಗಂತ ನಾನು ಕುಂದಾಪುರ ಬಾಷೆ ನಿಮಗೆ ಕಲಿಸ್ತಾ ಇಲ್ಲ. ನಾನು ಕುಂದಾಪುರದ ಕಡೆಯವನಾದುದರಿಂದಲೂ ಅಲ್ಲದೇ ಆಭಾಷೆಯ ಮೇಲಿನ ಅತಿಯಾದ ನನ್ನ ವ್ಯಾಮೋಹ ನಿಮಗೆ ಈ ರೀತಿ ಹೇಳಲು ಬಯಸಿದ್ದೂ ಅಲ್ಲ. ನಿಮಗೆ ಅನ್ನಿ ಸುವುದಿಲ್ಲವಾ? ಈಗಿನ ಅತ್ಯಾಧುನಿಕ ಯುವ ಜನರ ಅಚ್ಚು ಮೆಚ್ಚಿನ ಶಬ್ದ " ಹಾಯ್" ಕೂಡಾ ಹೀಗೆಯೇ ಇದೆಯಲ್ಲ ಅಂತ. ಅದೇ ಮಾರಾಯ್ರೆ ನಾನು ಹೇಳ್ತಾ ಇರೋದು.

ನಾನು ಉತ್ತರ ಭಾರತದಲ್ಲಿದ್ದಾಗ, ಪಂಜಾಬಿಗಳು ಈ ಮೇಲಿನ ನಾಲ್ಕನೆಯ ಪದವನ್ನು ಉಚ್ಚರಿಸುವುದು ಕಂಡೆ.ಆದರೆ ಈ ಶಬ್ದ ಅಲ್ಲಿ ಸಂಭೋಧನೆಗಾಗಿ ಉಪಯೋಗಿಸುತ್ತಿಲ್ಲ. ಬದಲಾಗಿ ಅದನ್ನು ಹೌದು ಎಂಬ ಶಬ್ದಕ್ಕೆ ಪರ್ಯಾಯವಾಗಿ ಉಪಯೋಗಿಸುತ್ತಾರೆ. ವಿಚಿತ್ರ ಅಲ್ಲವಾ ಎಲ್ಲಿಯ ಕುಂದಾಪುರ ಕನ್ನಡ, ಎಲ್ಲಿಯ ಇಂಗ್ಲೀಷು!! ಎಲ್ಲಿಯ ಪಂಜಾಬೀ !!! ಇಂತಹದ್ದೇನಾದರೂ ನಿಮ್ಮ ಅರಿವಿಗೆ ಬಂದರೆ ತಿಳಿಸಿ ನೋಡೋಣ!!
ಕೊನೆಯಲ್ಲಿ ಒಂದು ಜೋಕು.( ಇದು ಪಂಜಾಬಿಯಲ್ಲಿ ಪ್ರಚಲಿತ)

ಒಬ್ಬ ಇಂಗ್ಲೀಷರವ ಆ ಊರಲ್ಲಿ ಸಿಕ್ಕಿ ಹಾಕಿಕೊಂಡ. ಅವನಿಗೆ ಪಂಜಾಬಿ ಬರುತ್ತಿರಲಿಲ್ಲ. ಈಗ ರೈಲು ನಿಲ್ದಾಣಕ್ಕೆ ಹೋಗಬೇಕಾದರೆ ಹೇಗೆ ಹೋಗಬೇಕು? ಅವನು ನಡೆಯುತ್ತಿರುವ ದಿಶೆ ಸರಿಯಾಗಿದೆಯಾ ಅಂತ ಆ ದಾರಿಯಲ್ಲಿ ಬರುವ ಎಲ್ಲರಲ್ಲಿಯೂ ಕೇಳ್ತಾನೇ ಇದ್ದ. ಬಂದವರೆಲ್ಲರೂ ಅವನ ಪ್ರಶ್ನೆಗೆ ಅಹೋಯ್ ಅಂತಾನೇ ಉತ್ತರಕೊಡ್ತಿದ್ದರಂತೆ. ಅದು ಇವನಿಗೆ ಅರ್ಥವಾಗಲಿಲ್ಲ.ಕೊನೆಗೊಮ್ಮೆ ಸೂಟು ಬೂಟು ತೊಟ್ಟ ಮಹಾಶಯನೊಬ್ಬ ತಾನೇ ಇವನನ್ನು ಕರೆದು ಇಂಗ್ಲೀಷಿನಲ್ಲೇ ಕೇಳಿ, ಅವನ ಸಂಶಯ ದೂರ ಮಾಡಿದ. ಕೊನೆಯಲ್ಲಿ ಇಂಗ್ಲೀಷರವ ಕೇಳಿದ, ಎಲ್ಲರೂ ತಾನು ಕೇಳಿದಾಗ ಆಹೋಯ್ ಎಂದರಲ್ಲ. ಹಾಗೆಂದರೇನು ಎಂತ?. ಅದಕ್ಕೆ ಈ ಮಹಾಶಯ ಹಳ್ಳಿಯ ಕಡೆಯಲ್ಲಿ( ನಿರಕ್ಷರರು) ಹೌದು ಎನ್ನುವುದಕ್ಕೆ ಪರ್ಯಾಯವಾಗಿ ಈ ಶಬ್ದವನ್ನು ಉಪಯೋಗಿಸುತ್ತಾರೆ ಎಂದ. ಆಗ ಹೊಸಬ ಕೇಳಿದನಂತೆ ಅಂದರೆ ನೀವು ಓದುಬರಹ ಕಲಿತವರಾ ಅಂತ ಅದಕ್ಕೆ ಈತ ಉತ್ತರ ಕೊಟ್ಟ " ಆಹೋY"

  • ಶಬ್ದ-ಸ್ವಾಮ್ಯ
~.~
  • gopinatha ರವರ ಬ್ಲಾಗ್
  • Login or register to post comments
  • 187 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾಷೆಯ ಸ್ವಾಮ್ಯ
  • ಭಾಷೆ ಕಿತ್ತಾಟ
  • ಕನ್ನಡ
  • ಕನ್ನಡದ ಕಂದ
  • ಕನ್ನಡ ಎಲ್ಲಿದೆ... ?
Syndicate content

ಲೇಖಕರು

gopinatha's picture

ಪೂರ್ಣ ಹೆಸರು
ಬೆಳ್ಳಾಲ ಗೋಪೀನಾಥ ರಾವ್

ಪರಿಚಯ

ಅಪ್ಪಟ ಕನ್ನಡದವ

ಪ್ರಸ್ತುತ ಭಾರತೀಯ ಭೂ ಸೇನೆಯಲ್ಲಿದ್ದೇನೆ

ಕನ್ನಡ ನೆಲ ಜಲ ಸಂಸ್ಕೃತಿಯ ಬಗ್ಗೆ ತುಂಬಾ ಅಭಿಮಾನ ಇಟ್ಟುಕೊಂಡಿರುವವ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 6:08pm
  • Sunil Jayaprakash
    ಉ: ಬಾಲ್ಯದ ನೆನಪುಗಳು
    September 8, 2008 - 6:07pm
  • Sunil Jayaprakash
    ಉ: ದಿನಕ್ಕೊಂದು ಪದ
    September 8, 2008 - 6:05pm
  • Shivakumar.Revadi
    ಉ: ದಿನಕ್ಕೊಂದು ಪದ
    September 8, 2008 - 6:01pm
  • Shivakumar.Revadi
    ಉ: ಬಾಳ್, ಬಾೞ್
    September 8, 2008 - 5:57pm
  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 146 ಅತಿಥಿಗಳು ಆನ್ಲೈನ್ ಇರುವರು.


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator