ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
ಹೆಚ್ಚಿನ ಜಾಹೀರಾತು ವಿದ್ವಾಂಸರೆಲ್ಲ ಇಂಗ್ಲಿಷಿಗೆ ಶರಣು ಹೋಗುವವರು. ಕನ್ನ್ನಡದ ಜಾಹಿರಾತುಗಳನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿ ಬಳಸುವವರು. ನಮ್ಮ ಜಾಹೀರಾತು ಸಂಸ್ಥೆ ಮಂಗಳೂರು ಮೂಲದ ಮ್ಯಾಗ್ನಂ ಇಂಟರ್ಗ್ರಾಫಿಕ್ಸ್ (www.magnumad.in) ಕರ್ನಾಟಕದಲ್ಲಿ ಕನ್ನಡದಲ್ಲೆ ಮೂಲ ಚಿಂತನೆಯುಳ್ಳ ಜಾಹೀರಾತು ಕಾನ್ಸೆಪ್ಟ್ ಗಳನ್ನೂ ಉತ್ತೆಜಿಸುತ್ತಿದ್ದು ಇಲ್ಲಿ ಕೆಳಗೆ ನಾವು ಮಾಡಿದ ಕೆಲವು ಜಾಹೀರಾತು ಕ್ಯಾಂಪೈನ್ ಗಳನ್ನ ಪ್ರಕಟಿಸಲಾಗಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
1. ಹುಬ್ಬಳ್ಳಿ ಧಾರವಾಡ ಆಸ್ತಿ ತೆರಿಗೆ ಅಭಿಯಾನ
ಮಣಿವಣ್ಣನ್ ಎಂಬ ಸಾವಿರಕ್ಕೊಬ್ಬನೇ ಇರುವ ಮಹಾನುಭಾವ ಹುಬ್ಬಳ್ಳಿ ಧಾರವಾಡ ಆಯುಕ್ತರಾಗಿದ್ದುಕೊಂಡು ಪುರೋಗಾಮಿ ಕೆಲಸಗಳನ್ನು ಕೈಗೊಂಡು ಹುಬ್ಬಳ್ಳಿ ಧಾರವಾಡದ ಅಭಿವೃದ್ಧಿಯನ್ನು ಮಾಡುತ್ತಿದ್ದಾಗ ಈ ಅಭಿಯಾನವನ್ನು ನಾವು ರಚಿಸಿ ಅವರಿಗೆ ತೋರಿಸಿದ್ದೆವು. ಕಾರಣಮ್ತರಗಳಿಂದ ಇದು ಬೆಳಕು ಕಂಡಿಲ್ಲವಾದರೂ ಇದನ್ನು ರಚಿಸಲು ನಾವು ತುಂಬ ಶ್ರಮ ತೊಡಗಿಸಿದ್ದೇವೆ.
ನಮ್ಮ ಹುಬ್ಬಳ್ಳಿ ಪ್ರಮುಖ ಜಯಂತ್ ರವರ ಉತ್ತೇಜನದಂತೆ ಇದನ್ನು ರಚಿಸಲು ತಲೆಖರ್ಚು (Brain storm) ಮಾಡಲಾಯಿತು. ಆ ಕಾಲದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಮೂಡಲ ಮನೆ ಟಿ.ವಿ. ಧಾರಾವಾಹಿಯ ದೇಶಮುಖ್ ಪಾತ್ರವಹಿಸಿದ್ದ ರವೀ ಎಂದೆ ಕರೆಯಲ್ಪಡುವ ಕನ್ನಡದ ಜನಪ್ರಿಯ ನಟ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿಯವರು ಈ ಅಭಿಯಾನಕ್ಕೆ ರೂಪದರ್ಶಿಯಾಗಲು ಒಪ್ಪಿಕೊಂಡರು.
ಮೂಡಲ ಮನೆ ಚಿತ್ರೀಕಾರಣವಾಗುತ್ತಿದ್ದ ಹಾವೇರಿಯ ಬಳಿಯ ಹಂದಿಗನೂರಿನ ದೇಸಾಯಿ ವಾಡೆಯಲ್ಲಿ ಅವರ ಚಿತ್ರಗಳನ್ನು ಸೆರೆಹಿಡಿಯಲಾಯಿತು. ವೃಷಭೇಂದ್ರರು ಮೊದಲೇ ಹುಬ್ಬಳ್ಳಿ ಭಾಷೆಯಲ್ಲಿ ಸಂಭಾಷಣೆಗಳನ್ನು ಬರ ಕೊಟ್ಟಿದ್ದರಿಂದ ನಾನು ಓದುತ್ತ ಹೋದೆ ರವೀ ಹಾವಭಾವಗಳನ್ನು ಮೂಡಿಸಿಕೊಂಡರು ರಮಾನಂದ ಪೈ ಕ್ಲಿಕ್ಕಿಸುತ್ತಲೇ ಇದ್ದರು. ಬರೆ ಅರ್ಧ ಗಂಟೆಯೊಳಗೆ ನೂರಕ್ಕೂ ಹೆಚ್ಚು ಭಾವಗಳನ್ನು ರವೀ ಮೂಡಿಸಿದರು.
ಈ ಅಭಿಯಾನ ಅವಧಿ ಸುಮಾರು ಒಂದು ತಿಂಗಳು. "ಅಸ್ತಿ ತೆರಿಗೆ ತುಂಬಿರೆನಪ?" ಅಂತ ಕಾಳಜಿಯಿಂದ ಕೇಳುವ ದೇಶಮುಖ್ (ರವೀ) ಎಲ್ಲ ಜಾಹಿರಾತು ಮಾಧ್ಯಮಗಳಲ್ಲೂ ಕೊಂಡಿಯಾಗಿ ಮೂಡಿ ಬರುವುದು ಈ ಅಭಿಯಾನದ ಇನ್ನೊಂದು ಅಂಶ.
ಪೂರ್ಣ ಅಭಿಯಾನವನ್ನು ನೋಡಲು ಈ ತಾಣಕ್ಕೆ ಭೇಟಿ ನೀಡಿ. http://yaadukannada.blogspot.com/

- gurubaliga ರವರ ಬ್ಲಾಗ್
- Login or register to post comments
- 294 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
ಅಭಿನಂದನೆಗಳು ಕಣ್ರೀ, ಜಾಹೀರಾತುಗಳಲ್ಲಿ ಕನ್ನಡದ ಸೊಗಡಿದ್ದರೆ ತುಂಬಾ ಚೆನ್ನಾಗಿರತ್ತೆ. ಈ ದಿಸೆಯಲ್ಲಿ ಕೆಲಸಮಾಡುತ್ತಿರುವ ನಿಮಗೆ ಹೆನ್ನನ್ನಿ. ಉದಾಹರಣೆಗೆ, ಹಿಂದೆ ಬರುತ್ತಿದ್ದ ಒಂದು ಸ್ಪೈಸ್ ಜಾಹೀರಾತನ್ನು, ಯೂಟ್ಯೂಬಿನಿಂದ ನೋಡಿ.
ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
ಧನ್ಯವಾದಗಳು. ಅದ್ಸರಿ ಎಲ್ಲರು ನನ್ನೀ ನನ್ನೀ ಅಂತಾರಲ್ಲ? ಏನು ಹಂಗಂದ್ರೆ?
ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
"ಧನ್ಯವಾದಗಳು" ಅಂತ ದೊಡ್ಡದಾಗಿ ಹೇಳುವ ಬದಲು ಇರುವ ಪುಟ್ಟ ಕನ್ನಡ ಪದ "ನನ್ನಿ", ಹೆಚ್ಚಿನ ವಿವರಗಳಿಗೆ ಶ್ರೀನಿವಾಸ್ ಅವರ ಈ ಎಳೆ ನೋಡಿ.
ನನ್ನಿಯ ಮೂಲ - http://sampada.net/forum/4839
ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
ನಾವು ತುಳುವಿನಲ್ಲಿ ಥ್ಯಾಂಕ್ಸ್ ಹೇಳಲು ಸೊಲ್ಮೆ ಅಂತ ಹೇಳ್ತೇವೆ. ಸೊಲ್ಮೆಗೆ ಕನ್ನಡದಲ್ಲಿ ಏನರ್ಥವಿದೆಯೋ ?
ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
ಸೂಪರ್, ಇಷ್ಟು ದಿನ ಇದನ್ನ ನಿಮ್ಮಲ್ಲೆ ಇಟ್ಕೊಂಡ್ ನಮ್ಗೆಲ್ಲ ಮೋಸ ಮಾಡಿದಿರಲ್ಲ ಗುರುಬಾಳಿಗ (ಸರಿಯೇ ನಿಮ್ಮ ಹೆಸರು).
೪. ಸೊಲ್ಲು (ದೇ) (ಕ್ರಿ) ಹೇಳು, ಮಾತನಾಡು
೫. ಸೊಲ್ಲು (ದೇ) (ನಾ) ೧ ಮಾತು, ನುಡಿ ೨ ಆಜ್ಞೆ, ಅಪ್ಪಣೆ ೩ ನಾದ, ಧ್ವನಿ ೪ ಶಬ್ದ, ಪದ ೫ ಹೊಗಳಿಕೆ, ಪ್ರಶಂಸೆ ೬ ಕೂಗುವಿಕೆ, ಕರೆ ೭ ವಿಷಯ, ಸಂಗತಿ ೮ ಜನಪದಗೀತೆ, ದಾಸರ ಕೀರ್ತನೆ ಮೊ. ಹಾಡಿನ ಒಂದು ನುಡಿ
ಬಲ್ - ಬಲ - ಬಲ್ಮೆ,
ಸೊಲ್ - ಸೊಲ್ಮೆ - ಹೇಳುವ ಚೈತನ್ಯ,
ಸೂಪರ್, ಕನ್ನಡದ ಸಂಸ್ಕೃತಿ ಸಖತ್ತಾಗಿದೆ.
ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
ಏನೋ ! ಮನ್ನಿಸಿ ಸ್ವಾಮಿ !
ಆದದ್ದಾಯಿತು ! ಹೊಟ್ಟೆಲಿ ಹಾಕ್ಕೊಳ್ಳಿ! (ಯಾಕೋ ಜೋಡಿಸಿ ಬರೆಯೋಕೆ ಬಿಡ್ತಿಲ್ಲ ಈ ಸಾಪ್ಟು)
ತುಂಬ ಸೊಲ್ಮೆಗಳು. (ಸೊಲ್ಮೆಲು ಅಂತ ತುಳುವಿನಲ್ಲಿ)
ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
ಹೀಗೆ ನೀವು ನನ್ನೀ ನಾನು ಸೊಲ್ಮೆ ನೀವು ನನ್ನಿ ನಾನು ಸೊಲ್ಮೆ.....
ಇಂಗ್ಲಿಷಿನಲ್ಲಿ ನೋ ಮೆನ್ಶನ್ ! ಕನ್ನಡದಲ್ಲಿ ಏನು ಹೇಳ್ಬೇಕು?
ಛೆ ಛೆ ! ಅದೆಲ್ಲ ಯಾಕೆ? ಎನ್ನೋಣವೇ! ಮೀನಗುಂಡಿ ಸುಬ್ರಮಣ್ಯಮ್ ಅಡ್ಡ ಬರ್ತಾರೆ. ಅವರ ಟಿ.ಎ. ಪ್ರಕಾರ ನಾವು ಥ್ಯಾಂಕ್ಸ್ ಅನ್ನು ಪೂರ್ತಿ ಸ್ವೀಕರಿಸಿ ಆನಂದ ಪಡಬೇಕು. ಅದನ್ನು ತಿರಸ್ಕರಿಸಬಾರದು.
ಸ್ವಾಗತ (ವೆಲ್ಕಂ) ಎಂದರೆ ತೀರ ಯುರೋಪ್ ನನ್ಮಗಂದು ಹಿಂದ್ಗಡೆ ನಲಿತಾ ಇರತ್ತೆ.
ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
ಸೊಲ್ಮೆ ಒಂದು ಬಗೆಯಲ್ಲಿ ತಲೆಬಾಗುವೆ ಎಂಬ ತಿಳಿವೀಯತ್ತೆ ಅನ್ನಿಸ್ತದೆ.
ಉ: ಕನ್ನಡದಲ್ಲಿ ಜಾಹಿರಾತಿಗೆ ಕನ್ನಡದಲ್ಲೇ ಚಿಂತನೆ
ಪ್ರಿಯ ಮಾಯ್ಸರವರೆ
ಪುರುಷೋತ್ತಮ ಬಿಳಿಮಲೆ ಯವರ ಬಳಿ ಮಾತನಾಡಿದೆ.
ಸೊಲ್ಮೆ ಮೂಲತಹ ಪರ್ಷಿಯನ್ ಭಾಷೆಯ ಸಲಾಂ ನಿಂದ ತುಳುವಿಗೆ ನುಸುಳಿದ್ದು. ಮೂರನೇ ಶತಮಾನದಲ್ಲೇ ಇದು ಆಗಿರುವ ಸಾಧ್ಯತೆ ಇದೆ. ಈ ಶಬ್ದದ ಉಲ್ಲೇಖ ತುಳು ಪಾಡ್ದನಗಳಲ್ಲೂ ಇದೆ. ಅಂತ ಅವರು ಹೇಳಿದ್ರು.
ಹಾಗಾಗುವಾಗ ನಿಮ್ಮ ಅಭಿಪ್ರಾಯ ಸರಿ.