ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

govardhana ರವರ ಬ್ಲಾಗ್

ಉದ್ಯಾನ ನಗರಿಯಿಂದ ಅಧ್ವಾನ ನಗರಿಯೆಡೆಗೆ....!

ನಾನು ದಿನಾ, ನಮ್ಮ ಆಫೀಸಿನ ಕ್ಯಾಬ್ ನಲ್ಲಿ, ಸರ್ಜಾಪುರ ರಸ್ತೆ - ಅಗರ ಮುಖಾಂತರವಾಗಿ ಹೊರ ವರ್ತುಲ ರಸ್ತೆಯಲ್ಲಿರುವ ನಮ್ಮ ಕಚೇರಿಗೆ ಹೋಗ್ತೀನಿ. ಈ ಕೆಲವು ತಿಂಗಳುಗಳವರೆಗೂ ಆ ರಸ್ತೆಯಲ್ಲಿ ಓಡಾಡೋವಾಗ, ಇಡೀ ರಸ್ತೆಗೆ ಚಪ್ಪರ ಹಾಕಿದಂತಿದ್ದ ಮರಗಳನ್ನ ನೋಡಿ ಮನಸ್ಸಿಗೆ ತುಂಬ ಖುಷಿ ಆಗ್ತಿತ್ತು.  ಮುಂದೆ ಓದಿ »

ತಿಂಗಳ ಬೆಳ್ದಿಂಗಳು..!

ಕೆನೆ ಹಾಲಿನ ಬೆಣ್ಣೆ ಮುದ್ದೆ
ಮೈಗೆಲ್ಲಾ ಹಚ್ಚಿಕೊಂಡು
ಚಿನ್ನಾರಿಯ ಚಿತ್ತಾರವನು
ಸುತ್ತಲು ಬರೆದುಕೊಂಡು
ಕಡಲಲೆಯ ಸೆಳೆಯುವಂಥ
ಶಕ್ತಿಯನು ತುಂಬಿಕೊಂಡು
ಎಟುಕದೆ ಮೇಲಿದ್ದರು
ದೃಷ್ಟಿಬೊಟ್ಟು ನಿನಗ್ಯಾಕೋ!

ಅಪ್ಸರೆಗೆ ಅಸೂಯೆ ತರುವ
ಚೆಲುವೆಲ್ಲಾ ತುಂಬಿದ್ದರೂ
ಉದ್ಯಾನದ ಕೊಳವೊಂದು
ಕನ್ನಡಿಯ ಹಿಡಿದಿದ್ದರು
ಚಕೋರಿಯು ನಿನಗೆಂದೇ
ಕಾದು ಕುಳಿತಿದ್ದರು  ಮುಂದೆ ಓದಿ »

ಬನದ ಬದುಕು - ಛಾಯಚಿತ್ರ ಪ್ರದರ್ಶನ

Elephant_kabini.jpg

ಹೀಗೆ ವೇಗವಾಗಿ ಸಾಗುತಿರುವ ಬದುಕಿನಲ್ಲಿ ನಾವು ನಮ್ಮ ಸುತ್ತಲಿನ ಪ್ರಕೃತಿಯನ್ನು ಮರೆತಿದ್ದೇವೆಯೆ?, ಎನ್ನುವ ಪ್ರಶ್ನೆ ಒಮ್ಮೆಯಾದರೂ ಎಲ್ಲರಲ್ಲೂ ಮೂಡಿಯೇ ಇರುತ್ತೆ. ಆ ದೇವರು ಕೊಟ್ಟ, ತಂದೆ ತಾಯಿಗಿಂತಲೂ ಹೆಚ್ಚು ಆರೈಕೆ ಮಾಡಿ ನಮಗೆ ಉಸಿರಿತ್ತ ವನವನ್ನು ಕಡಿದು ನಾವು ನಮ್ಮದೇ ನಿರ್ಜೀವ ಕಾಂಕ್ರೀಟ್ ಕಾಡನ್ನು ಕಟ್ಟಿಕೊಳ್ಳುತಿದ್ದೇವೆ.  ಮುಂದೆ ಓದಿ »

'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'

'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'

'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'  ಮುಂದೆ ಓದಿ »

ಹೇ ನೀರೆ

ಹೇ ನೀರೆ ನಿನ್ನದೆಂಥ ಗುಣ!
ಬಾನಿಂದ ಹಾರುವಾಗ
ಬಣ್ಣವಿಲ್ಲದೆ ಬಂದೆ
ನೆಲ ಮುಟ್ಟಿ ಮಿಲನಗೊಂಡು
ನೀ ರಂಗು ಪಡೆದೆ
ಕಲ್ಲು ಮಣ್ಣಿನ ಹಾದಿ ಪಕ್ಕದಲಿ
ಮನೆ ಕಟ್ಟಿ ಮಲಗಿದೆ
ಹಳ್ಳ ಮುಚಿ ಕೆರೆಯ ತುಂಬಿ
ಹಸಿರ ನೆನೆಸಿ ಓಡಿದೆ
ಸಾಲು ಹಾಸು ತಂತಿ ಮೇಲೆ
ಮುತ್ತಿನ ತೋರಣ ಕಟ್ಟಿದೆ
ಎಲ್ಲ ಜನರು ಸೂರಿಗಾಗಿ
ಓಡುವಂತೆ ಮಾಡಿದೆ
ಮುಗ್ಧ ಮನಸು ಆಚೆ ನಿಂತು
ಹಾಡಿ ಕುಣಿದು ನಲಿಯಿತೆ  ಮುಂದೆ ಓದಿ »

Syndicate content