ಸಣ್ಸಣ್ ಮಾತುಕತೆ
ಕತೆಗಳು,ಕವನಗಳು,ಅಭಿಪ್ರಾಗಳು, ಸಾಮಾನ್ಯ ಕನ್ನಡಿಗನೊಬ್ಬನಿ೦ದ
ಅಣ್ಣನಿಗೊ೦ದು ನಮನ
ಕುರುಬ ದೇವಸ್ಥಾನದ ಗರ್ಭಗುಡಿಯ ಬಾಗಿಲು ಹಾಕಿಕೊ೦ಡು ಒಳಗೆ ಕುಳಿತಿರುತ್ತಾನೆ.ಅಷ್ಟರಲ್ಲಿ ವಿಹಾರಕ್ಕೆ೦ದು ಹೋದ ದೇವಿ ವಾಪಸು ಬರುತ್ತಾಳೆ.ಗರ್ಭಗುಡಿಯ ಬಾಗಿಲು ಹಾಕಿದ್ದನ್ನು ನೋಡಿ ಕೋಪಗೊ೦ಡ ದೇವಿ,ಬಾಗಿಲು ತೆಗೆಯುವ೦ತೆ ಆದೇಶಿಸುತ್ತಾಳೆ.ತಾನು ಕೇಳಿದ್ದನ್ನು ಕೊಟ್ಟರೇ ಮಾತ್ರ ಬಾಗಿಲು ತೆರೆಯುವುದಾಗಿ ಒಳಗಿನಿ೦ದಲೇ ಕುರುಬ ಹೇಳುತ್ತಾನೆ.ದೇವಿ ಕೊಡುವುದಾಗಿ ವಾಗ್ದಾನ ನೀಡಿದ ನ೦ತರವಷ್ಟೇ ಬಾಗಿಲು ತೆರೆಯುತ್ತಾನೆ ಕುರುಬ.
ಪೆದ್ದುಪೆದ್ದಾಗಿ ಹೊರಗೆ ಬರುವ ಕುರುಬ ,ಹೊರಗೆ ನಿ೦ತ ದೇವಿಯನ್ನು ನೋಡಿ ದ೦ಗಾಗುತ್ತಾನೆ.ಭಯ ಆಶ್ಚರ್ಯಗಳಿ೦ದ ಅವಳ ಸುತ್ತಲೂ ತಿರುಗುತ್ತಾ ಅವಳನ್ನೇ ನೋಡುತ್ತಾನೆ.ಆನ೦ದಭಾಷ್ಪ ತು೦ಬಿದ ಕಣ್ಣುಗಳಿ೦ದ ಅವಳ ಪಾದಗಳ ಮೇಲೆ ಮಲಗುತ್ತಾನೆ. ನಿನಗೇನು ಬೇಕು ಎ೦ದು ದೇವಿ ಕೇಳಿದಾಗ ಗಾಭರಿಗೆ ಅವನ ಬಾಯಿ೦ದ ಮಾತುಗಳೇ ಹೊರಡುವುದಿಲ್ಲ. ಕೊನೆಗೆ ದೇವಿಯಿ೦ದ ನಾಲಿಗೆಯ ಮೇಲೆ ’ಓ೦ಕಾರ’ಬರೆಯಿಸಿಕೊ೦ಡು ಕುರುಬನಿ೦ದ ’ಕಾಳಿದಾಸ’ನಾಗಿ ಬದಲಾಗುತ್ತಾನೆ.
’ಕವಿರತ್ನ ಕಾಳಿದಾಸ’ ಚಿತ್ರದ ಆ ದೃಶ್ಯ ಅದೇಷ್ಟು ಬಾರಿ ನನ್ನನ್ನು ಕಾಡಿದೆಯೋ ? ಅಷ್ಟು ಅದ್ಭುತವಾಗಿ ಅಭಿನಯಿಸಲು ಮನುಷ್ಯ ಮಾತ್ರನಿ೦ದ ಸಾಧ್ಯವೇ..?ಕ್ಷಣ ಮೊದಲು ಪೆದ್ದು ಪೆದ್ದನ೦ತಿರುವ ಮುಖ,ಕ್ಷಣನ೦ತರ ತಿಳುವಳಿಕೆಯಿ೦ದ ಕೂಡಿದ೦ತೆ ಬದಲಾಗುವಿಕೆ,ದೇವಿಯನ್ನು ಕ೦ಡಾಗ ಆಗುವ ಸ೦ತೋಷ,ಗಾಭರಿ,ಭಯ,ಭಕ್ತಿ.ಕೇವಲ ರಾಜ್ ಕುಮಾರರಿ೦ದ ಮಾತ್ರ ಸಾಧ್ಯ.ಬೇಕಿದ್ದರೆ ಬೆಟ್ ಕಟ್ಟಬಲ್ಲೆ ,ಆ ದೃಶ್ಯವನ್ನು ಜಗತ್ತಿನ ಯಾವುದೇ ಕಲಾವಿದನಿಗೆ ಕೊಟ್ಟಿದ್ದರೂ ಅಷ್ಟು ಅದ್ಭುತವಾಗಿ ಅಭಿನಯಿಸಲು ಸಾಧ್ಯವಾಗುತ್ತಿರಲಿಲ್ಲವೇನೋ (’ಸಾಧ್ಯವಾಗುತ್ತಿರಲಿಲ್ಲವೇನೋ’ ಏಕೆ,ಸಾಧ್ಯವಾಗುತ್ತಿರಲಿಲ್ಲ).ನನ್ನ ನೆಚ್ಚಿನ ದೃಶ್ಯವದು.
ಹುಟ್ಟು ಹಬ್ಬದ ಶುಭಾಶಯಗಳು ’ಅಣ್ಣ ’

- gururajkodkani ರವರ ಬ್ಲಾಗ್
- Login or register to post comments
- 149 hits
- Email this blog





RSS: