ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › gvmt ರವರ ಬ್ಲಾಗ್

ದ್ವ್ರಿರುಕ್ತಿ ದ್ವಿರುಕ್ತಿ - ೪ : ಭೋಜರಾಜನ ಅಕ್ಷರಲಕ್ಷ

August 6, 2006 - 4:11am — gvmt

[ ನನ್ನ ಬ್ಲಾಗಿನಿಂದ ಮರುಪ್ರಕಟನೆ - ವೆಂ. ]

ಭೋಜರಾಜ ಚಾರಿತ್ರಿಕ ವ್ಯಕ್ತಿ, ಸುಮಾರು ೧೧ನೆಯ ಶತಮಾನದವನು. ಆದರೂ ೫-೬ನೆಯ ಶತಮಾನದ ಕಾಳಿದಾಸನ ಹೆಸರಿನೊಂದಿಗೆ ಭೋಜನ ಹೆಸರು ಜೋತುಬಿದ್ದಿದೆ. ಚಾರಿತ್ರಿಕ ಭೋಜನಂತೆಯೆ ಕಾಳಿದಾಸನ ಭೋಜನೂ ಕವಿತಾಪಕ್ಷಪಾತಿ. ಆಗಾಗ ಕವಿಗಳನ್ನು ತನ್ನಲ್ಲಿಗೆ ಕರೆಸಿಕೊಂಡು ಗೋಷ್ಟಿಗಳನ್ನು ನಡೆಸಿ ಬಹುಮಾನಮಾಡಿ ಕಳಿಸುತ್ತಿದ್ದನು. ಆಗಾಗ ಕವಿತೆ ಕಟ್ಟುವ ಯಾರಿಗೂ ತನ್ನ ಆಸ್ಥಾನದ ಬಾಗಿಲುಗಳನ್ನು ತೆರೆದು ಅಕ್ಷರಲಕ್ಷವನ್ನು ನಡೆಸುತ್ತಿದ್ದನು. ಅಕ್ಷರಲಕ್ಷವೆಂದರೆ ಕವಿತೆಯ ಅಕ್ಷರವೊಂದಕ್ಕೆ ಲಕ್ಷ ಹೊನ್ನುಗಳಷ್ಟು ಬಹುಮಾನಿಸುವುದು. ಯಾರು ಬೇಕಾದರು ಆಸ್ಥಾನಕ್ಕೆ ಬಂದು ತಾವೆ ಕಟ್ಟಿದೆ ಕವಿತೆಯನು ಹಾಡಿ ಬಹುಮಾನ ಪಡೆಯಬಹುದಾಗಿತ್ತು. ಇಂತಹ ರಾಜನಿದ್ದಾಗ ಕಾಳಿದಾಸಾದಿಗಳಿಗೆ ಯಾವ ಕೊರತೆಯೂ ಇದ್ದಿರಲಾರದು. "ತ್ವಯಿ ದಾತರಿ ರಾಜೇಂದ್ರ ಸುದ್ರುಮಾಂ ನಾಶ್ರಯಾಮಹೇ" (ನೀನಿದ್ದಾಗ ಕಲ್ಪತರು ಬೇರೆ ಬೇಕೆ?) ಎಂದು ಅಷ್ಟಲ್ಲದೆ ಹೊಗಳಿದರೆ?

ಯಾರು ಬೇಕಾದರೂ ಬಹುಮಾನ ಪಡೆಯಬಹುದು ಎಂದದ್ದು ಬರೆಯ ಮಾತಿಗಲ್ಲ. ಭೋಜನ ನಾಡಿನ ಮೂಲೆ ಮೂಲೆಗೂ ಹರಿಕಾರರು ಅಕ್ಷರಲಕ್ಷದ ಸುದ್ದಿಯನ್ನು ಮುಟ್ಟಿಸುತ್ತಿದ್ದರಷ್ಟೆ, ದೂರದ ಹಳ್ಳಿಯ ಇಬ್ಬರು ಬಡ ಪ್ರಜೆಗಳು ರಾಜಧಾನಿಗೆ ಬಂದರು. ಇಬ್ಬರೂ ಸಾಮಾನ್ಯವಾಗಿ ಓದಿಕೊಂಡವರು, ಪಂಡಿತರೇನಲ್ಲ. ಲಕ್ಷವಲ್ಲದಿದ್ದರೆ ಸರಿ, ಸಾವಿರ ಹೊನ್ನಾದರೂ ಬಡತನ ನೀಗಿಸೀತು ಎಂಬ ಆಸೆ. ಆದರೆ ಆ ಹೊನ್ನಿಗಾದರೂ ಕವಿತೆ ಕಟ್ಟಬೇಕಲ್ಲ? ಇಬ್ಬರೂ ಸೇರಿ ಒಂದು ಕಟ್ಟುವುದು, ಬಂದದ್ದನ್ನು ಹಂಚಿಕೊಳ್ಳುವುದು ಎಂದು ಮಾಡಿ ಛತ್ರದ ಜಗಲಿಯ ಮೇಲೆ ಕುಳಿತು ಕವನಕ್ಕೆ ತೊಡಗಿದರು. ಸೂರ್ಯ ಮುಳುಗುವ ಹೊತ್ತಿಗೆ ಒಬ್ಬನ "ಭೋಜನಂ ದೇಹಿ ರಾಜೇಂದ್ರ" ಕ್ಕೆ ಇನ್ನೊಬ್ಬ "ಘೃತಸೂಪಸಮನ್ವಿತಂ" ಸೇರಿಸಿದ್ದ. ಆದರೆ ಅಲ್ಲಿಂದ ಮುಂದೆ ಸಾಗಲಾರಲಿಲ್ಲ. ಇನ್ನೆರಡು ಪಾದಗಳನ್ನು ಸೇರಿಸದೆ ಪದ್ಯ ಪೂರ್ತಿಯಾಗದು. ಏನು ಮಾಡುವುದು? ರಾಜ ಬಿಡುವು ಕೊಟ್ಟಮೇಲೆ ಮನೆಗೆ ವಾಪಸಾಗುತ್ತಿದ್ದ ಕಾಳಿದಾಸನಿಗೆ ತಲೆಯ ಮೇಲೆ ಕೈಹೊತ್ತು ಕುಳಿತ ಈ ಇಬ್ಬರು ಕಂಡರು. ವಿಚಾರಿಸಿದಾಗ ವಿಷಯ ತಿಳಿಯಿತು. ಕಾಳಿದಾಸನಿಗೆ ಇದು ಯಾವ ದೊಡ್ಡವಿಷಯ, ಪದ್ಯ ಪೂರ್ತಿಮಾಡಿ ಕೊಟ್ಟ. ಮರುದಿವಸ ಆಸ್ಥಾನಕ್ಕೆ ಪ್ರಜೆಗಳಿಬ್ಬರೂ ಹೋಗಿ ಪದ್ಯವನ್ನು ಒಪ್ಪಿಸಿದರು. "ಭೋಜನಂ ದೇಹಿ ರಾಜೇಂದ್ರ ಘೃತಸೂಪಸಮನ್ವಿತಂ । ಮಾಹಿಷಂ ಚ ಶರಚ್ಚಂದ್ರಚಂದ್ರಿಕಾಧವಳಂ ದಧಿ ॥" ರಾಜ ತಲೆದೂಗಿದ. ನಿಮ್ಮ ಪದ್ಯವನ್ನು ಮೆಚ್ಚಿದ್ದೇನೆ, ಇಕೋ ೧೬ಲಕ್ಷ ಹೊನ್ನು ಎಂದ. ಪ್ರಜೆಗಳು ತಬ್ಬಿಬ್ಬಾದರು, ಇದೇನು ಮಹಾಸ್ವಾಮಿ, ಅನುಷ್ಟಪ್ಪಿಗೆ ೩೨ ಅಕ್ಷ್ರರಗಳಲ್ಲವೆ? ಇರಬಹುದು, ಎಂದ ರಾಜ, ಆದರೆ ನಿಮ್ಮ ಕವನ ೧೬ ಅಕ್ಷರಗಳು. ಮೊಸರು ಕೇಳಿದ್ದು ಕಾಳಿದಾಸನಲ್ಲವೆ, ಅವನಿಗೆ ೧೬ ಲಕ್ಷಗಳು. ಭೋಜ ರಸಿಕ. ಯೋಗ್ಯತೆ ಬಲ್ಲವನು. ಯಾರ ಕಾವ್ಯ ಯಾವ ಮಟ್ಟದ್ದು ಎಂದು ಕ್ಷಣಮಾತ್ರದಲ್ಲಿ ಅಳೆಯಬಲ್ಲವನಾಗಿದ್ದನು. ಕಾಳಿದಾಸನೇನು ಕಡಿಮೆಯೆ? ಅವನಿಗೆ ಮೊಸರು ಆಗಬೇಕು. ಅದೂ ಎಮ್ಮೆಯ ಮೊಸರು. ಶರತ್ಕಾಲದ ಬೆಳದಿಂಗಳಿನಷ್ಟು ಬಿಳುಪಾದ ಎಮ್ಮೆಯ ಮೊಸರು.

ಭೋಜ ನಿಜವಾಗಿಯೂ ಉದಾರಿ. ಯಾರೋ ಒಬ್ಬ "ಉತ್ತಿಷ್ಟೋತ್ತಿಷ್ಟ ರಾಜೇಂದ್ರ ಮುಖಂ ಪ್ರಕ್ಷಾಲಯಸ್ವ ಟಃ | ತ್ವಮೇಷಾಹ್ವಯತಿ ಕುಕ್ಕು ಚವೈತುಹಿ ಚವೈತುಹಿ" ಎಂದು ಪದ್ಯ ಕಟ್ಟಿ ಹೊನ್ನು ಗಿಟ್ಟಿಸಿಕೊಂಡು ಹೋಗಿದ್ದ. ( ರಾಜ ಏಳು, ಹುಂಜ ಕೂಗುತ್ತಿದೆ, ಮುಖ ತೊಳೆ. ನಾಲ್ಕನೆಯ ಪಾದಕ್ಕೆ ವಸ್ತು ಒದಗಲಿಲ್ಲ, ಪಾದಪೂರಣಗಳನ್ನು ಸೇರಿಸಿ ಪಾದ ಪೂರ್ತಿ ಮಾಡಿದ. ಸಂಸ್ಕೃತ ಬಲ್ಲವರಿಗೆ ಈ ಪದ್ಯದ ಹಾಸ್ಯ ಸುಲಭವಾಗಿ ಮನದಟ್ಟಾಗುವುದು. ) ಮಂತ್ರಿ ಬುದ್ಧಿಸಾಗರನಿಗೆ ಇವೆಲ್ಲವೂ ದುಂದುಗಾರಿಕೆ ಎನಿಸಿತು. ನಾಡಿನ ಭಂಡಾರವನ್ನು ಇಂತಹ ಬೊಗಳೆ ಕವಿಗಳಮೇಲೆ ಸುರಿಯುತ್ತಾರೆಯೆ? ರಾಜನಿಗೆ ಹೇಳುವುದಾದರೂ ಹೇಗೆ? ಸ್ನಾನದ ಮನೆಯ ದಾರಿಯಲ್ಲಿ ಕಾಣುವಹಾಗಿ "ಆಪದರ್ಥಂ ಧನಂ ರಕ್ಷೇತ್" (ಹಣವಿದ್ದರೆ ಆಪತ್ಕಾಲಕ್ಕೆ ಆಗುತ್ತೆ) ಎಂದು ಬರೆದ. ಭೋಜನ ಸ್ನಾನದ ನಂತರ ಹೋಗಿ ನೋಡಿದರೆ ಅಲ್ಲಿ "ಶ್ರೀಮತಾಂ ಆಪದಃ ಕುತಃ" (ಹಣವಂತರಿಗೆ ಆಪತ್ತು ಎಲ್ಲಿಯದು) ಎಂದು ಬರೆದಿತ್ತು. ಮಂತ್ರಿ "ಸಾಚೇದಪಗತಾ ಲಕ್ಷ್ಮೀ" (ದುಂದುವೆಚ್ಚ ಮಾಡಿದರೆ ಆಪತ್ತು ತಾನೆ) ಎಂದು ಬರೆದಿಟ್ಟ. ಮರುದಿವನ ರಾಜನ ಉತ್ತರ ಸಿಕ್ಕಿತು "ಸಂಚಿತಾರ್ಥಂ ವಿನಶ್ಯತಿ" (ಕೂಡಿಟ್ಟದ್ದು ಹಾಳಾಗುವುದು).

ವೆಂ.

~.~
  • gvmt ರವರ ಬ್ಲಾಗ್
  • Login or register to post comments
  • 493 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಘನಗಂಭೀರ ಕವಿತ್ವ
  • ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ
  • ಉಪಮಾ ಕಾಳಿದಾಸಸ್ಯ.
  • ಹೆಸರಿಲ್ಲದ್ದು ?
  • ಹಾಲು
Syndicate content

ಲೇಖಕರು

gvmt's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator