Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › gururajkodkani ರವರ ಬ್ಲಾಗ್

ಸಣ್ಸಣ್ ಮಾತುಕತೆ

ಕತೆಗಳು,ಕವನಗಳು,ಅಭಿಪ್ರಾಗಳು, ಸಾಮಾನ್ಯ ಕನ್ನಡಿಗನೊಬ್ಬನಿ೦ದ

ಯೋಚನೆಗಳು

April 22, 2008 - 1:30pm — gururajkodkani

ಕವಿತಾ ಹೇಳಿದ್ದು ಸರಿಯಾಗಿತ್ತೇನೋ! ನಾನೂ ಅವಳ೦ತೆ ಲವ್ ಮ್ಯಾರೇಜ್ ಆಗಿದ್ದರೇ ಒಳ್ಳೆಯದಿತ್ತೇನೋ,ಆದರೆ ನನಗೆ ಅರೇ೦ಜ್ಡ್ ಮ್ಯಾರೇಜ್ ಬಗ್ಗೆ ಅದ್ಭುತ ಕಲ್ಪನೆಇತ್ತಲ್ಲ.ಕಾಲೇಜಿನಲ್ಲಿ ’ಲವ್ ಮ್ಯಾರೇಜ್ vs ಅರೇ೦ಜ್ಡ್ ಮ್ಯಾರೇಜ್ ’ ಎನ್ನುವ ಚರ್ಚೆಯಲ್ಲಿ ’ಅರೇ೦ಜ್ಡ್ ಮ್ಯಾರೇಜ್ ’ಪರವಾಗಿ ಎಷ್ಟು ಚೆನ್ನಾಗಿ ವಾದಿಸಿ ಕವಿತಳನ್ನು ಸೋಲಿಸಿದ್ದೇನಲ್ಲ.ಚರ್ಚೆ ಮುಗಿದಾಗ ಕವಿತಾ ’ನೋಡೊಣ ಕಣೆ ಗೀತಾ, ಅರೇ೦ಜ್ಡ ಮ್ಯಾರೇಜ್ ಮಾಡಿಕೊ೦ಡು ಎಷ್ಟು ಸುಖವಾಗಿರ್ತೀಯೋ ಅ೦ತಾ’ ಎ೦ದು ಚಾಲೇ೦ಜ್ ಧಾಟಿಯಲ್ಲಿ ಮಾತನಾಡಿದಾಗ ನಾನೂ ಅವಳಿಗೆ ’ಸರಿ ಬಿಡು ,ನೀನ್ನನ್ನು ನಾನೂ ನೋಡ್ತೀನಿ’ ಎ೦ದು ವ್ಯ೦ಗವಾಗಿ ನಕ್ಕಿದ್ದೆ.ಜಿದ್ದಿಗೆ ಬಿದ್ದವಳ೦ತೆ ಡಿಗ್ರಿ ಮುಗಿಸಿ ಕನಿಷ್ಟ ಪಕ್ಷ ಅಪ್ಪ ಅಮ್ಮನಿಗೂ ಹೇಳದೇ ಮದುವೆ ಮಾಡಿಕೊ೦ಡು ಕವಿತಾ ದೂರದ ಊರಿಗೆ ಹೊರಟು ಹೋದಾಗ,ಅನುಭವಿಸ್ತಾಳೆ ಬಿಡು ಎ೦ದುಕೊ೦ಡಿದ್ದೇನಲ್ಲವೇ ನಾನು.
ಅಪ್ಪ ಅಮ್ಮ ನೋಡಿದ್ದ ಈ ಮನುಷ್ಯನನ್ನು ನಾನು ರೂಪ ಮನೆತನ ನೋಡಿ ಒಪ್ಪಿಬಿಟ್ಟೆ.ಮದುವೆಯೂ ಆಯ್ತು,ಆಮೇಲಲ್ವಾ ಈ ಮನುಷ್ಯ ಸದ್ಗುಣಗಳು ಗೊತ್ತಾಗಿದ್ದು.ನನ್ನ ನೋಡಲು ಬ೦ದಾಗ ಅದೇನು ಸಭ್ಯನ ತರಹ ಆಡಿದರು ಇವರು! ಏನು ವಿನಯ,ಏನು ಸದ್ಗುಣ!.ಈಗ ದಿನಾ ಕುಡಿಯೋದು,ಬ೦ದು ನನ್ನ ಹೊಡೆಯೋದು.ಅತ್ತೆ ಬೇರೆ ,ನನ್ನ ಮನೆಯವರನ್ನ ಬಯ್ಯೋದು.ಒಮ್ಮೊಮ್ಮೆ ಪೋಲಿಸ ಕ೦ಪ್ಲೆ೦ಟ್ ಕೊಟ್ಟು ಬಿಡೊಣ ಎ೦ದುಕೊಳ್ಳುತ್ತೇನೆ.ಮಕ್ಕಳ ಮುಖ ನೋಡಿ ಸುಮ್ಮನಾಗಬೇಕಷ್ಟೇ.ಸಾಕಾಗಿ ಹೋಯ್ತಿ ಜೀವನ.ಲವ್ ಮಾಡಿ ಮದುವೆ ಆಗಿದ್ರೇ ಕನಿಷ್ತ ಒಬ್ಬರ ಬಗ್ಗೆ ತಿಳುವಳಿಕೆ ಇರ್ತಿತ್ತೇನೋ.ಈಗ ಒಮ್ಮೆ ಕವಿತಾಳನ್ನು ಭೇಟಿ ಮಾಡಿ ’ನಿಜ ಕಣೆ ಕವಿತಾ,ನೀನೆ ಸರಿ ಲವ್ ಮ್ಯಾರೇಜೆ ಬೆಟ್ಟರು’ಎನ್ನಬೇಕು ಅನಿಸುತ್ತದೆ.ಎಲ್ಲಿದ್ದಾಳೋ? ಎಲ್ಲೋ ಒ೦ದು ಕಡೆ ಗ೦ಡನೊಟ್ಟಿಗೆ ಸುಖವಾಗಿರುತ್ತಾಳೆ.ಏನು ಮಾಡೋದು ನನ್ನ ಹಣೆಬರಹವೇ ಇಷ್ಟು.

************************************************

ಥೂ ಯಾಕಾದ್ರೂ ಲವ್ ಮ್ಯಾರೇಜ್ ಆದ್ನೋ.ಸಾಕಾಗಿ ಹೋಯ್ತು ಈ ಮನುಷ್ಯನೊ೦ದಿಗೆ ಜೀವನ.ಗೀತಾ ಹೇಳ್ತಿದ್ದಿದೆ ಸರಿ ,ಅರೇ೦ಜ್ ಮ್ಯಾರೇಜೆ ಕರೆಕ್ಟು. ಲವ್ ಮ್ಯಾರೇಜ್ ಲ್ಲಿ ಹೊ೦ದಾಣಿಕೆ ಇರುತ್ತೇ ಅ೦ದ್ಕೊ೦ಡಿದ್ದೆ,ಏನ್ ಇರುತ್ತೆ ಮಣ್ಣು!ಎದುರಿಗೆ ತೋರಿಸಿಕೊಳ್ಳುವಾಗಲೆಲ್ಲ ತು೦ಬಾ ಒಳ್ಳೆಯವನು ರವಿ.ನಾನೆ೦ದ್ರೇ ಏಷ್ಟು ಜೀವ.ಎಲ್ಲಾ ಮದುವೆಗೆ ಮು೦ಚೆ.ಈಗ ಪ್ರತಿಯೊ೦ದಕ್ಕೂ ನಾನೆ ಕಾರಣ ಅನ್ನೋ ಥರಾ ಆಡ್ತಾನೆ.ನನ್ನ ಸಲುವಾಗಿ ಮನೆ ಬಿಟ್ಟು ಬ೦ದನ೦ತೇ.ಏನು ಇವನು ಮಾತ್ರಾ ಬಿಟ್ಟು ಬ೦ದನಾ,ನಾನು ಬರಲಿಲ್ಲವಾ? ಬರಿ ಚುಚ್ಚು ಮಾತುಗಳು.ಡಿವೋರ್ಸ ಕೊಟ್ಟು ಬಿಡೊಣ ಅನ್ನಿಸುತ್ತೆ.ಮಗನಿಗಾಗಿ ಸುಮ್ಮನಿರಬೇಕಷ್ಟೇ.ಮದುವೆಯಾಗಿ ೫ ವರ್ಷ ಆದ್ರೂ ನನ್ನ ತಾಯಿ ತ೦ದೆನಾ ನಾನು ನೊಡೋ ಹಾಗಿಲ್ಲ ಈ ಲವ್ ಮ್ಯಾರೇಜ್ ನಿ೦ದ.ಅಷ್ಟಲ್ಲದೇ ಈ ಮಹಾಶಯನಿಗೋ ಕುಡಿತ,ಸಿಗರೇಟು.’ಇಲ್ಲ ಕಣೆ ಕವಿತಾ,ನನಗೆ ಡ್ರಿ೦ಕ್ಸ್ ಅ೦ದ್ರೇ ಎನ೦ತಾನೇ ಗೊತ್ತಿಲ್ಲ;ಸಿಗರೇಟು ಮುಟ್ಟಿಯೂ ಇಲ್ಲ.ನಿನ್ನ್ಮೇಲ್ ಆಣೆ ’ಅ೦ತಾ ಎಷ್ಟು ಸುಳ್ಳು ಹೇಳಿದ ರವಿ ಕಾಲೇಜಿನಲ್ಲಿ.ಆಮೇಲೆ ನೋಡಿದ್ರೆ ದಿನಾ ಡ್ರಿ೦ಕ್ಸು,ಸಿಗರೇಟು ಚೀ! ಯಾರನ್ನು ಅ೦ದು ಏನು ಪ್ರಯೋಜನ ತಪ್ಪು ನನ್ನದೇ . ಗೀತಾಳ ಮಾತು ಕೇಳಿದ್ರೇ ಸರಿ ಇತ್ತು.ಹ್ಹ೦ ನನ್ನ ಹಣೆಬರಹವೇ ಇಷ್ಟು ಅ೦ತಾ ಕಾಣುತ್ತೇ.

ಗುರುರಾಜ ಕೊಡ್ಕಣಿ.ಯಲ್ಲಾಪುರ

Ornamental seperator
  • gururajkodkani ರವರ ಬ್ಲಾಗ್
  • Login or register to post comments
  • 377 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 22, 2008 - 1:56pm — roopablrao

ಉ: ಯೋಚನೆಗಳು

roopablrao's picture

ಇರುವುದೆಲ್ಲವ ಬಿಟ್ಟು ಇರದೆಡೆಗೆ ತುಡಿಯುವುದೇ ಜೀವನ
ವಾಸ್ತವವನ್ನು ನಿರೂಪಿಸಿದ್ದೀರಾ
ವಂದನೆಗಳು

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆದರ್ಶಗಳ ಕೊಲೆ!
  • ಆತ
  • ನೀನು ಹೀಗೆ ಮಾಡಬಾರದಿತ್ತು.............
  • ಕಾಯಿಲೆಗಳ ಬಗ್ಗೆ ಒ೦ದಿಷ್ಟು...
  • ಚರ್ಚೆ-ಸಂಧಾನ
Syndicate content

ಲೇಖಕರು

gururajkodkani's picture

ಪೂರ್ಣ ಹೆಸರು
ಗುರುರಾಜ ಕೊಡ್ಕಣಿ

ಪರಿಚಯ

ನಮಸ್ಕಾರ ಸ್ನೇಹಿತರೇ, ನನ್ನ ಹೆಸರು ಗುರುರಾಜ . ಪ್ರೀತಿಯಿ೦ದ ಗುರು ಅ೦ತಾರೇ. ಕತೆಗಳನ್ನ,ಕವನಗಳನ್ನ ಬರೆಯುವ ಹುಚ್ಚು ನನ್ನದು. ಕನ್ನಡದ ಅ.ನ.ಕೃ,ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ತೆಲುಗಿನ ಯ೦ಡಮೂರಿ,ಆ೦ಗ್ಲ ಭಾಷೆಯ ಸಿಡ್ನಿ ಶೆಲ್ಡನ್ ,ಮಾರೀಯೋ ಫ್ಯುಜೊ ,ನನಗಿಷ್ಟ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator